<p><strong>ಬಾಗಲಕೋಟೆ: </strong>ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ತೃತೀಯ ಘಟಿಕೋತ್ಸವದಲ್ಲಿ 203 ಸ್ನಾತಕ, 72 ಸ್ನಾತಕೋತ್ತರ ಹಾಗೂ 2 ಪಿ.ಎಚ್ಡಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 41 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.</p>.<p>ಬಿ.ಎಸ್ಸಿ (ತೋಟಗಾರಿಕೆ)ಯಲ್ಲಿ ಬಿಹಾರದ ಅರವಾಲ ಜಿಲ್ಲೆಯ ಖಾಟಂಗಿ ಗ್ರಾಮದ ವಿದ್ಯಾರ್ಥಿ ವಿಷ್ಣುಕುಮಾರ್ ಮಿಶ್ರಾ 14, ಪುಷ್ಪಲತಾ ಎನ್. 3, ಮನೀಷ್ಕುಮಾರ್ 4, ಅರುಣ್ಕುಮಾರ್ ಬಿ. 3, ಗ್ಯೋಗಿ ಮರಿಯಂ ಜಾರ್ಜ್ 1, ಮನೋಜ್ ಎ.ಎಸ್. 1 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.<br /> ಎಂ.ಎಸ್ಸಿ (ತೋಟಗಾರಿಕೆ, ಕೀಟಶಾಸ್ತ್ರ)ಯಲ್ಲಿ ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ಕೊಡದ ಗ್ರಾಮದ ವಿದ್ಯಾರ್ಥಿ ರಾವುಲ್ಪೆಂಟ ಸತೀಶ್ 3, ಗೀತಾ ಶೆಟ್ಟಿ ಎಸ್.(ಹಣ್ಣು ವಿಜ್ಞಾನ) 3, ಅನಿಲ ರಾಠೋಡ (ಕೊಯ್ಲೋತ್ತರ ತಂತ್ರಜ್ಞಾನ) 2, ಲತಾ ಎಸ್.(ಪುಷ್ಪಕೃಷಿ ಮತ್ತು ಉದ್ಯಾನ ವಿನ್ಯಾಸ) 3, ಅಭಿಷೇಕ ಕಟಗಿ (ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ)1, ಪ್ರಿಯಾ ನಾಗನೂರ (ಸಸ್ಯರೋಗಶಾಸ್ತ್ರ) 1 ಮತ್ತು ದಿವ್ಯ ಬಿ.(ತರಕಾರಿ ವಿಜ್ಞಾನ) 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.<br /> <br /> ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯಾದ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.</p>.<p><strong>ಐಎಫ್ಎಸ್ ಗುರಿ</strong><br /> <strong>ಬಾಗಲಕೋಟೆ: </strong>ಐಎಫ್ಎಸ್ ಅಧಿಕಾರಿಯಾಗುವ ಗುರಿ ಹೊಂದಿರುವುದಾಗಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೃತೀಯ ಘಟಿಕೋತ್ಸವದಲ್ಲಿ ಬಿ.ಎಸ್ಸಿ (ತೋಟಗಾರಿಕೆ) 14 ಚಿನ್ನದ ಪದಕ ವಿಜೇತ ವಿದ್ಯಾರ್ಥಿ ವಿಷ್ಣುಕುಮಾರ ಮಿಶ್ರಾ ತಿಳಿಸಿದರು.<br /> <br /> ಬಿಹಾರ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶಿನಾಥ ಮಿಶ್ರಾ ಮತ್ತು ಸಿಯಾಮನಿ ಮಿಶ್ರಾ ದಂಪತಿಯ ಮಗನಾದ ವಿಷ್ಣುಕುಮಾರ ಮಿಶ್ರಾ, ಇದೀಗ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ಕೀಟಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.</p>.<p><strong>ವಿಜ್ಞಾನಿಯಾಗುವ ಬಯಕೆ</strong><br /> ವಿಜ್ಞಾನಿಯಾಗಿ ಗ್ರಾಮೀಣ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂಬ ಗುರಿ ಹೊಂದಿರುವುದಾಗಿ ಎಂ.ಎಸ್ಸಿ (ತೋಟಗಾರಿಕೆ, ಕೀಟಶಾಸ್ತ್ರ)ಯಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿ ರಾವುಲ್ಪೆಂಟ ಸತೀಶ್ ತಿಳಿಸಿದರು. <br /> <br /> ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ಕೊಡದ ಗ್ರಾಮದ ರಾವುಲ್ಪೆಂಟ ವೆಂಕಯ್ಯ ಮತ್ತು ಆದಿಲಕ್ಷ್ಮಿ ದಂಪತಿಯ ಮಗನಾದ ರಾವುಲ್ಪೆಂಟ ಸತೀಶ್ ಪ್ರಸ್ತುತ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ಡಿ ಪದವಿಗೆ ಪ್ರವೇಶ ಪಡೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ತೃತೀಯ ಘಟಿಕೋತ್ಸವದಲ್ಲಿ 203 ಸ್ನಾತಕ, 72 ಸ್ನಾತಕೋತ್ತರ ಹಾಗೂ 2 ಪಿ.ಎಚ್ಡಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 41 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.</p>.<p>ಬಿ.ಎಸ್ಸಿ (ತೋಟಗಾರಿಕೆ)ಯಲ್ಲಿ ಬಿಹಾರದ ಅರವಾಲ ಜಿಲ್ಲೆಯ ಖಾಟಂಗಿ ಗ್ರಾಮದ ವಿದ್ಯಾರ್ಥಿ ವಿಷ್ಣುಕುಮಾರ್ ಮಿಶ್ರಾ 14, ಪುಷ್ಪಲತಾ ಎನ್. 3, ಮನೀಷ್ಕುಮಾರ್ 4, ಅರುಣ್ಕುಮಾರ್ ಬಿ. 3, ಗ್ಯೋಗಿ ಮರಿಯಂ ಜಾರ್ಜ್ 1, ಮನೋಜ್ ಎ.ಎಸ್. 1 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.<br /> ಎಂ.ಎಸ್ಸಿ (ತೋಟಗಾರಿಕೆ, ಕೀಟಶಾಸ್ತ್ರ)ಯಲ್ಲಿ ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ಕೊಡದ ಗ್ರಾಮದ ವಿದ್ಯಾರ್ಥಿ ರಾವುಲ್ಪೆಂಟ ಸತೀಶ್ 3, ಗೀತಾ ಶೆಟ್ಟಿ ಎಸ್.(ಹಣ್ಣು ವಿಜ್ಞಾನ) 3, ಅನಿಲ ರಾಠೋಡ (ಕೊಯ್ಲೋತ್ತರ ತಂತ್ರಜ್ಞಾನ) 2, ಲತಾ ಎಸ್.(ಪುಷ್ಪಕೃಷಿ ಮತ್ತು ಉದ್ಯಾನ ವಿನ್ಯಾಸ) 3, ಅಭಿಷೇಕ ಕಟಗಿ (ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ)1, ಪ್ರಿಯಾ ನಾಗನೂರ (ಸಸ್ಯರೋಗಶಾಸ್ತ್ರ) 1 ಮತ್ತು ದಿವ್ಯ ಬಿ.(ತರಕಾರಿ ವಿಜ್ಞಾನ) 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.<br /> <br /> ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯಾದ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಡಾ.ಶಾಮನೂರು ಶಿವಶಂಕರಪ್ಪ ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.</p>.<p><strong>ಐಎಫ್ಎಸ್ ಗುರಿ</strong><br /> <strong>ಬಾಗಲಕೋಟೆ: </strong>ಐಎಫ್ಎಸ್ ಅಧಿಕಾರಿಯಾಗುವ ಗುರಿ ಹೊಂದಿರುವುದಾಗಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ತೃತೀಯ ಘಟಿಕೋತ್ಸವದಲ್ಲಿ ಬಿ.ಎಸ್ಸಿ (ತೋಟಗಾರಿಕೆ) 14 ಚಿನ್ನದ ಪದಕ ವಿಜೇತ ವಿದ್ಯಾರ್ಥಿ ವಿಷ್ಣುಕುಮಾರ ಮಿಶ್ರಾ ತಿಳಿಸಿದರು.<br /> <br /> ಬಿಹಾರ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶಿನಾಥ ಮಿಶ್ರಾ ಮತ್ತು ಸಿಯಾಮನಿ ಮಿಶ್ರಾ ದಂಪತಿಯ ಮಗನಾದ ವಿಷ್ಣುಕುಮಾರ ಮಿಶ್ರಾ, ಇದೀಗ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ಕೀಟಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.</p>.<p><strong>ವಿಜ್ಞಾನಿಯಾಗುವ ಬಯಕೆ</strong><br /> ವಿಜ್ಞಾನಿಯಾಗಿ ಗ್ರಾಮೀಣ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂಬ ಗುರಿ ಹೊಂದಿರುವುದಾಗಿ ಎಂ.ಎಸ್ಸಿ (ತೋಟಗಾರಿಕೆ, ಕೀಟಶಾಸ್ತ್ರ)ಯಲ್ಲಿ ಮೂರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿ ರಾವುಲ್ಪೆಂಟ ಸತೀಶ್ ತಿಳಿಸಿದರು. <br /> <br /> ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯ ಕೊಡದ ಗ್ರಾಮದ ರಾವುಲ್ಪೆಂಟ ವೆಂಕಯ್ಯ ಮತ್ತು ಆದಿಲಕ್ಷ್ಮಿ ದಂಪತಿಯ ಮಗನಾದ ರಾವುಲ್ಪೆಂಟ ಸತೀಶ್ ಪ್ರಸ್ತುತ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ಡಿ ಪದವಿಗೆ ಪ್ರವೇಶ ಪಡೆದುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>