<p>ಸಂಕಪ್ಪ ಒಂದು ಸಣ್ಣ ಗ್ರಾಮದ ಬಡ ಕಾರ್ಮಿಕ. ಆತನ ಹೆಂಡತಿಗೆ ತುರ್ತಾಗಿ ಒಂದು ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಆತನ ಹತ್ತಿರ ಹಣವಿಲ್ಲ. ಸದ್ಯ ಇರುವ ಆಸ್ತಿ ಎಂದರೆ ಆ ಗ್ರಾಮದಲ್ಲಿನ ಸಣ್ಣ ಮನೆ. ಊರಿನ ಸಾಹುಕಾರರು ಅಷ್ಟೋ ಇಷ್ಟೋ ಸಾಲ ಕೊಟ್ಟರು. ಸಂಬಂಧಿಗಳೂ ಅಷ್ಟಿಷ್ಟು ಹಣ ಕೊಟ್ಟರು. ಆದರೆ, ಶಸ್ತ್ರಚಿಕಿತ್ಸೆಗೆ ಸುಮಾರು 40 ಸಾವಿರ ರೂಪಾಯಿ ಬೇಕಾಗಿತ್ತು. ಅಷ್ಟು ಹಣವನ್ನು ಸುಮ್ಮನೇ ಆ ಬಡವನಿಗೆ ಯಾರು ಕೊಡಬೇಕು?<br /> <br /> ಮನೆಯ ಮೇಲೆ ಸಾಲ ತೆಗೆಯುವ ವಿಚಾರ ಮಾಡಿದ. ಅದಕ್ಕಾಗಿ ಗ್ರಾಮ ಪಂಚಾಯಿತಿಗೆ ತನ್ನ ಮನೆಯ ಉತಾರ (ಪಹಣಿ) ತರಲು ಹೋದ. ಆದರೆ ಆ ಉತಾರ ಮಾತ್ರ ಆತನಿಗೆ ಸಿಗಲಿಲ್ಲ. ಬೇಗ ಸಿಗುವ ಸಾಧ್ಯತೆಯೂ ಕಾಣಲಿಲ್ಲ. ಉತಾರ ಸಿಗದೇ ಆತನಿಗೆ ಸಾಲ ದೊರಕುವುದಿಲ್ಲ. ಸಾಲವಿಲ್ಲದೇ ಆತನ ಹೆಂಡತಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲ. ಹಣವಿಲ್ಲ ಎಂದರೆ ಅವಳಿಗೆ ಉಳಿವಿಲ್ಲ.<br /> <br /> ಮತ್ತೊಂದು ಗ್ರಾಮದ ಕತೆ ಕೇಳಿ. ರವೀಂದ್ರ ಪಿಯುಸಿ ಓದುತ್ತಿರುವ ವಿದ್ಯಾರ್ಥಿ. ಅವನ ತಂದೆ ಕಷ್ಟಪಟ್ಟು ಒಂದು ಸಣ್ಣ ಮನೆ ಕಟ್ಟಿದ್ದಾರೆ. ಈ ಹೊಸಮನೆಗೆ ವಿದ್ಯುತ್ ಪಡೆದುಕೊಳ್ಳಲು ಮನೆಯ ಉತಾರ ಬೇಕು. ಆದರೆ ಆ ಉತಾರ ಸಿಗುತ್ತಿಲ್ಲ. ಉತಾರ ಸಿಕ್ಕು ವಿದ್ಯುತ್ ಮನೆಗೆ ಬರುವವರೆಗೂ ಆ ವಿದ್ಯಾರ್ಥಿ ಮತ್ತೊಬ್ಬರ ಮನೆಯ ಬೆಳಕನ್ನು ಆಶ್ರಯಿಸಬೇಕು.<br /> <br /> ಸಮಸ್ಯೆ ಇವೆರಡೇ ಅಲ್ಲ. ಈಗ ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ಉತಾರಗಳು ಸಿಗದಿರುವ ಪರಿಣಾಮ ರಾಜ್ಯದ ಉದ್ದಗಲಕ್ಕೂ ನೂರಾರು ಸಮಸ್ಯೆಗಳನ್ನು ಜನತೆಗೆ ತಂದೊಡ್ಡಿವೆ. ಜನರು ಸಾಲ ಪಡೆಯಲು, ನಿವೇಶನ, ಮನೆ ಮಾರಾಟ ಸೇರಿದಂತೆ ಇನ್ನಿತರ ಕೆಲಸಗಳಿಗೆ ಅವಶ್ಯವಾಗಿ ಈ ಉತಾರ ಬೇಕೇಬೇಕು. ಈ ಉತಾರವನ್ನು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು, ಬರವಣಿಗೆ ಮೂಲಕ ನೀಡುತ್ತಿದ್ದರು. ಆದರೆ ಸರ್ಕಾರ ಈ ವ್ಯವಸ್ಥೆಯನ್ನು ಬದಲಿಸಿ ಆನ್ಲೈನ್ ಮೂಲಕ ನೀಡುವ ವ್ಯವಸ್ಥೆಯನ್ನು ಹುಟ್ಟುಹಾಕಿದೆ. ಹೊಸ ವ್ಯವಸ್ಥೆ ಇಡೀ ರಾಜ್ಯದ ತುಂಬೆಲ್ಲ ಸಮಸ್ಯೆ ತಂದಿದೆ.<br /> <br /> ಒಂದೇ ಆಸ್ತಿ ಅಥವಾ ನಿವೇಶನ ಬೇರೆ ಬೇರೆಯವರ ಹೆಸರಿನಲ್ಲಿ ಮಾರಾಟವಾಗುವುದು, ಅನ್ಯಾಯವಾಗಿ ಮತ್ತೊಬ್ಬರ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುವುದು, ಹೀಗೆ ನಿವೇಶನ ಹಾಗೂ ಮನೆಗಳ ದಾಖಲಾತಿಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ‘ಇ-–ಸ್ವತ್ತು’ ಎಂಬ ತಂತ್ರಾಂಶವನ್ನು ಜಾರಿಗೆ ತಂದಿದೆ.<br /> <br /> ಇ-–ಸ್ವತ್ತು ತಂತ್ರಾಂಶದ ಪ್ರಕಾರ, ಮನೆಯ ಜೊತೆಗೆ ಮನೆಯ ಮಾಲೀಕನ ಭಾವಚಿತ್ರವನ್ನು ಜಿಪಿಎಸ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗುತ್ತದೆ. ಇದರಿಂದ ಈ ಜಿಪಿಎಸ್ ಕ್ಯಾಮೆರಾದಲ್ಲಿ ಮನೆಯ ಸ್ಥಳ, ಅಕ್ಷಾಂಶ ರೇಖಾಂಶ ಸೇರಿದಂತೆ ಚೆಕ್ಬಂದಿಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಂತರ ಈ ಮಾಹಿತಿಯನ್ನು ಗಣಕೀಕರಿಸ ಲಾಗುತ್ತದೆ. ಹೀಗೆ ಕಂದಾಯ ಇಲಾಖೆ ನೀಡಿದ ದಾಖಲಾತಿಯನ್ನು ಗ್ರಾಮ ಪಂಚಾಯಿತಿ ಆನ್ಲೈನ್ ಮುಖಾಂತರ ಸಾರ್ವಜನಿಕರಿಗೆ ಉತಾರ ನೀಡುತ್ತದೆ.<br /> <br /> ಸರ್ಕಾರದ ಈ ಯೋಜನೆ ಒಳ್ಳೆಯದೇ. ಆದರೆ, ಇ-–ಸ್ವತ್ತು ತಂತ್ರಾಂಶದ ಕಾರ್ಯ ಸಂಪೂರ್ಣಗೊಂಡು ಇನ್ನೇನು ಆನ್ಲೈನ್ ಮುಖಾಂತರವೇ ನಾವು ಉತಾರ ಕೊಡಬಹುದು ಎಂದಾಗಲಷ್ಟೇ ಈಗಿದ್ದ ಕೈಬರಹದ ಉತಾರ ಕೊಡುವುದನ್ನು ನಿಲ್ಲಿಸಬಹುದಿತ್ತಲ್ಲವೇ? ಈಗ ಹೀಗೆ ಕೊಡುವ ಉತಾರಗಳನ್ನು ನಿಲ್ಲಿಸಿರುವುದರಿಂದ ಜನತೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.<br /> <br /> ಸರ್ಕಾರ ಯಾವುದೇ ಯೋಜನೆಯನ್ನು ರೂಪಿಸಿದರೂ, ಅದು ಕಾರ್ಯರೂಪಕ್ಕೆ ಬರುವುದಕ್ಕೆ ಮುನ್ನವೇ ಅದರ ಸಾಧಕಬಾಧಕಗಳನ್ನು ಅರಿಯಬೇಕು, ಯೋಜನೆಯ ಯಶಸ್ಸಿಗೆ ಏನೇನು ಬೇಕು ಎಂಬುದನ್ನೆಲ್ಲ ಅರಿತಿರಬೇಕು.<br /> <br /> ಸರ್ಕಾರವೇನೋ ಒಳ್ಳೊಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಪ್ರತಿಯೊಂದು ಯೋಜನೆಯಲ್ಲಿಯೂ ಅದು ಎಡವುವುದು ಇಲ್ಲಿಯೇ. ಸರ್ಕಾರ ಮಾಡುವ ಕೆಲಸ ನೋಡಿ– ಸಾಕಷ್ಟು ದುಡ್ಡು ವಿನಿಯೋಗಿಸಿ ಒಳ್ಳೆಯ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆ.<br /> <br /> ಆದರೆ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯವಾದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುವುದಿಲ್ಲ. ಹೋಗಲಿ, ಎಲ್ಲವೂ ಸರಿಯಾಗಿದೆ ಎಂದಮೇಲಾದರೂ ಯೋಜನೆಯನ್ನು ಜಾರಿಗೊಳಿಸಬೇಕು. ಆದೂ ಇಲ್ಲ.<br /> <br /> ಯೋಜನೆಯನ್ನು ಹಾಕಿಕೊಂಡಿದ್ದಾಗಿದೆ, ಅದು ಯಶಸ್ಸುಗೊಳ್ಳಲಿ ಬಿಡಲಿ ಊದುವ ಶಂಖ ಊದಿಬಿಟ್ಟರಾಯಿತು ಎಂಬ ಧೋರಣೆ. ಮತ್ತೊಂದು ವಿಚಾರವೆಂದರೆ, ಸರ್ಕಾರ ರೂಪಿಸುವ ಯೋಜನೆಗಳು ಕಾರ್ಯಸಾಧ್ಯ ಮಟ್ಟದಲ್ಲಿರಬೇಕು. ಮತ್ತು ಹೊಸ ಯೋಜನೆಯ ಕೆಲಸಗಳಿಗೆ ತಕ್ಕಂತೆ ತರಬೇತಿ ಅತೀ ಅವಶ್ಯ.<br /> <br /> ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮೀಣ ಜನರಿಗೆ ಉತಾರ ಕೈಬರಹದ ಮೂಲಕ ಕೊಡಲಾಗುವುದಿಲ್ಲ. ಹೀಗೆ ಕೈಬರಹದ ಮುಖಾಂತರ ಉತಾರ ಕೊಡುವುದನ್ನು ಸರ್ಕಾರ ರದ್ದುಪಡಿಸಿದೆ ಎಂದು ತಿಳಿಸಿಹೇಳುವುದೇ<br /> <br /> ಒಂದು ದೊಡ್ಡ ಕೆಲಸವಾಗಿದೆ. ಎಷ್ಟು ಹೇಳಿದರೂ ಸಮಸ್ಯೆಯನ್ನು ಅರಿತುಕೊಂಡು ಮುಂದಿನ ಕ್ರಮಕ್ಕೆ ವಿದ್ಯಾವಂತ ಜನತೆ ಕೂಡ ತಯಾರಾಗುತ್ತಿಲ್ಲ.<br /> <br /> ಈ ಉತಾರ ಕುರಿತಂತೆ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸೇರಿಸಿ ಕಂದಾಯ ಇಲಾಖೆಗೆ ವಿಲೇವಾರಿ ಮಾಡಿ ಅಧಿಕೃತ ದಾಖಲೆ ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಇಲಾಖೆ ಕಣ್ಣುಮುಚ್ಚಿ ಕುಳಿತುಕೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿನ ಈ ಸಮಸ್ಯೆಗಳನ್ನು ಕಂದಾಯ ಇಲಾಖೆಯವರೆಗೆ ತಲುಪಿಸದೇ ಇದ್ದಲ್ಲಿ ಇಲಾಖೆ ಇನ್ನೂ ದಿನಗಳನ್ನು ದೂಡುತ್ತಲೇ ಹೋಗುತ್ತದೆ. ಅದಕ್ಕಾಗಿ ಗ್ರಾಮೀಣ ಜನತೆ ಎಚ್ಚೆತ್ತುಕೊಳ್ಳಬೇಕು. ಜಾಗೃತಗೊಂಡು ಕಂದಾಯ ಇಲಾಖೆಗೆ ಬಿಸಿ ತಟ್ಟುವಂತೆ ಮಾಡಬೇಕು.<br /> <br /> ಈ ಕ್ರಮದಿಂದ ಒಂದು ಕಡೆಯಲ್ಲಿ ಗ್ರಾಮ ಪಂಚಾಯಿತಿಗೆ ಬರುವ ಆದಾಯ ಹೋಯಿತು. ಮತ್ತೊಂದೆಡೆ ಜನರಿಗೆ ಬೇಕಾದ ಉತಾರ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲಿ ಆಸ್ತಿ ಮಾರಾಟ ಮತ್ತು ಖರೀದಿ ಸ್ಥಗಿತಗೊಂಡಿದ್ದರಿಂದ ನೋಂದಣಿ ಇಲಾಖೆಗೆ ಕೂಡ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.<br /> <br /> ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ದಾಖಲಾತಿಯನ್ನು ಕಂಪ್ಯೂಟರ್ಗೆ ಅಪ್ಲೋಡ್ ಮಾಡಲಾಗದೇ ಈ ಹಿಂದೆ ಕೊಡುತ್ತಿದ್ದ ಕೈಬರಹದ ಉತಾರಗಳನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು ಮೂರ್ಖತನದ ಕೆಲಸ. ಇದರಿಂದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಈ ತೊಂದರೆಗಳನ್ನು ನೀಗಿಸಲು ಸರ್ಕಾರ, ಸಂಬಂಧಿಸಿದ ಇಲಾಖೆಗಳು ಮುಂದಾಗಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಕಪ್ಪ ಒಂದು ಸಣ್ಣ ಗ್ರಾಮದ ಬಡ ಕಾರ್ಮಿಕ. ಆತನ ಹೆಂಡತಿಗೆ ತುರ್ತಾಗಿ ಒಂದು ಶಸ್ತ್ರಚಿಕಿತ್ಸೆ ಮಾಡಿಸಬೇಕಿದೆ. ಆತನ ಹತ್ತಿರ ಹಣವಿಲ್ಲ. ಸದ್ಯ ಇರುವ ಆಸ್ತಿ ಎಂದರೆ ಆ ಗ್ರಾಮದಲ್ಲಿನ ಸಣ್ಣ ಮನೆ. ಊರಿನ ಸಾಹುಕಾರರು ಅಷ್ಟೋ ಇಷ್ಟೋ ಸಾಲ ಕೊಟ್ಟರು. ಸಂಬಂಧಿಗಳೂ ಅಷ್ಟಿಷ್ಟು ಹಣ ಕೊಟ್ಟರು. ಆದರೆ, ಶಸ್ತ್ರಚಿಕಿತ್ಸೆಗೆ ಸುಮಾರು 40 ಸಾವಿರ ರೂಪಾಯಿ ಬೇಕಾಗಿತ್ತು. ಅಷ್ಟು ಹಣವನ್ನು ಸುಮ್ಮನೇ ಆ ಬಡವನಿಗೆ ಯಾರು ಕೊಡಬೇಕು?<br /> <br /> ಮನೆಯ ಮೇಲೆ ಸಾಲ ತೆಗೆಯುವ ವಿಚಾರ ಮಾಡಿದ. ಅದಕ್ಕಾಗಿ ಗ್ರಾಮ ಪಂಚಾಯಿತಿಗೆ ತನ್ನ ಮನೆಯ ಉತಾರ (ಪಹಣಿ) ತರಲು ಹೋದ. ಆದರೆ ಆ ಉತಾರ ಮಾತ್ರ ಆತನಿಗೆ ಸಿಗಲಿಲ್ಲ. ಬೇಗ ಸಿಗುವ ಸಾಧ್ಯತೆಯೂ ಕಾಣಲಿಲ್ಲ. ಉತಾರ ಸಿಗದೇ ಆತನಿಗೆ ಸಾಲ ದೊರಕುವುದಿಲ್ಲ. ಸಾಲವಿಲ್ಲದೇ ಆತನ ಹೆಂಡತಿ ಶಸ್ತ್ರಚಿಕಿತ್ಸೆಗೆ ಹಣವಿಲ್ಲ. ಹಣವಿಲ್ಲ ಎಂದರೆ ಅವಳಿಗೆ ಉಳಿವಿಲ್ಲ.<br /> <br /> ಮತ್ತೊಂದು ಗ್ರಾಮದ ಕತೆ ಕೇಳಿ. ರವೀಂದ್ರ ಪಿಯುಸಿ ಓದುತ್ತಿರುವ ವಿದ್ಯಾರ್ಥಿ. ಅವನ ತಂದೆ ಕಷ್ಟಪಟ್ಟು ಒಂದು ಸಣ್ಣ ಮನೆ ಕಟ್ಟಿದ್ದಾರೆ. ಈ ಹೊಸಮನೆಗೆ ವಿದ್ಯುತ್ ಪಡೆದುಕೊಳ್ಳಲು ಮನೆಯ ಉತಾರ ಬೇಕು. ಆದರೆ ಆ ಉತಾರ ಸಿಗುತ್ತಿಲ್ಲ. ಉತಾರ ಸಿಕ್ಕು ವಿದ್ಯುತ್ ಮನೆಗೆ ಬರುವವರೆಗೂ ಆ ವಿದ್ಯಾರ್ಥಿ ಮತ್ತೊಬ್ಬರ ಮನೆಯ ಬೆಳಕನ್ನು ಆಶ್ರಯಿಸಬೇಕು.<br /> <br /> ಸಮಸ್ಯೆ ಇವೆರಡೇ ಅಲ್ಲ. ಈಗ ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ಉತಾರಗಳು ಸಿಗದಿರುವ ಪರಿಣಾಮ ರಾಜ್ಯದ ಉದ್ದಗಲಕ್ಕೂ ನೂರಾರು ಸಮಸ್ಯೆಗಳನ್ನು ಜನತೆಗೆ ತಂದೊಡ್ಡಿವೆ. ಜನರು ಸಾಲ ಪಡೆಯಲು, ನಿವೇಶನ, ಮನೆ ಮಾರಾಟ ಸೇರಿದಂತೆ ಇನ್ನಿತರ ಕೆಲಸಗಳಿಗೆ ಅವಶ್ಯವಾಗಿ ಈ ಉತಾರ ಬೇಕೇಬೇಕು. ಈ ಉತಾರವನ್ನು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳು, ಬರವಣಿಗೆ ಮೂಲಕ ನೀಡುತ್ತಿದ್ದರು. ಆದರೆ ಸರ್ಕಾರ ಈ ವ್ಯವಸ್ಥೆಯನ್ನು ಬದಲಿಸಿ ಆನ್ಲೈನ್ ಮೂಲಕ ನೀಡುವ ವ್ಯವಸ್ಥೆಯನ್ನು ಹುಟ್ಟುಹಾಕಿದೆ. ಹೊಸ ವ್ಯವಸ್ಥೆ ಇಡೀ ರಾಜ್ಯದ ತುಂಬೆಲ್ಲ ಸಮಸ್ಯೆ ತಂದಿದೆ.<br /> <br /> ಒಂದೇ ಆಸ್ತಿ ಅಥವಾ ನಿವೇಶನ ಬೇರೆ ಬೇರೆಯವರ ಹೆಸರಿನಲ್ಲಿ ಮಾರಾಟವಾಗುವುದು, ಅನ್ಯಾಯವಾಗಿ ಮತ್ತೊಬ್ಬರ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುವುದು, ಹೀಗೆ ನಿವೇಶನ ಹಾಗೂ ಮನೆಗಳ ದಾಖಲಾತಿಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ‘ಇ-–ಸ್ವತ್ತು’ ಎಂಬ ತಂತ್ರಾಂಶವನ್ನು ಜಾರಿಗೆ ತಂದಿದೆ.<br /> <br /> ಇ-–ಸ್ವತ್ತು ತಂತ್ರಾಂಶದ ಪ್ರಕಾರ, ಮನೆಯ ಜೊತೆಗೆ ಮನೆಯ ಮಾಲೀಕನ ಭಾವಚಿತ್ರವನ್ನು ಜಿಪಿಎಸ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗುತ್ತದೆ. ಇದರಿಂದ ಈ ಜಿಪಿಎಸ್ ಕ್ಯಾಮೆರಾದಲ್ಲಿ ಮನೆಯ ಸ್ಥಳ, ಅಕ್ಷಾಂಶ ರೇಖಾಂಶ ಸೇರಿದಂತೆ ಚೆಕ್ಬಂದಿಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ನಂತರ ಈ ಮಾಹಿತಿಯನ್ನು ಗಣಕೀಕರಿಸ ಲಾಗುತ್ತದೆ. ಹೀಗೆ ಕಂದಾಯ ಇಲಾಖೆ ನೀಡಿದ ದಾಖಲಾತಿಯನ್ನು ಗ್ರಾಮ ಪಂಚಾಯಿತಿ ಆನ್ಲೈನ್ ಮುಖಾಂತರ ಸಾರ್ವಜನಿಕರಿಗೆ ಉತಾರ ನೀಡುತ್ತದೆ.<br /> <br /> ಸರ್ಕಾರದ ಈ ಯೋಜನೆ ಒಳ್ಳೆಯದೇ. ಆದರೆ, ಇ-–ಸ್ವತ್ತು ತಂತ್ರಾಂಶದ ಕಾರ್ಯ ಸಂಪೂರ್ಣಗೊಂಡು ಇನ್ನೇನು ಆನ್ಲೈನ್ ಮುಖಾಂತರವೇ ನಾವು ಉತಾರ ಕೊಡಬಹುದು ಎಂದಾಗಲಷ್ಟೇ ಈಗಿದ್ದ ಕೈಬರಹದ ಉತಾರ ಕೊಡುವುದನ್ನು ನಿಲ್ಲಿಸಬಹುದಿತ್ತಲ್ಲವೇ? ಈಗ ಹೀಗೆ ಕೊಡುವ ಉತಾರಗಳನ್ನು ನಿಲ್ಲಿಸಿರುವುದರಿಂದ ಜನತೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.<br /> <br /> ಸರ್ಕಾರ ಯಾವುದೇ ಯೋಜನೆಯನ್ನು ರೂಪಿಸಿದರೂ, ಅದು ಕಾರ್ಯರೂಪಕ್ಕೆ ಬರುವುದಕ್ಕೆ ಮುನ್ನವೇ ಅದರ ಸಾಧಕಬಾಧಕಗಳನ್ನು ಅರಿಯಬೇಕು, ಯೋಜನೆಯ ಯಶಸ್ಸಿಗೆ ಏನೇನು ಬೇಕು ಎಂಬುದನ್ನೆಲ್ಲ ಅರಿತಿರಬೇಕು.<br /> <br /> ಸರ್ಕಾರವೇನೋ ಒಳ್ಳೊಳ್ಳೆಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಆದರೆ ಪ್ರತಿಯೊಂದು ಯೋಜನೆಯಲ್ಲಿಯೂ ಅದು ಎಡವುವುದು ಇಲ್ಲಿಯೇ. ಸರ್ಕಾರ ಮಾಡುವ ಕೆಲಸ ನೋಡಿ– ಸಾಕಷ್ಟು ದುಡ್ಡು ವಿನಿಯೋಗಿಸಿ ಒಳ್ಳೆಯ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತದೆ.<br /> <br /> ಆದರೆ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯವಾದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುವುದಿಲ್ಲ. ಹೋಗಲಿ, ಎಲ್ಲವೂ ಸರಿಯಾಗಿದೆ ಎಂದಮೇಲಾದರೂ ಯೋಜನೆಯನ್ನು ಜಾರಿಗೊಳಿಸಬೇಕು. ಆದೂ ಇಲ್ಲ.<br /> <br /> ಯೋಜನೆಯನ್ನು ಹಾಕಿಕೊಂಡಿದ್ದಾಗಿದೆ, ಅದು ಯಶಸ್ಸುಗೊಳ್ಳಲಿ ಬಿಡಲಿ ಊದುವ ಶಂಖ ಊದಿಬಿಟ್ಟರಾಯಿತು ಎಂಬ ಧೋರಣೆ. ಮತ್ತೊಂದು ವಿಚಾರವೆಂದರೆ, ಸರ್ಕಾರ ರೂಪಿಸುವ ಯೋಜನೆಗಳು ಕಾರ್ಯಸಾಧ್ಯ ಮಟ್ಟದಲ್ಲಿರಬೇಕು. ಮತ್ತು ಹೊಸ ಯೋಜನೆಯ ಕೆಲಸಗಳಿಗೆ ತಕ್ಕಂತೆ ತರಬೇತಿ ಅತೀ ಅವಶ್ಯ.<br /> <br /> ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮೀಣ ಜನರಿಗೆ ಉತಾರ ಕೈಬರಹದ ಮೂಲಕ ಕೊಡಲಾಗುವುದಿಲ್ಲ. ಹೀಗೆ ಕೈಬರಹದ ಮುಖಾಂತರ ಉತಾರ ಕೊಡುವುದನ್ನು ಸರ್ಕಾರ ರದ್ದುಪಡಿಸಿದೆ ಎಂದು ತಿಳಿಸಿಹೇಳುವುದೇ<br /> <br /> ಒಂದು ದೊಡ್ಡ ಕೆಲಸವಾಗಿದೆ. ಎಷ್ಟು ಹೇಳಿದರೂ ಸಮಸ್ಯೆಯನ್ನು ಅರಿತುಕೊಂಡು ಮುಂದಿನ ಕ್ರಮಕ್ಕೆ ವಿದ್ಯಾವಂತ ಜನತೆ ಕೂಡ ತಯಾರಾಗುತ್ತಿಲ್ಲ.<br /> <br /> ಈ ಉತಾರ ಕುರಿತಂತೆ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಸೇರಿಸಿ ಕಂದಾಯ ಇಲಾಖೆಗೆ ವಿಲೇವಾರಿ ಮಾಡಿ ಅಧಿಕೃತ ದಾಖಲೆ ಮಾಹಿತಿ ನೀಡುವಂತೆ ಕಂದಾಯ ಇಲಾಖೆಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಇಲಾಖೆ ಕಣ್ಣುಮುಚ್ಚಿ ಕುಳಿತುಕೊಂಡಿದೆ. ಗ್ರಾಮಾಂತರ ಪ್ರದೇಶದಲ್ಲಿನ ಈ ಸಮಸ್ಯೆಗಳನ್ನು ಕಂದಾಯ ಇಲಾಖೆಯವರೆಗೆ ತಲುಪಿಸದೇ ಇದ್ದಲ್ಲಿ ಇಲಾಖೆ ಇನ್ನೂ ದಿನಗಳನ್ನು ದೂಡುತ್ತಲೇ ಹೋಗುತ್ತದೆ. ಅದಕ್ಕಾಗಿ ಗ್ರಾಮೀಣ ಜನತೆ ಎಚ್ಚೆತ್ತುಕೊಳ್ಳಬೇಕು. ಜಾಗೃತಗೊಂಡು ಕಂದಾಯ ಇಲಾಖೆಗೆ ಬಿಸಿ ತಟ್ಟುವಂತೆ ಮಾಡಬೇಕು.<br /> <br /> ಈ ಕ್ರಮದಿಂದ ಒಂದು ಕಡೆಯಲ್ಲಿ ಗ್ರಾಮ ಪಂಚಾಯಿತಿಗೆ ಬರುವ ಆದಾಯ ಹೋಯಿತು. ಮತ್ತೊಂದೆಡೆ ಜನರಿಗೆ ಬೇಕಾದ ಉತಾರ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಗ್ರಾಮೀಣ ಭಾಗಗಳಲ್ಲಿ ಆಸ್ತಿ ಮಾರಾಟ ಮತ್ತು ಖರೀದಿ ಸ್ಥಗಿತಗೊಂಡಿದ್ದರಿಂದ ನೋಂದಣಿ ಇಲಾಖೆಗೆ ಕೂಡ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.<br /> <br /> ಒಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ದಾಖಲಾತಿಯನ್ನು ಕಂಪ್ಯೂಟರ್ಗೆ ಅಪ್ಲೋಡ್ ಮಾಡಲಾಗದೇ ಈ ಹಿಂದೆ ಕೊಡುತ್ತಿದ್ದ ಕೈಬರಹದ ಉತಾರಗಳನ್ನು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು ಮೂರ್ಖತನದ ಕೆಲಸ. ಇದರಿಂದ ಜನತೆಗೆ ಸಾಕಷ್ಟು ತೊಂದರೆಯಾಗಿದೆ. ಈ ತೊಂದರೆಗಳನ್ನು ನೀಗಿಸಲು ಸರ್ಕಾರ, ಸಂಬಂಧಿಸಿದ ಇಲಾಖೆಗಳು ಮುಂದಾಗಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>