<p><strong>ಭಾರತ ತಂಡಕ್ಕೆ ಜಯ</strong><br /> <strong>ನವದೆಹಲಿ (ಐಎಎನ್ಎಸ್):</strong>ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫಿಬಾ (ಎಫ್ಐಬಿಎ) ಏಷ್ಯಾ ಚಾಂಪಿಯನ್ಷಿಪ್ನ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 109-26ರಲ್ಲಿ ನೆರಯ ನೇಪಾಳ ತಂಡವನ್ನು ಮಣಿಸಿತು.<br /> <br /> <strong>ಕಾರ್ತಿಕೇಯನ್ ಮಡಿಲಿಗೆ `ಆಟೊ ಜಿಪಿ' ಪ್ರಶಸ್ತಿ</strong><br /> <strong>ಸಿಲ್ವರ್ಸ್ಟೋನ್ (ಐಎಎನ್ಎಸ್):</strong> ಭಾರತದ ನಾರಾಯಣ್ ಕಾರ್ತಿಕೇಯನ್ ಶನಿವಾರ ನಡೆದ ಆಟೊ ಗ್ರ್ಯಾನ್ ಪ್ರಿ ರೇಸ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ರೇಸ್ನಲ್ಲಿ ಅವರು ಗೆದ್ದ ಚೊಚ್ಚಲ ಪ್ರಶಸ್ತಿ.<br /> <br /> ಇಲ್ಲಿನ ಸಿಲ್ವರ್ ಸ್ಟೋನ್ ಸರ್ಕಿಟ್ನಲ್ಲಿ ನಡೆದ ಈ ರೇಸ್ನಲ್ಲಿ ಅಡಚಣೆ ಉಂಟು ಮಾಡಿದ್ದಕ್ಕಾಗಿ ಲಿಕೆವಿನ್ ಗಿಯೊವೆಸಿ ಅವರಿಗೆ ದಂಡ ವಿಧಿಸಲಾಯಿತು. ಘಿಂಜೈ ಮೋಟೊ ಸ್ಪೋರ್ಟ್ಸ್ನ ಗಿಯೊವೆಸಿಗೆ ಸರಣಿಯ ನಾಲ್ಕನೇ ಸುತ್ತಾದ 14ನೇ ಲ್ಯಾಪ್ನಲ್ಲಿ ನಿಯಮ ಮುರಿದ ಕಾರಣ ದಂಡ ವಿಧಿಸಲಾಗಿತ್ತು. ಆದ್ದರಿಂದ ಕಾರ್ತಿಕೇಯನ್ ಅವರನ್ನು ಜಯಶೀಲರನ್ನಾಗಿ ಘೋಷಿಲಾಗಿದೆ.<br /> <br /> `ಅಭ್ಯಾಸ ಹಾಗೂ ಅರ್ಹತಾ ರೇಸ್ನಲ್ಲಿ ನಿಖರ ವೇಗ ಕಾಯ್ದುಕೊಂಡೆವೆ. ಗಿಯೊವೆಸಿ ಅಂತಿಮ ಗುರಿಯಡೆಗೆ ಚಲಿಸುವವರೆಗೂ ನಾನು ಮುಂಚೂಣಿಯಲ್ಲಿದ್ದೆ. ಆದರೆ ಅಂತಿಮ ಲ್ಯಾಪ್ನಲ್ಲಿ ನಿಯಮ ಉಲ್ಲಂಘಿಸುವ ಮೂಲಕ ಅವರು ತಪ್ಪು ಮಾಡಿದರು' ಎಂದು ಕಾರ್ತಿಕೇಯನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾರತ ತಂಡಕ್ಕೆ ಜಯ</strong><br /> <strong>ನವದೆಹಲಿ (ಐಎಎನ್ಎಸ್):</strong>ಭಾರತ ತಂಡದವರು ಇಲ್ಲಿ ನಡೆಯುತ್ತಿರುವ ಫಿಬಾ (ಎಫ್ಐಬಿಎ) ಏಷ್ಯಾ ಚಾಂಪಿಯನ್ಷಿಪ್ನ ಬಾಸ್ಕೆಟ್ ಬಾಲ್ ಚಾಂಪಿಯನ್ಷಿಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 109-26ರಲ್ಲಿ ನೆರಯ ನೇಪಾಳ ತಂಡವನ್ನು ಮಣಿಸಿತು.<br /> <br /> <strong>ಕಾರ್ತಿಕೇಯನ್ ಮಡಿಲಿಗೆ `ಆಟೊ ಜಿಪಿ' ಪ್ರಶಸ್ತಿ</strong><br /> <strong>ಸಿಲ್ವರ್ಸ್ಟೋನ್ (ಐಎಎನ್ಎಸ್):</strong> ಭಾರತದ ನಾರಾಯಣ್ ಕಾರ್ತಿಕೇಯನ್ ಶನಿವಾರ ನಡೆದ ಆಟೊ ಗ್ರ್ಯಾನ್ ಪ್ರಿ ರೇಸ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಈ ರೇಸ್ನಲ್ಲಿ ಅವರು ಗೆದ್ದ ಚೊಚ್ಚಲ ಪ್ರಶಸ್ತಿ.<br /> <br /> ಇಲ್ಲಿನ ಸಿಲ್ವರ್ ಸ್ಟೋನ್ ಸರ್ಕಿಟ್ನಲ್ಲಿ ನಡೆದ ಈ ರೇಸ್ನಲ್ಲಿ ಅಡಚಣೆ ಉಂಟು ಮಾಡಿದ್ದಕ್ಕಾಗಿ ಲಿಕೆವಿನ್ ಗಿಯೊವೆಸಿ ಅವರಿಗೆ ದಂಡ ವಿಧಿಸಲಾಯಿತು. ಘಿಂಜೈ ಮೋಟೊ ಸ್ಪೋರ್ಟ್ಸ್ನ ಗಿಯೊವೆಸಿಗೆ ಸರಣಿಯ ನಾಲ್ಕನೇ ಸುತ್ತಾದ 14ನೇ ಲ್ಯಾಪ್ನಲ್ಲಿ ನಿಯಮ ಮುರಿದ ಕಾರಣ ದಂಡ ವಿಧಿಸಲಾಗಿತ್ತು. ಆದ್ದರಿಂದ ಕಾರ್ತಿಕೇಯನ್ ಅವರನ್ನು ಜಯಶೀಲರನ್ನಾಗಿ ಘೋಷಿಲಾಗಿದೆ.<br /> <br /> `ಅಭ್ಯಾಸ ಹಾಗೂ ಅರ್ಹತಾ ರೇಸ್ನಲ್ಲಿ ನಿಖರ ವೇಗ ಕಾಯ್ದುಕೊಂಡೆವೆ. ಗಿಯೊವೆಸಿ ಅಂತಿಮ ಗುರಿಯಡೆಗೆ ಚಲಿಸುವವರೆಗೂ ನಾನು ಮುಂಚೂಣಿಯಲ್ಲಿದ್ದೆ. ಆದರೆ ಅಂತಿಮ ಲ್ಯಾಪ್ನಲ್ಲಿ ನಿಯಮ ಉಲ್ಲಂಘಿಸುವ ಮೂಲಕ ಅವರು ತಪ್ಪು ಮಾಡಿದರು' ಎಂದು ಕಾರ್ತಿಕೇಯನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>