<p>ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): ದೇವಯಾನಿ ಖೋಬ್ರಾಗಡೆ ಅವರ ಮನೆ ಕೆಲಸ ಮಾಡುತ್ತಿದ್ದ ಸಂಗೀತಾ ರಿಚರ್ಡ್ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಅಮೆರಿಕ ಮನೆ ಕೆಲಸದವರ ಸಂಘಟನೆಗಳ ಸದಸ್ಯರು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಎದುರು ಶನಿವಾರ ಮತಪ್ರದರ್ಶನ ನಡೆಸಿದರು.<br /> <br /> ರಾಜತಾಂತ್ರಿಕ ವಿನಾಯ್ತಿ ನೆಪದಲ್ಲಿ ದೇವಯಾನಿ ಅವರು ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂಗೀತಾ ಅವರಿಗೆ ನ್ಯಾಯ ದೊರಕಬೇಕಾದರೆ ದೇವಯಾನಿ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.<br /> <br /> <strong>ಖರ್ಷಿದ್ ಹೇಳಿಕೆಗೆ ಸ್ವಾಗತ: </strong> ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಬಂಧನದಿಂದ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಭಾರತ ಮತ್ತು ಅಮೆರಿಕ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಾರದೆಂಬ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯನ್ನು ಅಮೆರಿಕ ವಿದೇಶಾಂಗ ಖಾತೆಯ ವಕ್ತಾರೆ ಜೆನ್ ಸಾಕಿ ಸ್ವಾಗತಿಸಿದ್ದಾರೆ.<br /> <br /> <strong>ಅಮೆರಿಕ ಪುನರುಚ್ಚಾರ:</strong> ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿದ್ದರೂ ಅವರ ವಿರುದ್ಧದ ವೀಸಾ ವಂಚನೆ ಪ್ರಕರಣವನ್ನು ರದ್ದುಪಡಿಸುವುದಿಲ್ಲ ಎಂದು ಅಮೆರಿಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.<br /> <br /> ದೇವಯಾನಿ ವಿಶ್ವಸಂಸ್ಥೆಗೆ ವರ್ಗಾವಣೆ ಆಗಿರುವುದರಿಂದ ಅವರಿಗೆ ರಾಜತಾಂತ್ರಿಕ ವಿನಾಯ್ತಿಯ ಸೌಲಭ್ಯವಿದ್ದರೂ, ವೀಸಾ ವಂಚನೆ ಎಸಗುವಾಗ ಈ ಸೌಲಭ್ಯ ಇಲ್ಲದೆ ಇದ್ದುದರಿಂದ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಆದರೂ ಭಾರತ ಮತ್ತು ಅಮೆರಿಕ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಮಾತನಾಡುತ್ತಿವೆ.<br /> <br /> <strong>ವಿಶ್ವಸಂಸ್ಥೆ ಪರಿಶೀಲನೆ</strong>: ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿರುವ ಅಧಿಸೂಚನೆ ಭಾರತ ಸರ್ಕಾರದಿಂದ ಬಂದಿದ್ದು, ನಿಯಮಗಳ ಪ್ರಕಾರ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಫರಾನ್ ಹಕ್ ತಿಳಿಸಿದ್ದಾರೆ.<br /> <br /> ದೇವಯಾನಿ ವಿರುದ್ಧದ ಕ್ರಿಮಿನಲ್ ಪ್ರಕರಣವು ವಿಶ್ವಸಂಸ್ಥೆಯ ಮಾನ್ಯತಾ ಪತ್ರ ಪಡೆಯಲು ಅಡ್ಡಿಯಾಗುವ ವಿಚಾರ ಮತ್ತು ರಾಜತಾಂತ್ರಿಕ ವಿನಾಯ್ತಿ ಸೌಲಭ್ಯದ ಬಗ್ಗೆ ತಾವು ಏನನ್ನೂ ಹೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.<br /> <br /> <strong>ಭಾರತದ ಮಾಧ್ಯಮಗಳ ಟೀಕೆ:</strong> ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರು ಅಪರಾಧವೆಸಗಿದ್ದರೂ ಭಾರತದ ಮಾಧ್ಯಮಗಳು ವಾಸ್ತವಾಂಶಕ್ಕೆ ವಿರುದ್ಧವಾದ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಅಮೆರಿಕದ ಮಾಧ್ಯಮಗಳು ಟೀಕಿಸಿವೆ.<br /> <br /> ವಾಸ್ತವಾಂಶವನ್ನು ತಿರುಚಿ ವರದಿ ಮಾಡಿರುವ ಭಾರತದ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಆರೋಪಿಸಿದೆ.<br /> <br /> ಭಾರತದ ಪ್ರಧಾನಿ ಮತ್ತು ಇತರ ಸಚಿವರು, ದೇವಯಾನಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿರುವುದನ್ನು ಕೆಲವು ಅಂಕಣಕಾರರು ಟೀಕಿಸಿದ್ದಾರೆ.<br /> <br /> <strong>ಪಾಕ್ ಪತ್ರಿಕೆ ಮೆಚ್ಚುಗೆ</strong><br /> (ಇಸ್ಲಾಮಾಬಾದ್ ವರದಿ): ಮಹಿಳಾ ರಾಜತಾಂತ್ರಿಕ ಅಧಿಕಾರಿಯನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಕ್ಕೆ ಭಾರತ ನೀಡಿದ ದಿಟ್ಟ ಪ್ರತಿಕ್ರಿಯೆಯನ್ನು ನೋಡಿ ಪಾಕಿಸ್ತಾನ ಪಾಠ ಕಲಿಯಬೇಕು ಎಂದು ‘ಡೈಲಿ ಟೈಮ್ಸ್’ ಹೇಳಿದೆ.</p>.<p>ದೇಶದ ಗೌರವಕ್ಕೆ ಧಕ್ಕೆಯಾದಾಗ ಭಾರತದ ಜನತೆ ಮತ್ತು ಸರ್ಕಾರ ಕಠೋರವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಇದನ್ನು ನೋಡಿ ಕಲಿಯಬೇಕು ಎಂದು ಪತ್ರಿಕೆ ಸಂಪಾದಕೀಯದಲ್ಲಿ ಸಲಹೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಷಿಂಗ್ಟನ್ (ಪಿಟಿಐ, ಐಎಎನ್ಎಸ್): ದೇವಯಾನಿ ಖೋಬ್ರಾಗಡೆ ಅವರ ಮನೆ ಕೆಲಸ ಮಾಡುತ್ತಿದ್ದ ಸಂಗೀತಾ ರಿಚರ್ಡ್ ಅವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಅಮೆರಿಕ ಮನೆ ಕೆಲಸದವರ ಸಂಘಟನೆಗಳ ಸದಸ್ಯರು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಎದುರು ಶನಿವಾರ ಮತಪ್ರದರ್ಶನ ನಡೆಸಿದರು.<br /> <br /> ರಾಜತಾಂತ್ರಿಕ ವಿನಾಯ್ತಿ ನೆಪದಲ್ಲಿ ದೇವಯಾನಿ ಅವರು ಪ್ರಕರಣದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸಂಗೀತಾ ಅವರಿಗೆ ನ್ಯಾಯ ದೊರಕಬೇಕಾದರೆ ದೇವಯಾನಿ ಅವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.<br /> <br /> <strong>ಖರ್ಷಿದ್ ಹೇಳಿಕೆಗೆ ಸ್ವಾಗತ: </strong> ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಬಂಧನದಿಂದ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಭಾರತ ಮತ್ತು ಅಮೆರಿಕ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಬಾರದೆಂಬ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯನ್ನು ಅಮೆರಿಕ ವಿದೇಶಾಂಗ ಖಾತೆಯ ವಕ್ತಾರೆ ಜೆನ್ ಸಾಕಿ ಸ್ವಾಗತಿಸಿದ್ದಾರೆ.<br /> <br /> <strong>ಅಮೆರಿಕ ಪುನರುಚ್ಚಾರ:</strong> ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿದ್ದರೂ ಅವರ ವಿರುದ್ಧದ ವೀಸಾ ವಂಚನೆ ಪ್ರಕರಣವನ್ನು ರದ್ದುಪಡಿಸುವುದಿಲ್ಲ ಎಂದು ಅಮೆರಿಕ ಮತ್ತೊಮ್ಮೆ ಸ್ಪಷ್ಟಪಡಿಸಿದೆ.<br /> <br /> ದೇವಯಾನಿ ವಿಶ್ವಸಂಸ್ಥೆಗೆ ವರ್ಗಾವಣೆ ಆಗಿರುವುದರಿಂದ ಅವರಿಗೆ ರಾಜತಾಂತ್ರಿಕ ವಿನಾಯ್ತಿಯ ಸೌಲಭ್ಯವಿದ್ದರೂ, ವೀಸಾ ವಂಚನೆ ಎಸಗುವಾಗ ಈ ಸೌಲಭ್ಯ ಇಲ್ಲದೆ ಇದ್ದುದರಿಂದ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಆದರೂ ಭಾರತ ಮತ್ತು ಅಮೆರಿಕ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಮಾತನಾಡುತ್ತಿವೆ.<br /> <br /> <strong>ವಿಶ್ವಸಂಸ್ಥೆ ಪರಿಶೀಲನೆ</strong>: ದೇವಯಾನಿ ಅವರನ್ನು ವಿಶ್ವಸಂಸ್ಥೆಗೆ ವರ್ಗಾವಣೆ ಮಾಡಿರುವ ಅಧಿಸೂಚನೆ ಭಾರತ ಸರ್ಕಾರದಿಂದ ಬಂದಿದ್ದು, ನಿಯಮಗಳ ಪ್ರಕಾರ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ವಕ್ತಾರ ಫರಾನ್ ಹಕ್ ತಿಳಿಸಿದ್ದಾರೆ.<br /> <br /> ದೇವಯಾನಿ ವಿರುದ್ಧದ ಕ್ರಿಮಿನಲ್ ಪ್ರಕರಣವು ವಿಶ್ವಸಂಸ್ಥೆಯ ಮಾನ್ಯತಾ ಪತ್ರ ಪಡೆಯಲು ಅಡ್ಡಿಯಾಗುವ ವಿಚಾರ ಮತ್ತು ರಾಜತಾಂತ್ರಿಕ ವಿನಾಯ್ತಿ ಸೌಲಭ್ಯದ ಬಗ್ಗೆ ತಾವು ಏನನ್ನೂ ಹೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.<br /> <br /> <strong>ಭಾರತದ ಮಾಧ್ಯಮಗಳ ಟೀಕೆ:</strong> ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರು ಅಪರಾಧವೆಸಗಿದ್ದರೂ ಭಾರತದ ಮಾಧ್ಯಮಗಳು ವಾಸ್ತವಾಂಶಕ್ಕೆ ವಿರುದ್ಧವಾದ ಸುದ್ದಿಗಳನ್ನು ಪ್ರಕಟಿಸುತ್ತಿವೆ ಎಂದು ಅಮೆರಿಕದ ಮಾಧ್ಯಮಗಳು ಟೀಕಿಸಿವೆ.<br /> <br /> ವಾಸ್ತವಾಂಶವನ್ನು ತಿರುಚಿ ವರದಿ ಮಾಡಿರುವ ಭಾರತದ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಆರೋಪಿಸಿದೆ.<br /> <br /> ಭಾರತದ ಪ್ರಧಾನಿ ಮತ್ತು ಇತರ ಸಚಿವರು, ದೇವಯಾನಿ ಅವರನ್ನು ಸಮರ್ಥಿಸಿಕೊಂಡು ಮಾತನಾಡಿರುವುದನ್ನು ಕೆಲವು ಅಂಕಣಕಾರರು ಟೀಕಿಸಿದ್ದಾರೆ.<br /> <br /> <strong>ಪಾಕ್ ಪತ್ರಿಕೆ ಮೆಚ್ಚುಗೆ</strong><br /> (ಇಸ್ಲಾಮಾಬಾದ್ ವರದಿ): ಮಹಿಳಾ ರಾಜತಾಂತ್ರಿಕ ಅಧಿಕಾರಿಯನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದಕ್ಕೆ ಭಾರತ ನೀಡಿದ ದಿಟ್ಟ ಪ್ರತಿಕ್ರಿಯೆಯನ್ನು ನೋಡಿ ಪಾಕಿಸ್ತಾನ ಪಾಠ ಕಲಿಯಬೇಕು ಎಂದು ‘ಡೈಲಿ ಟೈಮ್ಸ್’ ಹೇಳಿದೆ.</p>.<p>ದೇಶದ ಗೌರವಕ್ಕೆ ಧಕ್ಕೆಯಾದಾಗ ಭಾರತದ ಜನತೆ ಮತ್ತು ಸರ್ಕಾರ ಕಠೋರವಾಗಿ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ಇದನ್ನು ನೋಡಿ ಕಲಿಯಬೇಕು ಎಂದು ಪತ್ರಿಕೆ ಸಂಪಾದಕೀಯದಲ್ಲಿ ಸಲಹೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>