<p>ವಿರಾಜಪೇಟೆ: ಸಮೀಪದ ಕುಕ್ಲೂರು ಮುತ್ತಪ್ಪ ದೇವರ ತೆರೆ ಮಹೋತ್ಸವವನ್ನು ಬುಧವಾರ ಹಾಗೂ ಗುರುವಾರ ಭಕ್ತಿಯಿಂದ ಆಚರಿಸಲಾಯಿತು.<br /> <br /> 93 ವರ್ಷಗಳ ಇತಿಹಾಸವಿರುವ ಕುಕ್ಲೂರಿನ ಮುತ್ತಪ್ಪ ದೇವಾಲಯದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು.<br /> ಬುಧವಾರ ಸಂಜೆ 5.30ಕ್ಕೆ ಮುತ್ತಪ್ಪ ವೆಳ್ಳಾಟಂ ನಂತರ ರಾತ್ರಿ ಶಾಸ್ತಪ್ಪ ಹಾಗೂ ಗುಳಿಗನ ವೆಳ್ಳಾಟಂ ನಡೆಯಿತು. ಮಧ್ಯರಾತ್ರಿ ಪಟ್ಟಣದ ಶಿವಕೇರಿಯ ಪಂಪ್ಹೌಸ್ ಬಳಿಯಿಂದ ಆರಂಭಗೊಂಡ ಬಸುರಿ ಮಲೆ ವೆಳ್ಳಾಟಂ ಕುಕ್ಲೂರಿನ ಮುತ್ತಪ್ಪ ದೇವಾಲಯದಲ್ಲಿರುವ ಸನ್ನಿಧಿ ತಲುಪಿತು.<br /> <br /> ಈ ಸಂದರ್ಭದಲ್ಲಿ ಬಸುರಿ ಮಲೆ ವೆಳ್ಳಾಟಂನೊಂದಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯದತ್ತ ಹೆಜ್ಜೆ ಹಾಕಿದರು. ರಾತ್ರಿ 2 ಗಂಟೆಗೆ ನಡೆದ ಆಕರ್ಷಕ ಸಿಡಿಮದ್ದು ಕಾರ್ಯಕ್ರಮ ಗಮನ ಸೆಳೆಯಿತು.<br /> <br /> ಗುರುವಾರ ಮುಂಜಾನೆ 4ರಿಂದ ಗುಳಿಗನ ತೆರೆಯಿಂದ ಎರಡನೇ ದಿನದ ಉತ್ಸವವು ಆರಂಭಗೊಂಡಿತು. ನಂತರ ಮುತ್ತಪ್ಪನ್, ತಿರುವಪ್ಪನ್, ಶಾಸ್ತಪ್ಪನ್ ಹಾಗೂ ಬಸುರಿ ಮಲೆ ತೆರೆಯೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಎರಡು ದಿನಗಳ ಕಾಲ ನಡೆದ ಉತ್ಸವದ ಸಮಯದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿರಾಜಪೇಟೆ: ಸಮೀಪದ ಕುಕ್ಲೂರು ಮುತ್ತಪ್ಪ ದೇವರ ತೆರೆ ಮಹೋತ್ಸವವನ್ನು ಬುಧವಾರ ಹಾಗೂ ಗುರುವಾರ ಭಕ್ತಿಯಿಂದ ಆಚರಿಸಲಾಯಿತು.<br /> <br /> 93 ವರ್ಷಗಳ ಇತಿಹಾಸವಿರುವ ಕುಕ್ಲೂರಿನ ಮುತ್ತಪ್ಪ ದೇವಾಲಯದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು.<br /> ಬುಧವಾರ ಸಂಜೆ 5.30ಕ್ಕೆ ಮುತ್ತಪ್ಪ ವೆಳ್ಳಾಟಂ ನಂತರ ರಾತ್ರಿ ಶಾಸ್ತಪ್ಪ ಹಾಗೂ ಗುಳಿಗನ ವೆಳ್ಳಾಟಂ ನಡೆಯಿತು. ಮಧ್ಯರಾತ್ರಿ ಪಟ್ಟಣದ ಶಿವಕೇರಿಯ ಪಂಪ್ಹೌಸ್ ಬಳಿಯಿಂದ ಆರಂಭಗೊಂಡ ಬಸುರಿ ಮಲೆ ವೆಳ್ಳಾಟಂ ಕುಕ್ಲೂರಿನ ಮುತ್ತಪ್ಪ ದೇವಾಲಯದಲ್ಲಿರುವ ಸನ್ನಿಧಿ ತಲುಪಿತು.<br /> <br /> ಈ ಸಂದರ್ಭದಲ್ಲಿ ಬಸುರಿ ಮಲೆ ವೆಳ್ಳಾಟಂನೊಂದಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ದೇವಾಲಯದತ್ತ ಹೆಜ್ಜೆ ಹಾಕಿದರು. ರಾತ್ರಿ 2 ಗಂಟೆಗೆ ನಡೆದ ಆಕರ್ಷಕ ಸಿಡಿಮದ್ದು ಕಾರ್ಯಕ್ರಮ ಗಮನ ಸೆಳೆಯಿತು.<br /> <br /> ಗುರುವಾರ ಮುಂಜಾನೆ 4ರಿಂದ ಗುಳಿಗನ ತೆರೆಯಿಂದ ಎರಡನೇ ದಿನದ ಉತ್ಸವವು ಆರಂಭಗೊಂಡಿತು. ನಂತರ ಮುತ್ತಪ್ಪನ್, ತಿರುವಪ್ಪನ್, ಶಾಸ್ತಪ್ಪನ್ ಹಾಗೂ ಬಸುರಿ ಮಲೆ ತೆರೆಯೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಎರಡು ದಿನಗಳ ಕಾಲ ನಡೆದ ಉತ್ಸವದ ಸಮಯದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>