<p><strong>ಹೈದರಾಬಾದ್ (ಐಎಎನ್ಎಸ್): </strong> ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಭಾನುವಾರ ಆಂಧ್ರಪ್ರದೇಶದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.<br /> <br /> ಗ್ರಾಮ, ಪಟ್ಟಣಗಳಲ್ಲಿ ಹಬ್ಬದ ವಾತಾವರಣವಿತ್ತು. ಮನೆಗಳ ಮುಂದೆ ರಂಗೋಲಿ ಹಾಕಿ, ಕಬ್ಬಿನಿಂದ, ಮಾವಿನ ತಳಿರಿನಿಂದ ಅಲಂಕರಿಸಲಾಗಿತ್ತು. ಎತ್ತುಗಳನ್ನು ಗಂಟೆ, ಗೊಂಡೆಗಳಿಂದ ಸಿಂಗರಿಸಲಾಗಿತ್ತು. <br /> <br /> ಹಬ್ಬದ ಊಟ, ಕೋಳಿ ಕಾಳಗ, ಎತ್ತು ಓಡಿಸುವುದು, ಕಿಚ್ಚು ಹಾಯಿಸುವುದು ಇತ್ಯಾದಿ ಆಮೋದ- ಪ್ರಮೋದಗಳಲ್ಲಿ ಜನ ತೊಡಗಿಕೊಂಡಿದ್ದರು.<br /> <br /> ಸಂಕ್ರಾಂತಿಯ ಉಲ್ಲಾಸ ಹೆಚ್ಚಿಸಲೆಂಬಂತೆ ಮಕ್ಕಳು, ದೊಡ್ಡವರೆಲ್ಲ ಹಾರಿಸಿದ ಗಾಳಿಪಟ ಆಗಸದ ತುಂಬ ಚಿತ್ತಾರ ಬರೆದಿತ್ತು. <br /> <br /> ಸಾವಿರಾರು ಕುಟುಂಬಗಳು ಹಬ್ಬ ಆಚರಿಸಲು ಆಂಧ್ರ ಕರಾವಳಿ ಮತ್ತು ರಾಯಲ್ಸೀಮಾದಲ್ಲಿರುವ ಹುಟ್ಟೂರಿಗೆ ತೆರಳಿದ್ದರಿಂದ ರಾಜಧಾನಿ ಹೈದರಾಬಾದ್ನ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.<br /> <br /> <strong>ಭುವನೇಶ್ವರ ವರದಿ:</strong> ಸಂಕ್ರಾಂತಿ ಪ್ರಯುಕ್ತ ಪುರಿಯ ಜಗನ್ನಾಥ ದೇವಾಲಯಕ್ಕೆ ಭಾನುವಾರ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದರು. <br /> <br /> ಸೂರ್ಯ ಉತ್ತರಾಯಣ ಪ್ರವೇಶಿಸಿದ್ದಕ್ಕಾಗಿ ಕೋನಾರ್ಕ್ನ ಸೂರ್ಯ ದೇವಾಲಯದಲ್ಲೂ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಯಿತು. <br /> <br /> ಈ ಹಬ್ಬದ ಅಂಗವಾಗಿ ಒಡಿಶಾದಾದ್ಯಂತ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಿಹಿ ಪೊಂಗಲ್ನ ಇನ್ನೊಂದು ರೂಪವಾದ `ಮಕರ ಚೌಳ್ಲಾ~ದೊಂದಿಗೆ ಜನ ಊಟ ಸವಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್ (ಐಎಎನ್ಎಸ್): </strong> ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಭಾನುವಾರ ಆಂಧ್ರಪ್ರದೇಶದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.<br /> <br /> ಗ್ರಾಮ, ಪಟ್ಟಣಗಳಲ್ಲಿ ಹಬ್ಬದ ವಾತಾವರಣವಿತ್ತು. ಮನೆಗಳ ಮುಂದೆ ರಂಗೋಲಿ ಹಾಕಿ, ಕಬ್ಬಿನಿಂದ, ಮಾವಿನ ತಳಿರಿನಿಂದ ಅಲಂಕರಿಸಲಾಗಿತ್ತು. ಎತ್ತುಗಳನ್ನು ಗಂಟೆ, ಗೊಂಡೆಗಳಿಂದ ಸಿಂಗರಿಸಲಾಗಿತ್ತು. <br /> <br /> ಹಬ್ಬದ ಊಟ, ಕೋಳಿ ಕಾಳಗ, ಎತ್ತು ಓಡಿಸುವುದು, ಕಿಚ್ಚು ಹಾಯಿಸುವುದು ಇತ್ಯಾದಿ ಆಮೋದ- ಪ್ರಮೋದಗಳಲ್ಲಿ ಜನ ತೊಡಗಿಕೊಂಡಿದ್ದರು.<br /> <br /> ಸಂಕ್ರಾಂತಿಯ ಉಲ್ಲಾಸ ಹೆಚ್ಚಿಸಲೆಂಬಂತೆ ಮಕ್ಕಳು, ದೊಡ್ಡವರೆಲ್ಲ ಹಾರಿಸಿದ ಗಾಳಿಪಟ ಆಗಸದ ತುಂಬ ಚಿತ್ತಾರ ಬರೆದಿತ್ತು. <br /> <br /> ಸಾವಿರಾರು ಕುಟುಂಬಗಳು ಹಬ್ಬ ಆಚರಿಸಲು ಆಂಧ್ರ ಕರಾವಳಿ ಮತ್ತು ರಾಯಲ್ಸೀಮಾದಲ್ಲಿರುವ ಹುಟ್ಟೂರಿಗೆ ತೆರಳಿದ್ದರಿಂದ ರಾಜಧಾನಿ ಹೈದರಾಬಾದ್ನ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.<br /> <br /> <strong>ಭುವನೇಶ್ವರ ವರದಿ:</strong> ಸಂಕ್ರಾಂತಿ ಪ್ರಯುಕ್ತ ಪುರಿಯ ಜಗನ್ನಾಥ ದೇವಾಲಯಕ್ಕೆ ಭಾನುವಾರ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡಿದ್ದರು. <br /> <br /> ಸೂರ್ಯ ಉತ್ತರಾಯಣ ಪ್ರವೇಶಿಸಿದ್ದಕ್ಕಾಗಿ ಕೋನಾರ್ಕ್ನ ಸೂರ್ಯ ದೇವಾಲಯದಲ್ಲೂ ಹಬ್ಬವನ್ನು ಉತ್ಸಾಹದಿಂದ ಆಚರಿಸಲಾಯಿತು. <br /> <br /> ಈ ಹಬ್ಬದ ಅಂಗವಾಗಿ ಒಡಿಶಾದಾದ್ಯಂತ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಿಹಿ ಪೊಂಗಲ್ನ ಇನ್ನೊಂದು ರೂಪವಾದ `ಮಕರ ಚೌಳ್ಲಾ~ದೊಂದಿಗೆ ಜನ ಊಟ ಸವಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>