<p>ನೆಲಮಂಗಲ: ಋಷಿ ಮುನಿಗಳು, ಸಿದ್ಧ ಪುರುಷರು ನೀಡುವ ವನೌಷಧಿಗಳಿಂದ ಕಾಯಿಲೆಗಳು ಸಂಪೂರ್ಣ ಗುಣವಾಗುತ್ತವೆ. ಅಲ್ಲದೆ, ಅಂತಹ ಔಷಧಿಗಳು ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಔಷಧಿ ವಿತರಣೆಯ ಸಂಚಾಲಕ ಸುರೇಂದ್ರನಾಥ್ ತಿಳಿಸಿದರು.<br /> <br /> ತಾಲ್ಲೂಕಿನ ವನಕಲ್ಲು ಮಲ್ಲೇಶ್ವರದ ಸಿದ್ದಯೋಗಾನಂದ ಸ್ವಾಮೀಜಿ ಸಂಕಲ್ಪದಂತೆ ತ್ಯಾಮಗೊಂಡ್ಲುವಿನ ಶಾರದಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಅಸ್ತಮಾ, ಶೀತ, ಅಲರ್ಜಿ ಔಷಧಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ಡಾ.ರೇವಣ ಸಿದ್ದೇಶ್ವರ ಕುಂಠಿಮಠ, ವಾಸುದೇವಮೂರ್ತಿ ಹಾಗೂ ಬಾಲಾಜಿ ಔಷಧಿ ಮಹತ್ವ ಕುರಿತು ವಿವರಿಸಿದರು. ಪ್ರಕೃತಿಯ ವಿಸ್ಮಯಗಳನ್ನು ಕುರಿತು ಪರಿಸರವಾದಿ ಗುರುದೇವ್ ಸಚಿತ್ರಗಳ ಪ್ರದರ್ಶನದೊಂದಿಗೆ ಉಪನ್ಯಾಸ ನೀಡಿದರು. <br /> <br /> ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ನೂರಾರು ಜನ ಆಗಮಿಸಿ ಔಷಧಿ ಸ್ವೀಕರಿಸಿದರು.ಸ್ಥಳೀಯ ವರಮಹಾಲಕ್ಷ್ಮಿ ಸೇವಾ ಸಮಿತಿ, ವಾಸವಿ ಸಂಘದ ವತಿಯಿಂದ ದೂರದ ಊರುಗಳಿಂದ ಬಂದವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.<br /> <br /> <strong>ಪ್ರತಿಭಾ ಪುರಸ್ಕಾರ<br /> </strong> ಅಖಿಲ ಭಾರತ ವೀರಶೈವ ಮಹಾಸಭಾ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶನಿವಾರ ನೆಲಮಂಗಲ ತಾಲ್ಲೂಕು ಕವಾಡಿ ಮಠದ ರುದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದೆ. <br /> <br /> ವಿದ್ಯಾರ್ಥಿಗಳು ಅರ್ಜಿಯೊಂದಿಗೆ ನಕಲು ಅಂಕ ಪಟ್ಟಿ ಲಗತ್ತಿಸಿ ನೆಲಮಂಗಲ ತಾಲ್ಲೂಕು ವೀರಶೈವ ಯುವಕ ಸಂಘ, ರುದ್ರೇಶ್ವರ ಸ್ವಾಮಿ ಸೇವಾ ಸಮಿತಿ, ಪೇಟೆ ಬೀದಿ, ನೆಲಮಂಗಲ- ಇಲ್ಲಿಗೆ ಕಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ: 9886304446/ 9342558455.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನೆಲಮಂಗಲ: ಋಷಿ ಮುನಿಗಳು, ಸಿದ್ಧ ಪುರುಷರು ನೀಡುವ ವನೌಷಧಿಗಳಿಂದ ಕಾಯಿಲೆಗಳು ಸಂಪೂರ್ಣ ಗುಣವಾಗುತ್ತವೆ. ಅಲ್ಲದೆ, ಅಂತಹ ಔಷಧಿಗಳು ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಔಷಧಿ ವಿತರಣೆಯ ಸಂಚಾಲಕ ಸುರೇಂದ್ರನಾಥ್ ತಿಳಿಸಿದರು.<br /> <br /> ತಾಲ್ಲೂಕಿನ ವನಕಲ್ಲು ಮಲ್ಲೇಶ್ವರದ ಸಿದ್ದಯೋಗಾನಂದ ಸ್ವಾಮೀಜಿ ಸಂಕಲ್ಪದಂತೆ ತ್ಯಾಮಗೊಂಡ್ಲುವಿನ ಶಾರದಾ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಅಸ್ತಮಾ, ಶೀತ, ಅಲರ್ಜಿ ಔಷಧಿಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.<br /> <br /> ಡಾ.ರೇವಣ ಸಿದ್ದೇಶ್ವರ ಕುಂಠಿಮಠ, ವಾಸುದೇವಮೂರ್ತಿ ಹಾಗೂ ಬಾಲಾಜಿ ಔಷಧಿ ಮಹತ್ವ ಕುರಿತು ವಿವರಿಸಿದರು. ಪ್ರಕೃತಿಯ ವಿಸ್ಮಯಗಳನ್ನು ಕುರಿತು ಪರಿಸರವಾದಿ ಗುರುದೇವ್ ಸಚಿತ್ರಗಳ ಪ್ರದರ್ಶನದೊಂದಿಗೆ ಉಪನ್ಯಾಸ ನೀಡಿದರು. <br /> <br /> ರಾಜ್ಯದ ವಿವಿಧ ಮೂಲೆಗಳಿಂದ ಮತ್ತು ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ನೂರಾರು ಜನ ಆಗಮಿಸಿ ಔಷಧಿ ಸ್ವೀಕರಿಸಿದರು.ಸ್ಥಳೀಯ ವರಮಹಾಲಕ್ಷ್ಮಿ ಸೇವಾ ಸಮಿತಿ, ವಾಸವಿ ಸಂಘದ ವತಿಯಿಂದ ದೂರದ ಊರುಗಳಿಂದ ಬಂದವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.<br /> <br /> <strong>ಪ್ರತಿಭಾ ಪುರಸ್ಕಾರ<br /> </strong> ಅಖಿಲ ಭಾರತ ವೀರಶೈವ ಮಹಾಸಭಾ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶನಿವಾರ ನೆಲಮಂಗಲ ತಾಲ್ಲೂಕು ಕವಾಡಿ ಮಠದ ರುದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಏರ್ಪಡಿಸಿದೆ. <br /> <br /> ವಿದ್ಯಾರ್ಥಿಗಳು ಅರ್ಜಿಯೊಂದಿಗೆ ನಕಲು ಅಂಕ ಪಟ್ಟಿ ಲಗತ್ತಿಸಿ ನೆಲಮಂಗಲ ತಾಲ್ಲೂಕು ವೀರಶೈವ ಯುವಕ ಸಂಘ, ರುದ್ರೇಶ್ವರ ಸ್ವಾಮಿ ಸೇವಾ ಸಮಿತಿ, ಪೇಟೆ ಬೀದಿ, ನೆಲಮಂಗಲ- ಇಲ್ಲಿಗೆ ಕಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಮೊ: 9886304446/ 9342558455.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>