<p>ಬೆಂಗಳೂರು: ಅದೆಷ್ಟು ಕನಸುಗಳು ಆ ಹುಡುಗನ ಎದೆಯಾಳದಲ್ಲಿದ್ದವೋ? ಅದೆಷ್ಟು ಆಸೆಗಳನ್ನು ಹೊತ್ತು ಅವರು ಅಂಗಳದಲ್ಲಿ ಚೆಂಡಿನೊಂದಿಗೆ ಸರಸವಾಡುತ್ತಿದ್ದರೋ?ಆದರೆ ಅಭ್ಯಾಸ ಮಾಡುತ್ತಿದ್ದಾಗ ಗಾಯಗೊಂಡಿದ್ದ ಯುವ ಫುಟ್ಬಾಲ್ ಆಟಗಾರ ಎಸ್.ಅರುಣ್ ಕುಮಾರ್ (24) ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.<br /> <br /> ಎಚ್ಎಎಲ್ ಫುಟ್ಬಾಲ್ ಕ್ಲಬ್ ತಂಡದ ಆಟಗಾರ ಕೂಡ ಆಗಿರುವ ಅರುಣ್ ಅತ್ಯುತ್ತಮ ಗೋಲ್ ಕೀಪರ್. ಕೋಲಾರದ ಕೆಜಿಎಫ್ನ ಇವರು ಎರಡು ತಿಂಗಳಿನಿಂದ ಬೆಂಗಳೂರಿನ ಎಚ್ಎಎಲ್ ಕ್ವಾರ್ಟರ್ಸ್ನಲ್ಲಿ ಉಳಿದುಕೊಂಡಿದ್ದರು.<br /> <br /> ಅರುಣ್ ಬುಧವಾರ ಎಚ್ಎಎಲ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ತೀವ್ರವಾಗಿ ಗಾಯಗೊಂಡಿದ್ದರು. ಅವರ ಕಾಲಿಗೆ ಗಾಯವಾಗಿತ್ತು. ಶುಕ್ರವಾರ ಬೆಳಿಗ್ಗೆ ಎದೆ ನೋವಿಗೆ ಒಳಗಾದ ಅವರನ್ನು ಎಚ್ಎಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ನಿಧನರಾದರು. ಅವರ ಅಂತ್ಯಕ್ರಿಯೆ ಕೆಜಿಎಫ್ನಲ್ಲಿ ಶನಿವಾರ ನಡೆಯಲಿದೆ. <br /> <br /> ಅರುಣ್ 2003ರಲ್ಲಿ ಸಬ್ ಜೂನಿಯರ್ ಟೂರ್ನಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ವಿವಾ ಕೇರಳ ಪರ ಕೂಡ ಆಡಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ)ದಲ್ಲಿ ಕೋಚ್ ಅಸ್ಲಮ್ ಖಾನ್ ಮಾರ್ಗದರ್ಶನದಲ್ಲಿ ಅವರು ಮೊದಲು ತಮ್ಮ ಆಟ ಆರಂಭಿಸಿದ್ದರು. ಅಲ್ಲಿ ನಾಲ್ಕು ವರ್ಷ ಇದ್ದರು. <br /> <br /> `ಉದಯೋನ್ಮುಖ ಆಟಗಾರನೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ~ ಎಂದು ಎಚ್ಎಎಲ್ ಫುಟ್ಬಾಲ್ ಕ್ಲಬ್ನ ಆಟಗಾರ ಜಯಕುಮಾರ್ ತಿಳಿಸಿದ್ದಾರೆ. ಗೋಲ್ ಕೀಪರ್ಗಳ ಕೊರತೆ ಇರುವ ಈ ಸಮಯದಲ್ಲಿ ಇಂತಹ ಆಘಾತ ಎದುರಾಗಿದೆ ಎಂದಿದ್ದಾರೆ. <br /> <br /> ಯುವ ಆಟಗಾರ ಅರುಣ್ ಅವರ ಅಕಾಲಿಕ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್ಎಫ್), ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ಎ) ಹಾಗೂ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಸಂತಾಪ ವ್ಯಕ್ತಪಡಿಸಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಅದೆಷ್ಟು ಕನಸುಗಳು ಆ ಹುಡುಗನ ಎದೆಯಾಳದಲ್ಲಿದ್ದವೋ? ಅದೆಷ್ಟು ಆಸೆಗಳನ್ನು ಹೊತ್ತು ಅವರು ಅಂಗಳದಲ್ಲಿ ಚೆಂಡಿನೊಂದಿಗೆ ಸರಸವಾಡುತ್ತಿದ್ದರೋ?ಆದರೆ ಅಭ್ಯಾಸ ಮಾಡುತ್ತಿದ್ದಾಗ ಗಾಯಗೊಂಡಿದ್ದ ಯುವ ಫುಟ್ಬಾಲ್ ಆಟಗಾರ ಎಸ್.ಅರುಣ್ ಕುಮಾರ್ (24) ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.<br /> <br /> ಎಚ್ಎಎಲ್ ಫುಟ್ಬಾಲ್ ಕ್ಲಬ್ ತಂಡದ ಆಟಗಾರ ಕೂಡ ಆಗಿರುವ ಅರುಣ್ ಅತ್ಯುತ್ತಮ ಗೋಲ್ ಕೀಪರ್. ಕೋಲಾರದ ಕೆಜಿಎಫ್ನ ಇವರು ಎರಡು ತಿಂಗಳಿನಿಂದ ಬೆಂಗಳೂರಿನ ಎಚ್ಎಎಲ್ ಕ್ವಾರ್ಟರ್ಸ್ನಲ್ಲಿ ಉಳಿದುಕೊಂಡಿದ್ದರು.<br /> <br /> ಅರುಣ್ ಬುಧವಾರ ಎಚ್ಎಎಲ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ತೀವ್ರವಾಗಿ ಗಾಯಗೊಂಡಿದ್ದರು. ಅವರ ಕಾಲಿಗೆ ಗಾಯವಾಗಿತ್ತು. ಶುಕ್ರವಾರ ಬೆಳಿಗ್ಗೆ ಎದೆ ನೋವಿಗೆ ಒಳಗಾದ ಅವರನ್ನು ಎಚ್ಎಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೃದಯಾಘಾತದಿಂದ ಅವರು ನಿಧನರಾದರು. ಅವರ ಅಂತ್ಯಕ್ರಿಯೆ ಕೆಜಿಎಫ್ನಲ್ಲಿ ಶನಿವಾರ ನಡೆಯಲಿದೆ. <br /> <br /> ಅರುಣ್ 2003ರಲ್ಲಿ ಸಬ್ ಜೂನಿಯರ್ ಟೂರ್ನಿಯಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದರು. ವಿವಾ ಕೇರಳ ಪರ ಕೂಡ ಆಡಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ)ದಲ್ಲಿ ಕೋಚ್ ಅಸ್ಲಮ್ ಖಾನ್ ಮಾರ್ಗದರ್ಶನದಲ್ಲಿ ಅವರು ಮೊದಲು ತಮ್ಮ ಆಟ ಆರಂಭಿಸಿದ್ದರು. ಅಲ್ಲಿ ನಾಲ್ಕು ವರ್ಷ ಇದ್ದರು. <br /> <br /> `ಉದಯೋನ್ಮುಖ ಆಟಗಾರನೊಬ್ಬನನ್ನು ನಾವು ಕಳೆದುಕೊಂಡಿದ್ದೇವೆ~ ಎಂದು ಎಚ್ಎಎಲ್ ಫುಟ್ಬಾಲ್ ಕ್ಲಬ್ನ ಆಟಗಾರ ಜಯಕುಮಾರ್ ತಿಳಿಸಿದ್ದಾರೆ. ಗೋಲ್ ಕೀಪರ್ಗಳ ಕೊರತೆ ಇರುವ ಈ ಸಮಯದಲ್ಲಿ ಇಂತಹ ಆಘಾತ ಎದುರಾಗಿದೆ ಎಂದಿದ್ದಾರೆ. <br /> <br /> ಯುವ ಆಟಗಾರ ಅರುಣ್ ಅವರ ಅಕಾಲಿಕ ನಿಧನಕ್ಕೆ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್(ಎಐಎಫ್ಎಫ್), ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆಎಸ್ಎಫ್ಎ) ಹಾಗೂ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ (ಬಿಡಿಎಫ್ಎ) ಸಂತಾಪ ವ್ಯಕ್ತಪಡಿಸಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>