<p><strong>ನವದೆಹಲಿ (ಪಿಟಿಐ):</strong> ಶತಕಗಳ ಶತಕ ಗಳಿಸಿದ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸಂಸತ್ನಲ್ಲಿ ಶ್ಲಾಘಿಸಲಾಯಿತು. `ಇದೊಂದು ಶ್ರೇಷ್ಠ ಸಾಧನೆ~ ಎಂದು ಉಭಯ ಸದನಗಳಲ್ಲಿ ಸದಸ್ಯರು ನುಡಿದರು.<br /> <br /> `ಇದು ರಾಷ್ಟ್ರದ ಹೆಮ್ಮೆ. ಇದು ಕ್ರಿಕೆಟ್ ಆಡುವ ಎಲ್ಲಾ ಮಕ್ಕಳಿಗೆ ಸ್ಫೂರ್ತಿ ಆಗುವಂಥದ್ದು~ ಎಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೇಳಿದರು. `ತೆಂಡೂಲ್ಕರ್ ಹಾಗೂ ಭಾರತ ತಂಡಕ್ಕೆ ನಮ್ಮ ಅಭಿನಂದನೆಗಳು~ ಎಂದು ಅವರು ತಿಳಿಸಿದರು.<br /> <br /> ಮೀರ್ಪುರದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. <br /> <br /> ರಾಜ್ಯಸಭಾ ಸದಸ್ಯರು ಕೂಡ ಸಚಿನ್ ಸಾಧನೆಯನ್ನು ಕೊಂಡಾಡಿದರು. `ಭಾರತದ ಆಸೆ ಹಾಗೂ ಉತ್ತಮ ಭವಿಷ್ಯವನ್ನು ಸಚಿನ್ ಅವರ ಶತಕಗಳ ಶತಕದ ಸಾಧನೆ ಪ್ರತಿನಿಧಿಸುತ್ತದೆ~ ಎಂದು ಬಿಜೆಪಿ ಸದಸ್ಯ ತರುಣ್ ವಿಜಯ್ ನುಡಿದರು. <br /> <br /> ಪಾಕಿಸ್ತಾನ ವಿರುದ್ಧದ ಜಯಕ್ಕೆ ಕಾರಣವಾದ ವಿರಾಟ್ ಕೊಹ್ಲಿ (183) ಅವರ ಆಟವನ್ನೂ ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. <br /> <br /> ಸ್ವಿಟ್ಜರ್ಲೆಂಡ್ನ ಬಾಸೆಲ್ನಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದ ಸೈನಾ ನೆಹ್ವಾಲ್ ಅವರನ್ನು ಸ್ಪೀಕರ್ ಮೀರಾ ಕುಮಾರ್ ಅಭಿನಂದಿಸಿದರು. ಈ ಟೂರ್ನಿಯ ಫೈನಲ್ನಲ್ಲಿ ಸೈನಾ 21-19, 21-16ರಲ್ಲಿ ಮೂರನೇ ರ್ಯಾಂಕ್ನ ಆಟಗಾರ್ತಿ ಚೀನಾದ ಶಿಕ್ಸಿಯನ್ ವಾಂಗ್ ಎದುರು ಗೆಲುವು ಸಾಧಿಸಿದ್ದರು. <br /> <br /> <strong>ಭಾರತ ರತ್ನ ನೀಡಿ (ಮುಂಬೈ ವರದಿ): </strong>ಅದ್ಭುತ ಸಾಧನೆಗಳ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ `ಭಾರತ ರತ್ನ~ ನೀಡಬೇಕೆಂದು ಬಿಸಿಸಿಐ ಉಪಾಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ. <br /> <br /> <strong>ಢಾಕಾ ವರದಿ:</strong> ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಸಚಿನ್ ಭೇಟಿ ಮಾಡಿದರು. ನೂರನೇ ಶತಕ ಗಳಿಸಿದ ಸಚಿನ್ ಅವರಿಗೆ ಹಸೀನಾ ಸಹಿ ತಿಂಡಿ ಕಳುಹಿಸಿಕೊಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಶತಕಗಳ ಶತಕ ಗಳಿಸಿದ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸಂಸತ್ನಲ್ಲಿ ಶ್ಲಾಘಿಸಲಾಯಿತು. `ಇದೊಂದು ಶ್ರೇಷ್ಠ ಸಾಧನೆ~ ಎಂದು ಉಭಯ ಸದನಗಳಲ್ಲಿ ಸದಸ್ಯರು ನುಡಿದರು.<br /> <br /> `ಇದು ರಾಷ್ಟ್ರದ ಹೆಮ್ಮೆ. ಇದು ಕ್ರಿಕೆಟ್ ಆಡುವ ಎಲ್ಲಾ ಮಕ್ಕಳಿಗೆ ಸ್ಫೂರ್ತಿ ಆಗುವಂಥದ್ದು~ ಎಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೇಳಿದರು. `ತೆಂಡೂಲ್ಕರ್ ಹಾಗೂ ಭಾರತ ತಂಡಕ್ಕೆ ನಮ್ಮ ಅಭಿನಂದನೆಗಳು~ ಎಂದು ಅವರು ತಿಳಿಸಿದರು.<br /> <br /> ಮೀರ್ಪುರದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. <br /> <br /> ರಾಜ್ಯಸಭಾ ಸದಸ್ಯರು ಕೂಡ ಸಚಿನ್ ಸಾಧನೆಯನ್ನು ಕೊಂಡಾಡಿದರು. `ಭಾರತದ ಆಸೆ ಹಾಗೂ ಉತ್ತಮ ಭವಿಷ್ಯವನ್ನು ಸಚಿನ್ ಅವರ ಶತಕಗಳ ಶತಕದ ಸಾಧನೆ ಪ್ರತಿನಿಧಿಸುತ್ತದೆ~ ಎಂದು ಬಿಜೆಪಿ ಸದಸ್ಯ ತರುಣ್ ವಿಜಯ್ ನುಡಿದರು. <br /> <br /> ಪಾಕಿಸ್ತಾನ ವಿರುದ್ಧದ ಜಯಕ್ಕೆ ಕಾರಣವಾದ ವಿರಾಟ್ ಕೊಹ್ಲಿ (183) ಅವರ ಆಟವನ್ನೂ ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. <br /> <br /> ಸ್ವಿಟ್ಜರ್ಲೆಂಡ್ನ ಬಾಸೆಲ್ನಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದ ಸೈನಾ ನೆಹ್ವಾಲ್ ಅವರನ್ನು ಸ್ಪೀಕರ್ ಮೀರಾ ಕುಮಾರ್ ಅಭಿನಂದಿಸಿದರು. ಈ ಟೂರ್ನಿಯ ಫೈನಲ್ನಲ್ಲಿ ಸೈನಾ 21-19, 21-16ರಲ್ಲಿ ಮೂರನೇ ರ್ಯಾಂಕ್ನ ಆಟಗಾರ್ತಿ ಚೀನಾದ ಶಿಕ್ಸಿಯನ್ ವಾಂಗ್ ಎದುರು ಗೆಲುವು ಸಾಧಿಸಿದ್ದರು. <br /> <br /> <strong>ಭಾರತ ರತ್ನ ನೀಡಿ (ಮುಂಬೈ ವರದಿ): </strong>ಅದ್ಭುತ ಸಾಧನೆಗಳ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ `ಭಾರತ ರತ್ನ~ ನೀಡಬೇಕೆಂದು ಬಿಸಿಸಿಐ ಉಪಾಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ. <br /> <br /> <strong>ಢಾಕಾ ವರದಿ:</strong> ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಸಚಿನ್ ಭೇಟಿ ಮಾಡಿದರು. ನೂರನೇ ಶತಕ ಗಳಿಸಿದ ಸಚಿನ್ ಅವರಿಗೆ ಹಸೀನಾ ಸಹಿ ತಿಂಡಿ ಕಳುಹಿಸಿಕೊಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>