<p><strong>ಮಗುವನ್ನು ಕರೆ ತಂದ ಶಾರೂಕ್<br /> ಮುಂಬೈ (ಪಿಟಿಐ): </strong>ಮಗು ಅಬ್ರಾಂನನ್ನು ಮನೆಗೆ ಕರೆತಂದಿರುವ ಬಾಲಿವುಡ್ ನಟ ಶಾರೂಕ್ ಖಾನ್, ಈ ಮಗುವನ್ನು ಬಾಡಿಗೆ ತಾಯಿಯ ಮೂಲಕ ಪಡೆದಿದ್ದನ್ನು ಒಪ್ಪಿಕೊಂಡಂತಾಗಿದೆ. ಆದರೆ, ಮಗುವಿನ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸಲಾಗಿತ್ತು ಎಂಬುದನ್ನು ಅವರು ಅಲ್ಲಗಳೆದಿದ್ದಾರೆ.<br /> <br /> <strong>ತರೂರ್ ಕಚೇರಿ ಮೇಲೆ ದಾಳಿ<br /> ತಿರುವನಂತಪುರ (ಪಿಟಿಐ)</strong>: ಕೇಂದ್ರ ಸಚಿವ ಶಶಿ ತರೂರ್ ಅವರ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಲಾಗಿದ್ದು, ಕಚೇರಿ ಮುಂದೆ ನಿಲ್ಲಿಸಿದ ಬೈಕ್ಗೆ ಹಾನಿಯಾಗಿದೆ. ಸಿಪಿಐನ ಯುವ ಘಟಕವಾದ ಅಖಿಲ ಭಾರತ ಯುವ ಒಕ್ಕೂಟ (ಎಐವೈಎಫ್) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ಈ ಘಟನೆ ನಡೆದಾಗ ತರೂರು ಅವರು ಕಚೇರಿಯಲ್ಲಿ ಇರಲಿಲ್ಲ ಎಂದು ಕಚೇರಿ ಮೂಲಗಳು ಹೇಳಿವೆ.<br /> <br /> <strong>ಲೈಂಗಿಕ ದೌರ್ಜನ್ಯ: ರಾಘವ್ಜೀ ಬಂಧನ<br /> ಭೋಪಾಲ್ (ಪಿಟಿಐ):</strong> ಮನೆ ಕೆಲಸದವನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ಮಾಜಿ ಹಣಕಾಸು ಸಚಿವ ರಾಘವ್ಜೀ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.<br /> <br /> <strong>ಕಟ್ಟಡ ಕುಸಿತ: ಸತ್ತವರ ಸಂಖ್ಯೆ 17ಕ್ಕೆ<br /> ಹೈದರಾಬಾದ್:</strong> ಸಿಕಂದರಾಬಾದ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ `ಸಿಟಿ ಸ್ಟಾರ್' ಹೋಟೆಲ್ನ ಮೂರು ಮಹಡಿಗಳ ಹಳೆಯ ಕಟ್ಟಡ ಕುಸಿತದ ದುರಂತದಲ್ಲಿ ಸತ್ತವರ ಸಂಖ್ಯೆ 17ಕ್ಕೆ ಏರಿದೆ.<br /> <br /> ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿದ್ದ ಹೋಟೆಲ್ನ ವ್ಯವಸ್ಥಾಪಕ ಅಲಿ ರಜಾಕ್, ಬಾಣಸಿಗರಾದ ವೆಂಕಟೇಶ್, ಕಿರಣ್ ಅವರ ಶವಗಳು ಮತ್ತು ಗುರುತು ಪತ್ತೆಯಾಗದ ಮತ್ತೊಂದು ಶವವನ್ನು ಹೊರತೆಗೆಯಲಾಗಿದೆ.<br /> <br /> <strong>ಜಾರ್ಖಂಡ್ನಲ್ಲಿ ಜೆಎಂಎಂ ಸರ್ಕಾರ?<br /> ರಾಂಚಿ, ಜಾರ್ಖಂಡ್ (ಐಎಎನ್ಎಸ್, ಪಿಟಿಐ): </strong>ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಗಳವಾರ ರಾಜ್ಯಪಾಲ ಸೈಯದ್ ಅಹಮದ್ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಹಕ್ಕು ಮಂಡಿಸಿದ್ದು, ರಾಜ್ಯದಲ್ಲಿ ಜೆಎಂಎಂ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಗುವನ್ನು ಕರೆ ತಂದ ಶಾರೂಕ್<br /> ಮುಂಬೈ (ಪಿಟಿಐ): </strong>ಮಗು ಅಬ್ರಾಂನನ್ನು ಮನೆಗೆ ಕರೆತಂದಿರುವ ಬಾಲಿವುಡ್ ನಟ ಶಾರೂಕ್ ಖಾನ್, ಈ ಮಗುವನ್ನು ಬಾಡಿಗೆ ತಾಯಿಯ ಮೂಲಕ ಪಡೆದಿದ್ದನ್ನು ಒಪ್ಪಿಕೊಂಡಂತಾಗಿದೆ. ಆದರೆ, ಮಗುವಿನ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸಲಾಗಿತ್ತು ಎಂಬುದನ್ನು ಅವರು ಅಲ್ಲಗಳೆದಿದ್ದಾರೆ.<br /> <br /> <strong>ತರೂರ್ ಕಚೇರಿ ಮೇಲೆ ದಾಳಿ<br /> ತಿರುವನಂತಪುರ (ಪಿಟಿಐ)</strong>: ಕೇಂದ್ರ ಸಚಿವ ಶಶಿ ತರೂರ್ ಅವರ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಲಾಗಿದ್ದು, ಕಚೇರಿ ಮುಂದೆ ನಿಲ್ಲಿಸಿದ ಬೈಕ್ಗೆ ಹಾನಿಯಾಗಿದೆ. ಸಿಪಿಐನ ಯುವ ಘಟಕವಾದ ಅಖಿಲ ಭಾರತ ಯುವ ಒಕ್ಕೂಟ (ಎಐವೈಎಫ್) ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ಈ ಘಟನೆ ನಡೆದಾಗ ತರೂರು ಅವರು ಕಚೇರಿಯಲ್ಲಿ ಇರಲಿಲ್ಲ ಎಂದು ಕಚೇರಿ ಮೂಲಗಳು ಹೇಳಿವೆ.<br /> <br /> <strong>ಲೈಂಗಿಕ ದೌರ್ಜನ್ಯ: ರಾಘವ್ಜೀ ಬಂಧನ<br /> ಭೋಪಾಲ್ (ಪಿಟಿಐ):</strong> ಮನೆ ಕೆಲಸದವನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ಮಾಜಿ ಹಣಕಾಸು ಸಚಿವ ರಾಘವ್ಜೀ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.<br /> <br /> <strong>ಕಟ್ಟಡ ಕುಸಿತ: ಸತ್ತವರ ಸಂಖ್ಯೆ 17ಕ್ಕೆ<br /> ಹೈದರಾಬಾದ್:</strong> ಸಿಕಂದರಾಬಾದ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ `ಸಿಟಿ ಸ್ಟಾರ್' ಹೋಟೆಲ್ನ ಮೂರು ಮಹಡಿಗಳ ಹಳೆಯ ಕಟ್ಟಡ ಕುಸಿತದ ದುರಂತದಲ್ಲಿ ಸತ್ತವರ ಸಂಖ್ಯೆ 17ಕ್ಕೆ ಏರಿದೆ.<br /> <br /> ಕಟ್ಟಡದ ಅವಶೇಷದ ಅಡಿಯಲ್ಲಿ ಸಿಲುಕಿದ್ದ ಹೋಟೆಲ್ನ ವ್ಯವಸ್ಥಾಪಕ ಅಲಿ ರಜಾಕ್, ಬಾಣಸಿಗರಾದ ವೆಂಕಟೇಶ್, ಕಿರಣ್ ಅವರ ಶವಗಳು ಮತ್ತು ಗುರುತು ಪತ್ತೆಯಾಗದ ಮತ್ತೊಂದು ಶವವನ್ನು ಹೊರತೆಗೆಯಲಾಗಿದೆ.<br /> <br /> <strong>ಜಾರ್ಖಂಡ್ನಲ್ಲಿ ಜೆಎಂಎಂ ಸರ್ಕಾರ?<br /> ರಾಂಚಿ, ಜಾರ್ಖಂಡ್ (ಐಎಎನ್ಎಸ್, ಪಿಟಿಐ): </strong>ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಗಳವಾರ ರಾಜ್ಯಪಾಲ ಸೈಯದ್ ಅಹಮದ್ ಅವರನ್ನು ಭೇಟಿಯಾಗಿ, ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ತಮ್ಮ ಹಕ್ಕು ಮಂಡಿಸಿದ್ದು, ರಾಜ್ಯದಲ್ಲಿ ಜೆಎಂಎಂ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>