<p><strong>ಬೆಳಗಾವಿ:</strong> ನಗರದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.</p>.<p>ಊಟೋಪಚಾರ ಸಮಿತಿಯ ಅಧ್ಯಕ್ಷ ಸಂಸದ ರಮೇಶ ಕತ್ತಿ ಹಾಗೂ ಜಿಲ್ಲಾಧಿಕಾರಿ ಏಕರೂಪ್ ಕೌರ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.</p>.<p>ಉತ್ತರ ಕರ್ನಾಟಕದ ತಿಂಡಿ, ತಿನಿಸು, ಜತೆಗೆ ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಊಟವನ್ನೂ ಸಹ ಒದಗಿಸಲು ತೀರ್ಮಾನಿಸಲಾಯಿತು. ಜೋಳ, ಸಜ್ಜಿ ರೊಟ್ಟಿ, ಚಪಾತಿ, ಗುರೆಳ್ಳು, ಶೇಂಗಾ ಹಿಂಡಿ, ಪುಟಾಣಿ ಚಟ್ನಿ, ಬದನೆಕಾಯಿ, ಹೆಸರುಕಾಳು ಪಲ್ಲೆ, ಮಡಕಿ ಉಸುಳಿ, ಅನ್ನ-ಸಾರು ಮಾಡಲಾಗುವುದು. ಗೋಧಿ ಹುಗ್ಗಿ, ಸಜ್ಜಕ ಹಾಗೂ ಜಿಲೇಬಿ ಸಿಹಿ ನೀಡಲಾಗುವುದು. ಉಪಹಾರಕ್ಕೆ ಉಪ್ಪಿಟ್ಟು, ಶಿರಾ ಅವಲಕ್ಕಿ ಹಾಗೂ ಮಂಡಳ ವಗ್ಗರಣಿ, ರಾತ್ರಿ ಊಟಕ್ಕೆ ಬಿಸಿ ಬೇಳೆ ಬಾತ್, ಪುಳಿಯೊಗರೆ ನೀಡಲು ಇಂದಿನ ನಿರ್ಣಯಿಸಲಾಯಿತು.</p>.<p>ಸಂಸದ ರಮೇಶ ಕತ್ತಿ ಮಾತನಾಡಿ, ಮಧ್ಯಾಹ್ನ ಒಂದೂವರೆ ಲಕ್ಷ ಜನರಿಗೆ ಹಾಗೂ ರಾತ್ರಿ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಏಳು ಸ್ಥಳಗಳನ್ನು ನಿಗದಿಪಡಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ನಗರದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.</p>.<p>ಊಟೋಪಚಾರ ಸಮಿತಿಯ ಅಧ್ಯಕ್ಷ ಸಂಸದ ರಮೇಶ ಕತ್ತಿ ಹಾಗೂ ಜಿಲ್ಲಾಧಿಕಾರಿ ಏಕರೂಪ್ ಕೌರ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.</p>.<p>ಉತ್ತರ ಕರ್ನಾಟಕದ ತಿಂಡಿ, ತಿನಿಸು, ಜತೆಗೆ ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಊಟವನ್ನೂ ಸಹ ಒದಗಿಸಲು ತೀರ್ಮಾನಿಸಲಾಯಿತು. ಜೋಳ, ಸಜ್ಜಿ ರೊಟ್ಟಿ, ಚಪಾತಿ, ಗುರೆಳ್ಳು, ಶೇಂಗಾ ಹಿಂಡಿ, ಪುಟಾಣಿ ಚಟ್ನಿ, ಬದನೆಕಾಯಿ, ಹೆಸರುಕಾಳು ಪಲ್ಲೆ, ಮಡಕಿ ಉಸುಳಿ, ಅನ್ನ-ಸಾರು ಮಾಡಲಾಗುವುದು. ಗೋಧಿ ಹುಗ್ಗಿ, ಸಜ್ಜಕ ಹಾಗೂ ಜಿಲೇಬಿ ಸಿಹಿ ನೀಡಲಾಗುವುದು. ಉಪಹಾರಕ್ಕೆ ಉಪ್ಪಿಟ್ಟು, ಶಿರಾ ಅವಲಕ್ಕಿ ಹಾಗೂ ಮಂಡಳ ವಗ್ಗರಣಿ, ರಾತ್ರಿ ಊಟಕ್ಕೆ ಬಿಸಿ ಬೇಳೆ ಬಾತ್, ಪುಳಿಯೊಗರೆ ನೀಡಲು ಇಂದಿನ ನಿರ್ಣಯಿಸಲಾಯಿತು.</p>.<p>ಸಂಸದ ರಮೇಶ ಕತ್ತಿ ಮಾತನಾಡಿ, ಮಧ್ಯಾಹ್ನ ಒಂದೂವರೆ ಲಕ್ಷ ಜನರಿಗೆ ಹಾಗೂ ರಾತ್ರಿ 40 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಏಳು ಸ್ಥಳಗಳನ್ನು ನಿಗದಿಪಡಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>