<p><strong>ಚೆನ್ನೈ (ಪಿಟಿಐ):</strong> ಸಾಕಷ್ಟು ಬಿಗುವಿನ ಅಂತರರಾಷ್ಟ್ರೀಯ ಕ್ರಿಕೆಟ್ ಕಾರ್ಯಕ್ರಮದ ನಡುವೆ ಈಗ ಪಾಕಿಸ್ತಾನ ವಿರುದ್ಧದ ಸರಣಿಯೂ ಸೇರಿಕೊಂಡಿದೆ. ಆದ್ದರಿಂದ ಕಷ್ಟವಾಗುವುದು ಸಹಜ. ಆದರೂ ಆಡಲೇಬೇಕು...</p>.<p>-ಹೀಗೆಂದು ಹೇಳಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ. ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮುನ್ನ ಇಲ್ಲಿ ತಾಲೀಮು ನಡೆಸುತ್ತಿರುವ ಭಾರತ ತಂಡದ ಮಂಗಳವಾರದ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.</p>.<p>ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಲೇಬೇಕು. ಅಂಥ ಮಹತ್ವದ ಸರಣಿ ಅದು. ಆದರೆ ಈಗಿರುವ ಕಾರ್ಯಕ್ರಮದ ನಡುವೆ ವಿರಾಮವೇ ಇಲ್ಲದಂತೆ ಮತ್ತೊಂದು ಮಹತ್ವದ ಹೋರಾಟಕ್ಕೆ ಸಜ್ಜಾಗುವುದು ದೊಡ್ಡ ಸವಾಲು ಎಂದು ವಿವರಿಸಿದರು `ಮಹಿ.</p>.<p>ಡಿಸೆಂಬರ್ ಹಾಗೂ ಜನವರಿಯಲ್ಲಿ ಪಾಕಿಸ್ತಾನದ ಎದುರು ಮೂರು ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರೂ `ಆಡಲೇಬೇಕು ಅನ್ಯಮಾರ್ಗವೇ ಇಲ್ಲ~ ಎಂದು ತಮ್ಮ ಅಸಹಾಯಕ ಸ್ಥಿತಿಯನ್ನು ಪದಗಳಾಗಿ ಜೋಡಿಸಿಟ್ಟರು.</p>.<p>`ನಾವು ವೃತ್ತಿಪರ ಕ್ರಿಕೆಟಿಗರು. ಒತ್ತಡವನ್ನು ಸಹಿಸಿಕೊಳ್ಳಬೇಕು. ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಬೇಕು. ಅದು ಅನಿವಾರ್ಯವೂ ಆಗಿದೆ. ಹೆಚ್ಚು ಪಂದ್ಯಗಳನ್ನು ಆಡಲು ಮಾನಸಿಕವಾಗಿ ಸಜ್ಜಾಗುವುದು ಮಾತ್ರ ಮುಂದಿರುವ ಒಂದೇ ಮಾರ್ಗ. ಈ ವಿಷಯದಲ್ಲಿ ಸಹಾನುಭೂತಿಯನ್ನು ನಿರೀಕ್ಷೆ ಮಾಡಲಾಗದು~ ಎಂದು ಹೇಳಿದರು.</p>.<p>`ದೇಶವನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮ ಮೇಲಿನ ಜವಾಬ್ದಾರಿಯೂ ದೊಡ್ಡದು. ಈ ಕ್ರಿಕೆಟ್ ಋತು ಸವಾಲಿನದ್ದು. ಗಟ್ಟಿಯಾಗಿರಬೇಕು-ದಿಟ್ಟತನದಿಂದ ಆಡಬೇಕು. ಅದೊಂದೇ ಉದ್ದೇಶ. ಬೇರೆ ಮಾತಿಗೆ ಅವಕಾಶವೇ ಇಲ್ಲ~ ಎಂದ ದೋನಿ `ಈ ಋತುವಿನ ಕಾರ್ಯಾಚರಣೆಯನ್ನು ಶ್ರೀಲಂಕಾದಲ್ಲಿ ಆರಂಭಿಸುತ್ತಿದ್ದೇವೆ. ವಿಜಯದೊಂದಿಗೆ ಮೊದಲ ಹೆಜ್ಜೆ ಇಡುವುದು ನಮ್ಮ ಗುರಿ~ ಎಂದು ತಿಳಿಸಿದರು.</p>.<p>`ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿಯೇ ಟ್ವೆಂಟಿ-20 ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಆ ದೇಶದಲ್ಲಿ ಆಡುವುದು ಪ್ರಯೋಜನಕಾರಿ~ ಎಂದ ಮಹಿ `ಲಂಕಾದಲ್ಲಿ ಒಂದೇ ಕಡೆಗೆ ಎಲ್ಲ ಪಂದ್ಯಗಳನ್ನು ಆಡುತ್ತಿಲ್ಲ. ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಪ್ರಯಾಣ ಮಾಡುವುದೂ ಪ್ರಯಾಸ. ಆದರೂ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಉತ್ತಮ ಪ್ರದರ್ಶನ ನೀಡುತ್ತೇವೆ~ ಎಂದು ವಿಶ್ವಾಸದಿಂದ ನುಡಿದರು.</p>.<p>ಪ್ರದರ್ಶನ ಮಟ್ಟ ಹೆಚ್ಚಾಗುವಲ್ಲಿ ನಾಯಕನ ಪಾತ್ರವೇನು ಎಂದು ಕೇಳಿದಾಗ `ಯಾವುದೇ ತಂಡದ ನೇತೃತ್ವ ವಹಿಸಿದರೂ ಲಭ್ಯವಿರುವ ಆಟಗಾರರ ಬಲದಿಂದಲೇ ಮುಂದೆ ಸಾಗಬೇಕು. ಈ ಹಂತದಲ್ಲಿ ವೈಯಕ್ತಿಕ ಕೊಡುಗೆಯೂ ಮಹತ್ವದ್ದಾಗುತ್ತದೆ. ಬೌಲರ್ಗಳು ಪ್ರಭಾವಿ ಆಗಬೇಕು. ಬ್ಯಾಟ್ಸ್ಮನ್ಗಳು ಜೊತೆಯಾಟ ಬೆಳೆಸಬೇಕು. ಅದರ ಹೊರತಾಗಿ ಯಶಸ್ಸು ಸಾಧ್ಯವಾಗದು~ ಎಂದರು.</p>.<p>`ಲಂಕಾ ವಿರುದ್ಧದ ಸರಣಿಯ ಯೋಜನೆ ಏನೆಂದು ಇಲ್ಲಿ ಹೇಳಲು ಆಗದು. ಆದರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆ ಈ ಮೂರೂ ವಿಭಾಗದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಬೇಕೆಂದು ಮಾತ್ರ ಹೇಳಬಲ್ಲೆ~ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ (ಪಿಟಿಐ):</strong> ಸಾಕಷ್ಟು ಬಿಗುವಿನ ಅಂತರರಾಷ್ಟ್ರೀಯ ಕ್ರಿಕೆಟ್ ಕಾರ್ಯಕ್ರಮದ ನಡುವೆ ಈಗ ಪಾಕಿಸ್ತಾನ ವಿರುದ್ಧದ ಸರಣಿಯೂ ಸೇರಿಕೊಂಡಿದೆ. ಆದ್ದರಿಂದ ಕಷ್ಟವಾಗುವುದು ಸಹಜ. ಆದರೂ ಆಡಲೇಬೇಕು...</p>.<p>-ಹೀಗೆಂದು ಹೇಳಿದ್ದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ. ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮುನ್ನ ಇಲ್ಲಿ ತಾಲೀಮು ನಡೆಸುತ್ತಿರುವ ಭಾರತ ತಂಡದ ಮಂಗಳವಾರದ ಅಭ್ಯಾಸದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.</p>.<p>ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಉತ್ತಮ ಪ್ರದರ್ಶನ ನೀಡಲೇಬೇಕು. ಅಂಥ ಮಹತ್ವದ ಸರಣಿ ಅದು. ಆದರೆ ಈಗಿರುವ ಕಾರ್ಯಕ್ರಮದ ನಡುವೆ ವಿರಾಮವೇ ಇಲ್ಲದಂತೆ ಮತ್ತೊಂದು ಮಹತ್ವದ ಹೋರಾಟಕ್ಕೆ ಸಜ್ಜಾಗುವುದು ದೊಡ್ಡ ಸವಾಲು ಎಂದು ವಿವರಿಸಿದರು `ಮಹಿ.</p>.<p>ಡಿಸೆಂಬರ್ ಹಾಗೂ ಜನವರಿಯಲ್ಲಿ ಪಾಕಿಸ್ತಾನದ ಎದುರು ಮೂರು ಏಕದಿನ ಹಾಗೂ ಎರಡು ಟ್ವೆಂಟಿ-20 ಪಂದ್ಯಗಳನ್ನು ಆಡುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರೂ `ಆಡಲೇಬೇಕು ಅನ್ಯಮಾರ್ಗವೇ ಇಲ್ಲ~ ಎಂದು ತಮ್ಮ ಅಸಹಾಯಕ ಸ್ಥಿತಿಯನ್ನು ಪದಗಳಾಗಿ ಜೋಡಿಸಿಟ್ಟರು.</p>.<p>`ನಾವು ವೃತ್ತಿಪರ ಕ್ರಿಕೆಟಿಗರು. ಒತ್ತಡವನ್ನು ಸಹಿಸಿಕೊಳ್ಳಬೇಕು. ದೈಹಿಕ ಸಾಮರ್ಥ್ಯ ಕಾಯ್ದುಕೊಳ್ಳಬೇಕು. ಅದು ಅನಿವಾರ್ಯವೂ ಆಗಿದೆ. ಹೆಚ್ಚು ಪಂದ್ಯಗಳನ್ನು ಆಡಲು ಮಾನಸಿಕವಾಗಿ ಸಜ್ಜಾಗುವುದು ಮಾತ್ರ ಮುಂದಿರುವ ಒಂದೇ ಮಾರ್ಗ. ಈ ವಿಷಯದಲ್ಲಿ ಸಹಾನುಭೂತಿಯನ್ನು ನಿರೀಕ್ಷೆ ಮಾಡಲಾಗದು~ ಎಂದು ಹೇಳಿದರು.</p>.<p>`ದೇಶವನ್ನು ಪ್ರತಿನಿಧಿಸುತ್ತಿದ್ದೇವೆ. ನಮ್ಮ ಮೇಲಿನ ಜವಾಬ್ದಾರಿಯೂ ದೊಡ್ಡದು. ಈ ಕ್ರಿಕೆಟ್ ಋತು ಸವಾಲಿನದ್ದು. ಗಟ್ಟಿಯಾಗಿರಬೇಕು-ದಿಟ್ಟತನದಿಂದ ಆಡಬೇಕು. ಅದೊಂದೇ ಉದ್ದೇಶ. ಬೇರೆ ಮಾತಿಗೆ ಅವಕಾಶವೇ ಇಲ್ಲ~ ಎಂದ ದೋನಿ `ಈ ಋತುವಿನ ಕಾರ್ಯಾಚರಣೆಯನ್ನು ಶ್ರೀಲಂಕಾದಲ್ಲಿ ಆರಂಭಿಸುತ್ತಿದ್ದೇವೆ. ವಿಜಯದೊಂದಿಗೆ ಮೊದಲ ಹೆಜ್ಜೆ ಇಡುವುದು ನಮ್ಮ ಗುರಿ~ ಎಂದು ತಿಳಿಸಿದರು.</p>.<p>`ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಶ್ರೀಲಂಕಾದಲ್ಲಿಯೇ ಟ್ವೆಂಟಿ-20 ವಿಶ್ವಕಪ್ ನಡೆಯಲಿದೆ. ಅದಕ್ಕೂ ಮುನ್ನ ಆ ದೇಶದಲ್ಲಿ ಆಡುವುದು ಪ್ರಯೋಜನಕಾರಿ~ ಎಂದ ಮಹಿ `ಲಂಕಾದಲ್ಲಿ ಒಂದೇ ಕಡೆಗೆ ಎಲ್ಲ ಪಂದ್ಯಗಳನ್ನು ಆಡುತ್ತಿಲ್ಲ. ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಪ್ರಯಾಣ ಮಾಡುವುದೂ ಪ್ರಯಾಸ. ಆದರೂ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಉತ್ತಮ ಪ್ರದರ್ಶನ ನೀಡುತ್ತೇವೆ~ ಎಂದು ವಿಶ್ವಾಸದಿಂದ ನುಡಿದರು.</p>.<p>ಪ್ರದರ್ಶನ ಮಟ್ಟ ಹೆಚ್ಚಾಗುವಲ್ಲಿ ನಾಯಕನ ಪಾತ್ರವೇನು ಎಂದು ಕೇಳಿದಾಗ `ಯಾವುದೇ ತಂಡದ ನೇತೃತ್ವ ವಹಿಸಿದರೂ ಲಭ್ಯವಿರುವ ಆಟಗಾರರ ಬಲದಿಂದಲೇ ಮುಂದೆ ಸಾಗಬೇಕು. ಈ ಹಂತದಲ್ಲಿ ವೈಯಕ್ತಿಕ ಕೊಡುಗೆಯೂ ಮಹತ್ವದ್ದಾಗುತ್ತದೆ. ಬೌಲರ್ಗಳು ಪ್ರಭಾವಿ ಆಗಬೇಕು. ಬ್ಯಾಟ್ಸ್ಮನ್ಗಳು ಜೊತೆಯಾಟ ಬೆಳೆಸಬೇಕು. ಅದರ ಹೊರತಾಗಿ ಯಶಸ್ಸು ಸಾಧ್ಯವಾಗದು~ ಎಂದರು.</p>.<p>`ಲಂಕಾ ವಿರುದ್ಧದ ಸರಣಿಯ ಯೋಜನೆ ಏನೆಂದು ಇಲ್ಲಿ ಹೇಳಲು ಆಗದು. ಆದರೆ ಬ್ಯಾಟಿಂಗ್, ಬೌಲಿಂಗ್ ಹಾಗೂ ಕ್ಷೇತ್ರರಕ್ಷಣೆ ಈ ಮೂರೂ ವಿಭಾಗದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಬೇಕೆಂದು ಮಾತ್ರ ಹೇಳಬಲ್ಲೆ~ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>