<p>ಕುಂದಗೋಳ : `ಮಕ್ಕಳು ಸಮಯದ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಇಂದು ಬೋಧಿಸಿದ ಅಭ್ಯಾಸವನ್ನು ಇಂದೇ ಮಾಡಿ ಮುಗಿಸಬೇಕು. ನಾಳೆ ಮಾಡಿದರಾಯಿತು ಎಂದುಕೊಂಡು ಕೂಡಬಾರದು. ದಾನವಾಗಿ ನೀಡಿದ ಸಮವಸ್ತ್ರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು' ಎಂದು ಧಾರವಾಡ ಡಯಟ್ನ ಹಿರಿಯ ಉಪನ್ಯಾಸಕಿ ಎ.ಎಚ್. ಹೂಗಾರ ಹೇಳಿದರು.<br /> <br /> ಪಟ್ಟಣದ ಗಾಂಧೀ ಹಿಂದಿ ವಿದ್ಯಾಪೀಠದ ಜಿ.ಎಸ್.ಪಿ.ಪಿ. ಸ್ಕೂಲಿನ ಮಕ್ಕಳಿಗೆ ಅಂಬಿಕಾ ಬಾಳಿಹಳ್ಳಿಮಠ ದಾನವಾಗಿ ನೀಡಿದ ಶಾಲಾ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಅವರು, `ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿಕೊಳ್ಳಬೇಕು. ಪಾಲಕರು ಮತ್ತು ಶಿಕ್ಷಕರು ಅದಕ್ಕೆ ಸಹಕಾರ ನೀಡುವ ಅಗತ್ಯವಾಗಿದೆ' ಎಂದರು.<br /> <br /> ಕಲಘಟಗಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಮಾಕಣ್ಣವರ ಮಾತನಾಡಿ, `ಕೇವಲ ಶಾಲೆಯಲ್ಲಿ ಕಲಿಕೆಯ ವಾತಾವರಣ ಮೂಡಿದರೆ ಸಾಕಾಗದು. ಅದು ಸಮಾಜದಲ್ಲಿ ಮತ್ತು ಮನೆಯಲ್ಲಿಯೂ ಮೂಡಿ ಬರಬೇಕಾಗಿದೆ' ಎಂದರು.<br /> <br /> ಕಾರ್ಯಕ್ರಮದಲ್ಲಿ ದಾನಿ ಅಂಬಿಕಾ ಬಾಳಿಹಳ್ಳಿಮಠ, ಅಕ್ಕಮ್ಮೋ ಸುಣಗಾರ, ಬಿ.ಪಿ. ಅಂಗಡಿ, ಬಿ.ಎಚ್. ಚಲವಾದಿ, ಎ.ಬಿ.ಕುಂಬಾರ, ಎನ್.ಕೆ. ಗುಣಕಿ, ಎಸ್.ಎಸ್. ಬಂಡಗಾರ, ಮಹ್ಮದ್ರಫಿ ಹುಲಗೂರ, ನಾಗವೇಣಿ ಕಲಾಲ ಮತ್ತಿತರರು ಹಾಜರಿದ್ದರು.<br /> ಮುಖ್ಯಾಧ್ಯಾಪಕ ಗುರುಸ್ವಾಮಿ ಬಾಳಿಹಳ್ಳಿಮಠ ಸ್ವಾಗತಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಂದಗೋಳ : `ಮಕ್ಕಳು ಸಮಯದ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಇಂದು ಬೋಧಿಸಿದ ಅಭ್ಯಾಸವನ್ನು ಇಂದೇ ಮಾಡಿ ಮುಗಿಸಬೇಕು. ನಾಳೆ ಮಾಡಿದರಾಯಿತು ಎಂದುಕೊಂಡು ಕೂಡಬಾರದು. ದಾನವಾಗಿ ನೀಡಿದ ಸಮವಸ್ತ್ರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು' ಎಂದು ಧಾರವಾಡ ಡಯಟ್ನ ಹಿರಿಯ ಉಪನ್ಯಾಸಕಿ ಎ.ಎಚ್. ಹೂಗಾರ ಹೇಳಿದರು.<br /> <br /> ಪಟ್ಟಣದ ಗಾಂಧೀ ಹಿಂದಿ ವಿದ್ಯಾಪೀಠದ ಜಿ.ಎಸ್.ಪಿ.ಪಿ. ಸ್ಕೂಲಿನ ಮಕ್ಕಳಿಗೆ ಅಂಬಿಕಾ ಬಾಳಿಹಳ್ಳಿಮಠ ದಾನವಾಗಿ ನೀಡಿದ ಶಾಲಾ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಅವರು, `ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿಕೊಳ್ಳಬೇಕು. ಪಾಲಕರು ಮತ್ತು ಶಿಕ್ಷಕರು ಅದಕ್ಕೆ ಸಹಕಾರ ನೀಡುವ ಅಗತ್ಯವಾಗಿದೆ' ಎಂದರು.<br /> <br /> ಕಲಘಟಗಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಮಾಕಣ್ಣವರ ಮಾತನಾಡಿ, `ಕೇವಲ ಶಾಲೆಯಲ್ಲಿ ಕಲಿಕೆಯ ವಾತಾವರಣ ಮೂಡಿದರೆ ಸಾಕಾಗದು. ಅದು ಸಮಾಜದಲ್ಲಿ ಮತ್ತು ಮನೆಯಲ್ಲಿಯೂ ಮೂಡಿ ಬರಬೇಕಾಗಿದೆ' ಎಂದರು.<br /> <br /> ಕಾರ್ಯಕ್ರಮದಲ್ಲಿ ದಾನಿ ಅಂಬಿಕಾ ಬಾಳಿಹಳ್ಳಿಮಠ, ಅಕ್ಕಮ್ಮೋ ಸುಣಗಾರ, ಬಿ.ಪಿ. ಅಂಗಡಿ, ಬಿ.ಎಚ್. ಚಲವಾದಿ, ಎ.ಬಿ.ಕುಂಬಾರ, ಎನ್.ಕೆ. ಗುಣಕಿ, ಎಸ್.ಎಸ್. ಬಂಡಗಾರ, ಮಹ್ಮದ್ರಫಿ ಹುಲಗೂರ, ನಾಗವೇಣಿ ಕಲಾಲ ಮತ್ತಿತರರು ಹಾಜರಿದ್ದರು.<br /> ಮುಖ್ಯಾಧ್ಯಾಪಕ ಗುರುಸ್ವಾಮಿ ಬಾಳಿಹಳ್ಳಿಮಠ ಸ್ವಾಗತಿಸಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>