<p>ಕೊಪ್ಪಳ: ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸಿದ್ದೇ ಜೆಡಿಎಸ್. ಬಿಜೆಪಿ ಮರವಾಗಿ ಬೆಳೆದ ನಂತರ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆರೋಪಿಸುವುದು ಸರಿಯಲ್ಲ ಎಂದು ಕೆಂದ್ರ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ದೂರಿದರು.<br /> <br /> ಅವರು ನಗರದಲ್ಲಿ ಸೋಮವಾರ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯನ್ನು ಇಷ್ಟು ಮಟ್ಟಕ್ಕೆ ಬೆಳೆಯಲು ಕಾರಣವಾಗಿರುವ ಜೆಡಿಎಸ್, ಈ ಸಂಬಂಧ ಕಾಂಗ್ರೆಸ್ಸನ್ನು ದೂರು ಬದಲು ರಾಜ್ಯದ ಜನತೆಗೆ ಸಮರ್ಪಕ ಉತ್ತರ ನೀಡಬೇಕು. ವಿಷ ಬೀಜ ಬಿತ್ತಿ ಒಳ್ಳೆಯ ಫಲ ಬಯಸಿದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.<br /> <br /> ಉತ್ತಮ ಆಳ್ವಿಕೆಯ ರಾಜ್ಯ ಎಂಬ ಹಣೆಪಟ್ಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಬಿಜೆಪಿಯೇ ಇದಕ್ಕೆ ಕಾರಣ. ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಹೀಗಾಗಿ ಭ್ರಷ್ಟ ಸರ್ಕಾರ ಕಣಕ್ಕಿಳಿಸಿರುವ ಅಭ್ಯರ್ಥಿಯನ್ನು ಕೊಪ್ಪಳ ಮತಕ್ಷೇತ್ರದ ಜನತೆ ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.<br /> <br /> ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದಾಗಿ ಸಂಗಣ್ಣ ಕರಡಿ ಹೇಳಿದ್ದಾರೆ. ಈಗ ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲ. ಇದಕ್ಕೆ ಸಂಗಣ್ಣ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.<br /> <br /> ಸುದರ್ಶನ ಚಕ್ರ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಈ ಉಪಚುನಾವಣೆಯಿಂದಲೇ ಸುದರ್ಶನ ಚಕ್ರ ಹೊರಡಲಿದೆ. ಶಿಶುಪಾಲನ ವಧೆಯಾದಂತೆ ಭ್ರಷ್ಟರು ಹಾಗೂ ದುಷ್ಟರಿಗೆ ಈ ಸುದರ್ಶನ ಚಕ್ರ ತಕ್ಕ ಉತ್ತರ ನೀಡಲಿದೆ ಎಂದು ಕೇಂದ್ರದ ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.<br /> <br /> ಸಮುದ್ರ ಮಥನದಲ್ಲಿ ಮೊದಲು ವಿಷವೇ ಬಂದು ಕೊನೆಗೆ ಅಮೃತ ಸಿಗುತ್ತದೆ. ಅದೇ ರೀತಿ ಇದುವರೆಗೂ ಬಿಜೆಪಿ ಎಂಬ ವಿಷ ನೋಡಿದ್ದಾಗಿದೆ. ಈ ಉಪಚುನಾವಣೆ ಎಂಬ ಮಥನದಲ್ಲಿ ಕಾಂಗ್ರೆಸ್ ಗೆಲುವೆಂಬ ಅಮೃತ ಹೊರಹೊಮ್ಮಲಿದೆ ಎಂದು ಹೇಳಿದರು.<br /> <br /> ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಎಐಸಿಸಿ ಕಾರ್ಯದರ್ಶಿ ಹನುಮಂತರಾವ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವ ಎಚ್.ಕೆ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಪ್ಪಳ: ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸಿದ್ದೇ ಜೆಡಿಎಸ್. ಬಿಜೆಪಿ ಮರವಾಗಿ ಬೆಳೆದ ನಂತರ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಆರೋಪಿಸುವುದು ಸರಿಯಲ್ಲ ಎಂದು ಕೆಂದ್ರ ಕಾರ್ಮಿಕ ಸಚಿವ ಎಂ.ಮಲ್ಲಿಕಾರ್ಜುನ ಖರ್ಗೆ ದೂರಿದರು.<br /> <br /> ಅವರು ನಗರದಲ್ಲಿ ಸೋಮವಾರ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಜೆಪಿಯನ್ನು ಇಷ್ಟು ಮಟ್ಟಕ್ಕೆ ಬೆಳೆಯಲು ಕಾರಣವಾಗಿರುವ ಜೆಡಿಎಸ್, ಈ ಸಂಬಂಧ ಕಾಂಗ್ರೆಸ್ಸನ್ನು ದೂರು ಬದಲು ರಾಜ್ಯದ ಜನತೆಗೆ ಸಮರ್ಪಕ ಉತ್ತರ ನೀಡಬೇಕು. ವಿಷ ಬೀಜ ಬಿತ್ತಿ ಒಳ್ಳೆಯ ಫಲ ಬಯಸಿದರೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.<br /> <br /> ಉತ್ತಮ ಆಳ್ವಿಕೆಯ ರಾಜ್ಯ ಎಂಬ ಹಣೆಪಟ್ಟಿಯನ್ನು ಕರ್ನಾಟಕ ಕಳೆದುಕೊಂಡಿದೆ. ಬಿಜೆಪಿಯೇ ಇದಕ್ಕೆ ಕಾರಣ. ರಾಷ್ಟ್ರ ಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗಿದೆ. ಹೀಗಾಗಿ ಭ್ರಷ್ಟ ಸರ್ಕಾರ ಕಣಕ್ಕಿಳಿಸಿರುವ ಅಭ್ಯರ್ಥಿಯನ್ನು ಕೊಪ್ಪಳ ಮತಕ್ಷೇತ್ರದ ಜನತೆ ತಿರಸ್ಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.<br /> <br /> ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದಾಗಿ ಸಂಗಣ್ಣ ಕರಡಿ ಹೇಳಿದ್ದಾರೆ. ಈಗ ಯಡಿಯೂರಪ್ಪ ಅಧಿಕಾರದಲ್ಲಿ ಇಲ್ಲ. ಇದಕ್ಕೆ ಸಂಗಣ್ಣ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.<br /> <br /> ಸುದರ್ಶನ ಚಕ್ರ: ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಈ ಉಪಚುನಾವಣೆಯಿಂದಲೇ ಸುದರ್ಶನ ಚಕ್ರ ಹೊರಡಲಿದೆ. ಶಿಶುಪಾಲನ ವಧೆಯಾದಂತೆ ಭ್ರಷ್ಟರು ಹಾಗೂ ದುಷ್ಟರಿಗೆ ಈ ಸುದರ್ಶನ ಚಕ್ರ ತಕ್ಕ ಉತ್ತರ ನೀಡಲಿದೆ ಎಂದು ಕೇಂದ್ರದ ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.<br /> <br /> ಸಮುದ್ರ ಮಥನದಲ್ಲಿ ಮೊದಲು ವಿಷವೇ ಬಂದು ಕೊನೆಗೆ ಅಮೃತ ಸಿಗುತ್ತದೆ. ಅದೇ ರೀತಿ ಇದುವರೆಗೂ ಬಿಜೆಪಿ ಎಂಬ ವಿಷ ನೋಡಿದ್ದಾಗಿದೆ. ಈ ಉಪಚುನಾವಣೆ ಎಂಬ ಮಥನದಲ್ಲಿ ಕಾಂಗ್ರೆಸ್ ಗೆಲುವೆಂಬ ಅಮೃತ ಹೊರಹೊಮ್ಮಲಿದೆ ಎಂದು ಹೇಳಿದರು.<br /> <br /> ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಎಐಸಿಸಿ ಕಾರ್ಯದರ್ಶಿ ಹನುಮಂತರಾವ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಮಾಜಿ ಸಚಿವ ಎಚ್.ಕೆ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>