<p>ಬರದಿಂದ ಬಳಲಿದ ಜನರ ಬವಣೆಯನ್ನು ಆಲಿಸಲು ಬಣ ರಾಜಕೀಯ ಕಾರಣವಾಗಿ, ಅದು ಜಿದ್ದಿಗೆ ಬಿದ್ದವರಂತೆ ಎಲ್ಲ ಪಕ್ಷಗಳಲ್ಲಿಯೂ ಸಂಚಲನ ಮೂಡಿಸಿದೆ. ಇದೀಗ ನಾ ಮುಂದು ತಾ ಮುಂದು ಎಂದು ಆಳುವ -ಪ್ರತಿಪಕ್ಷಗಳ ನೇತಾರರು ಕೆಂಡದಂತಹ ಉರಿಬಿಸಿಲಿನಲ್ಲಿ ಒಳಗೊಳಗೇ ಕನಲುತ್ತ ಹಳ್ಳಿಗಳೆಡೆ ಕಾಲು ಹಾಕುತ್ತಿದ್ದಾರೆ. <br /> <br /> ಮುಖ್ಯಮಂತ್ರಿಗಳೂ ಬರದ ಸಮೀಕ್ಷೆ ಮಾಡಲು ಸಮಯವಿಲ್ಲದಿದ್ದರೂ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಆದರೆ ಈ ಭೇಟಿಗಳು ಕೇವಲ ಕಾಟಾಚಾರಕ್ಕೆಂಬಂತೆ, ಒಂದು - ಎರಡು ನಿಮಿಷಗಳಲ್ಲಿ ನಡೆಯುತ್ತಿವೆ. ಇದರಿಂದ ಜನತೆ ನೀಡಿದ ತೆರಿಗೆ ಹಣ ಮಂತ್ರಿಮಹೋದಯರ ಪ್ರವಾಸ - ಪ್ರಯಾಣ ಭತ್ಯೆಗಳಿಗೆ ಸಲುತ್ತಿದೆ.<br /> <br /> ಈ ಭತ್ಯೆಗಳು ಲಕ್ಷಗಳ ಮೊತ್ತವನ್ನು ದಾಟುತ್ತಿರುವುದು ಗಮನಾರ್ಹ. ಬರ ಸಮೀಕ್ಷೆಯೂ ಮಂತ್ರಿಗಳಿಗೆ ಲಾಭದಾಯಕವಾಗುತ್ತಿರುವುದರಿಂದ ವಿಡಿಯೋ ಸಂವಾದದ ಮೂಲಕವೇ ಬರ ಪರಿಹಾರ ಕಾಮಗಾರಿಗಳಿಗೆ ಮಾರ್ಗದರ್ಶನ ಮಾಡುವುದು ವಿಹಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬರದಿಂದ ಬಳಲಿದ ಜನರ ಬವಣೆಯನ್ನು ಆಲಿಸಲು ಬಣ ರಾಜಕೀಯ ಕಾರಣವಾಗಿ, ಅದು ಜಿದ್ದಿಗೆ ಬಿದ್ದವರಂತೆ ಎಲ್ಲ ಪಕ್ಷಗಳಲ್ಲಿಯೂ ಸಂಚಲನ ಮೂಡಿಸಿದೆ. ಇದೀಗ ನಾ ಮುಂದು ತಾ ಮುಂದು ಎಂದು ಆಳುವ -ಪ್ರತಿಪಕ್ಷಗಳ ನೇತಾರರು ಕೆಂಡದಂತಹ ಉರಿಬಿಸಿಲಿನಲ್ಲಿ ಒಳಗೊಳಗೇ ಕನಲುತ್ತ ಹಳ್ಳಿಗಳೆಡೆ ಕಾಲು ಹಾಕುತ್ತಿದ್ದಾರೆ. <br /> <br /> ಮುಖ್ಯಮಂತ್ರಿಗಳೂ ಬರದ ಸಮೀಕ್ಷೆ ಮಾಡಲು ಸಮಯವಿಲ್ಲದಿದ್ದರೂ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಆದರೆ ಈ ಭೇಟಿಗಳು ಕೇವಲ ಕಾಟಾಚಾರಕ್ಕೆಂಬಂತೆ, ಒಂದು - ಎರಡು ನಿಮಿಷಗಳಲ್ಲಿ ನಡೆಯುತ್ತಿವೆ. ಇದರಿಂದ ಜನತೆ ನೀಡಿದ ತೆರಿಗೆ ಹಣ ಮಂತ್ರಿಮಹೋದಯರ ಪ್ರವಾಸ - ಪ್ರಯಾಣ ಭತ್ಯೆಗಳಿಗೆ ಸಲುತ್ತಿದೆ.<br /> <br /> ಈ ಭತ್ಯೆಗಳು ಲಕ್ಷಗಳ ಮೊತ್ತವನ್ನು ದಾಟುತ್ತಿರುವುದು ಗಮನಾರ್ಹ. ಬರ ಸಮೀಕ್ಷೆಯೂ ಮಂತ್ರಿಗಳಿಗೆ ಲಾಭದಾಯಕವಾಗುತ್ತಿರುವುದರಿಂದ ವಿಡಿಯೋ ಸಂವಾದದ ಮೂಲಕವೇ ಬರ ಪರಿಹಾರ ಕಾಮಗಾರಿಗಳಿಗೆ ಮಾರ್ಗದರ್ಶನ ಮಾಡುವುದು ವಿಹಿತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>