<p><strong>ಪುಣೆ, (ಪಿಟಿಐ): </strong> ಬುಧವಾರ ಬೆಳಿಗ್ಗೆಯೇ ಇಲ್ಲಿನ ಜನ ನಿಬಿಡ ರಸ್ತೆಗೆ ನುಗ್ಗಿದ ಬಸ್ಸೊಂದು ದಾರಿಯಲ್ಲಿ ಎದುರಿಗೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟಿದ್ದಾರೆ, ಜೊತೆಗೆ 27 ಮಂದಿಗೆ ಗಾಯಗಳಾಗಿವೆ.</p>.<p>ನಗರದ ಕೇಂದ್ರ ಪ್ರದೇಶದ ಸ್ವರಗೇಟ್ ಬಳಿ ಮಂಗಳವಾರ ಬೆಳಿಗ್ಗೆ ಜನ ನಿಬಿಡ ರಸ್ತೆಗೆ ನುಗ್ಗಿದ ಬಸ್ಸು ಅಲ್ಲಿನ ಜನಕ್ಕೆ ದುಃಸ್ವಪ್ನದಂತೆ ಕಾಡಿತು. ಸದಾ ಜನಜಂಗುಳಿಯಿಂದ ಕೂಡಿರುವ ಪುಣೆ- ಸೊಲ್ಲಾಪುರ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ನುಗ್ಗಿದ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಎದುರಿಗೆ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದಾಗ, ದಿಕ್ಕೆಟ್ಟ ಪಾದಚಾರಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು.</p>.<p>ಒಂದು ಗಂಟೆ ಕಾಲ ಬಸ್ಸನ್ನು ಬೆನ್ನಟ್ಟಿದ ಪೊಲೀಸರು ನಗರದ ನೀಲಾಯಮ್ ಚಿತ್ರಮಂದಿರದ ಹತ್ತಿರ ಅದನ್ನು ತಡೆದ ಬಸ್ ಚಾಲಕ ಸಂತೋಷ್ ಮಾನೆ (30) ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.</p>.<p>ಬಸ್ ಚಾಲಕ ಮಾನಸಿಕ ಅಸ್ವಸ್ಥ ಎಂದು ಪ್ರಾಥಮಿಕ ಮಾಹಿತಿ ಲಭಿಸಿದರೆ, ಪೊಲೀಸರು ಇಷ್ಟು ಬೇಗನೇ, ಸದ್ಯಕ್ಕೆ ಏನೂ ಹೇಳಲಾಗದು ಎಂದು ತಿಳಿಸಿದ್ದಾರೆ. <br /> <br /> ಬಸ್ಸಿನಿಂದಾದ ಸರಣಿ ಅಪಘಾತದ ಈ ದುರ್ಘಟನೆಯುಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದರೆ, 27 ಮಂದಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ, (ಪಿಟಿಐ): </strong> ಬುಧವಾರ ಬೆಳಿಗ್ಗೆಯೇ ಇಲ್ಲಿನ ಜನ ನಿಬಿಡ ರಸ್ತೆಗೆ ನುಗ್ಗಿದ ಬಸ್ಸೊಂದು ದಾರಿಯಲ್ಲಿ ಎದುರಿಗೆ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದ ಪರಿಣಾಮ ಒಂಬತ್ತು ಮಂದಿ ಮೃತಪಟ್ಟಿದ್ದಾರೆ, ಜೊತೆಗೆ 27 ಮಂದಿಗೆ ಗಾಯಗಳಾಗಿವೆ.</p>.<p>ನಗರದ ಕೇಂದ್ರ ಪ್ರದೇಶದ ಸ್ವರಗೇಟ್ ಬಳಿ ಮಂಗಳವಾರ ಬೆಳಿಗ್ಗೆ ಜನ ನಿಬಿಡ ರಸ್ತೆಗೆ ನುಗ್ಗಿದ ಬಸ್ಸು ಅಲ್ಲಿನ ಜನಕ್ಕೆ ದುಃಸ್ವಪ್ನದಂತೆ ಕಾಡಿತು. ಸದಾ ಜನಜಂಗುಳಿಯಿಂದ ಕೂಡಿರುವ ಪುಣೆ- ಸೊಲ್ಲಾಪುರ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ನುಗ್ಗಿದ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು ಎದುರಿಗೆ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಸಾಗಿದಾಗ, ದಿಕ್ಕೆಟ್ಟ ಪಾದಚಾರಿಗಳು ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು.</p>.<p>ಒಂದು ಗಂಟೆ ಕಾಲ ಬಸ್ಸನ್ನು ಬೆನ್ನಟ್ಟಿದ ಪೊಲೀಸರು ನಗರದ ನೀಲಾಯಮ್ ಚಿತ್ರಮಂದಿರದ ಹತ್ತಿರ ಅದನ್ನು ತಡೆದ ಬಸ್ ಚಾಲಕ ಸಂತೋಷ್ ಮಾನೆ (30) ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.</p>.<p>ಬಸ್ ಚಾಲಕ ಮಾನಸಿಕ ಅಸ್ವಸ್ಥ ಎಂದು ಪ್ರಾಥಮಿಕ ಮಾಹಿತಿ ಲಭಿಸಿದರೆ, ಪೊಲೀಸರು ಇಷ್ಟು ಬೇಗನೇ, ಸದ್ಯಕ್ಕೆ ಏನೂ ಹೇಳಲಾಗದು ಎಂದು ತಿಳಿಸಿದ್ದಾರೆ. <br /> <br /> ಬಸ್ಸಿನಿಂದಾದ ಸರಣಿ ಅಪಘಾತದ ಈ ದುರ್ಘಟನೆಯುಲ್ಲಿ ಒಂಬತ್ತು ಮಂದಿ ಸಾವಿಗೀಡಾಗಿದ್ದರೆ, 27 ಮಂದಿಗೆ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>