<p>`ಅಡುಗೆ ಮಾಡುತ್ತಾ, ಅದರ ಬಗ್ಗೆ ವಿವರಣೆ ನೀಡುತ್ತಾ, ಮಾಡಿದ ಅಡುಗೆ ರುಚಿ ನೋಡುತ್ತಾ ಕನ್ನಡದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಏಕೈಕ ವ್ಯಕ್ತಿ ನಾನೇ~ ಎಂದರು ಸಿಹಿಕಹಿ ಚಂದ್ರು. ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ.<br /> <br /> ಸುವರ್ಣ ವಾಹಿನಿಯಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿರುವ `ಬೊಂಬಾಟ್ ಭೋಜನ~ ಕಾರ್ಯಕ್ರಮ 500 ಕಂತು ದಾಟಿದ ಸಂದರ್ಭದಲ್ಲಿ ತಮ್ಮ `ಬೊಂಬಾಟ್ ಭೋಜನ~ ಪುಸ್ತಕದ 3ನೇ ಭಾಗ ಬಿಡುಗಡೆ ಮಾಡಲು ಕಾರ್ಯಕ್ರಮ ಆಯೋಜಿಸಿದ್ದರು ಚಂದ್ರು. ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿರುವ ತಮ್ಮ ಕಾರ್ಯಕ್ರಮ ಮತ್ತು ಅದಕ್ಕೆ ಸಿಗುತ್ತಿರುವ ಅಪಾರ ಮೆಚ್ಚುಗೆಯನ್ನು ವಿವರಿಸಿ ಪುಸ್ತಕ ಬಿಡುಗಡೆ ಮಾಡಿದರು.<br /> <br /> ಮಂಗರಸನ `ಸೂಪಶಾಸ್ತ್ರ~ ಆರು ಸಂಪುಟದಲ್ಲಿ ಮುದ್ರಣವಾಗಿರುವಂತೆ ತಮ್ಮ ಬೊಂಬಾಟ್ ಭೋಜನ ಪುಸ್ತಕಗಳ ಸರಣಿಯನ್ನು ಆರು ಸಂಪುಟದಲ್ಲಿ ಹೊರತರುವಾಸೆಯನ್ನು ವ್ಯಕ್ತಪಡಿಸಿದ ಅವರು, 15 ವರ್ಷಗಳ ಹಿಂದೆ ಉದಯಟೀವಿಗೆ `ನಳಪಾಕ~ ಮತ್ತು `ರಸಪಾಕ~ ಕಾರ್ಯಕ್ರಮಗಳನ್ನು ಮಾಡಿದ್ದನ್ನು ನೆನಪಿಸಿಕೊಂಡರು.<br /> <br /> ಅಡುಗೆ ಕಾರ್ಯಕ್ರಮ ಹೊರತುಪಡಿಸಿ ನಟನಾಗಿಯೇ ತಮ್ಮನ್ನು ಜನ ಗುರುತಿಸಿಬೇಕು ಎಂದು ಹೇಳಿಕೊಳ್ಳುವ ಚಂದ್ರು, ಮಾಂಸಾಹಾರ ಯಾಕೆ ಮಾಡುವುದಿಲ್ಲ? ಎಂಬ ಆಕ್ಷೇಪವನ್ನೂ ಎದುರಿಸಿದ್ದಾರೆ.<br /> <br /> `ನಾನು ಮೂಲತಃ ಸಸ್ಯಾಹಾರಿ. ಈ ವಯಸ್ಸಿನಲ್ಲಿ ಮಾಂಸಾಹಾರ ಕಲಿತು ರುಚಿ ನೋಡಲು ಸಾಧ್ಯವಿಲ್ಲ. ಅದರಲ್ಲೂ ಇಂದು ಸಾಕಷ್ಟು ಮಾಂಸಾಹಾರಿಗಳೇ ಸಸ್ಯಾಹಾರಿಗಳಾಗಿ ಬದಲಾಗುತ್ತಿದ್ದಾರೆ. ಅದರಿಂದ ನಾನೂ ಸಸ್ಯಾಹಾರಿಯಾಗಿಯೇ ಮುಂದುವರಿಯಲು ಇಷ್ಟಪಡುವೆ~ ಎನ್ನುತ್ತಾರೆ. ಅವರು ಎದುರಿಸಿದ ಮತ್ತೊಂದು ಆಕ್ಷೇಪ ಹೆಚ್ಚು ತುಪ್ಪ, ಗೋಡಂಬಿ ಬಳಕೆ ಬಗ್ಗೆ. ಅದಕ್ಕೂ ಉತ್ತರ ನೀಡಿದ ಚಂದ್ರು, `ಹೌದು ತುಂಬಾ ಜನ ನೀವು ಶ್ರೀಮಂತರ ಅಡುಗೆ ತೋರಿಸುವಿರಿ ಎಂದಿದ್ದಾರೆ. ತುಪ್ಪದ ಬದಲು ಎಣ್ಣೆ ಬಳಸಿ. ನನ್ನ ಅಭ್ಯಂತರವಿಲ್ಲ. ಆದರೆ ತುಪ್ಪ ಹಾಕಿದರೆ ಹೆಚ್ಚು ರುಚಿ ಇರುತ್ತದೆ ಎಂಬ ಕಾರಣದಿಂದ ನಾನು ಬಳಸುವೆ~ ಎನ್ನುತ್ತಾ ತುಂಬುಗೆನ್ನೆ ತುಳುಕಿಸಿದರು.<br /> <br /> ತಮ್ಮ ಮೊದಲ ಮತ್ತು ಎರಡನೇ ಭಾಗದ ಪುಸ್ತಕಗಳು ಒಂದು ವಾರದಲ್ಲಿಯೇ 11ಸಾವಿರ ಪ್ರತಿಗಳು ಖರ್ಚಾಗಿದ್ದು ಅವರ ಸಂತಸಕ್ಕೆ ಮತ್ತೊಂದು ಕಾರಣವಾಗಿತ್ತು. ಅದರ ಉತ್ತೇಜನದಿಂದಲೇ ಮೂರನೇ ಭಾಗವನ್ನು ಹೊರತಂದಿರುವ ಚಂದ್ರು ತಮ್ಮ ಪ್ರತೀ ಪುಸ್ತಕದಲ್ಲಿಯೂ ನೂರು ರೆಸಿಪಿ ಬರೆದಿದ್ದಾರೆ. <br /> <br /> ಕಾರ್ಯಕ್ರಮದಲ್ಲಿ `ನಮ್ಮೂರ ಊಟ~ ಎಂಬ ಹೊಸ ಭಾಗವನ್ನು ಸೇರಿಸಿದ್ದು, ಡಯಟ್ ಸಪ್ತಾಹ, ಮಧುಮೇಹ ಸಪ್ತಾಹಗಳನ್ನು ಆಧರಿಸಿ ಅಡುಗೆ ಮಾಡುವ ಆಲೋಚನೆ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಡುಗೆ ಮಾಡುತ್ತಾ, ಅದರ ಬಗ್ಗೆ ವಿವರಣೆ ನೀಡುತ್ತಾ, ಮಾಡಿದ ಅಡುಗೆ ರುಚಿ ನೋಡುತ್ತಾ ಕನ್ನಡದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿರುವ ಏಕೈಕ ವ್ಯಕ್ತಿ ನಾನೇ~ ಎಂದರು ಸಿಹಿಕಹಿ ಚಂದ್ರು. ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ.<br /> <br /> ಸುವರ್ಣ ವಾಹಿನಿಯಲ್ಲಿ ಎರಡು ವರ್ಷಗಳಿಂದ ನಿರಂತರವಾಗಿ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುತ್ತಿರುವ `ಬೊಂಬಾಟ್ ಭೋಜನ~ ಕಾರ್ಯಕ್ರಮ 500 ಕಂತು ದಾಟಿದ ಸಂದರ್ಭದಲ್ಲಿ ತಮ್ಮ `ಬೊಂಬಾಟ್ ಭೋಜನ~ ಪುಸ್ತಕದ 3ನೇ ಭಾಗ ಬಿಡುಗಡೆ ಮಾಡಲು ಕಾರ್ಯಕ್ರಮ ಆಯೋಜಿಸಿದ್ದರು ಚಂದ್ರು. ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿರುವ ತಮ್ಮ ಕಾರ್ಯಕ್ರಮ ಮತ್ತು ಅದಕ್ಕೆ ಸಿಗುತ್ತಿರುವ ಅಪಾರ ಮೆಚ್ಚುಗೆಯನ್ನು ವಿವರಿಸಿ ಪುಸ್ತಕ ಬಿಡುಗಡೆ ಮಾಡಿದರು.<br /> <br /> ಮಂಗರಸನ `ಸೂಪಶಾಸ್ತ್ರ~ ಆರು ಸಂಪುಟದಲ್ಲಿ ಮುದ್ರಣವಾಗಿರುವಂತೆ ತಮ್ಮ ಬೊಂಬಾಟ್ ಭೋಜನ ಪುಸ್ತಕಗಳ ಸರಣಿಯನ್ನು ಆರು ಸಂಪುಟದಲ್ಲಿ ಹೊರತರುವಾಸೆಯನ್ನು ವ್ಯಕ್ತಪಡಿಸಿದ ಅವರು, 15 ವರ್ಷಗಳ ಹಿಂದೆ ಉದಯಟೀವಿಗೆ `ನಳಪಾಕ~ ಮತ್ತು `ರಸಪಾಕ~ ಕಾರ್ಯಕ್ರಮಗಳನ್ನು ಮಾಡಿದ್ದನ್ನು ನೆನಪಿಸಿಕೊಂಡರು.<br /> <br /> ಅಡುಗೆ ಕಾರ್ಯಕ್ರಮ ಹೊರತುಪಡಿಸಿ ನಟನಾಗಿಯೇ ತಮ್ಮನ್ನು ಜನ ಗುರುತಿಸಿಬೇಕು ಎಂದು ಹೇಳಿಕೊಳ್ಳುವ ಚಂದ್ರು, ಮಾಂಸಾಹಾರ ಯಾಕೆ ಮಾಡುವುದಿಲ್ಲ? ಎಂಬ ಆಕ್ಷೇಪವನ್ನೂ ಎದುರಿಸಿದ್ದಾರೆ.<br /> <br /> `ನಾನು ಮೂಲತಃ ಸಸ್ಯಾಹಾರಿ. ಈ ವಯಸ್ಸಿನಲ್ಲಿ ಮಾಂಸಾಹಾರ ಕಲಿತು ರುಚಿ ನೋಡಲು ಸಾಧ್ಯವಿಲ್ಲ. ಅದರಲ್ಲೂ ಇಂದು ಸಾಕಷ್ಟು ಮಾಂಸಾಹಾರಿಗಳೇ ಸಸ್ಯಾಹಾರಿಗಳಾಗಿ ಬದಲಾಗುತ್ತಿದ್ದಾರೆ. ಅದರಿಂದ ನಾನೂ ಸಸ್ಯಾಹಾರಿಯಾಗಿಯೇ ಮುಂದುವರಿಯಲು ಇಷ್ಟಪಡುವೆ~ ಎನ್ನುತ್ತಾರೆ. ಅವರು ಎದುರಿಸಿದ ಮತ್ತೊಂದು ಆಕ್ಷೇಪ ಹೆಚ್ಚು ತುಪ್ಪ, ಗೋಡಂಬಿ ಬಳಕೆ ಬಗ್ಗೆ. ಅದಕ್ಕೂ ಉತ್ತರ ನೀಡಿದ ಚಂದ್ರು, `ಹೌದು ತುಂಬಾ ಜನ ನೀವು ಶ್ರೀಮಂತರ ಅಡುಗೆ ತೋರಿಸುವಿರಿ ಎಂದಿದ್ದಾರೆ. ತುಪ್ಪದ ಬದಲು ಎಣ್ಣೆ ಬಳಸಿ. ನನ್ನ ಅಭ್ಯಂತರವಿಲ್ಲ. ಆದರೆ ತುಪ್ಪ ಹಾಕಿದರೆ ಹೆಚ್ಚು ರುಚಿ ಇರುತ್ತದೆ ಎಂಬ ಕಾರಣದಿಂದ ನಾನು ಬಳಸುವೆ~ ಎನ್ನುತ್ತಾ ತುಂಬುಗೆನ್ನೆ ತುಳುಕಿಸಿದರು.<br /> <br /> ತಮ್ಮ ಮೊದಲ ಮತ್ತು ಎರಡನೇ ಭಾಗದ ಪುಸ್ತಕಗಳು ಒಂದು ವಾರದಲ್ಲಿಯೇ 11ಸಾವಿರ ಪ್ರತಿಗಳು ಖರ್ಚಾಗಿದ್ದು ಅವರ ಸಂತಸಕ್ಕೆ ಮತ್ತೊಂದು ಕಾರಣವಾಗಿತ್ತು. ಅದರ ಉತ್ತೇಜನದಿಂದಲೇ ಮೂರನೇ ಭಾಗವನ್ನು ಹೊರತಂದಿರುವ ಚಂದ್ರು ತಮ್ಮ ಪ್ರತೀ ಪುಸ್ತಕದಲ್ಲಿಯೂ ನೂರು ರೆಸಿಪಿ ಬರೆದಿದ್ದಾರೆ. <br /> <br /> ಕಾರ್ಯಕ್ರಮದಲ್ಲಿ `ನಮ್ಮೂರ ಊಟ~ ಎಂಬ ಹೊಸ ಭಾಗವನ್ನು ಸೇರಿಸಿದ್ದು, ಡಯಟ್ ಸಪ್ತಾಹ, ಮಧುಮೇಹ ಸಪ್ತಾಹಗಳನ್ನು ಆಧರಿಸಿ ಅಡುಗೆ ಮಾಡುವ ಆಲೋಚನೆ ಅವರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>