<p><strong>ಯಲಹಂಕ: </strong>‘ಎತ್ತಿನಹೊಳೆ ಯೋಜನೆ ಜಾರಿಗೆ ಎಷ್ಟೇ ವಿರೋಧವಿದ್ದರೂ ಸಹ, ಜನರಿಗೆ ಶುದ್ಧಕುಡಿಯುವ ನೀರು ಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಪೆಟ್ರೋ ಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.<br /> <br /> ಇಲ್ಲಿನ ಹಳೇನಗರದ ಮಸೀದಿ ರಸ್ತೆಯಲ್ಲಿ ಭಾನುವಾರ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉರ್ದುಶಾಲೆಯ ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.<br /> <br /> ‘ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಕಲುಷಿತ ನೀರನ್ನು ಕುಡಿದ 18 ವರ್ಷದ ಯುವಕರು 60 ವರ್ಷದವರಂತೆ ಕಾಣುತ್ತಿದ್ದು, ಕೆಲವರಿಗೆ ಹಲ್ಲುಗಳು ಉದುರಿವೆ. ಮತ್ತೆ ಕೆಲವರು ಅಂಗಹೀನತೆಯಿಂದ ನರಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಜನರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಆ ಭಾಗದ ಜನರಿಗೆ ಶುದ್ಧಕುಡಿಯುವ ನೀರು ಕೊಡಲು ಸಂಕಲ್ಪ ಮಾಡಿದ್ದೇನೆ’ ಎಂದರು.</p>.<p>ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಎನ್.ರವಿಕುಮಾರ್ ಮಾತನಾಡಿ, ‘ಈ ಸಮುದಾಯ ಭವನವನ್ನು ವಕ್ಫ್ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಆದರೂ, ಈ ಆಸ್ತಿಯ ಆಡಳಿತ ಮಂಡಳಿಯವರು ಎಲ್ಲ ವರ್ಗದ ಜನರಿಗೂ ಉಪಯೋಗವಾಗುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ’ ಎಂದರು.<br /> <br /> ಬಿಬಿಎಂಪಿ ಸದಸ್ಯ ವೈಎನ್.ಅಶ್ವಥ್, ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ, ಕೆಪಿಸಿಸಿ ಸದಸ್ಯರಾದ ಸಿ.ವೆಂಕಟೇಶ್, ಮು.ಕೃಷ್ಣಮೂರ್ತಿ, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಭಾಷಾ, ಮಹಿಳಾ ಅಧ್ಯಕ್ಷೆ ಪ್ರೇಮಲತಾ, ಎಸ್ಸಿ ಘಟಕದ ಅಧ್ಯಕ್ಷ ಎನ್.ಎಂ.ಶ್ರೀನಿವಾಸ್ ಇದ್ದರು.<br /> <br /> <strong>ನನಗೆ ಸುಳ್ಳು ಹೇಳಲು ಬರುವುದಿಲ್ಲ: ಮೊಯಿಲಿ<br /> ದೊಡ್ಡಬಳ್ಳಾಪುರ:</strong> ನಾನು ಸುಳ್ಳು ಹೇಳುತ್ತಲೇ ಕಾಲಕಳೆದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಲು ಸಾಧ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.</p>.<p>ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುಳ್ಳು ಹೇಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದವರೆಲ್ಲ ಇವತ್ತು ಮೂಲೆಗುಂಪಾಗಿರುವುದು ಇತಿಹಾಸ. ಬಿಜೆಪಿಯವರಂತೆ ನನಗೆ ಭಾಷಣ ಮಾಡಲು ಬರುವುದಿಲ್ಲ. ಕೆಲಸ ಮಾಡಿತೋರಿಸುವುದಷ್ಟೇ ಬರುತ್ತದೆ’ ಎಂದರು.<br /> <br /> ‘ನಾನು ಈ ಕ್ಷೇತ್ರಕ್ಕೆ ವಲಸೆ ಬಂದ ಹಕ್ಕಿ ಅಲ್ಲ. ಕನ್ನಡ ನಾಡಿನ ಮನುಷ್ಯ. ನನ್ನ ಬಗ್ಗೆ ಟೀಕೆ ಮಾಡುವ ಅನಂತ್ಕುಮಾರ್ ಸಹ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಲಸೆ ಬಂದವರೆ’ ಎಂದರು.<br /> <br /> ‘ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣವನ್ನು ಹಿಂದಕ್ಕೆ ಇಡಬೇಕು, ನೀರಿನ ಯೋಜನೆ ಮುಂದಿಡಬೇಕು, ಕರಾಳ ದಿನ, ಬಂದ್ ಆಚರಣೆ ಮಾಡುವದರಲ್ಲಿ ಅರ್ಥ ಇಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>‘ಎತ್ತಿನಹೊಳೆ ಯೋಜನೆ ಜಾರಿಗೆ ಎಷ್ಟೇ ವಿರೋಧವಿದ್ದರೂ ಸಹ, ಜನರಿಗೆ ಶುದ್ಧಕುಡಿಯುವ ನೀರು ಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಪೆಟ್ರೋ ಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.<br /> <br /> ಇಲ್ಲಿನ ಹಳೇನಗರದ ಮಸೀದಿ ರಸ್ತೆಯಲ್ಲಿ ಭಾನುವಾರ ನೂತನ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಉರ್ದುಶಾಲೆಯ ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.<br /> <br /> ‘ಬಾಗೇಪಲ್ಲಿ, ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಕಲುಷಿತ ನೀರನ್ನು ಕುಡಿದ 18 ವರ್ಷದ ಯುವಕರು 60 ವರ್ಷದವರಂತೆ ಕಾಣುತ್ತಿದ್ದು, ಕೆಲವರಿಗೆ ಹಲ್ಲುಗಳು ಉದುರಿವೆ. ಮತ್ತೆ ಕೆಲವರು ಅಂಗಹೀನತೆಯಿಂದ ನರಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಜನರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಆ ಭಾಗದ ಜನರಿಗೆ ಶುದ್ಧಕುಡಿಯುವ ನೀರು ಕೊಡಲು ಸಂಕಲ್ಪ ಮಾಡಿದ್ದೇನೆ’ ಎಂದರು.</p>.<p>ಪವರ್ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ನ ಕಾರ್ಯನಿರ್ವಾಹಕ ನಿರ್ದೇಶಕ ಎನ್.ರವಿಕುಮಾರ್ ಮಾತನಾಡಿ, ‘ಈ ಸಮುದಾಯ ಭವನವನ್ನು ವಕ್ಫ್ಗೆ ಸೇರಿದ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. ಆದರೂ, ಈ ಆಸ್ತಿಯ ಆಡಳಿತ ಮಂಡಳಿಯವರು ಎಲ್ಲ ವರ್ಗದ ಜನರಿಗೂ ಉಪಯೋಗವಾಗುವಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ’ ಎಂದರು.<br /> <br /> ಬಿಬಿಎಂಪಿ ಸದಸ್ಯ ವೈಎನ್.ಅಶ್ವಥ್, ಕಾಂಗ್ರೆಸ್ ಮುಖಂಡ ಎಂ.ಎನ್.ಗೋಪಾಲಕೃಷ್ಣ, ಕೆಪಿಸಿಸಿ ಸದಸ್ಯರಾದ ಸಿ.ವೆಂಕಟೇಶ್, ಮು.ಕೃಷ್ಣಮೂರ್ತಿ, ಯಲಹಂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ.ಭಾಷಾ, ಮಹಿಳಾ ಅಧ್ಯಕ್ಷೆ ಪ್ರೇಮಲತಾ, ಎಸ್ಸಿ ಘಟಕದ ಅಧ್ಯಕ್ಷ ಎನ್.ಎಂ.ಶ್ರೀನಿವಾಸ್ ಇದ್ದರು.<br /> <br /> <strong>ನನಗೆ ಸುಳ್ಳು ಹೇಳಲು ಬರುವುದಿಲ್ಲ: ಮೊಯಿಲಿ<br /> ದೊಡ್ಡಬಳ್ಳಾಪುರ:</strong> ನಾನು ಸುಳ್ಳು ಹೇಳುತ್ತಲೇ ಕಾಲಕಳೆದಿದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವನಾಗಲು ಸಾಧ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಹಾಗೂ ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪ ಮೊಯಿಲಿ ಹೇಳಿದರು.</p>.<p>ನಗರದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುಳ್ಳು ಹೇಳಿ ಅಧಿಕಾರಕ್ಕೆ ಬರಲು ಪ್ರಯತ್ನಿಸಿದವರೆಲ್ಲ ಇವತ್ತು ಮೂಲೆಗುಂಪಾಗಿರುವುದು ಇತಿಹಾಸ. ಬಿಜೆಪಿಯವರಂತೆ ನನಗೆ ಭಾಷಣ ಮಾಡಲು ಬರುವುದಿಲ್ಲ. ಕೆಲಸ ಮಾಡಿತೋರಿಸುವುದಷ್ಟೇ ಬರುತ್ತದೆ’ ಎಂದರು.<br /> <br /> ‘ನಾನು ಈ ಕ್ಷೇತ್ರಕ್ಕೆ ವಲಸೆ ಬಂದ ಹಕ್ಕಿ ಅಲ್ಲ. ಕನ್ನಡ ನಾಡಿನ ಮನುಷ್ಯ. ನನ್ನ ಬಗ್ಗೆ ಟೀಕೆ ಮಾಡುವ ಅನಂತ್ಕುಮಾರ್ ಸಹ ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಲಸೆ ಬಂದವರೆ’ ಎಂದರು.<br /> <br /> ‘ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣವನ್ನು ಹಿಂದಕ್ಕೆ ಇಡಬೇಕು, ನೀರಿನ ಯೋಜನೆ ಮುಂದಿಡಬೇಕು, ಕರಾಳ ದಿನ, ಬಂದ್ ಆಚರಣೆ ಮಾಡುವದರಲ್ಲಿ ಅರ್ಥ ಇಲ್ಲ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>