<p><strong>ನವದೆಹಲಿ (ಪಿಟಿಐ):</strong> ಐಐಟಿಗಳು ಸೇರಿದಂತೆ ಕೇಂದ್ರದಿಂದ ಅನುದಾನ ಪಡೆಯುವ ಎಂಜಿನಿಯರಿಂಗ್ ಕಾಲೇಜುಗಳಿಗೆಲ್ಲ ಒಂದೇ ಸಾಮಾನ್ಯ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾಪ ವಿರೋಧಿಸುತ್ತಿರುವ ಐಐಟಿ ಅಧ್ಯಾಪಕರು ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.<br /> <br /> ನಮ್ಮ ಮನವಿಗೆ ಪ್ರಧಾನಿಯವರ ಕಚೇರಿ ಸ್ಪಂದಿಸಿದೆ. ಗುರುವಾರ ಪ್ರಧಾನಿ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ಶುಕ್ರವಾರ ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗುತ್ತೇವೆ ಎಂದು ಅಖಿಲ ಭಾರತ ಐಐಟಿ ಅಧ್ಯಾಪಕರ ಒಕ್ಕೂಟದ (ಎಐಐಐಟಿಎಫ್ಎಫ್) ಪ್ರತಿನಿಧಿಗಳು ತಿಳಿಸಿದ್ದಾರೆ.<br /> <br /> ಕೇಂದ್ರದ ಪ್ರಸ್ತಾಪದ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿರುವ ದೆಹಲಿ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘ, ಈ ಬೆಳವಣಿಗೆಯನ್ನು ಸ್ವಾಗತಿಸಿದೆ. ಈ ಭೇಟಿಯಲ್ಲಿ ಐಐಟಿಗಳ ಪ್ರತ್ಯೇಕ ಶೈಕ್ಷಣಿಕ ಸ್ಥಾನಮಾನ ಕಾಪಾಡುವ ಮಾರ್ಗೋಪಾಯಗಳು ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಆಶಯ ವ್ಯಕ್ತಪಡಿಸಿದೆ.<br /> ಅಲ್ಲದೇ ದೆಹಲಿ ಐಐಟಿ ಹಳೆ ವಿದ್ಯಾರ್ಥಿಗಳ ಸಂಘ ಸಹ ಪ್ರಧಾನಿ ಭೇಟಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದೆ. <br /> <br /> ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಸ್ತಾಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಮಂಗಳವಾರ ಹೇಳಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.<br /> ಕೇಂದ್ರದ ಈ ಪ್ರಸ್ತಾವದ ವಿರುದ್ಧ `ಎಐಐಐಟಿಎಫ್ಎಫ್~ ಮೇ 31ರಂದು ಪ್ರಧಾನಿಯವರಿಗೆ ಪತ್ರ ಬರೆದಿತ್ತು.<br /> <br /> ಪ್ರತಿ ಐಐಟಿಯೂ ಪ್ರತ್ಯೇಕ ಶೈಕ್ಷಣಿಕ ಸ್ಥಾನ ಹೊಂದಿದ್ದು ಪ್ರವೇಶ ಹಾಗೂ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿ ತನ್ನದೇ ಆದ ನಿಯಮಾವಳಿ ಪಾಲಿಸುತ್ತಿದೆ. ಅದನ್ನು ಬದಲಿಸಬಾರದು ಎಂದು ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.<br /> ಕೇಂದ್ರ ಸರ್ಕಾರ ಮೇ 28ರಂದು ಈ ಕುರಿತು ಪ್ರಕಟಣೆ ನೀಡಿತ್ತು. 2013ನೇ ಸಾಲಿನಿಂದ ಐಐಟಿ, ಎನ್ಐಟಿ ಹಾಗೂ ಐಐಐಟಿಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. <br /> <br /> ಈ ಸಂಸ್ಥೆಗಳಿಗೆ ಪ್ರವೇಶ ನೀಡುವಾಗ ಪ್ರವೇಶ ಪರೀಕ್ಷೆಯ ಅಂಕಗಳ ಜತೆ 12ನೇ ತರಗತಿಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿತ್ತು.ಈ ಹಿಂದೆ ಐಐಟಿ, ಎನ್ಐಟಿ ಹಾಗೂ ಐಐಐಟಿಗಳ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಐಐಟಿಗಳು ಈಗ ಬಂಡಾಯದ ದನಿ ತೆಗೆದಿವೆ ಎಂದು ಕಪಿಲ್ ಸಿಬಲ್ ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಐಐಟಿಗಳು ಸೇರಿದಂತೆ ಕೇಂದ್ರದಿಂದ ಅನುದಾನ ಪಡೆಯುವ ಎಂಜಿನಿಯರಿಂಗ್ ಕಾಲೇಜುಗಳಿಗೆಲ್ಲ ಒಂದೇ ಸಾಮಾನ್ಯ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾಪ ವಿರೋಧಿಸುತ್ತಿರುವ ಐಐಟಿ ಅಧ್ಯಾಪಕರು ಶುಕ್ರವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.<br /> <br /> ನಮ್ಮ ಮನವಿಗೆ ಪ್ರಧಾನಿಯವರ ಕಚೇರಿ ಸ್ಪಂದಿಸಿದೆ. ಗುರುವಾರ ಪ್ರಧಾನಿ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ. ಶುಕ್ರವಾರ ಪ್ರಧಾನಿ ಸಿಂಗ್ ಅವರನ್ನು ಭೇಟಿಯಾಗುತ್ತೇವೆ ಎಂದು ಅಖಿಲ ಭಾರತ ಐಐಟಿ ಅಧ್ಯಾಪಕರ ಒಕ್ಕೂಟದ (ಎಐಐಐಟಿಎಫ್ಎಫ್) ಪ್ರತಿನಿಧಿಗಳು ತಿಳಿಸಿದ್ದಾರೆ.<br /> <br /> ಕೇಂದ್ರದ ಪ್ರಸ್ತಾಪದ ವಿರುದ್ಧ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿರುವ ದೆಹಲಿ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘ, ಈ ಬೆಳವಣಿಗೆಯನ್ನು ಸ್ವಾಗತಿಸಿದೆ. ಈ ಭೇಟಿಯಲ್ಲಿ ಐಐಟಿಗಳ ಪ್ರತ್ಯೇಕ ಶೈಕ್ಷಣಿಕ ಸ್ಥಾನಮಾನ ಕಾಪಾಡುವ ಮಾರ್ಗೋಪಾಯಗಳು ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಆಶಯ ವ್ಯಕ್ತಪಡಿಸಿದೆ.<br /> ಅಲ್ಲದೇ ದೆಹಲಿ ಐಐಟಿ ಹಳೆ ವಿದ್ಯಾರ್ಥಿಗಳ ಸಂಘ ಸಹ ಪ್ರಧಾನಿ ಭೇಟಿಗೆ ಅವಕಾಶ ಕೋರಿ ಮನವಿ ಸಲ್ಲಿಸಿದೆ. <br /> <br /> ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಪ್ರಸ್ತಾಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಮಂಗಳವಾರ ಹೇಳಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.<br /> ಕೇಂದ್ರದ ಈ ಪ್ರಸ್ತಾವದ ವಿರುದ್ಧ `ಎಐಐಐಟಿಎಫ್ಎಫ್~ ಮೇ 31ರಂದು ಪ್ರಧಾನಿಯವರಿಗೆ ಪತ್ರ ಬರೆದಿತ್ತು.<br /> <br /> ಪ್ರತಿ ಐಐಟಿಯೂ ಪ್ರತ್ಯೇಕ ಶೈಕ್ಷಣಿಕ ಸ್ಥಾನ ಹೊಂದಿದ್ದು ಪ್ರವೇಶ ಹಾಗೂ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿ ತನ್ನದೇ ಆದ ನಿಯಮಾವಳಿ ಪಾಲಿಸುತ್ತಿದೆ. ಅದನ್ನು ಬದಲಿಸಬಾರದು ಎಂದು ಈ ಪತ್ರದಲ್ಲಿ ಒತ್ತಾಯಿಸಲಾಗಿದೆ.<br /> ಕೇಂದ್ರ ಸರ್ಕಾರ ಮೇ 28ರಂದು ಈ ಕುರಿತು ಪ್ರಕಟಣೆ ನೀಡಿತ್ತು. 2013ನೇ ಸಾಲಿನಿಂದ ಐಐಟಿ, ಎನ್ಐಟಿ ಹಾಗೂ ಐಐಐಟಿಗಳಿಗೆ ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. <br /> <br /> ಈ ಸಂಸ್ಥೆಗಳಿಗೆ ಪ್ರವೇಶ ನೀಡುವಾಗ ಪ್ರವೇಶ ಪರೀಕ್ಷೆಯ ಅಂಕಗಳ ಜತೆ 12ನೇ ತರಗತಿಯ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ತಿಳಿಸಿತ್ತು.ಈ ಹಿಂದೆ ಐಐಟಿ, ಎನ್ಐಟಿ ಹಾಗೂ ಐಐಐಟಿಗಳ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಪ್ರಸ್ತಾಪಕ್ಕೆ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಐಐಟಿಗಳು ಈಗ ಬಂಡಾಯದ ದನಿ ತೆಗೆದಿವೆ ಎಂದು ಕಪಿಲ್ ಸಿಬಲ್ ಹೇಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>