<p><strong>ನವದೆಹಲಿ (ಪಿಟಿಐ):</strong> `ನೇರ ನಗದು ಪಾವತಿ'(ಡಿಸಿಟಿ) ವ್ಯವಸ್ಥೆ ಜಾರಿಗೊಳಿಸಿದ ಒಂದು ವಾರದಲ್ಲಿ ಅಡುಗೆ ಅನಿಲ (ಎಲ್ಪಿಜಿ) ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ರೂ10 ಕೋಟಿ ಸಬ್ಸಿಡಿ ಮೊತ್ತ ವರ್ಗಾಯಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.<br /> <br /> `ಎಲ್ಪಿಜಿ' ಸಬ್ಸಿಡಿಗೆ ಜೂನ್ 1ರಿಂದ `ಡಿಸಿಟಿ' ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲ 7 ದಿನದಲ್ಲಿ ಒಟ್ಟು 18 ಜಿಲ್ಲೆಗಳ 2.5 ಲಕ್ಷ `ಎಲ್ಪಿಜಿ' ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ ರೂ435ರಂತೆ ಹಣ ವರ್ಗಾಯಿಸಲಾಗಿದೆ.<br /> <br /> ಮೊದಲ ಹಂತದಲ್ಲಿ ದೇಶದಾದ್ಯಂತ 20 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಸರ್ಕಾರ ಉದ್ದೇಶಿಸಿತ್ತು. ಆದರೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಯೋಜನೆ ಜಾರಿಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಒಟ್ಟು 73 ಲಕ್ಷ `ಎಲ್ಪಿಜಿ' ಗ್ರಾಹಕರು `ಡಿಸಿಟಿ' ಮೂಲಕ ಸಬ್ಸಿಡಿ ಪಡೆಯಲಿದ್ದಾರೆ. ಇವರಲ್ಲಿ ಶೇ 90ರಷ್ಟು ಫಲಾನುಭವಿಗಳು `ಆಧಾರ್' ಕಾರ್ಡ್ ಪಡೆದುಕೊಂಡಿದ್ದಾರೆ. ಉಳಿದವರಿಗೆ ಕಾರ್ಡ್ ಪಡೆದುಕೊಂಡ `ಡಿಸಿಟಿ' ಸವಲತ್ತಿಗೆ ಒಳಪಡಲು 3 ತಿಂಗಳ (ಸೆ. 1ರವರೆಗೆ) ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.<br /> <br /> `ಡಿಸಿಟಿ' ಜಾರಿಯಿಂದ ಸರ್ಕಾರಕ್ಕೆ `ಎಲ್ಪಿಜಿ' ವಿಭಾಗದಿಂದಲೇ ವಾರ್ಷಿಕ ರೂ8,000ದಿಂದ ರೂ10,000 ಕೋಟಿ ಸಬ್ಸಿಡಿ ಉಳಿತಾಯವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> `ನೇರ ನಗದು ಪಾವತಿ'(ಡಿಸಿಟಿ) ವ್ಯವಸ್ಥೆ ಜಾರಿಗೊಳಿಸಿದ ಒಂದು ವಾರದಲ್ಲಿ ಅಡುಗೆ ಅನಿಲ (ಎಲ್ಪಿಜಿ) ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ರೂ10 ಕೋಟಿ ಸಬ್ಸಿಡಿ ಮೊತ್ತ ವರ್ಗಾಯಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.<br /> <br /> `ಎಲ್ಪಿಜಿ' ಸಬ್ಸಿಡಿಗೆ ಜೂನ್ 1ರಿಂದ `ಡಿಸಿಟಿ' ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲ 7 ದಿನದಲ್ಲಿ ಒಟ್ಟು 18 ಜಿಲ್ಲೆಗಳ 2.5 ಲಕ್ಷ `ಎಲ್ಪಿಜಿ' ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ ರೂ435ರಂತೆ ಹಣ ವರ್ಗಾಯಿಸಲಾಗಿದೆ.<br /> <br /> ಮೊದಲ ಹಂತದಲ್ಲಿ ದೇಶದಾದ್ಯಂತ 20 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಸರ್ಕಾರ ಉದ್ದೇಶಿಸಿತ್ತು. ಆದರೆ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮತ್ತು ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಯೋಜನೆ ಜಾರಿಯನ್ನು ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಒಟ್ಟು 73 ಲಕ್ಷ `ಎಲ್ಪಿಜಿ' ಗ್ರಾಹಕರು `ಡಿಸಿಟಿ' ಮೂಲಕ ಸಬ್ಸಿಡಿ ಪಡೆಯಲಿದ್ದಾರೆ. ಇವರಲ್ಲಿ ಶೇ 90ರಷ್ಟು ಫಲಾನುಭವಿಗಳು `ಆಧಾರ್' ಕಾರ್ಡ್ ಪಡೆದುಕೊಂಡಿದ್ದಾರೆ. ಉಳಿದವರಿಗೆ ಕಾರ್ಡ್ ಪಡೆದುಕೊಂಡ `ಡಿಸಿಟಿ' ಸವಲತ್ತಿಗೆ ಒಳಪಡಲು 3 ತಿಂಗಳ (ಸೆ. 1ರವರೆಗೆ) ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.<br /> <br /> `ಡಿಸಿಟಿ' ಜಾರಿಯಿಂದ ಸರ್ಕಾರಕ್ಕೆ `ಎಲ್ಪಿಜಿ' ವಿಭಾಗದಿಂದಲೇ ವಾರ್ಷಿಕ ರೂ8,000ದಿಂದ ರೂ10,000 ಕೋಟಿ ಸಬ್ಸಿಡಿ ಉಳಿತಾಯವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>