<p>ತುಮಕೂರು: ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಗೆ ಸೇರಿದ ಗುಲಗಂಜಿಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. <br /> <br /> ಇದಕ್ಕೂ ಮುನ್ನ ನಗರದ ಟೌನ್ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ದಶಕಗಳಿಂದಲೂ ಗುಲಗಂಜಿಹಳ್ಳಿಯಿಂದ ಪ್ರಭುವನಹಳ್ಳಿಗೆ ಒಂದು ಕಿಲೋಮೀಟರ್ ದೂರ ರಸ್ತೆ ನಿರ್ಮಿಸಿಕೊಡುವಂತೆ ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಿದರು.<br /> <br /> ಕಂದಾಯ ಇಲಾಖೆಯ ದಾಖಲೆಗಳಲ್ಲಿ ಗುಲಗಂಜಿಹಳ್ಳಿಯಿಂದ ಪ್ರಭುವನಹಳ್ಳಿಗೆ ರಸ್ತೆ ಇದೆ. ಆದರೆ ಗ್ರಾಮದ ಕೆಲವು ಪಟ್ಟಭದ್ರರು ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಕೇವಲ 6 ಕಿ.ಮೀ ದೂರವಿರುವ ಗುಬ್ಬಿಗೆ ತೆರಳು ಗ್ರಾಮಸ್ಥರು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಪ್ರತಿಯೊಂದಕ್ಕೂ ಗುಬ್ಬಿ ಪಟ್ಟಣಕ್ಕೆ ತೆರಳಬೇಕಾಗಿರುವುದರಿಂದ ರಸ್ತೆ ಅತಿಕ್ರಮಣ ತೆರವುಗೊಳಿಸಿ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.</p>.<p>ನಾಟಕ ರತ್ನ ಗುಬ್ಬಿ ವೀರಣ್ಣ ಹುಟ್ಟೂರು ಇದಾಗಿದ್ದು, ಅವರು ಬೆಳೆದ ಮನೆ, ಅವರೇ ಕಟ್ಟಿದ ಶಾಲೆ ಇದ್ದರೂ ಊರಿಗೆ ರಸ್ತೆ ಇಲ್ಲವಾಗಿದೆ. ಅತಿಕ್ರಮಣಗೊಂಡಿರುವ ರಸ್ತೆಯನ್ನು ತಹಶೀಲ್ದಾರ್ ಕೂಡಲೇ ತೆರವುಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.<br /> <br /> ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ನಾಳೆಯೇ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆದರು.<br /> <br /> ಪ್ರತಿಭಟನೆ ನೇತೃತ್ವವನ್ನು ಗ್ರಾಮದ ಮುಖಂಡರಾದ ಜಿ.ಸಿ.ಸುರೇಶ್, ಶಿವಗಂಗಮ್ಮ, ಸಮುದ್ರನಹಳ್ಳಿ ಸಿ.ಬಿ.ರಂಗಯ್ಯ, ಪ್ರಭಣ್ಣ, ಮಹಾಲಿಂಗಯ್ಯ, ಮಂಜುನಾಥ್, ರವಿ, ಕುಮಾರ್, ರಂಗಯ್ಯ, ಬಸವರಾಜು, ಹೋಟೆಲ್ ಚೆನ್ನಬಸವಣ್ಣ ಇತರರು ವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಗ್ರಾಮಕ್ಕೆ ಸಂಪರ್ಕ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಗೆ ಸೇರಿದ ಗುಲಗಂಜಿಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. <br /> <br /> ಇದಕ್ಕೂ ಮುನ್ನ ನಗರದ ಟೌನ್ಹಾಲ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.<br /> <br /> ದಶಕಗಳಿಂದಲೂ ಗುಲಗಂಜಿಹಳ್ಳಿಯಿಂದ ಪ್ರಭುವನಹಳ್ಳಿಗೆ ಒಂದು ಕಿಲೋಮೀಟರ್ ದೂರ ರಸ್ತೆ ನಿರ್ಮಿಸಿಕೊಡುವಂತೆ ಶಾಸಕರು, ಸಂಸದರು ಸೇರಿದಂತೆ ಅಧಿಕಾರಿಗಳಿಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಿದರು.<br /> <br /> ಕಂದಾಯ ಇಲಾಖೆಯ ದಾಖಲೆಗಳಲ್ಲಿ ಗುಲಗಂಜಿಹಳ್ಳಿಯಿಂದ ಪ್ರಭುವನಹಳ್ಳಿಗೆ ರಸ್ತೆ ಇದೆ. ಆದರೆ ಗ್ರಾಮದ ಕೆಲವು ಪಟ್ಟಭದ್ರರು ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಹೀಗಾಗಿ ಕೇವಲ 6 ಕಿ.ಮೀ ದೂರವಿರುವ ಗುಬ್ಬಿಗೆ ತೆರಳು ಗ್ರಾಮಸ್ಥರು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ಪ್ರತಿಯೊಂದಕ್ಕೂ ಗುಬ್ಬಿ ಪಟ್ಟಣಕ್ಕೆ ತೆರಳಬೇಕಾಗಿರುವುದರಿಂದ ರಸ್ತೆ ಅತಿಕ್ರಮಣ ತೆರವುಗೊಳಿಸಿ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.</p>.<p>ನಾಟಕ ರತ್ನ ಗುಬ್ಬಿ ವೀರಣ್ಣ ಹುಟ್ಟೂರು ಇದಾಗಿದ್ದು, ಅವರು ಬೆಳೆದ ಮನೆ, ಅವರೇ ಕಟ್ಟಿದ ಶಾಲೆ ಇದ್ದರೂ ಊರಿಗೆ ರಸ್ತೆ ಇಲ್ಲವಾಗಿದೆ. ಅತಿಕ್ರಮಣಗೊಂಡಿರುವ ರಸ್ತೆಯನ್ನು ತಹಶೀಲ್ದಾರ್ ಕೂಡಲೇ ತೆರವುಗೊಳಿಸಿಕೊಡಬೇಕು ಎಂದು ಒತ್ತಾಯಿಸಿದರು.<br /> <br /> ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ನಾಳೆಯೇ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ವಾಪಸ್ ಪಡೆದರು.<br /> <br /> ಪ್ರತಿಭಟನೆ ನೇತೃತ್ವವನ್ನು ಗ್ರಾಮದ ಮುಖಂಡರಾದ ಜಿ.ಸಿ.ಸುರೇಶ್, ಶಿವಗಂಗಮ್ಮ, ಸಮುದ್ರನಹಳ್ಳಿ ಸಿ.ಬಿ.ರಂಗಯ್ಯ, ಪ್ರಭಣ್ಣ, ಮಹಾಲಿಂಗಯ್ಯ, ಮಂಜುನಾಥ್, ರವಿ, ಕುಮಾರ್, ರಂಗಯ್ಯ, ಬಸವರಾಜು, ಹೋಟೆಲ್ ಚೆನ್ನಬಸವಣ್ಣ ಇತರರು ವಹಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>