<p><strong>ನವದೆಹಲಿ (ಪಿಟಿಐ): </strong>ಕರ್ನಾಟಕ ತಂಡದವರು ಇಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಎದುರು ಸೋಲು ಕಂಡಿದ್ದಾರೆ. <br /> <br /> ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 179 ರನ್ಗಳ ಅಲ್ಪ ಗುರಿಯನ್ನು ಮುಂಬೈ ಕೇವಲ 29.1 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು.<br /> <br /> ಆರಂಭಿಕ ಬ್ಯಾಟ್ಸ್ಮನ್ಗಳಾದ ವಾಸೀಮ್ ಜಾಫರ್ (68) ಹಾಗೂ ಅಜಿಂಕ್ಯ ರಹಾನೆ (ಔಟಾಗದೆ 71) ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟರು. ಇವರಿಬ್ಬರು ಮೊದಲ ವಿಕೆಟ್ಗೆ 119 ರನ್ ಸೇರಿಸಿದರು. <br /> <br /> ಆದರೆ ಬ್ಯಾಟಿಂಗ್ನಲ್ಲಿ ಕರ್ನಾಟಕ ತಂಡದ ಆಟಗಾರರು ಎಡವಿದರು. ಈ ತಂಡ ಒಂದು ಹಂತದಲ್ಲಿ ಕೇವಲ 57 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ಸರದಿಯ ಬ್ಯಾಟ್ಸ್ಮನ್ಗಳು ಕೊಂಚ ಪ್ರತಿರೋಧ ತೋರಿದರು. ಈ ಪರಿಣಾಮ ಈ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಲು ಸಾಧ್ಯವಾಯಿತು. ಮುಂಬೈನ ಕ್ಷೇಮಲ್ (19ಕ್ಕೆ3) ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿದರು. ಮನೀಷ್ ಪಾಂಡೆ (0) ಮತ್ತೆ ವಿಫಲರಾದರು. <br /> <br /> <strong>ಸಂಕ್ಷಿಪ್ತ ಸ್ಕೋರ್: </strong>ಕರ್ನಾಟಕ: 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 (ರಾಬಿನ್ ಉತ್ತಪ್ಪ 30, ಸುನಿಲ್ ರಾಜು 30, ರಾಜೂ ಭಟ್ಕಳ್ 38, ಅಬ್ರಾರ್ ಕಾಜಿ ಔಟಾಗದೆ 22; ಕ್ಷೇಮಲ್ 19ಕ್ಕೆ3, ಅಂಕಿತ್ ಚವಾಣ್ 29ಕ್ಕೆ2); ಮುಂಬೈ: 29.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 179 (ವಾಸೀಮ್ ಜಾಫರ್ 68, ಅಜಿಂಕ್ಯ ರಹಾನೆ ಔಟಾಗದೆ 71, ಸುಶಾಂತ್ ಮರಾಠೆ ಔಟಾಗದೆ 31; ಅಬ್ರಾರ್ ಕಾಜಿ 45ಕ್ಕೆ1). ಫಲಿತಾಂಶ: ಮುಂಬೈಗೆ 9 ವಿಕೆಟ್ ಗೆಲುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕರ್ನಾಟಕ ತಂಡದವರು ಇಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಅಖಿಲ ಭಾರತ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಎದುರು ಸೋಲು ಕಂಡಿದ್ದಾರೆ. <br /> <br /> ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 179 ರನ್ಗಳ ಅಲ್ಪ ಗುರಿಯನ್ನು ಮುಂಬೈ ಕೇವಲ 29.1 ಓವರ್ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ತಲುಪಿತು.<br /> <br /> ಆರಂಭಿಕ ಬ್ಯಾಟ್ಸ್ಮನ್ಗಳಾದ ವಾಸೀಮ್ ಜಾಫರ್ (68) ಹಾಗೂ ಅಜಿಂಕ್ಯ ರಹಾನೆ (ಔಟಾಗದೆ 71) ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟರು. ಇವರಿಬ್ಬರು ಮೊದಲ ವಿಕೆಟ್ಗೆ 119 ರನ್ ಸೇರಿಸಿದರು. <br /> <br /> ಆದರೆ ಬ್ಯಾಟಿಂಗ್ನಲ್ಲಿ ಕರ್ನಾಟಕ ತಂಡದ ಆಟಗಾರರು ಎಡವಿದರು. ಈ ತಂಡ ಒಂದು ಹಂತದಲ್ಲಿ ಕೇವಲ 57 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡಿತ್ತು. ಆದರೆ ಕೊನೆಯ ಸರದಿಯ ಬ್ಯಾಟ್ಸ್ಮನ್ಗಳು ಕೊಂಚ ಪ್ರತಿರೋಧ ತೋರಿದರು. ಈ ಪರಿಣಾಮ ಈ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಲು ಸಾಧ್ಯವಾಯಿತು. ಮುಂಬೈನ ಕ್ಷೇಮಲ್ (19ಕ್ಕೆ3) ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿದರು. ಮನೀಷ್ ಪಾಂಡೆ (0) ಮತ್ತೆ ವಿಫಲರಾದರು. <br /> <br /> <strong>ಸಂಕ್ಷಿಪ್ತ ಸ್ಕೋರ್: </strong>ಕರ್ನಾಟಕ: 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 178 (ರಾಬಿನ್ ಉತ್ತಪ್ಪ 30, ಸುನಿಲ್ ರಾಜು 30, ರಾಜೂ ಭಟ್ಕಳ್ 38, ಅಬ್ರಾರ್ ಕಾಜಿ ಔಟಾಗದೆ 22; ಕ್ಷೇಮಲ್ 19ಕ್ಕೆ3, ಅಂಕಿತ್ ಚವಾಣ್ 29ಕ್ಕೆ2); ಮುಂಬೈ: 29.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 179 (ವಾಸೀಮ್ ಜಾಫರ್ 68, ಅಜಿಂಕ್ಯ ರಹಾನೆ ಔಟಾಗದೆ 71, ಸುಶಾಂತ್ ಮರಾಠೆ ಔಟಾಗದೆ 31; ಅಬ್ರಾರ್ ಕಾಜಿ 45ಕ್ಕೆ1). ಫಲಿತಾಂಶ: ಮುಂಬೈಗೆ 9 ವಿಕೆಟ್ ಗೆಲುವು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>