<p><strong>ನವದೆಹಲಿ (ಪಿಟಿಐ):</strong> ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಯುಪಿಎಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, `ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವುದು ಕಾಂಗ್ರೆಸ್ ಹಿನ್ನಡೆಗೆ ಕಾರಣ~ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.<br /> <br /> ಉತ್ತರ ಪ್ರದೇಶ, ಪಂಜಾಬ್ ಹಾಗೂ ಗೋವಾದಲ್ಲಿ ಪಕ್ಷದ ಸೋಲಿಗೆ ಬೆಲೆ ಏರಿಕೆ ಕೂಡ ಕಾರಣವಿರಬಹುದು. ಕಳಪೆ ಸಾಧನೆಯ ಆಘಾತದಿಂದ ಹೊರಬಂದು ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಬುಧವಾರ ಅವರು ಸುದ್ದಿಗಾರರಿಗೆ ತಿಳಿಸಿದರು.<br /> <br /> `ಸೋಲೇ ಇರಲಿ, ಗೆಲುವೇ ಇರಲಿ, ಪ್ರತಿ ಚುನಾವಣೆಯೂ ನಮಗೆ ಪಾಠ ಕಲಿಸುತ್ತದೆ~ ಎಂದೂ ಅವರು ಮಾರ್ಮಿಕವಾಗಿ ನುಡಿದರು.<br /> <br /> ಸೋಲಿಗೆ ನಾಯಕತ್ವದ ಕೊರತೆ ಕಾರಣವೇ ಎಂಬ ಪ್ರಶ್ನೆಗೆ, `ನಾಯಕತ್ವ ಕೊರತೆಗಿಂತ ಪಕ್ಷದಲ್ಲಿ ನಾಯಕರು ತುಂಬಿ ತುಳುಕುತ್ತಿರುವುದು ನಮ್ಮ ಸಮಸ್ಯೆ~ ಎಂದರು.<br /> <br /> ಅಮೇಥಿ, ರಾಯ್ಬರೇಲಿ ಕ್ಷೇತ್ರಗಳ ಫಲಿತಾಂಶ ಉಲ್ಲೇಖಿಸುತ್ತಾ, ಹಿಂದೆ ಕೂಡ ನಾವು ಇಲ್ಲಿ ಇಂಥ ಸೋಲನ್ನು ಕಂಡಿದ್ದೆವು. ಹಾಲಿ ಶಾಸಕರ ಬಗ್ಗೆ ಜನರಿಗೆ ಅಸಮಾಧಾನವಿತ್ತು. ಹೊಸಬರಿಗೆ ಅವಕಾಶ ನೀಡಿದ್ದಾರೆ ಎಂದರು.<br /> <br /> ಉತ್ತರಾಖಂಡದಲ್ಲಿ ಪಕ್ಷವು ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ. ಸರ್ಕಾರ ರಚಿಸಲು ನಮಗೇ ಆಹ್ವಾನ ನೀಡಬೇಕು ಎಂದರು.<br /> <br /> ಪಂಜಾಬ್ನಲ್ಲಿ ನಾವು ಸರ್ಕಾರ ರಚಿಸುವ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಪಂಜಾಬ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಮಗೆ 23 ಸ್ಥಾನಗಳಲ್ಲಿ ಹೊಡೆತ ನೀಡಿತು. ಗೋವಾದಲ್ಲಿ ಬಹುತೇಕ ಮತದಾರರು ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದರು. ಹಾಗಾಗಿ ಅಲ್ಲಿ ನಮಗೆ ಸೋಲಾಯಿತು ಎಂದು ವಿಶ್ಲೇಷಿಸಿದರು.<br /> <br /> ಭ್ರಷ್ಟಾಚಾರ ವಿಷಯವು ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಯಿತೇ ಎಂಬ ಪ್ರಶ್ನೆಗೆ, `ನಾವು ಲೋಕಸಭೆಯಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಿದ್ದೇವೆ. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ತಡೆ ನೀಡಿದ್ದು ಯಾರು?~ ಎಂದು ಪ್ರಶ್ನಿಸಿದರು.</p>.<p><strong>`ಪ್ರಧಾನಿ ಬದಲಾವಣೆ ಇಲ್ಲ~</strong><br /> ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದ್ದಕ್ಕಾಗಿ ಪ್ರಧಾನಿ ಹುದ್ದೆ ಬದಲಾವಣೆ ಬಗ್ಗೆ ಕೇಳಿಬರುತ್ತಿರುವ ಮಾತುಗಳನ್ನು ಸೋನಿಯಾ ಅಲ್ಲಗಳೆದಿದ್ದಾರೆ. 2014ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ `ಆ ಮಾತು ಈಗ ಯಾಕೆ, ಈಗಿನ್ನೂ ನಾವು 2012ರಲ್ಲಿ ಇದ್ದೇವೆ~ ಎಂದು ಚುಟುಕಾಗಿ ಉತ್ತರಿಸಿದ್ದಾರೆ.<br /> <br /> ಸಮಾಜವಾದಿ ಪಕ್ಷದಿಂದ ಯುಪಿಎಗೆ ಯಾವುದೇ ಹಾನಿ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಯುಪಿಎಗೆ ಯಾವುದೇ ನಷ್ಟವಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, `ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವುದು ಕಾಂಗ್ರೆಸ್ ಹಿನ್ನಡೆಗೆ ಕಾರಣ~ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.<br /> <br /> ಉತ್ತರ ಪ್ರದೇಶ, ಪಂಜಾಬ್ ಹಾಗೂ ಗೋವಾದಲ್ಲಿ ಪಕ್ಷದ ಸೋಲಿಗೆ ಬೆಲೆ ಏರಿಕೆ ಕೂಡ ಕಾರಣವಿರಬಹುದು. ಕಳಪೆ ಸಾಧನೆಯ ಆಘಾತದಿಂದ ಹೊರಬಂದು ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಬುಧವಾರ ಅವರು ಸುದ್ದಿಗಾರರಿಗೆ ತಿಳಿಸಿದರು.<br /> <br /> `ಸೋಲೇ ಇರಲಿ, ಗೆಲುವೇ ಇರಲಿ, ಪ್ರತಿ ಚುನಾವಣೆಯೂ ನಮಗೆ ಪಾಠ ಕಲಿಸುತ್ತದೆ~ ಎಂದೂ ಅವರು ಮಾರ್ಮಿಕವಾಗಿ ನುಡಿದರು.<br /> <br /> ಸೋಲಿಗೆ ನಾಯಕತ್ವದ ಕೊರತೆ ಕಾರಣವೇ ಎಂಬ ಪ್ರಶ್ನೆಗೆ, `ನಾಯಕತ್ವ ಕೊರತೆಗಿಂತ ಪಕ್ಷದಲ್ಲಿ ನಾಯಕರು ತುಂಬಿ ತುಳುಕುತ್ತಿರುವುದು ನಮ್ಮ ಸಮಸ್ಯೆ~ ಎಂದರು.<br /> <br /> ಅಮೇಥಿ, ರಾಯ್ಬರೇಲಿ ಕ್ಷೇತ್ರಗಳ ಫಲಿತಾಂಶ ಉಲ್ಲೇಖಿಸುತ್ತಾ, ಹಿಂದೆ ಕೂಡ ನಾವು ಇಲ್ಲಿ ಇಂಥ ಸೋಲನ್ನು ಕಂಡಿದ್ದೆವು. ಹಾಲಿ ಶಾಸಕರ ಬಗ್ಗೆ ಜನರಿಗೆ ಅಸಮಾಧಾನವಿತ್ತು. ಹೊಸಬರಿಗೆ ಅವಕಾಶ ನೀಡಿದ್ದಾರೆ ಎಂದರು.<br /> <br /> ಉತ್ತರಾಖಂಡದಲ್ಲಿ ಪಕ್ಷವು ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದುಕೊಂಡಿದೆ. ಸರ್ಕಾರ ರಚಿಸಲು ನಮಗೇ ಆಹ್ವಾನ ನೀಡಬೇಕು ಎಂದರು.<br /> <br /> ಪಂಜಾಬ್ನಲ್ಲಿ ನಾವು ಸರ್ಕಾರ ರಚಿಸುವ ಭರವಸೆ ಇಟ್ಟುಕೊಂಡಿದ್ದೆವು. ಆದರೆ ಪಂಜಾಬ್ ಪೀಪಲ್ಸ್ ಪಾರ್ಟಿ (ಪಿಪಿಪಿ) ನಮಗೆ 23 ಸ್ಥಾನಗಳಲ್ಲಿ ಹೊಡೆತ ನೀಡಿತು. ಗೋವಾದಲ್ಲಿ ಬಹುತೇಕ ಮತದಾರರು ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದರು. ಹಾಗಾಗಿ ಅಲ್ಲಿ ನಮಗೆ ಸೋಲಾಯಿತು ಎಂದು ವಿಶ್ಲೇಷಿಸಿದರು.<br /> <br /> ಭ್ರಷ್ಟಾಚಾರ ವಿಷಯವು ಚುನಾವಣೆಯಲ್ಲಿ ಪಕ್ಷಕ್ಕೆ ಮುಳುವಾಯಿತೇ ಎಂಬ ಪ್ರಶ್ನೆಗೆ, `ನಾವು ಲೋಕಸಭೆಯಲ್ಲಿ ಲೋಕಪಾಲ್ ಮಸೂದೆ ಅಂಗೀಕರಿಸಿದ್ದೇವೆ. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ತಡೆ ನೀಡಿದ್ದು ಯಾರು?~ ಎಂದು ಪ್ರಶ್ನಿಸಿದರು.</p>.<p><strong>`ಪ್ರಧಾನಿ ಬದಲಾವಣೆ ಇಲ್ಲ~</strong><br /> ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದ್ದಕ್ಕಾಗಿ ಪ್ರಧಾನಿ ಹುದ್ದೆ ಬದಲಾವಣೆ ಬಗ್ಗೆ ಕೇಳಿಬರುತ್ತಿರುವ ಮಾತುಗಳನ್ನು ಸೋನಿಯಾ ಅಲ್ಲಗಳೆದಿದ್ದಾರೆ. 2014ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬಹುದು ಎಂಬ ಪ್ರಶ್ನೆಗೆ `ಆ ಮಾತು ಈಗ ಯಾಕೆ, ಈಗಿನ್ನೂ ನಾವು 2012ರಲ್ಲಿ ಇದ್ದೇವೆ~ ಎಂದು ಚುಟುಕಾಗಿ ಉತ್ತರಿಸಿದ್ದಾರೆ.<br /> <br /> ಸಮಾಜವಾದಿ ಪಕ್ಷದಿಂದ ಯುಪಿಎಗೆ ಯಾವುದೇ ಹಾನಿ ಸಾಧ್ಯತೆಯನ್ನೂ ಅವರು ತಳ್ಳಿಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>