ಮತ್ತೊಂದು ನೈತಿಕ ಪೊಲೀಸ್ಗಿರಿ!
ಸುರತ್ಕಲ್: ಪ್ರವಾಸ ಹೊರಟಿದ್ದ ಖಾಸಗಿ ಕಂಪೆನಿಯೊಂದರ ಐವರು ಪುರುಷ ಮತ್ತು ಮೂವರು ಮಹಿಳಾ ಉದ್ಯೋಗಿಗಳ ಮೇಲೆ ಸಂಘಟನೆಯೊಂದಕ್ಕೆ ಸೇರಿದ ಕೆಲವರು ಹಲ್ಲೆ ನಡೆಸಿದ ಘಟನೆ ಇಲ್ಲಿನ ಕೃಷ್ಣಾಪುರದಲ್ಲಿ ನಡೆದಿದೆ.
ಖಾಸಗಿ ಕಂಪೆನಿಯೊಂದರ ಈ ಉದ್ಯೋಗಿಗಳು ವಾಹನವೊಂದರಲ್ಲಿ ಮೈಸೂರಿಗೆ ಪ್ರವಾಸ ಹೊರಟಿದ್ದರು. ಪ್ರವಾಸ ಹೊರಟಿದ್ದವರು ತಮಗೆ ಅನುಕೂಲವಾದ ಸ್ಥಳದಲ್ಲಿ ವಾಹನ ಹತ್ತಿದ್ದರು. ಅದೇ ರೀತಿ ತಮ್ಮ ಜತೆ ಪ್ರವಾಸಕ್ಕೆ ಹೊರಟಿದ್ದ ಯುವತಿಯೊಬ್ಬರನ್ನು ಕರೆದೊಯ್ಯಲು ಅವರ ಮನೆ ಇರುವ ಕೃಷ್ಣಾಪುರಕ್ಕೆ ವಾಹನ ಬಂದಾಗ ಸಂಘಟನೆಯೊಂದರ ಕೆಲವು ವ್ಯಕ್ತಿಗಳು ಹಲ್ಲೆ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.