<p><strong>ಬೆಂಗಳೂರು:</strong> `ಬಿಎಂಟಿಸಿ ಘಟಕಗಳಲ್ಲಿ ಕಾರ್ಮಿಕರು ರಜೆ ಪಡೆಯಲು ಮುಂಚಿತವಾಗಿ ರಜೆ ಅರ್ಜಿ ನೀಡಿದರೆ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಹಾಗೂ ಒತ್ತಾಯಪೂರ್ವಕವಾಗಿ ನೀಡಿದರೂ ಸಹ ಅದನ್ನು ರಜೆ ರಿಜಿಸ್ಟರ್ನಲ್ಲಿ ದಾಖಲು ಮಾಡುವುದಿಲ್ಲ' ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಆರೋಪಿಸಿದೆ.<br /> <br /> ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯು, `ಈ ಬಗ್ಗೆ ಘಟಕದ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಡಿಪೊ ದಂಡ ಎಂದು ಕಾರ್ಮಿಕರ ವೇತನ ಚೀಟಿಯಲ್ಲಿ ರೂ100ರಿಂದ 1,500ರ ವರೆಗೆ ಕಡಿತ ಮಾಡುತ್ತಾರೆ. ದಂಡ ಹಾಕಿದ ಬಗ್ಗೆ ಆದೇಶ ಪ್ರತಿಯನ್ನೂ ಕಾರ್ಮಿಕರಿಗೆ ನೀಡುತ್ತಿಲ್ಲ' ಎಂದು ಗಮನ ಸೆಳೆದಿದೆ.<br /> <br /> `ಕಾರ್ಮಿಕರ ಕೊರತೆ ಇದೆ ಎಂಬ ನೆಪ ಒಡ್ಡಿ ವಾಹನಗಳನ್ನು ಸರಿಯಾಗಿ ರಿಪೇರಿ ಮಾಡುತ್ತಿಲ್ಲ. ಚಾಲಕ-ನಿರ್ವಾಹಕರಲ್ಲಿ ಹೆಚ್ಚುವರಿ ಎಂಟು ತಾಸು ಕೆಲಸ ಮಾಡಿಸಿ ನಾಲ್ಕು ಗಂಟೆ ಮಾತ್ರ ಓವರ್ಟೈಂ ಕೊಡುತ್ತಿದ್ದಾರೆ. ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೊನೆಯೇ ಇಲ್ಲ' ಎಂದು ಸಂಘಟನೆ ದೂರಿದೆ.<br /> <br /> `ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರೂ ಪ್ರಯೋಜನ ಆಗಿಲ್ಲ. ತಮ್ಮ ಅಧ್ಯಕ್ಷತೆಯಲ್ಲಿ ದ್ವಿಪಕ್ಷೀಯ ಸಭೆಯನ್ನು ಕರೆದಿಲ್ಲ. ವಿಭಾಗ ನಿಯಂತ್ರಣಾಧಿಕಾರಿಗಳೂ ದ್ವಿಪಕ್ಷೀಯ ಸಭೆಯನ್ನು ನಡೆಸುತ್ತಿಲ್ಲ. ಈ ಸಮಸ್ಯೆಗಳಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಪ್ರಧಾನ ಕಾರ್ಯದರ್ಶಿ ಎಚ್. ವಿ. ಅನಂತಸುಬ್ಬರಾವ್ ಮನವಿಯಲ್ಲಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಬಿಎಂಟಿಸಿ ಘಟಕಗಳಲ್ಲಿ ಕಾರ್ಮಿಕರು ರಜೆ ಪಡೆಯಲು ಮುಂಚಿತವಾಗಿ ರಜೆ ಅರ್ಜಿ ನೀಡಿದರೆ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಹಾಗೂ ಒತ್ತಾಯಪೂರ್ವಕವಾಗಿ ನೀಡಿದರೂ ಸಹ ಅದನ್ನು ರಜೆ ರಿಜಿಸ್ಟರ್ನಲ್ಲಿ ದಾಖಲು ಮಾಡುವುದಿಲ್ಲ' ಎಂದು ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಆರೋಪಿಸಿದೆ.<br /> <br /> ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯು, `ಈ ಬಗ್ಗೆ ಘಟಕದ ವ್ಯವಸ್ಥಾಪಕರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಡಿಪೊ ದಂಡ ಎಂದು ಕಾರ್ಮಿಕರ ವೇತನ ಚೀಟಿಯಲ್ಲಿ ರೂ100ರಿಂದ 1,500ರ ವರೆಗೆ ಕಡಿತ ಮಾಡುತ್ತಾರೆ. ದಂಡ ಹಾಕಿದ ಬಗ್ಗೆ ಆದೇಶ ಪ್ರತಿಯನ್ನೂ ಕಾರ್ಮಿಕರಿಗೆ ನೀಡುತ್ತಿಲ್ಲ' ಎಂದು ಗಮನ ಸೆಳೆದಿದೆ.<br /> <br /> `ಕಾರ್ಮಿಕರ ಕೊರತೆ ಇದೆ ಎಂಬ ನೆಪ ಒಡ್ಡಿ ವಾಹನಗಳನ್ನು ಸರಿಯಾಗಿ ರಿಪೇರಿ ಮಾಡುತ್ತಿಲ್ಲ. ಚಾಲಕ-ನಿರ್ವಾಹಕರಲ್ಲಿ ಹೆಚ್ಚುವರಿ ಎಂಟು ತಾಸು ಕೆಲಸ ಮಾಡಿಸಿ ನಾಲ್ಕು ಗಂಟೆ ಮಾತ್ರ ಓವರ್ಟೈಂ ಕೊಡುತ್ತಿದ್ದಾರೆ. ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೊನೆಯೇ ಇಲ್ಲ' ಎಂದು ಸಂಘಟನೆ ದೂರಿದೆ.<br /> <br /> `ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದರೂ ಪ್ರಯೋಜನ ಆಗಿಲ್ಲ. ತಮ್ಮ ಅಧ್ಯಕ್ಷತೆಯಲ್ಲಿ ದ್ವಿಪಕ್ಷೀಯ ಸಭೆಯನ್ನು ಕರೆದಿಲ್ಲ. ವಿಭಾಗ ನಿಯಂತ್ರಣಾಧಿಕಾರಿಗಳೂ ದ್ವಿಪಕ್ಷೀಯ ಸಭೆಯನ್ನು ನಡೆಸುತ್ತಿಲ್ಲ. ಈ ಸಮಸ್ಯೆಗಳಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಪ್ರಧಾನ ಕಾರ್ಯದರ್ಶಿ ಎಚ್. ವಿ. ಅನಂತಸುಬ್ಬರಾವ್ ಮನವಿಯಲ್ಲಿ ಆಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>