<p><strong>ಕೆಜಿಎಫ್:</strong> ಕೃಷಿಯೇತರ ಚಟುವಟಿಕೆಗೆ ಕೊಡುವ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿ ಬ್ಯಾಂಕ್ಗಳ ವಿಶ್ವಾಸವನ್ನು ರೈತರು ಗಳಿಸಿಕೊಳ್ಳಬೇಕು ಎಂದು ಕೋಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ತಿಳಿಸಿದರು.<br /> <br /> ಸಮೀಪದ ಅರಿಮಾನಹಳ್ಳಿಯಲ್ಲಿ ಶುಕ್ರವಾರ ಕೆನರಾಬ್ಯಾಂಕ್ ವತಿಯಿಂದ 35 ಫಲಾನುಭವಿಗಳಿಗೆ ಹಸು ವಿತರಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಸ್ತುತ ಬರ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ. <br /> ವ್ಯವಸಾಯವನ್ನು ನಂಬಿ ಜೀವನ ನಡೆಸುವ ಹಾಗಿಲ್ಲ.<br /> <br /> ಇಂತಹ ಸಂದರ್ಭದಲ್ಲಿ ಕೃಷಿಯೇತರ ಚಟುವಟಿಕೆಯೊಂದೇ ರೈತರಿಗೆ ಜೀವನೋಪಾಯಕ್ಕೆ ಮಾರ್ಗವಾಗುತ್ತದೆ ಎಂದರು.ಕೆನರಾಬ್ಯಾಂಕ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುಲಿಕಟ್ಟಿ ಮಾತನಾಡಿ, ಬ್ಯಾಂಕ್ ಶೇ.18ರಷ್ಟು ಸಾಲವನ್ನು ಕೃಷಿ ಚಟುವಟಿಕೆಗೆ ಮೀಸಲಾಗಿಟ್ಟಿದೆ.<br /> <br /> ಕೃಷಿಯೇತರ ಚಟುವಟಿಕೆಯಾದ ಹಾಲು ಉತ್ಪಾದನೆಯಿಂದ ಗ್ರಾಮೀಣ ಪ್ರದೇಶದ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂಬ ದೃಷ್ಟಿಯಿಂದ ಹಸುಗಳ ಮೇಲೆ ಸಾಲ ವಿತರಿಸಲಾಗುತ್ತಿದೆ ಎಂದರು.<br /> <br /> ಹಸು ಪೋಷಿಸಲು ಖನಿಜಭರಿತ ಆಹಾರ ಅಗತ್ಯ. ಈ ಹಿನ್ನೆಲೆಯಲ್ಲಿ ರಾಸುಗಳಿಗೆ ನೀಡಲಾಗುವ ಅಜೋರಾ ಬೆಳೆಗೆ ಹಾಲು ಒಕ್ಕೂಟದ ವತಿಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹಾಲು ಒಕ್ಕೂಟದ ವ್ಯವಸ್ಥಾಪಕ ನಾರಾಯಣಸ್ವಾಮಿ ತಿಳಿಸಿದರು.<br /> <br /> ಉಪ ವ್ಯವಸ್ಥಾಪಕ ಡಾ.ವೆಂಕಟರಾಂ, ಬ್ಯಾಂಕ್ ವ್ಯವಸ್ಥಾಪಕ ಸುರೇಶ್ಕುಮಾರ್, ಅಧಿಕಾರಿಗಳಾದ ಚಂದ್ರಶೇಖರಬಾಬು, ಯಮುನಾದೇವಿ, ಪ್ರದೀಪ್ಕುಮಾರ್, ಗ್ರಾಮದ ಹಿರಿಯ ಗೋಪಣ್ಣ ಉಪಸ್ಥಿತರಿದ್ದರು. ದೇವೇಂದ್ರಪ್ಪ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ಕೃಷಿಯೇತರ ಚಟುವಟಿಕೆಗೆ ಕೊಡುವ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿ ಬ್ಯಾಂಕ್ಗಳ ವಿಶ್ವಾಸವನ್ನು ರೈತರು ಗಳಿಸಿಕೊಳ್ಳಬೇಕು ಎಂದು ಕೋಮುಲ್ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ತಿಳಿಸಿದರು.<br /> <br /> ಸಮೀಪದ ಅರಿಮಾನಹಳ್ಳಿಯಲ್ಲಿ ಶುಕ್ರವಾರ ಕೆನರಾಬ್ಯಾಂಕ್ ವತಿಯಿಂದ 35 ಫಲಾನುಭವಿಗಳಿಗೆ ಹಸು ವಿತರಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಸ್ತುತ ಬರ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ. <br /> ವ್ಯವಸಾಯವನ್ನು ನಂಬಿ ಜೀವನ ನಡೆಸುವ ಹಾಗಿಲ್ಲ.<br /> <br /> ಇಂತಹ ಸಂದರ್ಭದಲ್ಲಿ ಕೃಷಿಯೇತರ ಚಟುವಟಿಕೆಯೊಂದೇ ರೈತರಿಗೆ ಜೀವನೋಪಾಯಕ್ಕೆ ಮಾರ್ಗವಾಗುತ್ತದೆ ಎಂದರು.ಕೆನರಾಬ್ಯಾಂಕ್ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಹುಲಿಕಟ್ಟಿ ಮಾತನಾಡಿ, ಬ್ಯಾಂಕ್ ಶೇ.18ರಷ್ಟು ಸಾಲವನ್ನು ಕೃಷಿ ಚಟುವಟಿಕೆಗೆ ಮೀಸಲಾಗಿಟ್ಟಿದೆ.<br /> <br /> ಕೃಷಿಯೇತರ ಚಟುವಟಿಕೆಯಾದ ಹಾಲು ಉತ್ಪಾದನೆಯಿಂದ ಗ್ರಾಮೀಣ ಪ್ರದೇಶದ ರೈತರು ಆರ್ಥಿಕವಾಗಿ ಸಬಲರಾಗಬಹುದು ಎಂಬ ದೃಷ್ಟಿಯಿಂದ ಹಸುಗಳ ಮೇಲೆ ಸಾಲ ವಿತರಿಸಲಾಗುತ್ತಿದೆ ಎಂದರು.<br /> <br /> ಹಸು ಪೋಷಿಸಲು ಖನಿಜಭರಿತ ಆಹಾರ ಅಗತ್ಯ. ಈ ಹಿನ್ನೆಲೆಯಲ್ಲಿ ರಾಸುಗಳಿಗೆ ನೀಡಲಾಗುವ ಅಜೋರಾ ಬೆಳೆಗೆ ಹಾಲು ಒಕ್ಕೂಟದ ವತಿಯಿಂದ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಹಾಲು ಒಕ್ಕೂಟದ ವ್ಯವಸ್ಥಾಪಕ ನಾರಾಯಣಸ್ವಾಮಿ ತಿಳಿಸಿದರು.<br /> <br /> ಉಪ ವ್ಯವಸ್ಥಾಪಕ ಡಾ.ವೆಂಕಟರಾಂ, ಬ್ಯಾಂಕ್ ವ್ಯವಸ್ಥಾಪಕ ಸುರೇಶ್ಕುಮಾರ್, ಅಧಿಕಾರಿಗಳಾದ ಚಂದ್ರಶೇಖರಬಾಬು, ಯಮುನಾದೇವಿ, ಪ್ರದೀಪ್ಕುಮಾರ್, ಗ್ರಾಮದ ಹಿರಿಯ ಗೋಪಣ್ಣ ಉಪಸ್ಥಿತರಿದ್ದರು. ದೇವೇಂದ್ರಪ್ಪ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>