<p>‘ಪ್ರಜಾವಾಣಿ’ಯಲ್ಲಿ ಗುರುವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ಕ್ಯಾಪ್ಟನ್ ಗೋಪಿನಾಥ್ ಅವರ ‘ಆರ್ಥಿಕ ನೀತಿ: ಕೇಜ್ರಿವಾಲ್ ಮೌನ ಸರಿಯಲ್ಲ’ ಸಮಯೋಚಿತವಾಗಿದೆ.<br /> <br /> ಆರ್ಥಿಕ ನೀತಿಗಳ ಕುರಿತು ‘-ಆಮ್ ಆದ್ಮಿ’ ಪಕ್ಷದ ನಿಲುವುಗಳಲ್ಲಿ- ಗೊಂದಲಗಳಿರುವುದರಿಂದ ಕೇಜ್ರಿವಾಲ್ ಅವರನ್ನು ಒಳಗೊಂಡಂತೆ ಅದರ ಯಾವ ನಾಯಕರೂ ತಮ್ಮ ಪಕ್ಷದ ಆರ್ಥಿಕ ನೀತಿಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.<br /> <br /> ಎಎಪಿಯು ಭ್ರಷ್ಟಾಚಾರದ ಮೂಲವನ್ನು ಸರಿಯಾಗಿ ಗುರುತಿಸದೇ ಹೋಗುತ್ತಿರುವುದು ಅದನ್ನು ಮರೆಮಾಚಲೆತ್ನಿಸುವುದಕ್ಕೆ ಸಮನಾ ದದ್ದು. ಉದಾರೀಕರಣ ನೀತಿಗಳ ಅನುಷ್ಠಾನದ ಫಲವಾಗಿಯೇ ನಮ್ಮ ದೇಶದಲ್ಲಿ ಈ ಮಟ್ಟದ ಭ್ರಷ್ಟಾಚಾರವು ಮೈದಳೆದು ನಿಲ್ಲಲು ಕಾರಣ ಎಂಬುದು ಬುದ್ಧಿವಂತ ಕೇಜ್ರಿವಾಲ್ ಮತ್ತವರ ಸಂಗಾತಿಗಳಿಗೆ ತಿಳಿಯದ ವಿಷಯವೆ?<br /> <br /> ಆರ್ಥಿಕತೆಯಲ್ಲಿ ಖಾಸಗಿ ಉದ್ಯಮದ ಬಲಾಢ್ಯತೆಯನ್ನು ಒಪ್ಪುವುದೆಂದರೆ-ವಾಸ್ತವದಲ್ಲಿ ಸರ್ಕಾರವನ್ನು ಅದರ ಮುಂದೆ ಮಂಡಿಯೂರಿಸುವುದೆಂದೇ ಅರ್ಥ.<br /> <br /> ಕೇಜ್ರಿವಾಲ್ರು ‘ಬಲಾಢ್ಯ ಖಾಸಗಿ ಕ್ಷೇತ್ರವೂ ಬೇಕು ಮತ್ತು ಸರ್ಕಾರವೂ ಬಲಾಢ್ಯವಾಗಿರಬೇಕು’ ಎಂದು ಹೇಳುವುದು ಒಂದೋ ‘ಮುಗ್ಧ ಆಶಯ’ ಇಲ್ಲವೇ ‘ಸತ್ಯವನ್ನು ಮರೆಮಾಚುವ ಅತಿ ಜಾಣತನದ ಮೋಸ’ವಷ್ಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪ್ರಜಾವಾಣಿ’ಯಲ್ಲಿ ಗುರುವಾರದ ಸಂಚಿಕೆಯಲ್ಲಿ ಪ್ರಕಟವಾಗಿರುವ ಕ್ಯಾಪ್ಟನ್ ಗೋಪಿನಾಥ್ ಅವರ ‘ಆರ್ಥಿಕ ನೀತಿ: ಕೇಜ್ರಿವಾಲ್ ಮೌನ ಸರಿಯಲ್ಲ’ ಸಮಯೋಚಿತವಾಗಿದೆ.<br /> <br /> ಆರ್ಥಿಕ ನೀತಿಗಳ ಕುರಿತು ‘-ಆಮ್ ಆದ್ಮಿ’ ಪಕ್ಷದ ನಿಲುವುಗಳಲ್ಲಿ- ಗೊಂದಲಗಳಿರುವುದರಿಂದ ಕೇಜ್ರಿವಾಲ್ ಅವರನ್ನು ಒಳಗೊಂಡಂತೆ ಅದರ ಯಾವ ನಾಯಕರೂ ತಮ್ಮ ಪಕ್ಷದ ಆರ್ಥಿಕ ನೀತಿಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ.<br /> <br /> ಎಎಪಿಯು ಭ್ರಷ್ಟಾಚಾರದ ಮೂಲವನ್ನು ಸರಿಯಾಗಿ ಗುರುತಿಸದೇ ಹೋಗುತ್ತಿರುವುದು ಅದನ್ನು ಮರೆಮಾಚಲೆತ್ನಿಸುವುದಕ್ಕೆ ಸಮನಾ ದದ್ದು. ಉದಾರೀಕರಣ ನೀತಿಗಳ ಅನುಷ್ಠಾನದ ಫಲವಾಗಿಯೇ ನಮ್ಮ ದೇಶದಲ್ಲಿ ಈ ಮಟ್ಟದ ಭ್ರಷ್ಟಾಚಾರವು ಮೈದಳೆದು ನಿಲ್ಲಲು ಕಾರಣ ಎಂಬುದು ಬುದ್ಧಿವಂತ ಕೇಜ್ರಿವಾಲ್ ಮತ್ತವರ ಸಂಗಾತಿಗಳಿಗೆ ತಿಳಿಯದ ವಿಷಯವೆ?<br /> <br /> ಆರ್ಥಿಕತೆಯಲ್ಲಿ ಖಾಸಗಿ ಉದ್ಯಮದ ಬಲಾಢ್ಯತೆಯನ್ನು ಒಪ್ಪುವುದೆಂದರೆ-ವಾಸ್ತವದಲ್ಲಿ ಸರ್ಕಾರವನ್ನು ಅದರ ಮುಂದೆ ಮಂಡಿಯೂರಿಸುವುದೆಂದೇ ಅರ್ಥ.<br /> <br /> ಕೇಜ್ರಿವಾಲ್ರು ‘ಬಲಾಢ್ಯ ಖಾಸಗಿ ಕ್ಷೇತ್ರವೂ ಬೇಕು ಮತ್ತು ಸರ್ಕಾರವೂ ಬಲಾಢ್ಯವಾಗಿರಬೇಕು’ ಎಂದು ಹೇಳುವುದು ಒಂದೋ ‘ಮುಗ್ಧ ಆಶಯ’ ಇಲ್ಲವೇ ‘ಸತ್ಯವನ್ನು ಮರೆಮಾಚುವ ಅತಿ ಜಾಣತನದ ಮೋಸ’ವಷ್ಟೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>