<p><strong>ಧಾರವಾಡ</strong>: ಸಹಕಾರ ಸಂಘಗಳು ಲೆಕ್ಕ ಪರಿಶೋಧನೆಯನ್ನು ಇಲಾಖೆ ಸೂಚಿತ ಲೆಕ್ಕಪರಿಶೋಧಕರಿಂದಲೇ ನಡೆಸಬೇಕು ಎನ್ನುವ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಕಲಂ 63(1)ನ್ನು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ತಳ್ಳಿಹಾಕಿ ಶುಕ್ರವಾರ ಆದೇಶ ಹೊರಡಿಸಿದೆ.<br /> <br /> ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ಕ್ಕೆ ಸರ್ಕಾರ 2013ರ ಫೆಬ್ರುವರಿ 11ರಂದು ತಿದ್ದುಪಡಿ ತಂದಿತ್ತು. ತಿದ್ದುಪಡಿ ನಿಯಮ 63 (1)ರಡಿ ಸಹಕಾರ ಸಂಘಗಳು ಪ್ರತಿ ವರ್ಷ ಲೆಕ್ಕ ಪರಿಶೋಧನೆಯನ್ನು ಸರ್ಕಾರ ಸೂಚಿಸುವ 10 ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.<br /> <br /> ಇದನ್ನು ಪ್ರಶ್ನಿಸಿ ಸುಮಾರು 46 ಸಹಕಾರ ಸಂಘಗಳು ಹೈಕೋರ್ಟ್ ಸಂಚಾರಿ ಪೀಠದಲ್ಲಿ ಪ್ರತ್ಯೇಕ ರಿಟ್ ಅರ್ಜಿ ದಾಖಲಿಸಿದ್ದವು. ಈ ತಿದ್ದುಪಡಿ ಸಾರ್ವಜನಿಕ ಹಿತದೃಷ್ಟಿಯಿಂದಲೇ ಜಾರಿಗೊಳಿಸಲಾಗಿದೆ. ಅಲ್ಲದೇ, ಈ ಕುರಿತು ನಿಯಮಾವಳಿ ರೂಪಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು.<br /> <br /> ಇಂಥ ತಿದ್ದುಪಡಿ ತರಲು ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೇ, ನಿಯಮ 63 (1), ಸಂವಿಧಾನದ ಅನುಚ್ಛೇದ 243 (2)ಕ್ಕೆ ವಿರುದ್ಧವಾಗಿದೆ. ಸಹಕಾರಿ ಸಂಘಕ್ಕೆ 10 ಜನ ಲೆಕ್ಕ ಪರಿಶೋಧಕರನ್ನು ಸೂಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಚ್.ಜಿ.ರಮೇಶ ಅವರಿದ್ದ ಏಕಸದಸ್ಯಪೀಠ ತಳ್ಳಿಹಾಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಸಹಕಾರ ಸಂಘಗಳು ಲೆಕ್ಕ ಪರಿಶೋಧನೆಯನ್ನು ಇಲಾಖೆ ಸೂಚಿತ ಲೆಕ್ಕಪರಿಶೋಧಕರಿಂದಲೇ ನಡೆಸಬೇಕು ಎನ್ನುವ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಕಲಂ 63(1)ನ್ನು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ತಳ್ಳಿಹಾಕಿ ಶುಕ್ರವಾರ ಆದೇಶ ಹೊರಡಿಸಿದೆ.<br /> <br /> ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ಕ್ಕೆ ಸರ್ಕಾರ 2013ರ ಫೆಬ್ರುವರಿ 11ರಂದು ತಿದ್ದುಪಡಿ ತಂದಿತ್ತು. ತಿದ್ದುಪಡಿ ನಿಯಮ 63 (1)ರಡಿ ಸಹಕಾರ ಸಂಘಗಳು ಪ್ರತಿ ವರ್ಷ ಲೆಕ್ಕ ಪರಿಶೋಧನೆಯನ್ನು ಸರ್ಕಾರ ಸೂಚಿಸುವ 10 ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.<br /> <br /> ಇದನ್ನು ಪ್ರಶ್ನಿಸಿ ಸುಮಾರು 46 ಸಹಕಾರ ಸಂಘಗಳು ಹೈಕೋರ್ಟ್ ಸಂಚಾರಿ ಪೀಠದಲ್ಲಿ ಪ್ರತ್ಯೇಕ ರಿಟ್ ಅರ್ಜಿ ದಾಖಲಿಸಿದ್ದವು. ಈ ತಿದ್ದುಪಡಿ ಸಾರ್ವಜನಿಕ ಹಿತದೃಷ್ಟಿಯಿಂದಲೇ ಜಾರಿಗೊಳಿಸಲಾಗಿದೆ. ಅಲ್ಲದೇ, ಈ ಕುರಿತು ನಿಯಮಾವಳಿ ರೂಪಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು.<br /> <br /> ಇಂಥ ತಿದ್ದುಪಡಿ ತರಲು ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೇ, ನಿಯಮ 63 (1), ಸಂವಿಧಾನದ ಅನುಚ್ಛೇದ 243 (2)ಕ್ಕೆ ವಿರುದ್ಧವಾಗಿದೆ. ಸಹಕಾರಿ ಸಂಘಕ್ಕೆ 10 ಜನ ಲೆಕ್ಕ ಪರಿಶೋಧಕರನ್ನು ಸೂಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಚ್.ಜಿ.ರಮೇಶ ಅವರಿದ್ದ ಏಕಸದಸ್ಯಪೀಠ ತಳ್ಳಿಹಾಕಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>