<p>ರಾಯಚೂರು: ಎಂದು ಎಐಎಂಎಸ್ಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್ ಹೇಳಿದರು.<br /> ಇಲ್ಲಿ ಸೋಮವಾರ ಎಐಡಿಎಸ್ಓ, ಎಐಡಿವೈಓ ಹಾಗೂ ಎಐಎಂಎಸ್ಎಸ್ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.<br /> <br /> ಸಿನಿಮಾ ನಟರು, ಕ್ರೀಡಾಪಟುಗಳೇ ಸದ್ಯದ ಸ್ಥಿತಿಯಲ್ಲಿ ಈ ದೇಶದ ಯುವಕರಿಗೆ ಸ್ಪೂರ್ತಿ. ಮಾದರಿ ಎಂಬುವ ರೀತಿ ಬಿಂಬಿಸಲಾಗುತ್ತಿದೆ. ಈ ದೇಶದ ಇತಿಹಾಸದ ಪುಟ, ಹೋರಾಟಗಾರರ, ಕ್ರಾಂತಿಕಾರರ, ಸಮಾಜ ಸುಧಾರಕರ ನಿಸ್ವಾರ್ಥ ಸೇವೆ ಅರಿಯುವ ಪ್ರಯತ್ನ ಯುವ ಸಮುದಾಯದಿಂದ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.<br /> <br /> ಐಸಿಎಸ್ ಅಧಿಕಾರಿಯಾಗಿದ್ದ ನೇತಾಜಿ ಬೋಸ್ ಬ್ರಿಟಿಷರ ಗುಲಾಮ ಅಧಿಕಾರಿಯಾಗದೇ ಹೋರಾಟಕ್ಕೆ ಧುಮುಕಿದರು. ಅವರಿಗೆ ಸಿಂಹ ಸ್ವಪ್ನವಾಗಿದ್ದರು. ಮಹಾತ್ಮಾ ಗಾಂಧೀಜಿ ಅವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದರು. ರಾಜೀರಹಿತ ಹೋರಾಟ ಒಂದೇ ಪರಿಹಾರ ಎಂದು ನಂಬಿ ಹೋರಾಟ ನಡೆಸಿದ್ದರು ಎಂದು ಹೇಳಿದರು.<br /> <br /> ಬ್ರಿಟಿಷರು ಈ ದೇಶ ಬಿಟ್ಟು ಹೋದರಷ್ಟೇ ಸ್ವಾತಂತ್ರ್ಯಗೊಂಡು ಈ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆ ಅವರಿಗೆ ಇರಲಿಲ್ಲ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕೈಗಾರಿಕೆ, ತಾಂತ್ರಿಕ ಕ್ಷೇತ್ರದಲ್ಲಿ ಏಳ್ಗೆ ಹೊಂದುವ ಹಂಬಲವನ್ನು ಹೊಂದಿದ್ದರು ಎಂದು ನುಡಿದರು.<br /> <br /> ಅಂಥ ಮಹಾನ್ ಚೇತನದ ಕನಸು ನನಸನ್ನು ಈ ದೇಶದ ಯುವ ಸಮುದಾಯ ಮಾಡಬೇಕಿದೆ ಎಂದು ಹೇಳಿದರು.<br /> <br /> ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾಧ್ಯಕ್ಷ ಮಹೇಶ ಸಿ ವಹಿಸಿದ್ದರು. ಎಆಯ್ಡಿವಾಯ್ಓ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಪ್ರಾಸ್ತಾವಿಕ ಮಾತನಾಡಿದರು. ಎಆಯ್ಎಂಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಚೇತನಾ ಬನಾರೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ಎಂದು ಎಐಎಂಎಸ್ಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್ ಹೇಳಿದರು.<br /> ಇಲ್ಲಿ ಸೋಮವಾರ ಎಐಡಿಎಸ್ಓ, ಎಐಡಿವೈಓ ಹಾಗೂ ಎಐಎಂಎಸ್ಎಸ್ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.<br /> <br /> ಸಿನಿಮಾ ನಟರು, ಕ್ರೀಡಾಪಟುಗಳೇ ಸದ್ಯದ ಸ್ಥಿತಿಯಲ್ಲಿ ಈ ದೇಶದ ಯುವಕರಿಗೆ ಸ್ಪೂರ್ತಿ. ಮಾದರಿ ಎಂಬುವ ರೀತಿ ಬಿಂಬಿಸಲಾಗುತ್ತಿದೆ. ಈ ದೇಶದ ಇತಿಹಾಸದ ಪುಟ, ಹೋರಾಟಗಾರರ, ಕ್ರಾಂತಿಕಾರರ, ಸಮಾಜ ಸುಧಾರಕರ ನಿಸ್ವಾರ್ಥ ಸೇವೆ ಅರಿಯುವ ಪ್ರಯತ್ನ ಯುವ ಸಮುದಾಯದಿಂದ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.<br /> <br /> ಐಸಿಎಸ್ ಅಧಿಕಾರಿಯಾಗಿದ್ದ ನೇತಾಜಿ ಬೋಸ್ ಬ್ರಿಟಿಷರ ಗುಲಾಮ ಅಧಿಕಾರಿಯಾಗದೇ ಹೋರಾಟಕ್ಕೆ ಧುಮುಕಿದರು. ಅವರಿಗೆ ಸಿಂಹ ಸ್ವಪ್ನವಾಗಿದ್ದರು. ಮಹಾತ್ಮಾ ಗಾಂಧೀಜಿ ಅವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದರು. ರಾಜೀರಹಿತ ಹೋರಾಟ ಒಂದೇ ಪರಿಹಾರ ಎಂದು ನಂಬಿ ಹೋರಾಟ ನಡೆಸಿದ್ದರು ಎಂದು ಹೇಳಿದರು.<br /> <br /> ಬ್ರಿಟಿಷರು ಈ ದೇಶ ಬಿಟ್ಟು ಹೋದರಷ್ಟೇ ಸ್ವಾತಂತ್ರ್ಯಗೊಂಡು ಈ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆ ಅವರಿಗೆ ಇರಲಿಲ್ಲ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕೈಗಾರಿಕೆ, ತಾಂತ್ರಿಕ ಕ್ಷೇತ್ರದಲ್ಲಿ ಏಳ್ಗೆ ಹೊಂದುವ ಹಂಬಲವನ್ನು ಹೊಂದಿದ್ದರು ಎಂದು ನುಡಿದರು.<br /> <br /> ಅಂಥ ಮಹಾನ್ ಚೇತನದ ಕನಸು ನನಸನ್ನು ಈ ದೇಶದ ಯುವ ಸಮುದಾಯ ಮಾಡಬೇಕಿದೆ ಎಂದು ಹೇಳಿದರು.<br /> <br /> ಅಧ್ಯಕ್ಷತೆಯನ್ನು ಎಐಡಿಎಸ್ಓ ಜಿಲ್ಲಾಧ್ಯಕ್ಷ ಮಹೇಶ ಸಿ ವಹಿಸಿದ್ದರು. ಎಆಯ್ಡಿವಾಯ್ಓ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಪ್ರಾಸ್ತಾವಿಕ ಮಾತನಾಡಿದರು. ಎಆಯ್ಎಂಎಸ್ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಚೇತನಾ ಬನಾರೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>