<p><strong>ನವದೆಹಲಿ (ಪಿಟಿಐ): </strong>ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವೆ 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದಿರುವ ಪತ್ರ ವ್ಯವಹಾರವನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ(ಪಿಎಂಒ) ನಿರಾಕರಿಸಿದೆ.<br /> <br /> ತಪ್ಪಿತಸ್ಥರ ತನಿಖೆ, ಬಂಧನ ಅಥವಾ ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗುವಂತಿದ್ದರೆ ಮಾಹಿತಿ ಬಹಿರಂಗಪಡಿಸದಿರಲು ಅವಕಾಶ ಇದೆ ಎಂದು ಪಾರದರ್ಶಕತೆ ಕಾಯ್ದೆಯ 8 (1) ಎಚ್ ಸೆಕ್ಷನನ್ನು ಉಲ್ಲೇಖಿಸಿ ಪಿಎಂಒ ಈ ಮಾಹಿತಿ ಕೇಳಿರುವ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯೆ ನೀಡಿದೆ.<br /> <br /> ಪಿಎಂಒ ಈ ಪ್ರತಿಕ್ರಿಯೆ, ವಾಜಪೇಯಿ ಮತ್ತು ಮೋದಿ ನಡುವಿನ ಸಂವಹನದಲ್ಲಿ ಗಲಭೆಗೆ ಸಂಬಂಧಿಸಿದ ಅಥವಾ ಗಲಭೆಯ ಹಿಂದಿನ ಜನಗಳ ಬಗ್ಗೆ ಮಾಹಿತಿ ಇರಬಹುದು ಎಂಬ ಅನುಮಾನ ಹುಟ್ಟುಹಾಕಿದೆ.<br /> <br /> ಪಿಎಂಒ ಮತ್ತು ಗುಜರಾತ್ ಸರ್ಕಾರದ ನಡುವೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ ಫೆಬ್ರುವರಿ 27, 2002 ಮತ್ತು ಏಪ್ರಿಲ್ 30, 2002ರ ನಡುವೆ ನಡೆದಿರುವ ಎಲ್ಲ ಸಂವಹನದ ಪ್ರತಿ ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡುವೆ 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದಿರುವ ಪತ್ರ ವ್ಯವಹಾರವನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ(ಪಿಎಂಒ) ನಿರಾಕರಿಸಿದೆ.<br /> <br /> ತಪ್ಪಿತಸ್ಥರ ತನಿಖೆ, ಬಂಧನ ಅಥವಾ ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗುವಂತಿದ್ದರೆ ಮಾಹಿತಿ ಬಹಿರಂಗಪಡಿಸದಿರಲು ಅವಕಾಶ ಇದೆ ಎಂದು ಪಾರದರ್ಶಕತೆ ಕಾಯ್ದೆಯ 8 (1) ಎಚ್ ಸೆಕ್ಷನನ್ನು ಉಲ್ಲೇಖಿಸಿ ಪಿಎಂಒ ಈ ಮಾಹಿತಿ ಕೇಳಿರುವ ಮಾಹಿತಿ ಹಕ್ಕು ಅರ್ಜಿಗೆ ಪ್ರತಿಕ್ರಿಯೆ ನೀಡಿದೆ.<br /> <br /> ಪಿಎಂಒ ಈ ಪ್ರತಿಕ್ರಿಯೆ, ವಾಜಪೇಯಿ ಮತ್ತು ಮೋದಿ ನಡುವಿನ ಸಂವಹನದಲ್ಲಿ ಗಲಭೆಗೆ ಸಂಬಂಧಿಸಿದ ಅಥವಾ ಗಲಭೆಯ ಹಿಂದಿನ ಜನಗಳ ಬಗ್ಗೆ ಮಾಹಿತಿ ಇರಬಹುದು ಎಂಬ ಅನುಮಾನ ಹುಟ್ಟುಹಾಕಿದೆ.<br /> <br /> ಪಿಎಂಒ ಮತ್ತು ಗುಜರಾತ್ ಸರ್ಕಾರದ ನಡುವೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿ ಫೆಬ್ರುವರಿ 27, 2002 ಮತ್ತು ಏಪ್ರಿಲ್ 30, 2002ರ ನಡುವೆ ನಡೆದಿರುವ ಎಲ್ಲ ಸಂವಹನದ ಪ್ರತಿ ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>