<p>ಕೋಲಾರ: ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ದಾನಿಗಳು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಶ್ರೀನಿವಾಸನ್ ಹೇಳಿದರು. <br /> <br /> ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಕಲ್ಲಂಡೂರು ಮಂಗಮ್ಮ ತಮ್ಮ ತಾಯಿಯ ಹೆಸರಿನಲ್ಲಿ ಮಕ್ಕಳಿಗೆ ಸುಮಾರು ರೂ.20 ಸಾವಿರ ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br /> <br /> ಮಕ್ಕಳು ಶ್ರದ್ಧೆ- ಬದ್ಧತೆಯಿಂದ ವಿದ್ಯೆಯನ್ನು ಕಲಿಯುವುದರ ಮೂಲಕ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.<br /> <br /> ಬೆಗ್ಲಿಹೊಸಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೀರಣ್ಣಗೌಡ , ದಾನಿಗಳು ನೀಡುವ ನೆರವನ್ನು ಪಡೆಯುತ್ತಾ, ಮಕ್ಕಳು ಸನ್ನಡತೆ ರೂಪಿಸಿಕೊಳ್ಳಬೇಕು ಎಂದರು.<br /> <br /> ಕ್ಲಸ್ಟರ್ನ 17 ಶಾಲೆಗಳ 650 ವಿದ್ಯಾರ್ಥಿಗಳಿಗೆ ರೂ. 1ಲಕ್ಷಕ್ಕೂ ಹೆಚ್ಚಿನ ಮೌಲ್ಯದ ನೆರವನ್ನು ಕೊಡಿಸಲಾಗಿದೆ ಎಂದರು.<br /> <br /> ಕಲ್ಲಂಡೂರಿನ ದಾನಿಗಳಾದ ಮಂಗಮ್ಮ, ಎಸ್.ನಾರಾಯಣಸ್ವಾಮಿ, ಸುನಂದಮ್ಮ, ವೀಣಾ, ನಾಗರತ್ನ, ರತ್ನಮ್ಮ, ಮಂಜುಳಾ ವೆಂಕಟಪ್ಪ, ಸುನಂದ, ಸಂಗೀತ, ಯಲ್ಲವ್ವ, ಕಲಾವತಿ ಉಪಸ್ಥಿತರಿದ್ದರು. ಪ್ರಭಾರಿ ಮುಖ್ಯ ಶಿಕ್ಷಕಿ ವೀಣಾ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ದಾನಿಗಳು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಶ್ರೀನಿವಾಸನ್ ಹೇಳಿದರು. <br /> <br /> ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಕಲ್ಲಂಡೂರು ಮಂಗಮ್ಮ ತಮ್ಮ ತಾಯಿಯ ಹೆಸರಿನಲ್ಲಿ ಮಕ್ಕಳಿಗೆ ಸುಮಾರು ರೂ.20 ಸಾವಿರ ಮೌಲ್ಯದ ನೋಟ್ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. <br /> <br /> ಮಕ್ಕಳು ಶ್ರದ್ಧೆ- ಬದ್ಧತೆಯಿಂದ ವಿದ್ಯೆಯನ್ನು ಕಲಿಯುವುದರ ಮೂಲಕ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.<br /> <br /> ಬೆಗ್ಲಿಹೊಸಹಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವೀರಣ್ಣಗೌಡ , ದಾನಿಗಳು ನೀಡುವ ನೆರವನ್ನು ಪಡೆಯುತ್ತಾ, ಮಕ್ಕಳು ಸನ್ನಡತೆ ರೂಪಿಸಿಕೊಳ್ಳಬೇಕು ಎಂದರು.<br /> <br /> ಕ್ಲಸ್ಟರ್ನ 17 ಶಾಲೆಗಳ 650 ವಿದ್ಯಾರ್ಥಿಗಳಿಗೆ ರೂ. 1ಲಕ್ಷಕ್ಕೂ ಹೆಚ್ಚಿನ ಮೌಲ್ಯದ ನೆರವನ್ನು ಕೊಡಿಸಲಾಗಿದೆ ಎಂದರು.<br /> <br /> ಕಲ್ಲಂಡೂರಿನ ದಾನಿಗಳಾದ ಮಂಗಮ್ಮ, ಎಸ್.ನಾರಾಯಣಸ್ವಾಮಿ, ಸುನಂದಮ್ಮ, ವೀಣಾ, ನಾಗರತ್ನ, ರತ್ನಮ್ಮ, ಮಂಜುಳಾ ವೆಂಕಟಪ್ಪ, ಸುನಂದ, ಸಂಗೀತ, ಯಲ್ಲವ್ವ, ಕಲಾವತಿ ಉಪಸ್ಥಿತರಿದ್ದರು. ಪ್ರಭಾರಿ ಮುಖ್ಯ ಶಿಕ್ಷಕಿ ವೀಣಾ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>