<p><strong>ಕರ್ನಾಟಕ ಚಲನಚಿತ್ರ ಅಕಾಡೆಮಿ</strong>: ಶನಿವಾರ ಬೆಳ್ಳಿಹೆಜ್ಜೆಯಲ್ಲಿ ಹಿರಿಯ ಛಾಯಾಗ್ರಾಹಕ, ನಿರ್ದೇಶಕ ಕೆ.ಜಾನಕೀರಾಮ್ ಅವರೊಂದಿಗೆ ಸಂವಾದ.<br /> ಛಾಯಾಗ್ರಾಹಕರಾಗಿ ಚಿತ್ರರಂಗ ಪ್ರವೇಶಿಸಿ ಚಿತ್ರೋದ್ಯಮದ ನಾಲ್ಕಾರು ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ನಿರ್ದೇಶಕ ಕೆ.ಜಾನಕೀರಾಮ್.<br /> <br /> ಮದ್ರಾಸ್ನ ರೋಹಿಣಿ ಸ್ಟುಡಿಯೋದಲ್ಲಿ ಛಾಯಾಗ್ರಹಣ ವಿಭಾಗದ ಅಪ್ರೆಂಟಿಸ್ ಆಗಿ ಕೆಲಸಕ್ಕೆ ಸೇರಿದ ಜಾನಕೀರಾಮ್ ಹಿರಿಯ ಛಾಯಾಗ್ರಾಹಕರೊಂದಿಗೆ ಪರಿಣತಿ ಪಡೆದು `ಸೋದರಿ~ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರು. 1950 ಹಾಗೂ 60ರ ದಶಕದಲ್ಲಿ ಕನ್ನಡದ ಪ್ರಮುಖ ಚಿತ್ರಗಳಾದ `ಭಕ್ತ ವಿಜಯ~, `ಓಹಿಲೇಶ್ವರ~, `ಶ್ರೀಶೈಲ ಮಹಾತ್ಮೆ~, `ಭಕ್ತ ಕಬೀರ್~, `ಸರ್ವಜ್ಞ ಮೂರ್ತಿ~ ಮೊದಲಾದ ಚಿತ್ರಗಳಿಗೆ ಛಾಯಾಗ್ರಹಣ ನೀಡಿದ ಅವರು ಪುಣ್ಯ ಪುರುಷ ಚಿತ್ರವನ್ನು ನಿರ್ದೇಶಿಸಿದರು.<br /> <br /> ಕಾಸಿದ್ರೆ ಕೈಲಾಸ, ಸಂಶಯ ಫಲ, ಚಿನ್ನಾ ನಿನ್ನ ಮುದ್ದಾಡುವೆ, ಬಲು ಅಪರೂಪ ನಮ್ ಜೋಡಿ ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಕೆ.ಜಾನಕೀರಾಮ್, ನಿರ್ಮಾಪಕ- ನಿರ್ದೇಶಕರ ಸಂಘಗಳ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸಿದರು. ಅಲ್ಲದೆ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. <br /> <br /> ಡಾ.ರಾಜ್ಕುಮಾರ್ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾದ ಜಾನಕೀರಾಮ್ ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹಂಚಿಕೆ ವಲಯಗಳಲ್ಲಿ ಸಕ್ರಿಯರಾಗಿದ್ದರು. ಈ ತಿಂಗಳ ಬೆಳ್ಳಿಹೆಜ್ಜೆಯಲ್ಲಿ ಅವರೊಂದಿಗೆ ಮುಖಾಮುಖಿಯಾಗುವ ಅವಕಾಶ. <br /> ಸ್ಥಳ:ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ<br /> ಹೌಸ್. ಸಂಜೆ 4.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರ್ನಾಟಕ ಚಲನಚಿತ್ರ ಅಕಾಡೆಮಿ</strong>: ಶನಿವಾರ ಬೆಳ್ಳಿಹೆಜ್ಜೆಯಲ್ಲಿ ಹಿರಿಯ ಛಾಯಾಗ್ರಾಹಕ, ನಿರ್ದೇಶಕ ಕೆ.ಜಾನಕೀರಾಮ್ ಅವರೊಂದಿಗೆ ಸಂವಾದ.<br /> ಛಾಯಾಗ್ರಾಹಕರಾಗಿ ಚಿತ್ರರಂಗ ಪ್ರವೇಶಿಸಿ ಚಿತ್ರೋದ್ಯಮದ ನಾಲ್ಕಾರು ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ನಿರ್ದೇಶಕ ಕೆ.ಜಾನಕೀರಾಮ್.<br /> <br /> ಮದ್ರಾಸ್ನ ರೋಹಿಣಿ ಸ್ಟುಡಿಯೋದಲ್ಲಿ ಛಾಯಾಗ್ರಹಣ ವಿಭಾಗದ ಅಪ್ರೆಂಟಿಸ್ ಆಗಿ ಕೆಲಸಕ್ಕೆ ಸೇರಿದ ಜಾನಕೀರಾಮ್ ಹಿರಿಯ ಛಾಯಾಗ್ರಾಹಕರೊಂದಿಗೆ ಪರಿಣತಿ ಪಡೆದು `ಸೋದರಿ~ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರು. 1950 ಹಾಗೂ 60ರ ದಶಕದಲ್ಲಿ ಕನ್ನಡದ ಪ್ರಮುಖ ಚಿತ್ರಗಳಾದ `ಭಕ್ತ ವಿಜಯ~, `ಓಹಿಲೇಶ್ವರ~, `ಶ್ರೀಶೈಲ ಮಹಾತ್ಮೆ~, `ಭಕ್ತ ಕಬೀರ್~, `ಸರ್ವಜ್ಞ ಮೂರ್ತಿ~ ಮೊದಲಾದ ಚಿತ್ರಗಳಿಗೆ ಛಾಯಾಗ್ರಹಣ ನೀಡಿದ ಅವರು ಪುಣ್ಯ ಪುರುಷ ಚಿತ್ರವನ್ನು ನಿರ್ದೇಶಿಸಿದರು.<br /> <br /> ಕಾಸಿದ್ರೆ ಕೈಲಾಸ, ಸಂಶಯ ಫಲ, ಚಿನ್ನಾ ನಿನ್ನ ಮುದ್ದಾಡುವೆ, ಬಲು ಅಪರೂಪ ನಮ್ ಜೋಡಿ ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಕೆ.ಜಾನಕೀರಾಮ್, ನಿರ್ಮಾಪಕ- ನಿರ್ದೇಶಕರ ಸಂಘಗಳ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸಿದರು. ಅಲ್ಲದೆ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. <br /> <br /> ಡಾ.ರಾಜ್ಕುಮಾರ್ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾದ ಜಾನಕೀರಾಮ್ ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹಂಚಿಕೆ ವಲಯಗಳಲ್ಲಿ ಸಕ್ರಿಯರಾಗಿದ್ದರು. ಈ ತಿಂಗಳ ಬೆಳ್ಳಿಹೆಜ್ಜೆಯಲ್ಲಿ ಅವರೊಂದಿಗೆ ಮುಖಾಮುಖಿಯಾಗುವ ಅವಕಾಶ. <br /> ಸ್ಥಳ:ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ<br /> ಹೌಸ್. ಸಂಜೆ 4.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>