<p><strong>ಬೆಂಗಳೂರು: ‘</strong>ಜಲವಿದ್ಯುತ್ ತಯಾ ರಿಕೆಗೆ ಭಾರತ ಸಹಕರಿಸಿದರೆ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ನೇಪಾಳ ಸ್ವಾವಲಂಬನೆ ಸಾಧಿಸಬಹುದು’ ಎಂದು ನೇಪಾಳದ ರಾಯಭಾರಿ ಕಚೇರಿಯ ಆರ್ಥಿಕ ಅಧಿಕಾರಿ ಬಿ.ಪಿ.ಲಮ್ಸಾಲ್ ತಿಳಿಸಿದರು.<br /> <br /> ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ನಗರದಲ್ಲಿ ಮಂಗ ಳವಾರ ಆಯೋಜಿಸಿದ್ದ ‘ನೇಪಾಳದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಹೂಡಿಕೆ ಅವಕಾಶ’ ಕುರಿತ ವಿಚಾರಸಂ ಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಬೆಂಗಳೂರು ಮಾಹಿತಿ ತಂತ್ರಜ್ಞಾನಕ್ಕೆ ಬಹಳ ಜನಪ್ರಿ ಯವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಕೂಡ ನೇಪಾಳದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ’ ಎಂದು ತಿಳಿಸಿದರು.<br /> <br /> ‘ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ನೇಪಾಳ ದೇಶವು ಅಭಿವೃದ್ಧಿಯಾ ಗುವುದಲ್ಲದೇ, ಲಾಭದಾಯಕವಾಗಿ ವಾಣಿಜ್ಯ ಚಟುವಟಿ ಕೆಗಳನ್ನು ನಡೆಸಬಹುದು. ವಿದೇಶಿ ಉತ್ಪನ್ನ ಸಂಸ್ಥೆಗಳ ಆದಾಯ ತೆರಿಗೆಯಲ್ಲಿ ಶೇ 20 ರಿಯಾಯಿತಿ ನೀಡಲಾ ಗುತ್ತಿದೆ’ ಎಂದು ಹೇಳಿದರು.<br /> <br /> ‘ಪಶುಪತಿನಾಥ ಹಾಗೂ ಮುಕ್ತಿನಾಥ ದೇವಸ್ಥಾನಗಳು ಸೇರಿ ದಂತೆ ಹಲವು ಆಕರ್ಷಣೀಯ ಪ್ರವಾಸಿ ತಾಣಗಳಿದ್ದು, ಇವುಗಳಿಗೆ ಹೆಚ್ಚಿನ ಮಹತ್ವ ದೊರೆಯಬೇಕು’ ಎಂದರು.<br /> <br /> ನೇಪಾಳದ ಭಾರತದ ರಾಯಭಾರಿ ಕೆ.ಎನ್.ಅಧಿಕಾರಿ, ‘ ಕೋಸಿ, ಗಂಧಕಿ, ಮಹಾಕಾಳಿ ಸೇರಿದಂತೆ ನಾಲ್ಕು ಪ್ರಮುಖ ನದಿಗಳಿದ್ದು, ಜಲವಿದ್ಯುತ್ ಯೋಜನೆಗಳನ್ನು ವಿದೇಶಿ ಹೂಡಿಕೆಯಿಂದ ಜಾರಿ ಮಾಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಜಲವಿದ್ಯುತ್ ತಯಾ ರಿಕೆಗೆ ಭಾರತ ಸಹಕರಿಸಿದರೆ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ನೇಪಾಳ ಸ್ವಾವಲಂಬನೆ ಸಾಧಿಸಬಹುದು’ ಎಂದು ನೇಪಾಳದ ರಾಯಭಾರಿ ಕಚೇರಿಯ ಆರ್ಥಿಕ ಅಧಿಕಾರಿ ಬಿ.ಪಿ.ಲಮ್ಸಾಲ್ ತಿಳಿಸಿದರು.<br /> <br /> ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ನಗರದಲ್ಲಿ ಮಂಗ ಳವಾರ ಆಯೋಜಿಸಿದ್ದ ‘ನೇಪಾಳದಲ್ಲಿ ಪ್ರವಾಸೋದ್ಯಮ, ವಾಣಿಜ್ಯ ಹಾಗೂ ಹೂಡಿಕೆ ಅವಕಾಶ’ ಕುರಿತ ವಿಚಾರಸಂ ಕಿರಣದಲ್ಲಿ ಅವರು ಮಾತನಾಡಿದರು.<br /> <br /> ‘ಬೆಂಗಳೂರು ಮಾಹಿತಿ ತಂತ್ರಜ್ಞಾನಕ್ಕೆ ಬಹಳ ಜನಪ್ರಿ ಯವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಕೂಡ ನೇಪಾಳದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶವಿದೆ’ ಎಂದು ತಿಳಿಸಿದರು.<br /> <br /> ‘ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದರೆ ನೇಪಾಳ ದೇಶವು ಅಭಿವೃದ್ಧಿಯಾ ಗುವುದಲ್ಲದೇ, ಲಾಭದಾಯಕವಾಗಿ ವಾಣಿಜ್ಯ ಚಟುವಟಿ ಕೆಗಳನ್ನು ನಡೆಸಬಹುದು. ವಿದೇಶಿ ಉತ್ಪನ್ನ ಸಂಸ್ಥೆಗಳ ಆದಾಯ ತೆರಿಗೆಯಲ್ಲಿ ಶೇ 20 ರಿಯಾಯಿತಿ ನೀಡಲಾ ಗುತ್ತಿದೆ’ ಎಂದು ಹೇಳಿದರು.<br /> <br /> ‘ಪಶುಪತಿನಾಥ ಹಾಗೂ ಮುಕ್ತಿನಾಥ ದೇವಸ್ಥಾನಗಳು ಸೇರಿ ದಂತೆ ಹಲವು ಆಕರ್ಷಣೀಯ ಪ್ರವಾಸಿ ತಾಣಗಳಿದ್ದು, ಇವುಗಳಿಗೆ ಹೆಚ್ಚಿನ ಮಹತ್ವ ದೊರೆಯಬೇಕು’ ಎಂದರು.<br /> <br /> ನೇಪಾಳದ ಭಾರತದ ರಾಯಭಾರಿ ಕೆ.ಎನ್.ಅಧಿಕಾರಿ, ‘ ಕೋಸಿ, ಗಂಧಕಿ, ಮಹಾಕಾಳಿ ಸೇರಿದಂತೆ ನಾಲ್ಕು ಪ್ರಮುಖ ನದಿಗಳಿದ್ದು, ಜಲವಿದ್ಯುತ್ ಯೋಜನೆಗಳನ್ನು ವಿದೇಶಿ ಹೂಡಿಕೆಯಿಂದ ಜಾರಿ ಮಾಡಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>