<p>`ಮಾರ್ಗೋಸ ಮಹಲ್~ನ ಅಭೂತಪೂರ್ವ ಯಶಸ್ಸಿನ ನಂತರ ನಿರ್ದೇಶಕ ಪಿ.ಡಿ. ಸತೀಶ್ ಚಂದ್ರ, ಬರಹಗಾರ ಚಂದನ್ ಶಂಕರ್ ಮತ್ತು ತಂಡದಿಂದ ಮತ್ತೊಂದು ಹೊಸ ಪ್ರಯತ್ನ ಸಿದ್ಧವಾಗಿದೆ. <br /> <br /> ಈ ಬಾರಿ ಕೂಡ ಹೊಸತನ ಹಾಗೂ ವಿಭಿನ್ನತೆಯನ್ನು ಹೊರಹೊಮ್ಮಿಸುವ ತವಕದಲ್ಲಿದೆ ಪ್ರದರ್ಶನ ಕಲಾ ಸಂಸ್ಥೆ (ಪ್ರ.ಕ.ಸಂ). ಶನಿವಾರ ಮತ್ತು ಭಾನುವಾರ ಪ್ರದರ್ಶನಗೊಳ್ಳಲಿರುವ ನಾಟಕದ ಹೆಸರು `ಬೋಗಿ~-ನಮ್ಮ ಜೀವನದ ಪಯಣ. <br /> <br /> ಪ್ರ.ಕ.ಸಂ ಪ್ರದರ್ಶಿಸಿರುವ ಈವರೆಗಿನ 7 ನಾಟಕಗಳು ಮನೋರಂಜನೆಯ ಅಡಿಪಾಯದ ಮೇಲೆ ಹೊರಬಂದವು. ಈ ಎಲ್ಲಾ ನಾಟಕಗಳಲ್ಲೂ ಹೊಸತನವಿತ್ತು. ಜತೆಗೆ ಹೊಸ ಪ್ರತಿಭೆಗಳನ್ನು ಕನ್ನಡ ರಂಗಭೂಮಿಗೆ ಪರಿಚಯಿಸಲಾಗಿತ್ತು.<br /> <br /> `ಬೋಗಿ~ ಕೂಡ ಈ ಪ್ರತೀತಿಯನ್ನು ಉಳಿಸಿಕೊಳ್ಳಲಿದ್ದು ರಂಗಾಸಕ್ತರ ಮನಸ್ಸು ಮುಟ್ಟಲಿದೆ. <br /> <br /> ಬೋಗಿ ನಾಟಕದಲ್ಲಿ ಹಲವು ವಿಶೇಷತೆಗಳಿವೆ. ನಾಟಕದಲ್ಲಿ ಆರು ವಿಶೇಷ ಪಾತ್ರಗಳಿದ್ದು, ಈ ಆರು ಪಾತ್ರಗಳನ್ನು ರಂಗಭೂಮಿಯ ಹಿರಿಯ ಹಾಗೂ ಅನುಭವಿ ನಟ ಸಿಹಿಕಹಿ ಚಂದ್ರು ನಿರ್ವಹಿಸುತ್ತಿದ್ದಾರೆ. <br /> <br /> ಈ ಆರು ಪಾತ್ರಗಳು ವಾರದ ಆರು ದಿನಗಳನ್ನು ಪ್ರತಿನಿಧಿಸಲಿವೆ (ಸೋಮವಾರದಿಂದ ಶನಿವಾರ). ಒತ್ತಡದ ಜೀವನದಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ವಾರಾಂತ್ಯವನ್ನು (ಭಾನುವಾರ) ಆರಾಮವಾಗಿ ಕಳೆಯುವ ಬದಲು ಮತ್ತಷ್ಟು ಒತ್ತಡಕ್ಕೆ ಬೀಳುತ್ತಿದ್ದಾನೆ ಎಂಬುದು ನಾಟಕದ ತಿರುಳು. <br /> <br /> ಇದೇ ಮೊದಲ ಬಾರಿಗೆ ಸ್ಟೇಜಿನ ಮೇಲೆ ಒಂದು ಟೈಮರ್ ಇರಿಸಲಾಗಿದ್ದು ನಡೆಯುವ ಎಲ್ಲ ದೃಶ್ಯಗಳು ನೇರಪ್ರಸಾರದಂತೆ ಮೂಡಿ ಬರಲಿವೆ. ಪ್ರೇಕ್ಷಕರಿಗೆ ಇದು ನೈಜ ಅನುಭವ ನೀಡಲಿದೆ. ತಂಡ ರಂಗ ಸಜ್ಜಿಕೆಗೆ ಸಾಕಷ್ಟು ಒತ್ತು ನೀಡಿದೆ.<br /> <br /> ಹಾಗಾಗಿ ರೈಲ್ವೆ ಅಧಿಕಾರಿಗಳಿಂದ ಹಲವು ವಿಷಯಗಳನ್ನು ಸಂಗ್ರಹಿಸಿ ನಿಜವಾದ ಬೋಗಿಯ ಅಳತೆಯನ್ನು ರಂಗದ ಮೇಲೆ ರೂಪಿಸಲು ಸಜ್ಜಾಗಿದೆ. ಈ ನಾಟಕದಲ್ಲಿ ಬರುವ ಪಾತ್ರಗಳು ಸಾಮಾನ್ಯ ಮನುಷ್ಯನ ಜೀವನಕ್ಕೂ ಹೆಚ್ಚು ಸಾಮ್ಯತೆ ಹೊಂದಿದೆ ಎಂಬುದು ತಂಡದ ಭರವಸೆ. <br /> <br /> ಪಿ.ಡಿ.ಸತೀಶ್ ಚಂದ್ರ ಕನ್ನಡ ರಂಗಭೂಮಿಯ ಏಳಿಗೆಗಾಗಿ ಶ್ರಮಿಸುತ್ತಿರುವ ರಂಗಕರ್ಮಿ. ತಾವು ಪಟ್ಟ ಕಷ್ಟಗಳನ್ನು ಇಂದಿನ ಯುವಕ-ಯುವತಿಯರು ಅನುಭವಿಸಬಾರದು, ಅವರ ಕ್ರಿಯಾಶೀಲತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಬೇಕೆಂದು ಬಯಕೆಯಿಂದ ಪ್ರ.ಕ.ಸಂ ಎಂಬ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ. <br /> <br /> ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ದೇಶಕರಾಗಿ ಯುವ ಹಾಗೂ ಉತ್ಸಾಹಿ ಕಲೆಗಾರರ ಉದ್ಧಾರಕ್ಕಾಗಿ ಹಲವಾರು ಯೋಜನೆ ರೂಪಿಸಿದ್ದಾರೆ. <br /> <br /> ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ. ಮಾಹಿತಿಗೆ: 99002 21232. ಶನಿವಾರ ಸಂಜೆ 7.30. ಭಾನುವಾರ ಸಂಜೆ 5 ಮತ್ತು 7.30. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಮಾರ್ಗೋಸ ಮಹಲ್~ನ ಅಭೂತಪೂರ್ವ ಯಶಸ್ಸಿನ ನಂತರ ನಿರ್ದೇಶಕ ಪಿ.ಡಿ. ಸತೀಶ್ ಚಂದ್ರ, ಬರಹಗಾರ ಚಂದನ್ ಶಂಕರ್ ಮತ್ತು ತಂಡದಿಂದ ಮತ್ತೊಂದು ಹೊಸ ಪ್ರಯತ್ನ ಸಿದ್ಧವಾಗಿದೆ. <br /> <br /> ಈ ಬಾರಿ ಕೂಡ ಹೊಸತನ ಹಾಗೂ ವಿಭಿನ್ನತೆಯನ್ನು ಹೊರಹೊಮ್ಮಿಸುವ ತವಕದಲ್ಲಿದೆ ಪ್ರದರ್ಶನ ಕಲಾ ಸಂಸ್ಥೆ (ಪ್ರ.ಕ.ಸಂ). ಶನಿವಾರ ಮತ್ತು ಭಾನುವಾರ ಪ್ರದರ್ಶನಗೊಳ್ಳಲಿರುವ ನಾಟಕದ ಹೆಸರು `ಬೋಗಿ~-ನಮ್ಮ ಜೀವನದ ಪಯಣ. <br /> <br /> ಪ್ರ.ಕ.ಸಂ ಪ್ರದರ್ಶಿಸಿರುವ ಈವರೆಗಿನ 7 ನಾಟಕಗಳು ಮನೋರಂಜನೆಯ ಅಡಿಪಾಯದ ಮೇಲೆ ಹೊರಬಂದವು. ಈ ಎಲ್ಲಾ ನಾಟಕಗಳಲ್ಲೂ ಹೊಸತನವಿತ್ತು. ಜತೆಗೆ ಹೊಸ ಪ್ರತಿಭೆಗಳನ್ನು ಕನ್ನಡ ರಂಗಭೂಮಿಗೆ ಪರಿಚಯಿಸಲಾಗಿತ್ತು.<br /> <br /> `ಬೋಗಿ~ ಕೂಡ ಈ ಪ್ರತೀತಿಯನ್ನು ಉಳಿಸಿಕೊಳ್ಳಲಿದ್ದು ರಂಗಾಸಕ್ತರ ಮನಸ್ಸು ಮುಟ್ಟಲಿದೆ. <br /> <br /> ಬೋಗಿ ನಾಟಕದಲ್ಲಿ ಹಲವು ವಿಶೇಷತೆಗಳಿವೆ. ನಾಟಕದಲ್ಲಿ ಆರು ವಿಶೇಷ ಪಾತ್ರಗಳಿದ್ದು, ಈ ಆರು ಪಾತ್ರಗಳನ್ನು ರಂಗಭೂಮಿಯ ಹಿರಿಯ ಹಾಗೂ ಅನುಭವಿ ನಟ ಸಿಹಿಕಹಿ ಚಂದ್ರು ನಿರ್ವಹಿಸುತ್ತಿದ್ದಾರೆ. <br /> <br /> ಈ ಆರು ಪಾತ್ರಗಳು ವಾರದ ಆರು ದಿನಗಳನ್ನು ಪ್ರತಿನಿಧಿಸಲಿವೆ (ಸೋಮವಾರದಿಂದ ಶನಿವಾರ). ಒತ್ತಡದ ಜೀವನದಲ್ಲಿ ಮನುಷ್ಯ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ವಾರಾಂತ್ಯವನ್ನು (ಭಾನುವಾರ) ಆರಾಮವಾಗಿ ಕಳೆಯುವ ಬದಲು ಮತ್ತಷ್ಟು ಒತ್ತಡಕ್ಕೆ ಬೀಳುತ್ತಿದ್ದಾನೆ ಎಂಬುದು ನಾಟಕದ ತಿರುಳು. <br /> <br /> ಇದೇ ಮೊದಲ ಬಾರಿಗೆ ಸ್ಟೇಜಿನ ಮೇಲೆ ಒಂದು ಟೈಮರ್ ಇರಿಸಲಾಗಿದ್ದು ನಡೆಯುವ ಎಲ್ಲ ದೃಶ್ಯಗಳು ನೇರಪ್ರಸಾರದಂತೆ ಮೂಡಿ ಬರಲಿವೆ. ಪ್ರೇಕ್ಷಕರಿಗೆ ಇದು ನೈಜ ಅನುಭವ ನೀಡಲಿದೆ. ತಂಡ ರಂಗ ಸಜ್ಜಿಕೆಗೆ ಸಾಕಷ್ಟು ಒತ್ತು ನೀಡಿದೆ.<br /> <br /> ಹಾಗಾಗಿ ರೈಲ್ವೆ ಅಧಿಕಾರಿಗಳಿಂದ ಹಲವು ವಿಷಯಗಳನ್ನು ಸಂಗ್ರಹಿಸಿ ನಿಜವಾದ ಬೋಗಿಯ ಅಳತೆಯನ್ನು ರಂಗದ ಮೇಲೆ ರೂಪಿಸಲು ಸಜ್ಜಾಗಿದೆ. ಈ ನಾಟಕದಲ್ಲಿ ಬರುವ ಪಾತ್ರಗಳು ಸಾಮಾನ್ಯ ಮನುಷ್ಯನ ಜೀವನಕ್ಕೂ ಹೆಚ್ಚು ಸಾಮ್ಯತೆ ಹೊಂದಿದೆ ಎಂಬುದು ತಂಡದ ಭರವಸೆ. <br /> <br /> ಪಿ.ಡಿ.ಸತೀಶ್ ಚಂದ್ರ ಕನ್ನಡ ರಂಗಭೂಮಿಯ ಏಳಿಗೆಗಾಗಿ ಶ್ರಮಿಸುತ್ತಿರುವ ರಂಗಕರ್ಮಿ. ತಾವು ಪಟ್ಟ ಕಷ್ಟಗಳನ್ನು ಇಂದಿನ ಯುವಕ-ಯುವತಿಯರು ಅನುಭವಿಸಬಾರದು, ಅವರ ಕ್ರಿಯಾಶೀಲತೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ದೊರಕಿಸಬೇಕೆಂದು ಬಯಕೆಯಿಂದ ಪ್ರ.ಕ.ಸಂ ಎಂಬ ಸಂಸ್ಥೆಯ ಮೂಲಕ ದುಡಿಯುತ್ತಿದ್ದಾರೆ. <br /> <br /> ಕೆಂಗಲ್ ಹನುಮಂತಯ್ಯ ಕಲಾಸೌಧದ ನಿರ್ದೇಶಕರಾಗಿ ಯುವ ಹಾಗೂ ಉತ್ಸಾಹಿ ಕಲೆಗಾರರ ಉದ್ಧಾರಕ್ಕಾಗಿ ಹಲವಾರು ಯೋಜನೆ ರೂಪಿಸಿದ್ದಾರೆ. <br /> <br /> ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನದ ಆವರಣ, ಹನುಮಂತನಗರ. ಮಾಹಿತಿಗೆ: 99002 21232. ಶನಿವಾರ ಸಂಜೆ 7.30. ಭಾನುವಾರ ಸಂಜೆ 5 ಮತ್ತು 7.30. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>