<p><strong>ರಟ್ಟೀಹಳ್ಳಿ</strong>: ಮೇದೂರ ಗ್ರಾಮದಲ್ಲಿ ಶನಿವಾರ ರಾತ್ರಿ ಪ್ರಾರಂಭವಾದ ಐತಿಹಾಸಿಕ ಪ್ರಸಿದ್ಧಿ ಪಡೆದ ಕಾಮದಹನ ಕಾರ್ಯಕ್ರಮ ಭಾನುವಾರ ಬೆಳಗಿನ ಜಾವದವರೆಗೆ ಜರುಗಿತು. ನಂತರ ಕಾಮದಹನ ನಡೆಸಲಾಯಿತು.<br /> <br /> ಗ್ರಾಮದಾದ್ಯಂತ ನಡೆದ ಮೆರವಣಿಗೆ ಯಲ್ಲಿ ಸಾವಿರಾರು ಜನರು ಭಾಗಿ ಯಾಗಿದ್ದರು. ಕಾಮದೇವನ ಪ್ರತಿಷ್ಠಾಪನೆ ನಂತರ ಹಣ್ಣುಗಳ ನೈವೇದ್ಯ ಅರ್ಪಿಸಲಾಯಿತು. ಇಡೀ ರಾತ್ರಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಜನರ ಹರ್ಷೋದ್ಘಾರದ ಮಧ್ಯೆ ಕಾಮದಹನ ಜರುಗಿತು.<br /> <br /> ಈ ಸಂದರ್ಭದಲ್ಲಿ ಕಾಮದೇವನ ತಲೆ ಉರಿದು ಬೀಳುವ ಸ್ಥಿತಿಗೆ ಅನುಸಾರವಾಗಿ ಭವಿಷ್ಯ ವನ್ನು ಸೂಚಿಸಲಾಗುತ್ತದೆ. ಈ ವರ್ಷ ಕಾಮದೇವನ ತಲೆ ಮುಂಭಾಗದಲ್ಲಿ ಬಿದ್ದಿದೆ.<br /> <br /> ಇದು ಈ ವರ್ಷ ಉತ್ತಮ ಮಳೆ, ಬೆಳೆ ಸುಖ ಸಂತೋಷದ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಹಿರಿಯರು ಅಭಿಪ್ರಾಯ ಪಟ್ಟರು.<br /> ಕಾಮ ದಹನ ಸ್ಥಳದಲ್ಲಿ ಅಪಾರ ಪ್ರಮಾಣದಲ್ಲಿ ಬೂದಿಯ ರಾಶಿ ಹರಡಿದೆ. ಈ ಬೂದಿಯನ್ನು ಗ್ರಾಮಸ್ಥರು ಸಂಗ್ರಹಿಸಿ ಇಡುತ್ತಾರೆ.<br /> <br /> ಮಕ್ಕಳಿಗೆ ಆರೋಗ್ಯ ಕೆಟ್ಟರೆ ಹಾಗೂ ದನ ಕರುಗಳು ಅನಾರೋಗ್ಯಕ್ಕೆ ಈಡಾದಾಗ ಇದೇ ಕಾಮದೇವನ ಬೂದಿಯನ್ನು ಉಪಯೋಗಿಸುತ್ತಾರೆ. ಅದರಿಂದ ಗುಣಮುಖರಾಗುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದ ಪದ್ಧತಿಯಾಗಿದೆ.<br /> ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಎತ್ತುಗಳ ಮೆರವಣಿಗೆ ಆಯೋಜಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ</strong>: ಮೇದೂರ ಗ್ರಾಮದಲ್ಲಿ ಶನಿವಾರ ರಾತ್ರಿ ಪ್ರಾರಂಭವಾದ ಐತಿಹಾಸಿಕ ಪ್ರಸಿದ್ಧಿ ಪಡೆದ ಕಾಮದಹನ ಕಾರ್ಯಕ್ರಮ ಭಾನುವಾರ ಬೆಳಗಿನ ಜಾವದವರೆಗೆ ಜರುಗಿತು. ನಂತರ ಕಾಮದಹನ ನಡೆಸಲಾಯಿತು.<br /> <br /> ಗ್ರಾಮದಾದ್ಯಂತ ನಡೆದ ಮೆರವಣಿಗೆ ಯಲ್ಲಿ ಸಾವಿರಾರು ಜನರು ಭಾಗಿ ಯಾಗಿದ್ದರು. ಕಾಮದೇವನ ಪ್ರತಿಷ್ಠಾಪನೆ ನಂತರ ಹಣ್ಣುಗಳ ನೈವೇದ್ಯ ಅರ್ಪಿಸಲಾಯಿತು. ಇಡೀ ರಾತ್ರಿ ಮೆರವಣಿಗೆ ಮಾಡಲಾಯಿತು. ಸಾವಿರಾರು ಜನರ ಹರ್ಷೋದ್ಘಾರದ ಮಧ್ಯೆ ಕಾಮದಹನ ಜರುಗಿತು.<br /> <br /> ಈ ಸಂದರ್ಭದಲ್ಲಿ ಕಾಮದೇವನ ತಲೆ ಉರಿದು ಬೀಳುವ ಸ್ಥಿತಿಗೆ ಅನುಸಾರವಾಗಿ ಭವಿಷ್ಯ ವನ್ನು ಸೂಚಿಸಲಾಗುತ್ತದೆ. ಈ ವರ್ಷ ಕಾಮದೇವನ ತಲೆ ಮುಂಭಾಗದಲ್ಲಿ ಬಿದ್ದಿದೆ.<br /> <br /> ಇದು ಈ ವರ್ಷ ಉತ್ತಮ ಮಳೆ, ಬೆಳೆ ಸುಖ ಸಂತೋಷದ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ ಎಂದು ಹಿರಿಯರು ಅಭಿಪ್ರಾಯ ಪಟ್ಟರು.<br /> ಕಾಮ ದಹನ ಸ್ಥಳದಲ್ಲಿ ಅಪಾರ ಪ್ರಮಾಣದಲ್ಲಿ ಬೂದಿಯ ರಾಶಿ ಹರಡಿದೆ. ಈ ಬೂದಿಯನ್ನು ಗ್ರಾಮಸ್ಥರು ಸಂಗ್ರಹಿಸಿ ಇಡುತ್ತಾರೆ.<br /> <br /> ಮಕ್ಕಳಿಗೆ ಆರೋಗ್ಯ ಕೆಟ್ಟರೆ ಹಾಗೂ ದನ ಕರುಗಳು ಅನಾರೋಗ್ಯಕ್ಕೆ ಈಡಾದಾಗ ಇದೇ ಕಾಮದೇವನ ಬೂದಿಯನ್ನು ಉಪಯೋಗಿಸುತ್ತಾರೆ. ಅದರಿಂದ ಗುಣಮುಖರಾಗುತ್ತಾರೆ. ಇದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದ ಪದ್ಧತಿಯಾಗಿದೆ.<br /> ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಎತ್ತುಗಳ ಮೆರವಣಿಗೆ ಆಯೋಜಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>