<p>ಚಿತ್ರದುರ್ಗ: ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಗೆ ಅಧಿಕಾರಿಗಳ ಗೈರು ಹಾಜರಿಯಿಂದ ಕೆಂಡಾಮಂಡಲವಾದ ಸದಸ್ಯರು, ಸಭೆ ಆರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಪ್ರತಿ ಬಾರಿ ಅಧಿಕಾರಿಗಳ ಸಮಸ್ಯೆ ಪುನಾರಾವರ್ತನೆಯಾಗುತ್ತದೆ. ಸಭೆಗೆ ಜನಪ್ರತಿನಿಧಿಗಳು ಬರುತ್ತಾರೆ. ಆದರೆ, ನಿಯಮಿತವಾಗಿ ಸಂಬಳ ಪಡೆಯುವ ಅಧಿಕಾರಿಗಳು ಏಕೆ ಬರುವುದಿಲ್ಲ. ಅಧಿಕಾರಿಗಳು ಇಲ್ಲದೆ ಸಭೆ ಹೇಗೆ ಮಾಡುವುದು. ಅ<br /> <br /> ಂಬೇಡ್ಕರ್ ನಿಗಮ, ಆಹಾರ ಇಲಾಖೆ ಮುಂತಾದ ಅಧಿಕಾರಿಗಳು ಸಭೆಗೆ ಆಗಮಿಸುವುದಿಲ್ಲ. ಆದ್ದರಿಂದ ಸಭೆಯನ್ನೇ ಮುಂದೂಡಿ ಎಂದು ಸದಸ್ಯರಾದ ಹಂಪೇಶ್, ಸಿರುವುಲ್ಲಪ್ಪ ಕಿಡಿಕಾರಿದರು.<br /> <br /> ಸಭೆಗೆ ಬಂದರೆ ್ಙ 5 ಸಾವಿರ ಲಂಚ ಕೊಡಬೇಕಾಗುತ್ತದೆಯೇ? ಲಂಚ ಕೊಡಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಸದಸ್ಯ ರಾಜಕುಮಾರ್ ಪ್ರಶ್ನಿಸಿದರು.<br /> <br /> ನಾವು ಕೆಲವು ಅಧಿಕಾರಿಗಳನ್ನು ನೋಡಿಯೇ ಇಲ್ಲ. ಇದಕ್ಕಾದರೂ ಅವರನ್ನು ಸಭೆಗೆ ಕರೆಯಿಸಿ ಎಂದು ಸದಸ್ಯರು ಪಟ್ಟು ಹಿಡಿದರು. ಇದರಿಂದ 45 ನಿಮಿಷ ತಡವಾಗಿ ಸಭೆ ಆರಂಭವಾಯಿತು. ಕೆಲವು ಅಧಿಕಾರಿಗಳು ಸಭೆಗೆ ಆಗಮಿಸಿದ ನಂತರ 11.45ಕ್ಕೆ ಸಭೆ ಆರಂಭವಾಯಿತು.<br /> <br /> ಅಧಿಕಾರಿಗೆ ತರಾಟೆ<br /> ಸಸಿ ನೆಡುವ ಸಂಬಂಧ ನಿರ್ಲಕ್ಷ್ಯ ವಹಿಸಿದ ಅರಣ್ಯಾಧಿಕಾರಿ ವಿಶ್ವನಾಥ್ ಅವರನ್ನು ತಾ.ಪಂ. ಸದಸ್ಯರು ತರಾಟೆಗೆ ತೆಗೆದುಕೊಂಡರು.<br /> <br /> ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಶ್ವನಾಥ್ ತಡವರಿಸಿದರು. ಪ್ರತಿಯೊಂದು ಉತ್ತರ ಹೇಳುವಾಗ ಸಹಾಯಕರ ನೆರವು ಕೇಳುತ್ತಿದ್ದರು.<br /> <br /> ಅಂದಾಜುಪಟ್ಟಿ ಮಾಡದಿರುವ ಬಗ್ಗೆ ಮತ್ತು ಸಸಿಗಳನ್ನು ಮಳೆಗಾಲದಲ್ಲಿ ನೆಡದೆ ವಿಳಂಬ ಮಾಡಿದ ಬಗ್ಗೆ ಸದಸ್ಯರು ಕಿಡಿಕಾರಿದರು. 2011-12ನೇ ಸಾಲಿನಲ್ಲಿ ರೈತರಿಗೆ ಒಂದೂ ಸಸಿ ನೀಡಿಲ್ಲ. ನೀಡಿದರೆ ಅಂತಹ ಫಲಾನುಭವಿಗಳ ಪಟ್ಟಿ ನೀಡಿ ಎಂದು ಸದಸ್ಯರು ಪ್ರಶ್ನಿಸಿದರು.<br /> <br /> ನಿಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ಪ್ರಶ್ನೆಗಳ ಮಳೆಗೈದ ಸದಸ್ಯರು ಕೊನೆಗೆ ಉದ್ಯೋಗ ಖಾತ್ರಿಯಲ್ಲಿ ಒಂದು ದಿನಕ್ಕೆ ಒಬ್ಬ ಕೂಲಿಕಾರ್ಮಿಕನಿಗೆ ಎಷ್ಟು ಹಣ ಕೊಡುತ್ತಾರೆ ಗೊತ್ತೆ ಎಂದು ಪ್ರಶ್ನಿಸಿದಾಗ ವಿಶ್ವನಾಥ್ ಮೌನವಹಿಸಿದರು.ಪುನರಾವರ್ತನೆಯಾದ ಅಧಿಕಾರಿಗಳ ಗೈರುಹಾಜರಿ: ಸದಸ್ಯರ ಕಿಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರದುರ್ಗ: ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಗೆ ಅಧಿಕಾರಿಗಳ ಗೈರು ಹಾಜರಿಯಿಂದ ಕೆಂಡಾಮಂಡಲವಾದ ಸದಸ್ಯರು, ಸಭೆ ಆರಂಭಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.<br /> <br /> ಪ್ರತಿ ಬಾರಿ ಅಧಿಕಾರಿಗಳ ಸಮಸ್ಯೆ ಪುನಾರಾವರ್ತನೆಯಾಗುತ್ತದೆ. ಸಭೆಗೆ ಜನಪ್ರತಿನಿಧಿಗಳು ಬರುತ್ತಾರೆ. ಆದರೆ, ನಿಯಮಿತವಾಗಿ ಸಂಬಳ ಪಡೆಯುವ ಅಧಿಕಾರಿಗಳು ಏಕೆ ಬರುವುದಿಲ್ಲ. ಅಧಿಕಾರಿಗಳು ಇಲ್ಲದೆ ಸಭೆ ಹೇಗೆ ಮಾಡುವುದು. ಅ<br /> <br /> ಂಬೇಡ್ಕರ್ ನಿಗಮ, ಆಹಾರ ಇಲಾಖೆ ಮುಂತಾದ ಅಧಿಕಾರಿಗಳು ಸಭೆಗೆ ಆಗಮಿಸುವುದಿಲ್ಲ. ಆದ್ದರಿಂದ ಸಭೆಯನ್ನೇ ಮುಂದೂಡಿ ಎಂದು ಸದಸ್ಯರಾದ ಹಂಪೇಶ್, ಸಿರುವುಲ್ಲಪ್ಪ ಕಿಡಿಕಾರಿದರು.<br /> <br /> ಸಭೆಗೆ ಬಂದರೆ ್ಙ 5 ಸಾವಿರ ಲಂಚ ಕೊಡಬೇಕಾಗುತ್ತದೆಯೇ? ಲಂಚ ಕೊಡಬೇಕಾಗುತ್ತದೆ ಎಂದು ಅಧಿಕಾರಿಗಳು ಸಭೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಸದಸ್ಯ ರಾಜಕುಮಾರ್ ಪ್ರಶ್ನಿಸಿದರು.<br /> <br /> ನಾವು ಕೆಲವು ಅಧಿಕಾರಿಗಳನ್ನು ನೋಡಿಯೇ ಇಲ್ಲ. ಇದಕ್ಕಾದರೂ ಅವರನ್ನು ಸಭೆಗೆ ಕರೆಯಿಸಿ ಎಂದು ಸದಸ್ಯರು ಪಟ್ಟು ಹಿಡಿದರು. ಇದರಿಂದ 45 ನಿಮಿಷ ತಡವಾಗಿ ಸಭೆ ಆರಂಭವಾಯಿತು. ಕೆಲವು ಅಧಿಕಾರಿಗಳು ಸಭೆಗೆ ಆಗಮಿಸಿದ ನಂತರ 11.45ಕ್ಕೆ ಸಭೆ ಆರಂಭವಾಯಿತು.<br /> <br /> ಅಧಿಕಾರಿಗೆ ತರಾಟೆ<br /> ಸಸಿ ನೆಡುವ ಸಂಬಂಧ ನಿರ್ಲಕ್ಷ್ಯ ವಹಿಸಿದ ಅರಣ್ಯಾಧಿಕಾರಿ ವಿಶ್ವನಾಥ್ ಅವರನ್ನು ತಾ.ಪಂ. ಸದಸ್ಯರು ತರಾಟೆಗೆ ತೆಗೆದುಕೊಂಡರು.<br /> <br /> ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಶ್ವನಾಥ್ ತಡವರಿಸಿದರು. ಪ್ರತಿಯೊಂದು ಉತ್ತರ ಹೇಳುವಾಗ ಸಹಾಯಕರ ನೆರವು ಕೇಳುತ್ತಿದ್ದರು.<br /> <br /> ಅಂದಾಜುಪಟ್ಟಿ ಮಾಡದಿರುವ ಬಗ್ಗೆ ಮತ್ತು ಸಸಿಗಳನ್ನು ಮಳೆಗಾಲದಲ್ಲಿ ನೆಡದೆ ವಿಳಂಬ ಮಾಡಿದ ಬಗ್ಗೆ ಸದಸ್ಯರು ಕಿಡಿಕಾರಿದರು. 2011-12ನೇ ಸಾಲಿನಲ್ಲಿ ರೈತರಿಗೆ ಒಂದೂ ಸಸಿ ನೀಡಿಲ್ಲ. ನೀಡಿದರೆ ಅಂತಹ ಫಲಾನುಭವಿಗಳ ಪಟ್ಟಿ ನೀಡಿ ಎಂದು ಸದಸ್ಯರು ಪ್ರಶ್ನಿಸಿದರು.<br /> <br /> ನಿಮಗೆ ಯಾವುದೇ ಜವಾಬ್ದಾರಿ ಇಲ್ಲ ಎಂದು ಪ್ರಶ್ನೆಗಳ ಮಳೆಗೈದ ಸದಸ್ಯರು ಕೊನೆಗೆ ಉದ್ಯೋಗ ಖಾತ್ರಿಯಲ್ಲಿ ಒಂದು ದಿನಕ್ಕೆ ಒಬ್ಬ ಕೂಲಿಕಾರ್ಮಿಕನಿಗೆ ಎಷ್ಟು ಹಣ ಕೊಡುತ್ತಾರೆ ಗೊತ್ತೆ ಎಂದು ಪ್ರಶ್ನಿಸಿದಾಗ ವಿಶ್ವನಾಥ್ ಮೌನವಹಿಸಿದರು.ಪುನರಾವರ್ತನೆಯಾದ ಅಧಿಕಾರಿಗಳ ಗೈರುಹಾಜರಿ: ಸದಸ್ಯರ ಕಿಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>