<p><strong>ಕೋಲಾರ:</strong> `ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿದೆ. ಲಭ್ಯ ಧಾನ್ಯಪಟ್ಟಿ ಪ್ರಕಟಿಸುವುದಿಲ್ಲ. ತೂಕದಲ್ಲಿಯೂ ವ್ಯತ್ಯಾಸವಿರುತ್ತದೆ. ತಿಂಗಳಲ್ಲಿ ಕೆಲವೇ ದಿನ ಪಡಿತರ ವಿತರಿಸುವುದರಿಂದ ಎಲ್ಲರಿಗೂ ಧಾನ್ಯ ದೊರಕುತ್ತಿಲ್ಲ. ಇದನ್ನು ಸರಿಪಡಿಸಬೇಕು.~<br /> -ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮೊದಲ ಬಾರಿಗೆ ನಡೆದ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ ಸಭೆಯಲ್ಲಿ ಕೇಳಿ ಬಂದ ಮಾತುಗಳಿವು.<br /> <br /> ಪರಿಷತ್ನ ಸದಸ್ಯ ಕೆ.ವಿ.ಜಗದೀಶ್ವರಾಚಾರಿ ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯ ಅಸಮರ್ಪಕ ಅಂಶಗಳ ಬಗ್ಗೆ ಗಮನ ಸೆಳೆದರು. ಗ್ರಾಮಾಂತರ ಪ್ರದೇಶಗಳ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳಪೆ ವಿತರಿಸಲಾಗುತ್ತಿದೆ. ಸೋಪ್ ತೆಗೆದುಕೊಳ್ಳದಿದ್ದರೆ ಧಾನ್ಯ ಕೊಡುವುದಿಲ್ಲ ಎಂದು ಬೆದರಿಸುವ ಉದಾಹರಣೆಗಳೂ ಇವೆ ಎಂದು ಅವರು ಆರೋಪಿಸಿದರು.<br /> <br /> `ತಿಂಗಳಲ್ಲಿ ಕನಿಷ್ಠ 10 ದಿನವಾದರೂ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿರಬೇಕು. ಆದರೆ ಬೆರೆಳೆಣಿಕೆಯಷ್ಟು ದಿನ ಮಾತ್ರ ಅಂಗಡಿ ತೆರೆದು, ಎಲ್ಲರಿಗೂ ಹಂಚಿದ್ದಾಯಿತು ಎಂದು ಮಾಲೀಕರು ಹೇಳುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಧಾನ್ಯಗಳ ಬೆಲೆ ಮತ್ತು ಲಭ್ಯ ಧಾನ್ಯಗಳ ಪಟ್ಟಿಯನ್ನು ಕೂಡ ಸ್ಪಷ್ಟವಾಗಿ ಪ್ರಕಟಿಸಿರುವುದಿಲ್ಲ ಎಂದರು.<br /> <br /> ಎಪಿಎಲ್ ಕುಟುಂಬಗಳಿಗೆ ನೀಡಿರುವ ತಾತ್ಕಾಲಿಕ ಕಾರ್ಡ್ ಅನ್ನು ಮುಂದುವರಿಸುವ ಬದಲು ಶಾಶ್ವತವಾಗಿ ಕಾರ್ಡ್ ನೀಡಬೇಕು ಎಂಬ ಅವರ ಸಲಹೆಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ, ಕಾರ್ಡ್ ವಿತರಿಸುತ್ತಿದ್ದ ಗುತ್ತಿಗೆ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು. <br /> <br /> `ಈ ಅಂಶವನ್ನು ಕೂಡಲೇ ಸರ್ಕಾರದ ಗಮನಕ್ಕೆ ತನ್ನಿ~ ಎಂದು ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ ಸೂಚಿಸಿದರು. <br /> <br /> ಪಡಿತರ ಅಂಗಡಿಗಳಲ್ಲಿ ನೀಡುತ್ತಿರುವ ಸೀಮೆ ಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಿಸುವ ಇಂಧನದ ಅಳತೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಜಗದೀಶ್ವರಾಚಾರಿ ಆರೋಪಿಸಿದರು.<br /> <br /> ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಎಂ.ಗೋವಿಂದಗೌಡ ಮಾತನಾಡಿ, ರೈತರಿಗೆ ಪೂರೈಸುವ ಕೀಟನಾಶಕ, ಗೊಬ್ಬರದ ಗುಣಮಟ್ಟದ ಕಡಿಮೆ ಇರುತ್ತದೆ. ಹಲವೆಡೆ ರಸೀದಿ ಕೊಡುವುದಿಲ್ಲ. ಕಳಪೆ ಕೀಟನಾಶಕ, ಗೊಬ್ಬರ ಬಳಕೆಯಿಂದ ಬೆಳೆ ಹಾನಿಯಾದರೆ ಪರಿಹಾರ ದೊರಕುವುದು ಕಷ್ಟವಾಗುತ್ತದೆ ಎಂದು ಹೇಳಿದರು. <br /> <br /> ರೈತರಲ್ಲಿ ಮೂಡುವ ಈ ಅಭದ್ರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಕೀಟನಾಶಕ, ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು. <br /> <br /> ಪರಿಷತ್ನ ಮತ್ತೊಬ್ಬ ಸದಸ್ಯ ವೆಂಕಟೇಶ್ ಮಾತನಾಡಿ, ಬಂಗಾರಪೇಟೆ, ಕೆಜಿಎಫ್ ಅಡುಗೆ ಅನಿಲ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರಾಹಕರ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಯೋಗದಿಂದ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯವಿದೆ ಎಂದು ವಿ.ಪಿ.ಸೋಮಶೇಖರ್ ಸಲಹೆ ನೀಡಿದರು.<br /> <br /> ನಂತರ ಮಾತನಾಡಿದ ಜಿಲ್ಲಾಧಿಕಾರಿ, ದೂರವಾಣಿ, ಬೆಸ್ಕಾಂ ಮೊದಲಾದ ಸಂಸ್ಥೆಗಳಿಂದ ಸಮಸ್ಯೆಯಾದರೆ ಗ್ರಾಹಕರು ಕೂಡಲೇ ಆ ಇಲಾಖೆಯ ಮೇಲಧಿಕಾರಿಗಳಿಗೆ ದೂರು ಕೊಡಬೇಕು. ಅಲ್ಲಿ ಪರಿಹಾರವಾಗದಿದ್ದರೆ ಗ್ರಾಹಕರ ವೇದಿಕೆಯ ನೆರವು ಪಡೆಯಬೇಕು. ಬಹುತೇಕ ಸಂದರ್ಭದಲ್ಲಿ ಉಚಿತವಾಗಿಯೇ ವೇದಿಕೆ ನ್ಯಾಯ ಒದಗಿಸುವ ಸೌಲಭ್ಯವಿದೆ ಎಂದರು.<br /> </p>.<p><strong>20 ಶಾಲೆ, ಕಾಲೇಜಿನಲ್ಲಿ ಗ್ರಾಹಕ ಕ್ಲಬ್</strong></p>.<p><strong>ಕೋಲಾರ: </strong>ಜಿಲ್ಲೆಯ ಐದು ತಾಲ್ಲೂಕಿನಲ್ಲಿ 20 ಸರ್ಕಾರಿ ಪ್ರೌಢಶಾಲೆ/ಪದವಿಪೂರ್ವ ಕಾಲೇಜಿನಲ್ಲಿ ಗ್ರಾಹಕರ ಕ್ಲಬ್ಗಳನ್ನು ಸ್ಥಾಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ ತಿಳಿಸಿದರು.<br /> <br /> ಸಭೆಯಲ್ಲಿ ಮಾಹಿತಿ ನೀಡಿದ ಅವರು, 2009-10ನೇ ಸಾಲಿನಲ್ಲಿ ಶಾಲಾ ಗ್ರಾಹಕರ ಕ್ಲಬ್ಗಳನ್ನು ಸ್ಥಾಪಿಸಿದ್ದು 2 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ಕ್ಲಬ್ಗೆ 8 ಸಾವಿರ ರೂಪಾಯಿ ನೀಡಲಾಗಿದೆ. ಕ್ಲಬ್ ಸ್ಥಾಪನೆ-ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ನೋಡಲ್ ಸಂಸ್ಥೆಯಾಗಿ ಬಂಗಾರಪೇಟೆಯ ಕಾರಮಂಗಲದ ರತ್ನ ಟ್ರಸ್ಟ್ ಅನ್ನು ನೇಮಿಸಲಾಗಿದೆ ಎಂದರು.<br /> <br /> ವಿವರ: ಬಂಗಾರಪೇಟೆ ತಾಲ್ಲೂಕಿನ ಸುಂದರ ಪಾಳ್ಯ, ಬೂದಿಕೋಟೆಯ ಕಾಲೇಜು, ಕ್ಯಾಸಂಬಳ್ಳಿ, ಗುಲ್ಲಹಳ್ಳಿಯ ಪ್ರೌಢಶಾಲೆ; ಕೆಜಿಎಫ್ನ ಬಾಲಕಿಯರ ಕಾಲೇಜು, ಕಾಮಸಮುದ್ರದ ಕಾಲೇಜು, ದೊಡ್ಡೂರಿನ ಪ್ರೌಢಶಾಲೆ; ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಹಳ್ಳಿ, ನಂಬಿಹಳ್ಳಿ, ತಾಡಿಗೋಳ್ನಲ್ಲಿರುವ ಶಾಲೆಗಳು; ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ, ಮಾಸ್ತಿ ಟೇಕಲ್ನಲ್ಲಿರುವ ಕಾಲೇಜು, ಕೆಸರಗೆರೆಯಲ್ಲಿರುವ ಶಾಲೆ; ಕೋಲಾರ ತಾಲ್ಲೂಕಿನ ಹೋಳೂರು, ಶಾಪೂರಿನ ಶಾಲೆ, ಕ್ಯಾಲನೂರಿನ ಕಾಲೇಜು; ಮುಳಬಾಗಲಿನ ಬಾಲಸಂದ್ರ, ಹೆಬ್ಬಣಿಯ ಶಾಲೆ, ತಿಪ್ಪದೊಡ್ಡಿಯ ಕಾಲೇಜು. 20 ಸಂಸ್ಥೆಗಳಿಗೆ ತಲಾ 8 ಸಾವಿರದಂತೆ ರೂ 1,60 ಲಕ್ಷ ಮತ್ತು ನೋಡಲ್ ಏಜೆನ್ಸಿಗೆ 40 ಸಾವಿರದಂತೆ 2 ಲಕ್ಷ ರೂಪಾಯಿ ಬಿಡುಗಡೆಯಾಗಿ ಖರ್ಚಾಗಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> `ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ಯಾಯ ನಡೆಯುತ್ತಿದೆ. ಲಭ್ಯ ಧಾನ್ಯಪಟ್ಟಿ ಪ್ರಕಟಿಸುವುದಿಲ್ಲ. ತೂಕದಲ್ಲಿಯೂ ವ್ಯತ್ಯಾಸವಿರುತ್ತದೆ. ತಿಂಗಳಲ್ಲಿ ಕೆಲವೇ ದಿನ ಪಡಿತರ ವಿತರಿಸುವುದರಿಂದ ಎಲ್ಲರಿಗೂ ಧಾನ್ಯ ದೊರಕುತ್ತಿಲ್ಲ. ಇದನ್ನು ಸರಿಪಡಿಸಬೇಕು.~<br /> -ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಮೊದಲ ಬಾರಿಗೆ ನಡೆದ ಜಿಲ್ಲಾ ಗ್ರಾಹಕರ ರಕ್ಷಣಾ ಪರಿಷತ್ ಸಭೆಯಲ್ಲಿ ಕೇಳಿ ಬಂದ ಮಾತುಗಳಿವು.<br /> <br /> ಪರಿಷತ್ನ ಸದಸ್ಯ ಕೆ.ವಿ.ಜಗದೀಶ್ವರಾಚಾರಿ ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯ ಅಸಮರ್ಪಕ ಅಂಶಗಳ ಬಗ್ಗೆ ಗಮನ ಸೆಳೆದರು. ಗ್ರಾಮಾಂತರ ಪ್ರದೇಶಗಳ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳಪೆ ವಿತರಿಸಲಾಗುತ್ತಿದೆ. ಸೋಪ್ ತೆಗೆದುಕೊಳ್ಳದಿದ್ದರೆ ಧಾನ್ಯ ಕೊಡುವುದಿಲ್ಲ ಎಂದು ಬೆದರಿಸುವ ಉದಾಹರಣೆಗಳೂ ಇವೆ ಎಂದು ಅವರು ಆರೋಪಿಸಿದರು.<br /> <br /> `ತಿಂಗಳಲ್ಲಿ ಕನಿಷ್ಠ 10 ದಿನವಾದರೂ ನ್ಯಾಯಬೆಲೆ ಅಂಗಡಿಗಳನ್ನು ತೆರೆದಿರಬೇಕು. ಆದರೆ ಬೆರೆಳೆಣಿಕೆಯಷ್ಟು ದಿನ ಮಾತ್ರ ಅಂಗಡಿ ತೆರೆದು, ಎಲ್ಲರಿಗೂ ಹಂಚಿದ್ದಾಯಿತು ಎಂದು ಮಾಲೀಕರು ಹೇಳುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಧಾನ್ಯಗಳ ಬೆಲೆ ಮತ್ತು ಲಭ್ಯ ಧಾನ್ಯಗಳ ಪಟ್ಟಿಯನ್ನು ಕೂಡ ಸ್ಪಷ್ಟವಾಗಿ ಪ್ರಕಟಿಸಿರುವುದಿಲ್ಲ ಎಂದರು.<br /> <br /> ಎಪಿಎಲ್ ಕುಟುಂಬಗಳಿಗೆ ನೀಡಿರುವ ತಾತ್ಕಾಲಿಕ ಕಾರ್ಡ್ ಅನ್ನು ಮುಂದುವರಿಸುವ ಬದಲು ಶಾಶ್ವತವಾಗಿ ಕಾರ್ಡ್ ನೀಡಬೇಕು ಎಂಬ ಅವರ ಸಲಹೆಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ, ಕಾರ್ಡ್ ವಿತರಿಸುತ್ತಿದ್ದ ಗುತ್ತಿಗೆ ಸಂಸ್ಥೆಯ ಕಾರ್ಯಾಚರಣೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು. <br /> <br /> `ಈ ಅಂಶವನ್ನು ಕೂಡಲೇ ಸರ್ಕಾರದ ಗಮನಕ್ಕೆ ತನ್ನಿ~ ಎಂದು ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ ಸೂಚಿಸಿದರು. <br /> <br /> ಪಡಿತರ ಅಂಗಡಿಗಳಲ್ಲಿ ನೀಡುತ್ತಿರುವ ಸೀಮೆ ಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಿಸುವ ಇಂಧನದ ಅಳತೆಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಜಗದೀಶ್ವರಾಚಾರಿ ಆರೋಪಿಸಿದರು.<br /> <br /> ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಎಂ.ಗೋವಿಂದಗೌಡ ಮಾತನಾಡಿ, ರೈತರಿಗೆ ಪೂರೈಸುವ ಕೀಟನಾಶಕ, ಗೊಬ್ಬರದ ಗುಣಮಟ್ಟದ ಕಡಿಮೆ ಇರುತ್ತದೆ. ಹಲವೆಡೆ ರಸೀದಿ ಕೊಡುವುದಿಲ್ಲ. ಕಳಪೆ ಕೀಟನಾಶಕ, ಗೊಬ್ಬರ ಬಳಕೆಯಿಂದ ಬೆಳೆ ಹಾನಿಯಾದರೆ ಪರಿಹಾರ ದೊರಕುವುದು ಕಷ್ಟವಾಗುತ್ತದೆ ಎಂದು ಹೇಳಿದರು. <br /> <br /> ರೈತರಲ್ಲಿ ಮೂಡುವ ಈ ಅಭದ್ರತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಕೀಟನಾಶಕ, ಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು. <br /> <br /> ಪರಿಷತ್ನ ಮತ್ತೊಬ್ಬ ಸದಸ್ಯ ವೆಂಕಟೇಶ್ ಮಾತನಾಡಿ, ಬಂಗಾರಪೇಟೆ, ಕೆಜಿಎಫ್ ಅಡುಗೆ ಅನಿಲ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ಗ್ರಾಹಕರ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಯೋಗದಿಂದ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುವುದು ಅಗತ್ಯವಿದೆ ಎಂದು ವಿ.ಪಿ.ಸೋಮಶೇಖರ್ ಸಲಹೆ ನೀಡಿದರು.<br /> <br /> ನಂತರ ಮಾತನಾಡಿದ ಜಿಲ್ಲಾಧಿಕಾರಿ, ದೂರವಾಣಿ, ಬೆಸ್ಕಾಂ ಮೊದಲಾದ ಸಂಸ್ಥೆಗಳಿಂದ ಸಮಸ್ಯೆಯಾದರೆ ಗ್ರಾಹಕರು ಕೂಡಲೇ ಆ ಇಲಾಖೆಯ ಮೇಲಧಿಕಾರಿಗಳಿಗೆ ದೂರು ಕೊಡಬೇಕು. ಅಲ್ಲಿ ಪರಿಹಾರವಾಗದಿದ್ದರೆ ಗ್ರಾಹಕರ ವೇದಿಕೆಯ ನೆರವು ಪಡೆಯಬೇಕು. ಬಹುತೇಕ ಸಂದರ್ಭದಲ್ಲಿ ಉಚಿತವಾಗಿಯೇ ವೇದಿಕೆ ನ್ಯಾಯ ಒದಗಿಸುವ ಸೌಲಭ್ಯವಿದೆ ಎಂದರು.<br /> </p>.<p><strong>20 ಶಾಲೆ, ಕಾಲೇಜಿನಲ್ಲಿ ಗ್ರಾಹಕ ಕ್ಲಬ್</strong></p>.<p><strong>ಕೋಲಾರ: </strong>ಜಿಲ್ಲೆಯ ಐದು ತಾಲ್ಲೂಕಿನಲ್ಲಿ 20 ಸರ್ಕಾರಿ ಪ್ರೌಢಶಾಲೆ/ಪದವಿಪೂರ್ವ ಕಾಲೇಜಿನಲ್ಲಿ ಗ್ರಾಹಕರ ಕ್ಲಬ್ಗಳನ್ನು ಸ್ಥಾಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸಯ್ಯ ತಿಳಿಸಿದರು.<br /> <br /> ಸಭೆಯಲ್ಲಿ ಮಾಹಿತಿ ನೀಡಿದ ಅವರು, 2009-10ನೇ ಸಾಲಿನಲ್ಲಿ ಶಾಲಾ ಗ್ರಾಹಕರ ಕ್ಲಬ್ಗಳನ್ನು ಸ್ಥಾಪಿಸಿದ್ದು 2 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ಕ್ಲಬ್ಗೆ 8 ಸಾವಿರ ರೂಪಾಯಿ ನೀಡಲಾಗಿದೆ. ಕ್ಲಬ್ ಸ್ಥಾಪನೆ-ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ನೋಡಲ್ ಸಂಸ್ಥೆಯಾಗಿ ಬಂಗಾರಪೇಟೆಯ ಕಾರಮಂಗಲದ ರತ್ನ ಟ್ರಸ್ಟ್ ಅನ್ನು ನೇಮಿಸಲಾಗಿದೆ ಎಂದರು.<br /> <br /> ವಿವರ: ಬಂಗಾರಪೇಟೆ ತಾಲ್ಲೂಕಿನ ಸುಂದರ ಪಾಳ್ಯ, ಬೂದಿಕೋಟೆಯ ಕಾಲೇಜು, ಕ್ಯಾಸಂಬಳ್ಳಿ, ಗುಲ್ಲಹಳ್ಳಿಯ ಪ್ರೌಢಶಾಲೆ; ಕೆಜಿಎಫ್ನ ಬಾಲಕಿಯರ ಕಾಲೇಜು, ಕಾಮಸಮುದ್ರದ ಕಾಲೇಜು, ದೊಡ್ಡೂರಿನ ಪ್ರೌಢಶಾಲೆ; ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಹಳ್ಳಿ, ನಂಬಿಹಳ್ಳಿ, ತಾಡಿಗೋಳ್ನಲ್ಲಿರುವ ಶಾಲೆಗಳು; ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ, ಮಾಸ್ತಿ ಟೇಕಲ್ನಲ್ಲಿರುವ ಕಾಲೇಜು, ಕೆಸರಗೆರೆಯಲ್ಲಿರುವ ಶಾಲೆ; ಕೋಲಾರ ತಾಲ್ಲೂಕಿನ ಹೋಳೂರು, ಶಾಪೂರಿನ ಶಾಲೆ, ಕ್ಯಾಲನೂರಿನ ಕಾಲೇಜು; ಮುಳಬಾಗಲಿನ ಬಾಲಸಂದ್ರ, ಹೆಬ್ಬಣಿಯ ಶಾಲೆ, ತಿಪ್ಪದೊಡ್ಡಿಯ ಕಾಲೇಜು. 20 ಸಂಸ್ಥೆಗಳಿಗೆ ತಲಾ 8 ಸಾವಿರದಂತೆ ರೂ 1,60 ಲಕ್ಷ ಮತ್ತು ನೋಡಲ್ ಏಜೆನ್ಸಿಗೆ 40 ಸಾವಿರದಂತೆ 2 ಲಕ್ಷ ರೂಪಾಯಿ ಬಿಡುಗಡೆಯಾಗಿ ಖರ್ಚಾಗಿದೆ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>