<p><strong>ಬೆಳಗಾವಿ: </strong>ಗೋ ಸೇರಿದಂತೆ ಯಾವುದೇ ಪ್ರಾಣಿಗಳ ಹತ್ಯೆ ಮಾಡದೇ ಬಸವನಕುಡಚಿ ಬಳಿ ಏ.16 ಮತ್ತು 17 ರಂದು ಇಸ್ತಿಮಾ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಹೇಳಿದರು.<br /> <br /> ಖಾಸಗಿ ಒಡೆತನದ ಭೂಮಿ ಮಾಲೀಕರು ಅನುಮತಿ ನೀಡಿದ ಜಾಗೆಯಲ್ಲಿ ಮಾತ್ರ ಕಾರ್ಯಕ್ರಮ ನಡೆಸಬೇಕು. ಪರವಾನಗಿ ನೀಡದ ಭೂಮಿಯನ್ನು ಬಳಸಬಾರದು ಎಂದು ಇಸ್ತಿಮಾ ಹಮ್ಮಿಕೊಂಡಿರುವ ಕರೀಮದಾದ ಖಾನ ಮಸಜಿದ್ ಅಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.<br /> <br /> `ಬೇರೆ ಧರ್ಮದವರ ಭಾವನೆಗಳಿಗೆ ಧಕ್ಕೆ ಬರುವಂತಹ ಯಾವುದೇ ಚಟುವಟಿಕೆಗಳನ್ನು ಮಾಡಬಾರದು. ಉದ್ರೇಕಕಾರಿ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತವ ಭಾಷಣವನ್ನು ನಿಷೇಧಿಸಲಾಗಿದೆ~ ಎಂದು ಅವರು ಹೇಳಿದರು.<br /> <br /> `ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬರುವ ಅನ್ಯ ಧರ್ಮದವರ ವಿಗ್ರಹ, ಗುಡಿ, ದೇವರು ಕಟ್ಟೆಗೆ ಯಾವುದೇ ಧಕ್ಕೆಯುಂಟು ಮಾಡಬಾರದು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಂಘಟಕರಿಗೆ ತಿಳಿಸಿಲಾಗಿದೆ~ ಎಂದು ಅವರು ಹೇಳಿದರು.<br /> <br /> ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಮಾತನಾಡಿ, ಜನರ ಭಾವನೆಗಳಿಗೆ ಧಕ್ಕೆಯುಂಟಾಗಲು ಬಿಡುವುದಿಲ್ಲ. ಕಾರ್ಯಕ್ರಮ ಮಾಡಲು ಐದು ಎಕರೆ ಹಾಗೂ ವಾಹನ ನಿಲುಗಡೆ ಎರಡು ಎಕರೆ ಭೂಮಿಯನ್ನು ನೀಡಲಾಗಿದೆ ಎಂದರು.<br /> <br /> `ಗೋ ಹತ್ಯೆಯಾಗದಂತೆ ನಿಗಾವಹಿಸ ಲಾಗುವುದು. ತಪಾಸಣೆ ಯನ್ನೂ ಕೂಡ ನಡೆಸಲಾಗುವುದು. ಕಾನೂನು ಸು ವ್ಯವಸ್ಥೆ ಕಾಪಾಡಲು ಮೀಸಲು ಪೊಲೀಸ್ ಪಡೆಯ ಆರು ತುಕಡಿಗಳು ಸಮಾರಂಭ ಸ್ಥಳದಯಲ್ಲಿ ನಿಯೋಜಿಸ ಲಾಗುವುದು~ ಎಂದು ಅವರು ಹೇಳಿದರು.<br /> <br /> ಇದಕ್ಕೂ ಮೊದಲು ನಡೆದ ಹಿಂದೂ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶದಂತೆ ಗೋಹತ್ಯೆ ಆಗುವುದನ್ನು ತಡೆಯಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದರು.<br /> `ಇಸ್ತಿಮಾ ಅಲ್ಲದೇ ಬಕ್ರೀದ್ ಮುಂತಾದ ಹಬ್ಬಗಳಲ್ಲಿಯೂ ಗೋ ಹತ್ಯೆ ಮಾಡದಂತೆ ಮಾಡಬೇಕು. <br /> <br /> ಪ್ರಾಣಿಗಳ ಬಲಿಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು~ ಎಂದು ಅವರು ಆಗ್ರಹಿಸಿದರು.<br /> ಜಿಲ್ಲಾಧಿಕಾರಿ ಅನ್ಬುಕುಮಾರ ಮಾತನಾಡಿ, ಕಾನೂನು ಪರಿಪಾಲನೆ ಮಾಡಲಾಗುವುದು. ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ನೀವುಗಳು ನೀಡಿದ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದರು. <br /> ಎಸ್.ಎಂ. ಕುಲಕರ್ಣಿ, ಸುರೇಶ ಹುಂದ್ರೆ, ಪರಮೇಶ್ವರ ಹೆಗಡೆ, ಎಂ.ಬಿ. ಝಿರಲಿ, ಬಿ.ಬಿ. ಕಗ್ಗಣಗಿ ಮತ್ತಿತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: </strong>ಗೋ ಸೇರಿದಂತೆ ಯಾವುದೇ ಪ್ರಾಣಿಗಳ ಹತ್ಯೆ ಮಾಡದೇ ಬಸವನಕುಡಚಿ ಬಳಿ ಏ.16 ಮತ್ತು 17 ರಂದು ಇಸ್ತಿಮಾ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಹೇಳಿದರು.<br /> <br /> ಖಾಸಗಿ ಒಡೆತನದ ಭೂಮಿ ಮಾಲೀಕರು ಅನುಮತಿ ನೀಡಿದ ಜಾಗೆಯಲ್ಲಿ ಮಾತ್ರ ಕಾರ್ಯಕ್ರಮ ನಡೆಸಬೇಕು. ಪರವಾನಗಿ ನೀಡದ ಭೂಮಿಯನ್ನು ಬಳಸಬಾರದು ಎಂದು ಇಸ್ತಿಮಾ ಹಮ್ಮಿಕೊಂಡಿರುವ ಕರೀಮದಾದ ಖಾನ ಮಸಜಿದ್ ಅಧ್ಯಕ್ಷರಿಗೆ ಸೂಚಿಸಲಾಗಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.<br /> <br /> `ಬೇರೆ ಧರ್ಮದವರ ಭಾವನೆಗಳಿಗೆ ಧಕ್ಕೆ ಬರುವಂತಹ ಯಾವುದೇ ಚಟುವಟಿಕೆಗಳನ್ನು ಮಾಡಬಾರದು. ಉದ್ರೇಕಕಾರಿ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತವ ಭಾಷಣವನ್ನು ನಿಷೇಧಿಸಲಾಗಿದೆ~ ಎಂದು ಅವರು ಹೇಳಿದರು.<br /> <br /> `ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬರುವ ಅನ್ಯ ಧರ್ಮದವರ ವಿಗ್ರಹ, ಗುಡಿ, ದೇವರು ಕಟ್ಟೆಗೆ ಯಾವುದೇ ಧಕ್ಕೆಯುಂಟು ಮಾಡಬಾರದು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಅಹಿತಕರ ಘಟನೆ ನಡೆದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಂಘಟಕರಿಗೆ ತಿಳಿಸಿಲಾಗಿದೆ~ ಎಂದು ಅವರು ಹೇಳಿದರು.<br /> <br /> ಜಿಲ್ಲಾ ಪೊಲೀಸ್ ವರಿಷ್ಠ ಸಂದೀಪ ಪಾಟೀಲ ಮಾತನಾಡಿ, ಜನರ ಭಾವನೆಗಳಿಗೆ ಧಕ್ಕೆಯುಂಟಾಗಲು ಬಿಡುವುದಿಲ್ಲ. ಕಾರ್ಯಕ್ರಮ ಮಾಡಲು ಐದು ಎಕರೆ ಹಾಗೂ ವಾಹನ ನಿಲುಗಡೆ ಎರಡು ಎಕರೆ ಭೂಮಿಯನ್ನು ನೀಡಲಾಗಿದೆ ಎಂದರು.<br /> <br /> `ಗೋ ಹತ್ಯೆಯಾಗದಂತೆ ನಿಗಾವಹಿಸ ಲಾಗುವುದು. ತಪಾಸಣೆ ಯನ್ನೂ ಕೂಡ ನಡೆಸಲಾಗುವುದು. ಕಾನೂನು ಸು ವ್ಯವಸ್ಥೆ ಕಾಪಾಡಲು ಮೀಸಲು ಪೊಲೀಸ್ ಪಡೆಯ ಆರು ತುಕಡಿಗಳು ಸಮಾರಂಭ ಸ್ಥಳದಯಲ್ಲಿ ನಿಯೋಜಿಸ ಲಾಗುವುದು~ ಎಂದು ಅವರು ಹೇಳಿದರು.<br /> <br /> ಇದಕ್ಕೂ ಮೊದಲು ನಡೆದ ಹಿಂದೂ ಸಂಘಟನೆಗಳ ಸಭೆಯಲ್ಲಿ ಮಾತನಾಡಿದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ದಯಾನಂದ ಸ್ವಾಮೀಜಿ, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶದಂತೆ ಗೋಹತ್ಯೆ ಆಗುವುದನ್ನು ತಡೆಯಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದರು.<br /> `ಇಸ್ತಿಮಾ ಅಲ್ಲದೇ ಬಕ್ರೀದ್ ಮುಂತಾದ ಹಬ್ಬಗಳಲ್ಲಿಯೂ ಗೋ ಹತ್ಯೆ ಮಾಡದಂತೆ ಮಾಡಬೇಕು. <br /> <br /> ಪ್ರಾಣಿಗಳ ಬಲಿಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು~ ಎಂದು ಅವರು ಆಗ್ರಹಿಸಿದರು.<br /> ಜಿಲ್ಲಾಧಿಕಾರಿ ಅನ್ಬುಕುಮಾರ ಮಾತನಾಡಿ, ಕಾನೂನು ಪರಿಪಾಲನೆ ಮಾಡಲಾಗುವುದು. ಕಾನೂನು ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ನೀವುಗಳು ನೀಡಿದ ಸಲಹೆಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾತನಾಡಿದರು. <br /> ಎಸ್.ಎಂ. ಕುಲಕರ್ಣಿ, ಸುರೇಶ ಹುಂದ್ರೆ, ಪರಮೇಶ್ವರ ಹೆಗಡೆ, ಎಂ.ಬಿ. ಝಿರಲಿ, ಬಿ.ಬಿ. ಕಗ್ಗಣಗಿ ಮತ್ತಿತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>