<p><strong>ಭುವನೇಶ್ವರ (ಪಿಟಿಐ):</strong> ಆಡಳಿತಾರೂಢ ಬಿಜೆಡಿಯ ಬುಡಕಟ್ಟು ಪ್ರದೇಶದ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿ ಬಿಡುಗಡೆಗಾಗಿ ಒಡಿಶಾ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಟ್ಟಿರುವ ಮಾವೊವಾದಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿರುವುದಾಗಿ ಭಾನುವಾರ ತಿಳಿದುಬಂದಿದೆ.<br /> <br /> ಜೈಲಿನಲ್ಲಿರುವ ಚಾಸಿ ಮುಳಿಯಾ ಆದಿವಾಸಿ ಸಂಘದ (ಸಿಎಮ್ಎಎಸ್) ಸದಸ್ಯರ ಬಿಡುಗಡೆಗೆ ಪ್ರತಿಯಾಗಿ ಹಿಕಾಕ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾವೊವಾದಿಗಳಲ್ಲಿ ಇದೀಗ ಹಲವರು ಹಿಕಾಕ ಅವರ ಭವಿಷ್ಯ `ಪ್ರಜಾ ನ್ಯಾಯಾಲಯ~ದಲ್ಲಿ ತೀರ್ಮಾನವಾಗಲಿ ಎಂಬ ನಿಲುವಿಗೆ ಅಂಟಿಕೊಂಡಿರುವ ಪರಿಣಾಮ ಮಾವೊಗಳಲ್ಲಿಯೇ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ.<br /> <br /> `ಒಡಿಶಾ ಸರ್ಕಾರಕ್ಕೆ ಅಪಹೃತ ಶಾಸಕನನ್ನು ಬಿಡುಗಡೆ ಮಾಡಿಸಬೇಕೆಂಬ ಕಾಳಜಿ ಇದ್ದರೆ ತಕ್ಷಣವೇ ನಮ್ಮ ಬೇಡಿಕೆಯಂತೆ ಜೈಲಿನಲ್ಲಿ ಸಿಎಮ್ಎಎಸ್ನ ಎಲ್ಲ ಸದಸ್ಯರನ್ನು ಬಿಡುಗಡೆಗೊಳಿಸಬೇಕು~ ಎಂದು ಶ್ರೀಕಾಕುಳಂ - ಕೊರಾಪಟ್ನ ಸಿಪಿಐ (ಮಾವೊವಾದಿ) ಸಮಿತಿಯ ನಾಯಕ ದಯಾ ಅವರು ಮಾಧ್ಯಮಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.<br /> <br /> ಶಾಸಕನ ಬಿಡುಗಡೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿರೋಧಿಸುತ್ತಿರುವ ಮಾವೊಗಳು ಅಪಹೃತ ಶಾಸಕನ ಬಿಡುಗಡೆ ವಿಳಂಬವಾದರೆ ಅದಕ್ಕೆ ಸರ್ಕಾರವೇ `ಹೊಣೆ~ ಎಂದು ಹೇಳಿದ್ದಾರೆ.<br /> <br /> ಮಾವೊಗಳ ಆಂಧ್ರ ಒಡಿಶಾ ಗಡಿಯ ವಿಶೇಷ ವಲಯ ಸಮಿತಿಯ (ಎಓಬಿಎಸ್ಜೆಡ್ಸಿ) ವಕ್ತಾರ ಜಗಬಂಧು ಇತ್ತೀಚೆಗೆ `ಹಿಕಾಕ ಅವರ ಭವಿಷ್ಯ ಏಪ್ರಿಲ್ 25ರಂದು ಪ್ರಜಾ ನ್ಯಾಯಾಲಯದಲ್ಲಿ ನಿರ್ಧಾವಾಗಲಿದೆ~ ಎಂದು ಧ್ವನಿ ಸಂದೇಶ ಕಳುಹಿಸಿದ ಬೆನ್ನಲ್ಲೇ ದಯಾ ಅವರು ಪತ್ರ ಬರೆದಿರುವ ಕುರಿತಂತೆ ಮಾವೊಗಳಲ್ಲಿಯೇ ವೈಮನಸ್ಯ ಮೂಡಿದೆ.<br /> <br /> `ದಯಾ ಅವರು ಬರುದಿರುವ ಪತ್ರವು ಗೊಂದಲದಿಂದ ಕೂಡಿದ್ದು, ಅದು ಜಗಬಂಧು ಹೇಳಿಕೆಗಿಂತ ಭಿನ್ನವಾಗಿದೆ. ದಯಾ ಬೇಡಿಕೆಯಂತೆ ಜೈಲಿನಲ್ಲಿರುವ ಎಲ್ಲ ಸಿಎಮ್ಎಎಸ್ನ ಸದಸ್ಯರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ~ ಎಂದು ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿರುವ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಪಿಟಿಐ):</strong> ಆಡಳಿತಾರೂಢ ಬಿಜೆಡಿಯ ಬುಡಕಟ್ಟು ಪ್ರದೇಶದ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿ ಬಿಡುಗಡೆಗಾಗಿ ಒಡಿಶಾ ಸರ್ಕಾರದ ಮುಂದೆ ತಮ್ಮ ಬೇಡಿಕೆಯನ್ನಿಟ್ಟಿರುವ ಮಾವೊವಾದಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿರುವುದಾಗಿ ಭಾನುವಾರ ತಿಳಿದುಬಂದಿದೆ.<br /> <br /> ಜೈಲಿನಲ್ಲಿರುವ ಚಾಸಿ ಮುಳಿಯಾ ಆದಿವಾಸಿ ಸಂಘದ (ಸಿಎಮ್ಎಎಸ್) ಸದಸ್ಯರ ಬಿಡುಗಡೆಗೆ ಪ್ರತಿಯಾಗಿ ಹಿಕಾಕ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಮಾವೊವಾದಿಗಳಲ್ಲಿ ಇದೀಗ ಹಲವರು ಹಿಕಾಕ ಅವರ ಭವಿಷ್ಯ `ಪ್ರಜಾ ನ್ಯಾಯಾಲಯ~ದಲ್ಲಿ ತೀರ್ಮಾನವಾಗಲಿ ಎಂಬ ನಿಲುವಿಗೆ ಅಂಟಿಕೊಂಡಿರುವ ಪರಿಣಾಮ ಮಾವೊಗಳಲ್ಲಿಯೇ ಮನಸ್ತಾಪ ಉಂಟಾಗಿದೆ ಎನ್ನಲಾಗಿದೆ.<br /> <br /> `ಒಡಿಶಾ ಸರ್ಕಾರಕ್ಕೆ ಅಪಹೃತ ಶಾಸಕನನ್ನು ಬಿಡುಗಡೆ ಮಾಡಿಸಬೇಕೆಂಬ ಕಾಳಜಿ ಇದ್ದರೆ ತಕ್ಷಣವೇ ನಮ್ಮ ಬೇಡಿಕೆಯಂತೆ ಜೈಲಿನಲ್ಲಿ ಸಿಎಮ್ಎಎಸ್ನ ಎಲ್ಲ ಸದಸ್ಯರನ್ನು ಬಿಡುಗಡೆಗೊಳಿಸಬೇಕು~ ಎಂದು ಶ್ರೀಕಾಕುಳಂ - ಕೊರಾಪಟ್ನ ಸಿಪಿಐ (ಮಾವೊವಾದಿ) ಸಮಿತಿಯ ನಾಯಕ ದಯಾ ಅವರು ಮಾಧ್ಯಮಗಳಿಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.<br /> <br /> ಶಾಸಕನ ಬಿಡುಗಡೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿರೋಧಿಸುತ್ತಿರುವ ಮಾವೊಗಳು ಅಪಹೃತ ಶಾಸಕನ ಬಿಡುಗಡೆ ವಿಳಂಬವಾದರೆ ಅದಕ್ಕೆ ಸರ್ಕಾರವೇ `ಹೊಣೆ~ ಎಂದು ಹೇಳಿದ್ದಾರೆ.<br /> <br /> ಮಾವೊಗಳ ಆಂಧ್ರ ಒಡಿಶಾ ಗಡಿಯ ವಿಶೇಷ ವಲಯ ಸಮಿತಿಯ (ಎಓಬಿಎಸ್ಜೆಡ್ಸಿ) ವಕ್ತಾರ ಜಗಬಂಧು ಇತ್ತೀಚೆಗೆ `ಹಿಕಾಕ ಅವರ ಭವಿಷ್ಯ ಏಪ್ರಿಲ್ 25ರಂದು ಪ್ರಜಾ ನ್ಯಾಯಾಲಯದಲ್ಲಿ ನಿರ್ಧಾವಾಗಲಿದೆ~ ಎಂದು ಧ್ವನಿ ಸಂದೇಶ ಕಳುಹಿಸಿದ ಬೆನ್ನಲ್ಲೇ ದಯಾ ಅವರು ಪತ್ರ ಬರೆದಿರುವ ಕುರಿತಂತೆ ಮಾವೊಗಳಲ್ಲಿಯೇ ವೈಮನಸ್ಯ ಮೂಡಿದೆ.<br /> <br /> `ದಯಾ ಅವರು ಬರುದಿರುವ ಪತ್ರವು ಗೊಂದಲದಿಂದ ಕೂಡಿದ್ದು, ಅದು ಜಗಬಂಧು ಹೇಳಿಕೆಗಿಂತ ಭಿನ್ನವಾಗಿದೆ. ದಯಾ ಬೇಡಿಕೆಯಂತೆ ಜೈಲಿನಲ್ಲಿರುವ ಎಲ್ಲ ಸಿಎಮ್ಎಎಸ್ನ ಸದಸ್ಯರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲ~ ಎಂದು ಸಂಧಾನ ಪ್ರಕ್ರಿಯೆಯಲ್ಲಿ ತೊಡಗಿರುವ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>