<p><strong>ಇಂಡಿ: </strong>ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಯಲ್ಲಿ ನೀರು ಹರಿಬಿಟ್ಟ ಕಾರಣ ಭೀಮಾ ನದಿಯಲ್ಲಿ ಕಳೆದ 3 ದಿವಸಗಳಿಂದ ಪ್ರವಾಹ ಬಂದಿದೆ. <br /> <br /> ಇದರಿಂದ ಧೂಳಖೇಡ-ಚಣೇಗಾಂವ ಗ್ರಾಮಗಳ ರಸ್ತೆ ಬಂದಾಗಿದ್ದು, ಚಣೆಗಾಂವ ಗ್ರಾಮದ ಜನ ಅಣಚಿ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಭೀಮಾ ಪ್ರವಾಹದಿಂದ ಯಾವುದೇ ಪ್ರಾಣ ಹಾನಿಯಾಗಲ್ಲ. ಭೀಮಾ ತೀರದಲ್ಲಿಯ ಕಬ್ಬಿನ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. </p>.<p><br /> ಭೀಮಾ ತೀರದಲ್ಲಿ 4 ರಿಂದ 6 ತಿಂಗಳ ಕಬ್ಬಿನ ಬೆಳೆಗಳಿಗೆ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಇನ್ನುಳಿದ 6 ರಿಂದ 10 ತಿಂಗಳ ಬೆಳೆಗಳಿಗೆ ಅಷ್ಟೊಂದು ಹಾನಿಯಾಗಿಲ್ಲ. ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರು ಕಲುಷಿತವಾಗಿರುವುದರಿಂದ ಕಬ್ಬಿನ ಸುಳಿಯಲ್ಲಿ ಆ ನೀರು ನುಗ್ಗಿದರೆ, ಅಲ್ಲಿ ಮಣ್ಣು ಬೀಡುತ್ತದೆ. ಇದರಿಂದ ಆ ಕಬ್ಬು ಒಣಗುತ್ತದೆ ಎಂಬ ಆತಂಕ ರೈತರಲ್ಲಿದೆ.<br /> <br /> ಬುಧವಾರ ನದಿಯಲ್ಲಿ ಸುಮಾರು 4 ಅಡಿಗಳಷ್ಟು ನೀರು ಕಡಿಮೆಯಾಗಿದ್ದು, ರೈತರಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಉಜನಿ ಜಲಾಶಯದಿಂದ ಕ್ರಮೇಣವಾಗಿ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದು ತಹಸೀಲ್ದಾರ ಜಿ.ಎಲ್.ಮೇತ್ರಿ ತಿಳಿಸಿದ್ದಾರೆ. <br /> <br /> ಭೀಮಾ ನದಿಗೆ ನೀರು ಹರಿಸುವುದಾದರೆ ಸಾಕಷ್ಟು ಮುಂಚಿತವಾಗಿ ತಿಳಿಸುವುದರೊಂದಿಗೆ ಪ್ರವಾಹ ಬರುವಂತೆ ಹೆಚ್ಚಿನ ನೀರು ಬಿಡುವದಿಲ್ಲ ಎಂದು ಮಹಾರಾಷ್ಟ್ರದ ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ಭೀಮಾ ತೀರದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭೀಮಾ ತೀರದಲ್ಲಿ ಪ್ರವಾಹ ಬಂದಿದ್ದಾದರೆ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. <br /> <br /> ಪ್ರತಿ ಗ್ರಾಮಗಳಲ್ಲಿ ಅಧಿಕಾರಿಗಳು ಮುಕ್ಕಾಂ ಹೂಡುವಂತೆ ಸೂಚಿಸಲಾಗಿದೆ. ಅವರು ಕಟ್ಟೆಚ್ಚರ ವಹಿಸಿಕೊಂಡಿದ್ದಾರೆ. ಭೀಮಾ ನದಿಯಲ್ಲಿ ಪ್ರವಾಹ ಕಂಡದ್ದಾದರೆ ಕ್ರಮ ಜರುಗಿಸುತ್ತಾರೆ ಎಂದು ತಹಸೀಲ್ದಾದರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ: </strong>ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಯಲ್ಲಿ ನೀರು ಹರಿಬಿಟ್ಟ ಕಾರಣ ಭೀಮಾ ನದಿಯಲ್ಲಿ ಕಳೆದ 3 ದಿವಸಗಳಿಂದ ಪ್ರವಾಹ ಬಂದಿದೆ. <br /> <br /> ಇದರಿಂದ ಧೂಳಖೇಡ-ಚಣೇಗಾಂವ ಗ್ರಾಮಗಳ ರಸ್ತೆ ಬಂದಾಗಿದ್ದು, ಚಣೆಗಾಂವ ಗ್ರಾಮದ ಜನ ಅಣಚಿ ಮಾರ್ಗವಾಗಿ ಸಂಚರಿಸುತ್ತಿದ್ದಾರೆ. ಭೀಮಾ ಪ್ರವಾಹದಿಂದ ಯಾವುದೇ ಪ್ರಾಣ ಹಾನಿಯಾಗಲ್ಲ. ಭೀಮಾ ತೀರದಲ್ಲಿಯ ಕಬ್ಬಿನ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. </p>.<p><br /> ಭೀಮಾ ತೀರದಲ್ಲಿ 4 ರಿಂದ 6 ತಿಂಗಳ ಕಬ್ಬಿನ ಬೆಳೆಗಳಿಗೆ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಇನ್ನುಳಿದ 6 ರಿಂದ 10 ತಿಂಗಳ ಬೆಳೆಗಳಿಗೆ ಅಷ್ಟೊಂದು ಹಾನಿಯಾಗಿಲ್ಲ. ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರು ಕಲುಷಿತವಾಗಿರುವುದರಿಂದ ಕಬ್ಬಿನ ಸುಳಿಯಲ್ಲಿ ಆ ನೀರು ನುಗ್ಗಿದರೆ, ಅಲ್ಲಿ ಮಣ್ಣು ಬೀಡುತ್ತದೆ. ಇದರಿಂದ ಆ ಕಬ್ಬು ಒಣಗುತ್ತದೆ ಎಂಬ ಆತಂಕ ರೈತರಲ್ಲಿದೆ.<br /> <br /> ಬುಧವಾರ ನದಿಯಲ್ಲಿ ಸುಮಾರು 4 ಅಡಿಗಳಷ್ಟು ನೀರು ಕಡಿಮೆಯಾಗಿದ್ದು, ರೈತರಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಉಜನಿ ಜಲಾಶಯದಿಂದ ಕ್ರಮೇಣವಾಗಿ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದು ತಹಸೀಲ್ದಾರ ಜಿ.ಎಲ್.ಮೇತ್ರಿ ತಿಳಿಸಿದ್ದಾರೆ. <br /> <br /> ಭೀಮಾ ನದಿಗೆ ನೀರು ಹರಿಸುವುದಾದರೆ ಸಾಕಷ್ಟು ಮುಂಚಿತವಾಗಿ ತಿಳಿಸುವುದರೊಂದಿಗೆ ಪ್ರವಾಹ ಬರುವಂತೆ ಹೆಚ್ಚಿನ ನೀರು ಬಿಡುವದಿಲ್ಲ ಎಂದು ಮಹಾರಾಷ್ಟ್ರದ ಅಧಿಕಾರಿಗಳು ತಿಳಿಸಿದ್ದಾರೆ. <br /> <br /> ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳ ಭೀಮಾ ತೀರದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಭೀಮಾ ತೀರದಲ್ಲಿ ಪ್ರವಾಹ ಬಂದಿದ್ದಾದರೆ ಅದನ್ನು ಸಮರ್ಥವಾಗಿ ಎದುರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. <br /> <br /> ಪ್ರತಿ ಗ್ರಾಮಗಳಲ್ಲಿ ಅಧಿಕಾರಿಗಳು ಮುಕ್ಕಾಂ ಹೂಡುವಂತೆ ಸೂಚಿಸಲಾಗಿದೆ. ಅವರು ಕಟ್ಟೆಚ್ಚರ ವಹಿಸಿಕೊಂಡಿದ್ದಾರೆ. ಭೀಮಾ ನದಿಯಲ್ಲಿ ಪ್ರವಾಹ ಕಂಡದ್ದಾದರೆ ಕ್ರಮ ಜರುಗಿಸುತ್ತಾರೆ ಎಂದು ತಹಸೀಲ್ದಾದರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>