<p>ವಿರಾಜಪೇಟೆ: ವಿರಾಜಪೇಟೆಯ ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನ ವಿಸರ್ಜನೋತ್ಸವವು ಭಾನುವಾರ ರಾತ್ರಿ 17 ಮಂಟಪಗಳ ಸಾಮೂಹಿಕ ಮೆರವಣಿಗೆಯೊಂದಿಗೆ ಶಾಂತಿಯುತವಾಗಿ ವೈಭವಪೂರ್ಣವಾಗಿ ಜರುಗಿತು.<br /> <br /> ಶನಿವಾರ ರಾತ್ರಿಯಿಂದಲೇ ಹಬ್ಬದ ವಾತಾವರಣವನ್ನು ಮೂಡಿಸಿದ್ದ ಪಟ್ಟಣದಲ್ಲಿ ವಿಸರ್ಜನೋತ್ಸವದ ಅಂಗವಾಗಿ ಗೌರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ ಎಲ್ಲಾ ಕಡೆಗಳಲ್ಲೂ ಭಕ್ತಾದಿಗಳು ಕಿಕ್ಕಿರಿದು ಸೇರಿದ್ದರು. ಎಲ್ಲ ಸ್ಥಳಗಳಲ್ಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.<br /> <br /> ವಿರಾಜಪೇಟೆಯ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ರಾತ್ರಿ 11ಗಂಟೆಗೆ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಲಾಯತು. ವಿದ್ಯುತ್ ಅಲಂಕೃತ ಮಂಟಪದಲ್ಲಿ ರಾತ್ರಿ ಗಣೇಶನ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಕೂರಿಸುತ್ತಿದ್ದಂತೆ ಭಕ್ತರು ಈಡುಗಾಯಿಯ ಮಳೆಯನ್ನೇ ಸುರಿಸಿದರು. <br /> ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮವೇ ನೆರೆದಿದ್ದರಿಂದ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟ ಸಾಧ್ಯವಾಗಿತ್ತು. ಮೆರವಣಿಗೆ ಪ್ರಾರಂಭದ ಮೊದಲು ರಾತ್ರಿ 10ಗಂಟೆಗೆ ದೇವಾಲಯದ ಗಡಿಯಾರ ಕಂಬದ ಬಳಿ ನಡೆದ ಸಿಡಿಮದ್ದು ಪ್ರದರ್ಶನ ಜನರನ್ನು ರಂಜಿಸಿತು.<br /> <br /> ಗಣಪತಿ ದೇವಾಲಯದ ಮಂಟಪ ಮೆರವಣಿಗೆಯಲ್ಲಿ ಸಾಗಿ ರಾತ್ರಿ 12:30ಕ್ಕೆ ಬಸವೇಶ್ವರ ದೇವಾಲಯವನ್ನು ತಲುಪುತ್ತಿದ್ದಂತೆ ಇತರ ಎಲ್ಲ ವಿದ್ಯುತ್ ಅಲಂಕೃತ ಮಂಟಪಗಳು ಸರದಿ ಪ್ರಕಾರ ಹಿಂಭಾಲಿಸಿದವು. <br /> <br /> ಮಂಟಪಗಳಿಗೆ ದಾರಿಯುದ್ದಕ್ಕೂ ಭಕ್ತಾದಿಗಳು ಪೂಜೆ ಸಲ್ಲಿಸಿದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಗೌರಿಕೆರೆಗೆ ಸೇರಿ 17ಮಂಟಪಗಳ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಿತು.<br /> <br /> ಮೆರವಣಿಗೆಯಲ್ಲಿ ಸಂಚಾರಿ ವಾದ್ಯಗೋಷ್ಠಿ, ನಾಸಿಕ್ ಬ್ಯಾಂಡ್, ಮೈಸೂರು ಬ್ಯಾಂಡ್, ಕೇರಳದ ಪೂಕೋಡ್ ಬ್ಯಾಂಡ್, ಚಲನ ವಲನದ ಹುಲಿ ಮತ್ತಿತರ ಮನರಂಜನೆ ತಂಡಗಳು ಪಾಲ್ಗೊಂಡಿದ್ದವು. 17 ವಿದ್ಯುತ್ ಅಲಂಕೃಂತ ಮಂಟಪಗಳು ರಾತ್ರಿ ಪಟ್ಟಣದಲ್ಲಿ ಕತ್ತಲನ್ನು ನಾಚಿಸುವಂತೆ ಮಾಡಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿರಾಜಪೇಟೆ: ವಿರಾಜಪೇಟೆಯ ವಿವಿಧೆಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶನ ವಿಸರ್ಜನೋತ್ಸವವು ಭಾನುವಾರ ರಾತ್ರಿ 17 ಮಂಟಪಗಳ ಸಾಮೂಹಿಕ ಮೆರವಣಿಗೆಯೊಂದಿಗೆ ಶಾಂತಿಯುತವಾಗಿ ವೈಭವಪೂರ್ಣವಾಗಿ ಜರುಗಿತು.<br /> <br /> ಶನಿವಾರ ರಾತ್ರಿಯಿಂದಲೇ ಹಬ್ಬದ ವಾತಾವರಣವನ್ನು ಮೂಡಿಸಿದ್ದ ಪಟ್ಟಣದಲ್ಲಿ ವಿಸರ್ಜನೋತ್ಸವದ ಅಂಗವಾಗಿ ಗೌರಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ ಎಲ್ಲಾ ಕಡೆಗಳಲ್ಲೂ ಭಕ್ತಾದಿಗಳು ಕಿಕ್ಕಿರಿದು ಸೇರಿದ್ದರು. ಎಲ್ಲ ಸ್ಥಳಗಳಲ್ಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.<br /> <br /> ವಿರಾಜಪೇಟೆಯ ಗಣಪತಿ ದೇವಾಲಯದ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ರಾತ್ರಿ 11ಗಂಟೆಗೆ ಸಾಮೂಹಿಕ ಮೆರವಣಿಗೆಗೆ ಚಾಲನೆ ನೀಡಲಾಯತು. ವಿದ್ಯುತ್ ಅಲಂಕೃತ ಮಂಟಪದಲ್ಲಿ ರಾತ್ರಿ ಗಣೇಶನ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಕೂರಿಸುತ್ತಿದ್ದಂತೆ ಭಕ್ತರು ಈಡುಗಾಯಿಯ ಮಳೆಯನ್ನೇ ಸುರಿಸಿದರು. <br /> ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮವೇ ನೆರೆದಿದ್ದರಿಂದ ಜನರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟ ಸಾಧ್ಯವಾಗಿತ್ತು. ಮೆರವಣಿಗೆ ಪ್ರಾರಂಭದ ಮೊದಲು ರಾತ್ರಿ 10ಗಂಟೆಗೆ ದೇವಾಲಯದ ಗಡಿಯಾರ ಕಂಬದ ಬಳಿ ನಡೆದ ಸಿಡಿಮದ್ದು ಪ್ರದರ್ಶನ ಜನರನ್ನು ರಂಜಿಸಿತು.<br /> <br /> ಗಣಪತಿ ದೇವಾಲಯದ ಮಂಟಪ ಮೆರವಣಿಗೆಯಲ್ಲಿ ಸಾಗಿ ರಾತ್ರಿ 12:30ಕ್ಕೆ ಬಸವೇಶ್ವರ ದೇವಾಲಯವನ್ನು ತಲುಪುತ್ತಿದ್ದಂತೆ ಇತರ ಎಲ್ಲ ವಿದ್ಯುತ್ ಅಲಂಕೃತ ಮಂಟಪಗಳು ಸರದಿ ಪ್ರಕಾರ ಹಿಂಭಾಲಿಸಿದವು. <br /> <br /> ಮಂಟಪಗಳಿಗೆ ದಾರಿಯುದ್ದಕ್ಕೂ ಭಕ್ತಾದಿಗಳು ಪೂಜೆ ಸಲ್ಲಿಸಿದರು. ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಗೌರಿಕೆರೆಗೆ ಸೇರಿ 17ಮಂಟಪಗಳ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೆ ನಡೆಯಿತು.<br /> <br /> ಮೆರವಣಿಗೆಯಲ್ಲಿ ಸಂಚಾರಿ ವಾದ್ಯಗೋಷ್ಠಿ, ನಾಸಿಕ್ ಬ್ಯಾಂಡ್, ಮೈಸೂರು ಬ್ಯಾಂಡ್, ಕೇರಳದ ಪೂಕೋಡ್ ಬ್ಯಾಂಡ್, ಚಲನ ವಲನದ ಹುಲಿ ಮತ್ತಿತರ ಮನರಂಜನೆ ತಂಡಗಳು ಪಾಲ್ಗೊಂಡಿದ್ದವು. 17 ವಿದ್ಯುತ್ ಅಲಂಕೃಂತ ಮಂಟಪಗಳು ರಾತ್ರಿ ಪಟ್ಟಣದಲ್ಲಿ ಕತ್ತಲನ್ನು ನಾಚಿಸುವಂತೆ ಮಾಡಿದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>