<p><strong>ನರಸಿಂಹರಾಜಪುರ: </strong>ಅಡಿಕೆ, ಒಡವೆ ಮುಂತಾದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸುವುದರ ಮೂಲಕ ಬಂಧಿಸಿರುವ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.</p>.<p><strong>ಘಟನೆಯ ವಿವರ: </strong>ತಾಲ್ಲೂಕಿನ ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘದ ಕೊಠಡಿಯ ಹೆಂಚು ತೆಗೆದು ಕಳೆದ ಮೇ 28ರಂದು 3ಮೂಟೆ ಅಡಿಕೆ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮೇ 29ರಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ದೂರಿನನ್ವಯ ಪೊಲೀಸರು ಅನುಮಾನದ ಆಧಾರದ ಮೇಲೆ ಕೊನೋಡಿಯ ಶ್ರೀನಾಥ್ ಹಾಗೂ ಕಮಲಾಪುರದ ತೆಂಕ ಬಯಲಿನ ರಮೇಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರು ತಾವು ಅಡಿಕೆ ಮೂಟೆಯ ಕಳ್ಳತನದ ಜೊತೆಗೆ ಈ ಹಿಂದೆ ಇಂದ್ರ ಎಂಬುವರ ಮನೆಯಿಂದ 1ಜೋತೆ ಓಲೆ ಹಾಗೂ 2 ಉಂಗುರ ಕಳವು ಮಾಡಿದ್ದರ ಬಗ್ಗೆ ಬಾಯಿ ಬಿಟ್ಟರು. ಜತೆಗೆ ಕೊಪ್ಪದ ಆರ್ಡಾಕ್ ಎಸ್ಟೇಟ್ನಲ್ಲಿ ಕಾಳು ಮೆಣಸು ಕಳವು ಮಾಡಿರುವ ಬಗ್ಗೆ ತಪ್ಪೋಪ್ಪಿ ಕೊಂಡಿದ್ದಾರೆ. ಇದರನ್ವಯ ಪೊಲೀಸರು ಬಂಧಿತ ರಿಂದ ರೂ.24,000 ಬೆಲೆ ಬಾಳುವ ಅಡಿಕೆ, ರೂ,17,000 ಬೆಲೆಯ 1ಜೊತೆ ಓಲೆ ಹಾಗೂ 2 ಉಂಗುರ ಸಹಿತ ಕಳವು ಮಾಲು ಸಾಗಿಸಲು ಬಳಸುತ್ತಿದ್ದ ಆಟೋ ರೀಕ್ಷಾವನ್ನು ವಶಪಡಿಸಿ ಕೊಂಡು ಶನಿವಾರ ಕೊನೋಡಿಯ ಶ್ರೀನಾಥ್ ಹಾಗೂ ಕಮಲಾಪುರದ ತೆಂಕ ಬಯಲಿನ ರಮೇಶ್ ಎಂಬುವ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಕೊಪ್ಪ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಜಿ.ಎಸ್.ಸ್ವರ್ಣ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂಧಿಗಳಾದ ಎ.ಎಸ್.ಐ ನಾಗರಾಜ್, ರವಿ, ವಿನಾಯಕ್, ಸತೀಶ್, ದಯಾನಂದ,ಹನುಮಂತ್ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ: </strong>ಅಡಿಕೆ, ಒಡವೆ ಮುಂತಾದ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಕ್ಷೀಪ್ರ ಕಾರ್ಯಾಚರಣೆ ನಡೆಸುವುದರ ಮೂಲಕ ಬಂಧಿಸಿರುವ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.</p>.<p><strong>ಘಟನೆಯ ವಿವರ: </strong>ತಾಲ್ಲೂಕಿನ ಸೀತೂರು ವ್ಯವಸಾಯ ಸೇವಾ ಸಹಕಾರ ಸಂಘದ ಕೊಠಡಿಯ ಹೆಂಚು ತೆಗೆದು ಕಳೆದ ಮೇ 28ರಂದು 3ಮೂಟೆ ಅಡಿಕೆ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಮೇ 29ರಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ದೂರಿನನ್ವಯ ಪೊಲೀಸರು ಅನುಮಾನದ ಆಧಾರದ ಮೇಲೆ ಕೊನೋಡಿಯ ಶ್ರೀನಾಥ್ ಹಾಗೂ ಕಮಲಾಪುರದ ತೆಂಕ ಬಯಲಿನ ರಮೇಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇವರು ತಾವು ಅಡಿಕೆ ಮೂಟೆಯ ಕಳ್ಳತನದ ಜೊತೆಗೆ ಈ ಹಿಂದೆ ಇಂದ್ರ ಎಂಬುವರ ಮನೆಯಿಂದ 1ಜೋತೆ ಓಲೆ ಹಾಗೂ 2 ಉಂಗುರ ಕಳವು ಮಾಡಿದ್ದರ ಬಗ್ಗೆ ಬಾಯಿ ಬಿಟ್ಟರು. ಜತೆಗೆ ಕೊಪ್ಪದ ಆರ್ಡಾಕ್ ಎಸ್ಟೇಟ್ನಲ್ಲಿ ಕಾಳು ಮೆಣಸು ಕಳವು ಮಾಡಿರುವ ಬಗ್ಗೆ ತಪ್ಪೋಪ್ಪಿ ಕೊಂಡಿದ್ದಾರೆ. ಇದರನ್ವಯ ಪೊಲೀಸರು ಬಂಧಿತ ರಿಂದ ರೂ.24,000 ಬೆಲೆ ಬಾಳುವ ಅಡಿಕೆ, ರೂ,17,000 ಬೆಲೆಯ 1ಜೊತೆ ಓಲೆ ಹಾಗೂ 2 ಉಂಗುರ ಸಹಿತ ಕಳವು ಮಾಲು ಸಾಗಿಸಲು ಬಳಸುತ್ತಿದ್ದ ಆಟೋ ರೀಕ್ಷಾವನ್ನು ವಶಪಡಿಸಿ ಕೊಂಡು ಶನಿವಾರ ಕೊನೋಡಿಯ ಶ್ರೀನಾಥ್ ಹಾಗೂ ಕಮಲಾಪುರದ ತೆಂಕ ಬಯಲಿನ ರಮೇಶ್ ಎಂಬುವ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಕೊಪ್ಪ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಜಿ.ಎಸ್.ಸ್ವರ್ಣ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂಧಿಗಳಾದ ಎ.ಎಸ್.ಐ ನಾಗರಾಜ್, ರವಿ, ವಿನಾಯಕ್, ಸತೀಶ್, ದಯಾನಂದ,ಹನುಮಂತ್ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>