<p><strong>ಪಡುಬಿದ್ರಿ: </strong>ರೋಚಕ ಹೋರಾಟದಲ್ಲಿ ಹರಿಯಾಣದ ಎಚ್ಎಸ್ಐಡಿಸಿ ತಂಡ 3-2 ಸೆಟ್ಗಳಿಂದ ಮುಂಬೈನ ಆರ್ಸಿಎಫ್ ತಂಡವನ್ನು ಸೋಲಿಸಿ, ವಿಶ್ವೇಶ್ವರ ಟ್ರೋಫಿಗಾಗಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಆಹ್ವಾನ ವಾಲಿಬಾಲ್ ಟೂರ್ನಿಯ `ಬಿ~ ಗುಂಪಿನಿಂದ ಸೆಮಿಫೈನಲ್ ತಲುಪಿತು. <br /> <br /> ಚೆನ್ನೈನ ದಕ್ಷಿಣ ರೈಲ್ವೆ ಕೂಡ ಇದೇ ಗುಂಪಿನಿಂದ ಸೆಮಿಫೈನಲ್ಗೆ ಮುನ್ನಡೆದಿದೆ. ಉಡುಪಿ ಸಮೀಪ ಎಲ್ಲೂರು ಯುವಕ ಮಂಡಲ ಆಶ್ರಯದಲ್ಲಿ ವಿಶ್ವೇಶ್ವರ ದೇವಳದ ಮುಂಭಾಗದಲ್ಲಿ ನಡೆಯುತ್ತಿರುವ ಟೂರ್ನಿಯ ಮೂರನೇ ದಿನವಾದ ಶುಕ್ರವಾರ ಹರಿಯಾಣದ ತಂಡ 25-21, 23-25, 25-21, 23-25, 18-16ರಲ್ಲಿ ಆರ್ಸಿಎಫ್ ತಂಡವನ್ನು ಸೋಲಿಸಿತು. <br /> <br /> ಗುರುವಾರ ರಾತ್ರಿ ನಡೆದ `ಎ~ ವಿಭಾಗದ ಪಂದ್ಯದಲ್ಲಿ ಕೆ.ಎಸ್.ಪಿ. ತಂಡ 25-18, 25-18, 22-25, 25-23ರಲ್ಲಿ ಮುಂಬೈನ ಜೀವವಿಮಾ ನಿಗಮ ತಂಡವನ್ನು ಸೋಲಿಸಿತು.ಎಚ್ಎಸ್ಐಡಿಸಿ ಇನ್ನೊಂದು ಪಂದ್ಯದಲ್ಲಿ 19-25, 25-27, 27-25, 25-15, 15-8ರಲ್ಲಿ ಕರ್ನಾಟಕ ಯುವ ತಂಡವನ್ನು ಸೋಲಿಸಿತು.<br /> <br /> ಚೆನ್ನೈನ ಐಓಬಿ 26-24, 25-17, 25-18ರಲ್ಲಿ ಬೆಂಗಳೂರಿನ ಬಿಎಸ್ಎನ್ಎಲ್ ತಂಡವನ್ನು ಸೋಲಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ: </strong>ರೋಚಕ ಹೋರಾಟದಲ್ಲಿ ಹರಿಯಾಣದ ಎಚ್ಎಸ್ಐಡಿಸಿ ತಂಡ 3-2 ಸೆಟ್ಗಳಿಂದ ಮುಂಬೈನ ಆರ್ಸಿಎಫ್ ತಂಡವನ್ನು ಸೋಲಿಸಿ, ವಿಶ್ವೇಶ್ವರ ಟ್ರೋಫಿಗಾಗಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಆಹ್ವಾನ ವಾಲಿಬಾಲ್ ಟೂರ್ನಿಯ `ಬಿ~ ಗುಂಪಿನಿಂದ ಸೆಮಿಫೈನಲ್ ತಲುಪಿತು. <br /> <br /> ಚೆನ್ನೈನ ದಕ್ಷಿಣ ರೈಲ್ವೆ ಕೂಡ ಇದೇ ಗುಂಪಿನಿಂದ ಸೆಮಿಫೈನಲ್ಗೆ ಮುನ್ನಡೆದಿದೆ. ಉಡುಪಿ ಸಮೀಪ ಎಲ್ಲೂರು ಯುವಕ ಮಂಡಲ ಆಶ್ರಯದಲ್ಲಿ ವಿಶ್ವೇಶ್ವರ ದೇವಳದ ಮುಂಭಾಗದಲ್ಲಿ ನಡೆಯುತ್ತಿರುವ ಟೂರ್ನಿಯ ಮೂರನೇ ದಿನವಾದ ಶುಕ್ರವಾರ ಹರಿಯಾಣದ ತಂಡ 25-21, 23-25, 25-21, 23-25, 18-16ರಲ್ಲಿ ಆರ್ಸಿಎಫ್ ತಂಡವನ್ನು ಸೋಲಿಸಿತು. <br /> <br /> ಗುರುವಾರ ರಾತ್ರಿ ನಡೆದ `ಎ~ ವಿಭಾಗದ ಪಂದ್ಯದಲ್ಲಿ ಕೆ.ಎಸ್.ಪಿ. ತಂಡ 25-18, 25-18, 22-25, 25-23ರಲ್ಲಿ ಮುಂಬೈನ ಜೀವವಿಮಾ ನಿಗಮ ತಂಡವನ್ನು ಸೋಲಿಸಿತು.ಎಚ್ಎಸ್ಐಡಿಸಿ ಇನ್ನೊಂದು ಪಂದ್ಯದಲ್ಲಿ 19-25, 25-27, 27-25, 25-15, 15-8ರಲ್ಲಿ ಕರ್ನಾಟಕ ಯುವ ತಂಡವನ್ನು ಸೋಲಿಸಿತು.<br /> <br /> ಚೆನ್ನೈನ ಐಓಬಿ 26-24, 25-17, 25-18ರಲ್ಲಿ ಬೆಂಗಳೂರಿನ ಬಿಎಸ್ಎನ್ಎಲ್ ತಂಡವನ್ನು ಸೋಲಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>