<p>ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯಂತೆ ಬಡವರಿಗೆ 30 ಕೆ.ಜಿ ಅಕ್ಕಿ ಕೊಡುವ ಮುಖ್ಯಮಂತ್ರಿಗಳ ಪ್ರಕಟಣೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.<br /> <br /> ಆದರೆ ಮುಖ್ಯಮಂತ್ರಿಗಳ ನಿರ್ಧಾರ ನನಗಂತೂ ಸಂತೋಷ ತಂದಿದೆ. ಏಕೆಂದರೆ, ಇಂದು ಚರ್ಚೆಯಾಗಬೇಕಿರುವುದು ಸಚಿವರ, ಶಾಸಕರ, ಸರ್ಕಾರಿ ಅಧಿಕಾರಶಾಹಿ ಮತ್ತು ಕೆಲ ನೌಕರ ವರ್ಗದವರ ಸಂಬಳ-ಸಾರಿಗೆ-ಸವಲತ್ತುಗಳ ಬಗ್ಗೆಯೇ ಹೊರತು ಬಡವರಿಗೆ ನೀಡಹೊರಟಿರುವ ಅಕ್ಕಿಯ ಬಗ್ಗೆ ಅಲ್ಲ. ನಾನೇ ಕಂಡಿರುವಂತೆ, ಕೇಳಿರುವಂತೆ ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳ ಮನೆಗಳ ನಾಯಿಗಳಿಗೂ ಐಷಾರಾಮಿ ಸರ್ಕಾರಿ ಕಾರ್ಗಳಲ್ಲಿ ವಾಯುವಿಹಾರಕ್ಕೆ ಹೋಗುವ ಭಾಗ್ಯವಿದೆ.<br /> <br /> ಇವರಂತಹವರ ಮತ್ತು ಸರ್ಕಾರದ ಉದಾರ ನೀತಿಯಿಂದ ಕೊಬ್ಬಿರುವ ಕೆಲವು ಖಾಸಗಿ ಕಂಪನಿಗಳ ಮಾಲೀಕರ ಅಕ್ರಮ ಸಂಪಾದನೆ, ಭ್ರಷ್ಟಾಚಾರ ಮತ್ತು ದುರಾಚಾರಗಳಿಗೆ ಕಡಿವಾಣ ಹಾಕಿದರೆ ಬಡವರಿಗೇನು ದೇಶದ ಸಕಲ ಜನತೆಗೂ ಸುಲಭ ದರದಲ್ಲಿ ಅಕ್ಕಿ ನೀಡಬಹುದೇನೋ.<br /> <br /> ನನಗೆ ತಿಳಿದಂತೆ 30 ಕೆ.ಜಿ. ಅಕ್ಕಿ ಅನೇಕ ಬಡ ಕುಟುಂಬಗಳ ಹೆಣ್ಣು ಮಕ್ಕಳ ಕಣ್ಣಿಗೆ ನಿದ್ದೆ ಕೊಡಬಲ್ಲುದು. ಆಕೆಗೆ ಕೊಂಚವಾದರೂ ನೆಮ್ಮದಿ ತರಬಹುದು. ಏಳುತ್ತಲೇ ಗಂಡ ಮಕ್ಕಳ ಹೊಟ್ಟೆ ತುಂಬಿಸಬೇಕಾದ ಅವಳ ಚಿಂತೆ ಕಳೆಯಬಲ್ಲುದು.<br /> <br /> ಹೊಟ್ಟೆ ತುಂಬಿದರೆ ಬುದ್ಧಿಯೂ ಚುರುಕಾಗುತ್ತದೆ. ನಿರುತ್ಸಾಹ, ಹತಾಶೆ, ಆಕ್ರೋಶ, ಅಶಾಂತಿ ಕಡಿಮೆಯಾಗುತ್ತದೆ. ಕಂಗೆಡುವ ಪರಿಸ್ಥಿತಿ, ಅದರಿಂದ ಹುಟ್ಟುವ ಕ್ರೌರ್ಯ ಕಡಿಮೆಯಾಗಿ ಬದುಕುವ ಆಸೆ ಹುಟ್ಟುತ್ತದೆ. ಅದರಿಂದ ಸಮಾಜದಲ್ಲಿ ಶಾಂತಿ ಒಂದಿಷ್ಟಾದರೂ ಹೆಚ್ಚುತ್ತದೆ. ಮನೆಯಲ್ಲಿ ಅಕ್ಕಿ-ಬೇಳೆ ಇದ್ದರೆ ಏನೋ ಆತ್ಮವಿಶ್ವಾಸ-ಆತ್ಮಾಭಿಮಾನ ! ಹಾಗಾಗಿ ಮುಖ್ಯಮಂತ್ರಿಗಳ ಈ ನಿರ್ಧಾರ ಸದ್ಯದ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವೇ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯಂತೆ ಬಡವರಿಗೆ 30 ಕೆ.ಜಿ ಅಕ್ಕಿ ಕೊಡುವ ಮುಖ್ಯಮಂತ್ರಿಗಳ ಪ್ರಕಟಣೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.<br /> <br /> ಆದರೆ ಮುಖ್ಯಮಂತ್ರಿಗಳ ನಿರ್ಧಾರ ನನಗಂತೂ ಸಂತೋಷ ತಂದಿದೆ. ಏಕೆಂದರೆ, ಇಂದು ಚರ್ಚೆಯಾಗಬೇಕಿರುವುದು ಸಚಿವರ, ಶಾಸಕರ, ಸರ್ಕಾರಿ ಅಧಿಕಾರಶಾಹಿ ಮತ್ತು ಕೆಲ ನೌಕರ ವರ್ಗದವರ ಸಂಬಳ-ಸಾರಿಗೆ-ಸವಲತ್ತುಗಳ ಬಗ್ಗೆಯೇ ಹೊರತು ಬಡವರಿಗೆ ನೀಡಹೊರಟಿರುವ ಅಕ್ಕಿಯ ಬಗ್ಗೆ ಅಲ್ಲ. ನಾನೇ ಕಂಡಿರುವಂತೆ, ಕೇಳಿರುವಂತೆ ಐ.ಎ.ಎಸ್., ಐ.ಪಿ.ಎಸ್. ಅಧಿಕಾರಿಗಳ ಮನೆಗಳ ನಾಯಿಗಳಿಗೂ ಐಷಾರಾಮಿ ಸರ್ಕಾರಿ ಕಾರ್ಗಳಲ್ಲಿ ವಾಯುವಿಹಾರಕ್ಕೆ ಹೋಗುವ ಭಾಗ್ಯವಿದೆ.<br /> <br /> ಇವರಂತಹವರ ಮತ್ತು ಸರ್ಕಾರದ ಉದಾರ ನೀತಿಯಿಂದ ಕೊಬ್ಬಿರುವ ಕೆಲವು ಖಾಸಗಿ ಕಂಪನಿಗಳ ಮಾಲೀಕರ ಅಕ್ರಮ ಸಂಪಾದನೆ, ಭ್ರಷ್ಟಾಚಾರ ಮತ್ತು ದುರಾಚಾರಗಳಿಗೆ ಕಡಿವಾಣ ಹಾಕಿದರೆ ಬಡವರಿಗೇನು ದೇಶದ ಸಕಲ ಜನತೆಗೂ ಸುಲಭ ದರದಲ್ಲಿ ಅಕ್ಕಿ ನೀಡಬಹುದೇನೋ.<br /> <br /> ನನಗೆ ತಿಳಿದಂತೆ 30 ಕೆ.ಜಿ. ಅಕ್ಕಿ ಅನೇಕ ಬಡ ಕುಟುಂಬಗಳ ಹೆಣ್ಣು ಮಕ್ಕಳ ಕಣ್ಣಿಗೆ ನಿದ್ದೆ ಕೊಡಬಲ್ಲುದು. ಆಕೆಗೆ ಕೊಂಚವಾದರೂ ನೆಮ್ಮದಿ ತರಬಹುದು. ಏಳುತ್ತಲೇ ಗಂಡ ಮಕ್ಕಳ ಹೊಟ್ಟೆ ತುಂಬಿಸಬೇಕಾದ ಅವಳ ಚಿಂತೆ ಕಳೆಯಬಲ್ಲುದು.<br /> <br /> ಹೊಟ್ಟೆ ತುಂಬಿದರೆ ಬುದ್ಧಿಯೂ ಚುರುಕಾಗುತ್ತದೆ. ನಿರುತ್ಸಾಹ, ಹತಾಶೆ, ಆಕ್ರೋಶ, ಅಶಾಂತಿ ಕಡಿಮೆಯಾಗುತ್ತದೆ. ಕಂಗೆಡುವ ಪರಿಸ್ಥಿತಿ, ಅದರಿಂದ ಹುಟ್ಟುವ ಕ್ರೌರ್ಯ ಕಡಿಮೆಯಾಗಿ ಬದುಕುವ ಆಸೆ ಹುಟ್ಟುತ್ತದೆ. ಅದರಿಂದ ಸಮಾಜದಲ್ಲಿ ಶಾಂತಿ ಒಂದಿಷ್ಟಾದರೂ ಹೆಚ್ಚುತ್ತದೆ. ಮನೆಯಲ್ಲಿ ಅಕ್ಕಿ-ಬೇಳೆ ಇದ್ದರೆ ಏನೋ ಆತ್ಮವಿಶ್ವಾಸ-ಆತ್ಮಾಭಿಮಾನ ! ಹಾಗಾಗಿ ಮುಖ್ಯಮಂತ್ರಿಗಳ ಈ ನಿರ್ಧಾರ ಸದ್ಯದ ಪರಿಸ್ಥಿತಿಯಲ್ಲಿ ಸ್ವಾಗತಾರ್ಹವೇ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>