<p><strong>ಧಾರವಾಡ: </strong>`ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ಜಲ, ಪ್ರಾಣಿ, ಗಿಡಮರ ಹಾಗೂ ಬೆಳೆ ಇವುಗಳ ಜೊತೆಗೆ ಪ್ರತಿಯೊಬ್ಬ ರೈತರು ಹೃದಯಪೂರ್ವಕವಾದ ಬಾಂಧವ್ಯವನ್ನು ಬೆಳೆಸಿಕೊಂಡಾಗ ಮಾತ್ರ ರೈತ ಸಮುದಾಯದ ಪ್ರಗತಿ ಹೊಂದಲು ಸಾಧ್ಯ~ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. <br /> <br /> ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಮಂಗಳವಾರ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಪದ್ಧತಿ ಹಾಗೂ ಮೇವಿನ ಜೋಳದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ರೈತ ಸಂಪಾದಿಸಿದ ಅಲ್ಪ ಹಣ ತರುವ ನೆಮ್ಮದಿ ಹಾಗೂ ಸಮೃದ್ಧಿ ಬೇರೆ ಗಳಿಕೆಯಲ್ಲಿ ದೊರಕುವುದಿಲ್ಲ. ಪ್ರತಿಯೊಬ್ಬ ರೈತರು ಕೃಷಿಗೆ ಪೂರಕವಾದ, ಹೈನುಗಾರಿಕೆ, ತೋಟಗಾರಿಕೆ, ಜೇನು ಹಾಗೂ ಕುರಿಸಾಕಾಣಿಕೆ, ರೇಷ್ಮೆ ಹಾಗೂ ಬಹುಮುಖ್ಯವಾಗಿ ಮಳೆ ನೀರು ಕೊಯ್ಲು ಅವಶ್ಯವಾಗಿ ಅಳವಡಿಸಿಕೊಳ್ಳಬೇಕು~ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕೃಷಿ ವಿ.ವಿ ಕುಲಪತಿ ಡಾ.ಆರ್.ಆರ್.ಹಂಚಿನಾಳ, `ಬರ ನಿವಾರಣೆಗಾಗಿ ಹಾಗೂ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸದ್ಬಳಕೆ,ಅಂತರ್ಜಲ ಸುಧಾರಣೆಯತ್ತ ಗಮನಹರಿಸಬೇಕು~ ಎಂದರು.<br /> <br /> ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಇದ್ದರು. ಸಂಶೋಧನಾ ನಿರ್ದೇಶಕ ಡಾ.ಬಸವರಾಜ ಎಂ.ಖಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾ ನಿರ್ದೇಶಕ ಡಾ.ಎಲ್.ಕೃಷ್ಣ ನಾಯಕ ಹಾಗೂ ಡಾ.ಎಸ್.ಡಿ.ಕೊಲೋಳಗಿ ಅವರು ಹೈನುಗಾರಿಕೆ ಕುರಿತು ಮಾತನಾಡಿದರು. <br /> <br /> ಡಾ.ಸೈಯದ್ ಸದಾಕತ್, ಡಾ.ಬಿ.ಎಂ.ರಡ್ಡೇರ, ಡಾ.ಬಿ.ಸಿ.ಕಾಮಣ್ಣ, ಡಾ.ಎಚ್.ಟಿ.ಚಂದ್ರನಾಥ, ಡಾ.ಎಸ್.ಎನ್.ಜಾಧವ, ಡಾ.ಎಂ.ಎಸ್.ನಾಗರಾಜ, ಎಸ್.ಜಿ.ಭೂತಿ, ರಾಮಚಂದ್ರ ಪದಕಿ ಇದ್ದರು. ಡಾ.ಎಂ.ಎಸ್.ನಾಗರಾಜ ಪ್ರಾರ್ಥಿಸಿದರು. ಡಾ.ಶೇಖರಪ್ಪ ನಿರೂಪಿಸಿದರು. ಡಾ.ವೈ.ಬಿ.ಪಲ್ಲೇದ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>`ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ಜಲ, ಪ್ರಾಣಿ, ಗಿಡಮರ ಹಾಗೂ ಬೆಳೆ ಇವುಗಳ ಜೊತೆಗೆ ಪ್ರತಿಯೊಬ್ಬ ರೈತರು ಹೃದಯಪೂರ್ವಕವಾದ ಬಾಂಧವ್ಯವನ್ನು ಬೆಳೆಸಿಕೊಂಡಾಗ ಮಾತ್ರ ರೈತ ಸಮುದಾಯದ ಪ್ರಗತಿ ಹೊಂದಲು ಸಾಧ್ಯ~ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. <br /> <br /> ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಮಂಗಳವಾರ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಪದ್ಧತಿ ಹಾಗೂ ಮೇವಿನ ಜೋಳದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ರೈತ ಸಂಪಾದಿಸಿದ ಅಲ್ಪ ಹಣ ತರುವ ನೆಮ್ಮದಿ ಹಾಗೂ ಸಮೃದ್ಧಿ ಬೇರೆ ಗಳಿಕೆಯಲ್ಲಿ ದೊರಕುವುದಿಲ್ಲ. ಪ್ರತಿಯೊಬ್ಬ ರೈತರು ಕೃಷಿಗೆ ಪೂರಕವಾದ, ಹೈನುಗಾರಿಕೆ, ತೋಟಗಾರಿಕೆ, ಜೇನು ಹಾಗೂ ಕುರಿಸಾಕಾಣಿಕೆ, ರೇಷ್ಮೆ ಹಾಗೂ ಬಹುಮುಖ್ಯವಾಗಿ ಮಳೆ ನೀರು ಕೊಯ್ಲು ಅವಶ್ಯವಾಗಿ ಅಳವಡಿಸಿಕೊಳ್ಳಬೇಕು~ ಎಂದರು.<br /> <br /> ಅಧ್ಯಕ್ಷತೆ ವಹಿಸಿದ್ದ ಕೃಷಿ ವಿ.ವಿ ಕುಲಪತಿ ಡಾ.ಆರ್.ಆರ್.ಹಂಚಿನಾಳ, `ಬರ ನಿವಾರಣೆಗಾಗಿ ಹಾಗೂ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸದ್ಬಳಕೆ,ಅಂತರ್ಜಲ ಸುಧಾರಣೆಯತ್ತ ಗಮನಹರಿಸಬೇಕು~ ಎಂದರು.<br /> <br /> ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಇದ್ದರು. ಸಂಶೋಧನಾ ನಿರ್ದೇಶಕ ಡಾ.ಬಸವರಾಜ ಎಂ.ಖಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾ ನಿರ್ದೇಶಕ ಡಾ.ಎಲ್.ಕೃಷ್ಣ ನಾಯಕ ಹಾಗೂ ಡಾ.ಎಸ್.ಡಿ.ಕೊಲೋಳಗಿ ಅವರು ಹೈನುಗಾರಿಕೆ ಕುರಿತು ಮಾತನಾಡಿದರು. <br /> <br /> ಡಾ.ಸೈಯದ್ ಸದಾಕತ್, ಡಾ.ಬಿ.ಎಂ.ರಡ್ಡೇರ, ಡಾ.ಬಿ.ಸಿ.ಕಾಮಣ್ಣ, ಡಾ.ಎಚ್.ಟಿ.ಚಂದ್ರನಾಥ, ಡಾ.ಎಸ್.ಎನ್.ಜಾಧವ, ಡಾ.ಎಂ.ಎಸ್.ನಾಗರಾಜ, ಎಸ್.ಜಿ.ಭೂತಿ, ರಾಮಚಂದ್ರ ಪದಕಿ ಇದ್ದರು. ಡಾ.ಎಂ.ಎಸ್.ನಾಗರಾಜ ಪ್ರಾರ್ಥಿಸಿದರು. ಡಾ.ಶೇಖರಪ್ಪ ನಿರೂಪಿಸಿದರು. ಡಾ.ವೈ.ಬಿ.ಪಲ್ಲೇದ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>