<p><strong>ಮದ್ದೂರು: </strong> ತಾಲ್ಲೂಕು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರನ್ನು ಉತ್ತರಾಖಂಡದಲ್ಲಿ ಜಲಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿರುವ ರಾಜ್ಯದ ಪ್ರವಾಸಿಗರನ್ನು ಕರೆತರಲು ರಾಜ್ಯ ಸರ್ಕಾರ ನಿಯೋಜಿಸಿದೆ.<br /> <br /> ಪಟ್ಟಣದ ಪತ್ರಕರ್ತ ಎಂ.ಜಿ. ಸೀತರಾಮು ಅವರ ಕುಟುಂಬದ 18 ಮಂದಿಯಲ್ಲಿ 5 ಮಂದಿ ಗೌರಿಕುಂಡ್ನ ಗಂಜಿ ಕೇಂದ್ರದಲ್ಲಿದ್ದಾರೆ. ಅವರೂ ಸೇರಿದಂತೆ ರಾಜ್ಯದ ನಿರಾಶ್ರಿತ ಪ್ರವಾಸಿಗರನ್ನು ಗುರುತಿಸಿ ಕರೆತರಲು ಅವರನ್ನು ಸರ್ಕಾರ ನಿಯೋಜಿಸಿದೆ.<br /> <br /> `ಮುಖ್ಯಮಂತ್ರಿಗಳ ಕಾರ್ಯಾಲಯದ ಆದೇಶದ ಮೇರೆಗೆ ಭಾನುವಾರ ರಾತ್ರಿಯೇ ಬೆಂಗಳೂರಿಗೆ ತೆರಳುತ್ತಿದ್ದೇನೆ. ಸೋಮವಾರ ಬೆಳಿಗ್ಗೆ 8.30ರ ವಿಮಾನವೇರಿ ನವದೆಹಲಿ ತಲುಪಿ, ನಂತರ ಅಲ್ಲಿಂದ ಉತ್ತರಾಖಂಡ, ಡೆಹ್ರಾಡೂನ್, ಹರಿದ್ವಾರ, ಗೌರಿಕುಂಡ್ ಹಾಗೂ ಋಷಿಕೇಶ ಗಂಜಿ ಕೇಂದ್ರಗಳಿಗೆ ತೆರಳಿ ರಾಜ್ಯದ ನಿರಾಶ್ರಿತ ಪ್ರವಾಸಿಗರನ್ನು ಗುರುತಿಸಿ ಕರೆತರಲು ಯೋಜಿಸಿದ್ದೇನೆ. ನನ್ನೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ನಟೇಶ್ ಎಂಬುವರನ್ನು ನಿಯೋಜಿಸಲಾಗಿದೆ' ಎಂದು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು `ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು: </strong> ತಾಲ್ಲೂಕು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರನ್ನು ಉತ್ತರಾಖಂಡದಲ್ಲಿ ಜಲಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿರುವ ರಾಜ್ಯದ ಪ್ರವಾಸಿಗರನ್ನು ಕರೆತರಲು ರಾಜ್ಯ ಸರ್ಕಾರ ನಿಯೋಜಿಸಿದೆ.<br /> <br /> ಪಟ್ಟಣದ ಪತ್ರಕರ್ತ ಎಂ.ಜಿ. ಸೀತರಾಮು ಅವರ ಕುಟುಂಬದ 18 ಮಂದಿಯಲ್ಲಿ 5 ಮಂದಿ ಗೌರಿಕುಂಡ್ನ ಗಂಜಿ ಕೇಂದ್ರದಲ್ಲಿದ್ದಾರೆ. ಅವರೂ ಸೇರಿದಂತೆ ರಾಜ್ಯದ ನಿರಾಶ್ರಿತ ಪ್ರವಾಸಿಗರನ್ನು ಗುರುತಿಸಿ ಕರೆತರಲು ಅವರನ್ನು ಸರ್ಕಾರ ನಿಯೋಜಿಸಿದೆ.<br /> <br /> `ಮುಖ್ಯಮಂತ್ರಿಗಳ ಕಾರ್ಯಾಲಯದ ಆದೇಶದ ಮೇರೆಗೆ ಭಾನುವಾರ ರಾತ್ರಿಯೇ ಬೆಂಗಳೂರಿಗೆ ತೆರಳುತ್ತಿದ್ದೇನೆ. ಸೋಮವಾರ ಬೆಳಿಗ್ಗೆ 8.30ರ ವಿಮಾನವೇರಿ ನವದೆಹಲಿ ತಲುಪಿ, ನಂತರ ಅಲ್ಲಿಂದ ಉತ್ತರಾಖಂಡ, ಡೆಹ್ರಾಡೂನ್, ಹರಿದ್ವಾರ, ಗೌರಿಕುಂಡ್ ಹಾಗೂ ಋಷಿಕೇಶ ಗಂಜಿ ಕೇಂದ್ರಗಳಿಗೆ ತೆರಳಿ ರಾಜ್ಯದ ನಿರಾಶ್ರಿತ ಪ್ರವಾಸಿಗರನ್ನು ಗುರುತಿಸಿ ಕರೆತರಲು ಯೋಜಿಸಿದ್ದೇನೆ. ನನ್ನೊಂದಿಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ನಟೇಶ್ ಎಂಬುವರನ್ನು ನಿಯೋಜಿಸಲಾಗಿದೆ' ಎಂದು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು `ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>