<p><strong>ಗಂಗಾವತಿ:</strong> ಕರ್ತವ್ಯಲೋಪ ಎಸಗಿ ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿದ್ದ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ ಹಾಗೂ ಮೂವರು ಪೇದೆಗಳನ್ನು ಅಮಾನತು ಮಾಡಿ ಗುಲ್ಬರ್ಗ ಐಜಿಪಿ ಗುರುವಾರ ಆದೇಶ ಜಾರಿ ಮಾಡಿದ್ದಾರೆ.<br /> <br /> ನಗರಠಾಣೆಯ ಪಿಐ ಶಿವಕುಮಾರ ಪೇದೆಗಳಾದ ಮಂಜುನಾಥ, ವೀರೇಶ ಮತ್ತು ತಾರಾಸಿಂಗ್ ಎಂಬುವವರೊಂದಿಗೆ ಸೇರಿ ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿರುವುದು ವಿಚಾರಣೆಯ ವೇಳೆ ಸಾಬೀತಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠ ಬಿ.ಎಸ್. ಪ್ರಕಾಶ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ್ದಾರೆ.<br /> <br /> ಪೊಲೀಸ್ ಅಧಿಕಾರಿ ಹಾಗೂ ಪೇದೆಗಳು ಮರಳು ದಂಧೆಯಲ್ಲಿ ತೊಡಗಿರುವ ಬಗ್ಗೆ ನಗರಠಾಣೆಯ ಕೆಲ ಸಿಬ್ಬಂದಿಯಿಂದ ತಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವಂತೆ ಡಿವೈಎಸ್ಪಿ ಡಿ.ಎಲ್. ಹಣಗಿ ಅವರಿಗೆ ಸೂಚಿಸಿದ್ದೆ ಎಂದರು.<br /> <br /> <strong>ಡಿವೈಎಸ್ಪಿ ವಿಚಾರಣೆ: </strong>ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಡಿವೈಎಸ್ಪಿ ಹಣಗಿ ಅವರಿಗೆ, ಅಧಿಕಾರಿಗಳು ಮರಳು ದಂಧೆಯಲ್ಲಿ ತೊಡಗಿರುವುದು, ಅಕ್ರಮವಾಗಿ ನಗರದ ರೈಸ್ಮಿಲ್ಲೊಂದರ ಆವರಣದಲ್ಲಿ ಹಾಕಿ ಅಲ್ಲಿಂದ ರಾತ್ರಿಹೊತ್ತಲ್ಲಿ ಕಂಪ್ಲಿಗೆ ಸಾಗಿಸುತ್ತಿದ್ದರು. <br /> <br /> ಅಲ್ಲಿಂದ ಸಂಡೂರಿಗೆ ಸಾಗಿಸಲಾಗುತಿತ್ತು. ಬಳಿಕ ಸಂಡೂರಲ್ಲಿ ಮರಳು ಮಾರಾಟದ ವ್ಯಾಪಾರ ನಡೆಯುತಿತ್ತು ಎಂಬ ಅಂಶ ಅಧಿಕಾರಿಗಳಿಗೆ ತಿಳಿಯಿತು. ಈ ಬಗ್ಗೆ ಡಿವೈಎಸ್ಪಿ ವಿಡಿಯೋ ಚಿತ್ರೀಕರಣದ ಸಾಕ್ಷಿ ಸಮೇತ ವರದಿ ಒಪ್ಪಿಸಿದ್ದರು ಎಂದು ಎಸ್ಪಿ ತಿಳಿಸಿದರು. <br /> <br /> <strong>ಐಜಿಪಿಗೆ ವರದಿ: </strong>ಡಿವೈಎಸ್ಪಿ ಸಲ್ಲಿಸಿದ ವರದಿಯನ್ನು ಗುಲ್ಬರ್ಗ ವಲಯ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಗಿತ್ತು. ವರದಿ ಪರಿಶೀಲಿಸಿದ ಐಜಿಪಿ ವಜೀರ್ ಅಹ್ಮದ್ ಅವರು, ಶಿವಕುಮಾರ ಅವರನ್ನು ಹಾಗೂ ಪೇದೆಗಳಾದ ಮಂಜುನಾಥ, ವಿರೇಶ ಮತ್ತು ತಾರಾಸಿಂಗ್ರನ್ನು ಅಮಾನತು ಮಾಡಿದ್ದಾಗಿ ಎಸ್ಪಿ ತಿಳಿಸಿದರು. <br /> <br /> ಪ್ರಕರಣದ ಕುರಿತಾಗಿ `ಪ್ರಜಾವಾಣಿ~ ಜುಲೈ 12ರ ಸಂಚಿಕೆಯಲ್ಲಿ `ಚಿತ್ರದುರ್ಗದಲ್ಲಿ ಮನೆ ಕಟ್ಟಲು ನಗರದಿಂದ ಅಕ್ರಮ ಮರಳು-ಪೊಲೀಸ್ ಅಧಿಕಾರಿಯ ವಿಲಕ್ಷಣ ಕಾರ್ಯ~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಂಬಂಧಿತ ಇಲಾಖೆಯ ಗಮನ ಸೆಳೆದಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ:</strong> ಕರ್ತವ್ಯಲೋಪ ಎಸಗಿ ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿದ್ದ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ನಗರಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ ಹಾಗೂ ಮೂವರು ಪೇದೆಗಳನ್ನು ಅಮಾನತು ಮಾಡಿ ಗುಲ್ಬರ್ಗ ಐಜಿಪಿ ಗುರುವಾರ ಆದೇಶ ಜಾರಿ ಮಾಡಿದ್ದಾರೆ.<br /> <br /> ನಗರಠಾಣೆಯ ಪಿಐ ಶಿವಕುಮಾರ ಪೇದೆಗಳಾದ ಮಂಜುನಾಥ, ವೀರೇಶ ಮತ್ತು ತಾರಾಸಿಂಗ್ ಎಂಬುವವರೊಂದಿಗೆ ಸೇರಿ ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿರುವುದು ವಿಚಾರಣೆಯ ವೇಳೆ ಸಾಬೀತಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠ ಬಿ.ಎಸ್. ಪ್ರಕಾಶ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ್ದಾರೆ.<br /> <br /> ಪೊಲೀಸ್ ಅಧಿಕಾರಿ ಹಾಗೂ ಪೇದೆಗಳು ಮರಳು ದಂಧೆಯಲ್ಲಿ ತೊಡಗಿರುವ ಬಗ್ಗೆ ನಗರಠಾಣೆಯ ಕೆಲ ಸಿಬ್ಬಂದಿಯಿಂದ ತಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವಂತೆ ಡಿವೈಎಸ್ಪಿ ಡಿ.ಎಲ್. ಹಣಗಿ ಅವರಿಗೆ ಸೂಚಿಸಿದ್ದೆ ಎಂದರು.<br /> <br /> <strong>ಡಿವೈಎಸ್ಪಿ ವಿಚಾರಣೆ: </strong>ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಡಿವೈಎಸ್ಪಿ ಹಣಗಿ ಅವರಿಗೆ, ಅಧಿಕಾರಿಗಳು ಮರಳು ದಂಧೆಯಲ್ಲಿ ತೊಡಗಿರುವುದು, ಅಕ್ರಮವಾಗಿ ನಗರದ ರೈಸ್ಮಿಲ್ಲೊಂದರ ಆವರಣದಲ್ಲಿ ಹಾಕಿ ಅಲ್ಲಿಂದ ರಾತ್ರಿಹೊತ್ತಲ್ಲಿ ಕಂಪ್ಲಿಗೆ ಸಾಗಿಸುತ್ತಿದ್ದರು. <br /> <br /> ಅಲ್ಲಿಂದ ಸಂಡೂರಿಗೆ ಸಾಗಿಸಲಾಗುತಿತ್ತು. ಬಳಿಕ ಸಂಡೂರಲ್ಲಿ ಮರಳು ಮಾರಾಟದ ವ್ಯಾಪಾರ ನಡೆಯುತಿತ್ತು ಎಂಬ ಅಂಶ ಅಧಿಕಾರಿಗಳಿಗೆ ತಿಳಿಯಿತು. ಈ ಬಗ್ಗೆ ಡಿವೈಎಸ್ಪಿ ವಿಡಿಯೋ ಚಿತ್ರೀಕರಣದ ಸಾಕ್ಷಿ ಸಮೇತ ವರದಿ ಒಪ್ಪಿಸಿದ್ದರು ಎಂದು ಎಸ್ಪಿ ತಿಳಿಸಿದರು. <br /> <br /> <strong>ಐಜಿಪಿಗೆ ವರದಿ: </strong>ಡಿವೈಎಸ್ಪಿ ಸಲ್ಲಿಸಿದ ವರದಿಯನ್ನು ಗುಲ್ಬರ್ಗ ವಲಯ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಗಿತ್ತು. ವರದಿ ಪರಿಶೀಲಿಸಿದ ಐಜಿಪಿ ವಜೀರ್ ಅಹ್ಮದ್ ಅವರು, ಶಿವಕುಮಾರ ಅವರನ್ನು ಹಾಗೂ ಪೇದೆಗಳಾದ ಮಂಜುನಾಥ, ವಿರೇಶ ಮತ್ತು ತಾರಾಸಿಂಗ್ರನ್ನು ಅಮಾನತು ಮಾಡಿದ್ದಾಗಿ ಎಸ್ಪಿ ತಿಳಿಸಿದರು. <br /> <br /> ಪ್ರಕರಣದ ಕುರಿತಾಗಿ `ಪ್ರಜಾವಾಣಿ~ ಜುಲೈ 12ರ ಸಂಚಿಕೆಯಲ್ಲಿ `ಚಿತ್ರದುರ್ಗದಲ್ಲಿ ಮನೆ ಕಟ್ಟಲು ನಗರದಿಂದ ಅಕ್ರಮ ಮರಳು-ಪೊಲೀಸ್ ಅಧಿಕಾರಿಯ ವಿಲಕ್ಷಣ ಕಾರ್ಯ~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಂಬಂಧಿತ ಇಲಾಖೆಯ ಗಮನ ಸೆಳೆದಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>