<p>ಬೆಂಗಳೂರು: `ರಾಜ್ಯೋತ್ಸವ ಪ್ರಶಸ್ತಿಯು ಮೊದಲು ಅರ್ಹತೆಯಿರುವ ಆಯ್ದ ಕೆಲವು ವ್ಯಕ್ತಿಗಳಿಗೆ ಮಾತ್ರ ದೊರೆಯುತ್ತಿತ್ತು. ಆದರೆ, ಈಗ ಪ್ರಶಸ್ತಿ ಪಡೆಯುವವರ ಸಂಖ್ಯೆಯು ಹನುಮನ ಬಾಲದಂತೆ ಬೆಳೆದಿದೆ' ಎಂದು ಕವಿ ಕೆ.ಎಸ್. ನಿಸಾರ್ ಅಹಮದ್ ವಿಷಾದ ವ್ಯಕ್ತಪಡಿಸಿದರು.<br /> <br /> ಸಪ್ನ ಬುಕ್ ಹೌಸ್ ಮತ್ತು ಗುಲ್ಬರ್ಗದ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಆರ್.ದೊಡ್ಡೇಗೌಡರಿಗೆ ಪ್ರತಿಷ್ಠಾನದ `ಪುಸ್ತಕ ಬಹುಮಾನ ಪ್ರಶಸ್ತಿ' ವಿತರಿಸಿ ಅವರು ಮಾತನಾಡಿದರು.<br /> <br /> `ಮೊದಲು ಅರ್ಹತೆಯಿದ್ದವರಿಗೆ ಪ್ರಶಸ್ತಿ ದೊರೆಯುತ್ತಿತ್ತು. ಆದರೆ, ಈಗ ಎಲ್ಲರಿಗೂ ದೊರೆಯುತ್ತಿದೆ. ಪ್ರತಿಷ್ಠಾನವು ನೀಡಿರುವ ಪುಸ್ತಕ ಬಹುಮಾನ ಪ್ರಶಸ್ತಿಯು ಒಬ್ಬ ಒಳ್ಳೆಯ ವ್ಯಕ್ತಿಗೆ ಮತ್ತು ಲೇಖಕರಿಗೆ ದೊರೆತಿರುವುದು ಸಂತಸ ತಂದಿದೆ. ಆರ್.ದೊಡ್ಡೇಗೌಡರು ಕೆಲಸದ ಜತೆಗೆ ಪುಸ್ತಕಗಳನ್ನು ಬರೆದಿರುವುದು ಶ್ಲಾಘನೀಯ ಕಾರ್ಯವಾಗಿದೆ' ಎಂದರು.<br /> <br /> `ಪ್ರಶಸ್ತಿ ಪಡೆದ `ಭಾರತರತ್ನ ಬಿ.ಆರ್.ಅಂಬೇಡ್ಕರ್' ಕೃತಿಯಲ್ಲಿ ಕೆಲವು ಅಪರೂಪದ ಘಟನೆಗಳನ್ನು ವಿವರಿಸಿದ್ದಾರೆ. ಭಾರತ ದೇಶದಲ್ಲಿ ಬುದ್ಧ, ಬಸವಣ್ಣ, ಗಾಂಧೀಜಿ ನಂತರ ಕ್ರಾಂತಿ ಮಾಡಿದವರು ಅಂಬೇಡ್ಕರ್ ಅವರಾಗಿದ್ದಾರೆ. ಸಮಾಜದಲ್ಲಿ ನಾಲಿಗೆ ಕಳೆದುಕೊಂಡವರಿಗೆ ನಾಲಿಗೆಯಾದವರು. ಒಟ್ಟು ಕೃತಿಯಲ್ಲಿ ಅಪರೂಪದ ಛಾಯಾಚಿತ್ರಗಳು ಮತ್ತು ಅಪರೂಪದ ವಿಷಯಗಳ ಉಲ್ಲೇಖವಿದೆ' ಎಂದರು.<br /> <br /> ಪ್ರಶಸ್ತಿಯು 5,000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ರಾಜ್ಯೋತ್ಸವ ಪ್ರಶಸ್ತಿಯು ಮೊದಲು ಅರ್ಹತೆಯಿರುವ ಆಯ್ದ ಕೆಲವು ವ್ಯಕ್ತಿಗಳಿಗೆ ಮಾತ್ರ ದೊರೆಯುತ್ತಿತ್ತು. ಆದರೆ, ಈಗ ಪ್ರಶಸ್ತಿ ಪಡೆಯುವವರ ಸಂಖ್ಯೆಯು ಹನುಮನ ಬಾಲದಂತೆ ಬೆಳೆದಿದೆ' ಎಂದು ಕವಿ ಕೆ.ಎಸ್. ನಿಸಾರ್ ಅಹಮದ್ ವಿಷಾದ ವ್ಯಕ್ತಪಡಿಸಿದರು.<br /> <br /> ಸಪ್ನ ಬುಕ್ ಹೌಸ್ ಮತ್ತು ಗುಲ್ಬರ್ಗದ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಪ್ನ ಬುಕ್ ಹೌಸ್ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಆರ್.ದೊಡ್ಡೇಗೌಡರಿಗೆ ಪ್ರತಿಷ್ಠಾನದ `ಪುಸ್ತಕ ಬಹುಮಾನ ಪ್ರಶಸ್ತಿ' ವಿತರಿಸಿ ಅವರು ಮಾತನಾಡಿದರು.<br /> <br /> `ಮೊದಲು ಅರ್ಹತೆಯಿದ್ದವರಿಗೆ ಪ್ರಶಸ್ತಿ ದೊರೆಯುತ್ತಿತ್ತು. ಆದರೆ, ಈಗ ಎಲ್ಲರಿಗೂ ದೊರೆಯುತ್ತಿದೆ. ಪ್ರತಿಷ್ಠಾನವು ನೀಡಿರುವ ಪುಸ್ತಕ ಬಹುಮಾನ ಪ್ರಶಸ್ತಿಯು ಒಬ್ಬ ಒಳ್ಳೆಯ ವ್ಯಕ್ತಿಗೆ ಮತ್ತು ಲೇಖಕರಿಗೆ ದೊರೆತಿರುವುದು ಸಂತಸ ತಂದಿದೆ. ಆರ್.ದೊಡ್ಡೇಗೌಡರು ಕೆಲಸದ ಜತೆಗೆ ಪುಸ್ತಕಗಳನ್ನು ಬರೆದಿರುವುದು ಶ್ಲಾಘನೀಯ ಕಾರ್ಯವಾಗಿದೆ' ಎಂದರು.<br /> <br /> `ಪ್ರಶಸ್ತಿ ಪಡೆದ `ಭಾರತರತ್ನ ಬಿ.ಆರ್.ಅಂಬೇಡ್ಕರ್' ಕೃತಿಯಲ್ಲಿ ಕೆಲವು ಅಪರೂಪದ ಘಟನೆಗಳನ್ನು ವಿವರಿಸಿದ್ದಾರೆ. ಭಾರತ ದೇಶದಲ್ಲಿ ಬುದ್ಧ, ಬಸವಣ್ಣ, ಗಾಂಧೀಜಿ ನಂತರ ಕ್ರಾಂತಿ ಮಾಡಿದವರು ಅಂಬೇಡ್ಕರ್ ಅವರಾಗಿದ್ದಾರೆ. ಸಮಾಜದಲ್ಲಿ ನಾಲಿಗೆ ಕಳೆದುಕೊಂಡವರಿಗೆ ನಾಲಿಗೆಯಾದವರು. ಒಟ್ಟು ಕೃತಿಯಲ್ಲಿ ಅಪರೂಪದ ಛಾಯಾಚಿತ್ರಗಳು ಮತ್ತು ಅಪರೂಪದ ವಿಷಯಗಳ ಉಲ್ಲೇಖವಿದೆ' ಎಂದರು.<br /> <br /> ಪ್ರಶಸ್ತಿಯು 5,000 ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>