<p><strong>ವಿಶ್ವನಾಥ ಎಚ್.ಸಿ. <br /> ನನಗೆ ಹೃದಯದಲ್ಲಿ ಕಡಿತ ಮತ್ತು ನೋವು ಬರುತ್ತದೆ, ಕಾರಣ ತಿಳಿಸಿ.</strong><br /> ಹೃದಯದಲ್ಲಿ ಕಡಿತ ಬರಲು ಸಾಧ್ಯವಿಲ್ಲ. ಹೃದಯಕ್ಕೆ ನೋವಿಲ್ಲ. ನಿಮ್ಮ ಕಡಿತ ಎದೆಯಲ್ಲಿ ಇರಬೇಕು. ಅದಕ್ಕೆ ಹಲವಾರು ಕಾರಣಗಳಿವೆ. ಉತ್ತಮ ವೈದ್ಯರಿಂದ ಪರೀಕ್ಷಿಸಿಕೊಳ್ಳಿ, ಹೆದರಬೇಡಿ.</p>.<p><strong>ವಿಜಯ ಕುಮಾರ್, 53 ವರ್ಷ, ಬೆಂಗಳೂರು.</strong><br /> ನಾನು ಸುಮಾರು 3-4 ವರ್ಷಗಳಿಂದ ಕೀಲು ನೋವುಗಳಿಂದ ಬಳಲುತ್ತಿದ್ದೇನೆ. ಒಬ್ಬ ವೈದ್ಯರ ಸಲಹೆಯಂತೆ ರೆಮಟಾಲಜಿ ತಜ್ಞ ವೈದ್ಯರನ್ನು ಭೇಟಿ ಮಾಡಿದ್ದೇನೆ. ಅವರು ಹಲವು ಪರೀಕ್ಷೆಗಳಿಗೆ ಸಲಹೆ ಮಾಡಿದರು. <br /> <br /> ಆದರೆ ANA profile ಪರೀಕ್ಷೆ ಬಹು ದುಬಾರಿಯಾದುದರಿಂದ ಅದನ್ನು ಮಾಡಿಸಲಿಲ್ಲ. ಮತ್ತೊಬ್ಬ ರೆಮಟಾಲಜಿ ತಜ್ಞರು ಪೂರ್ಣ ರಕ್ತ ಪರೀಕ್ಷೆ, ಮೂತ್ರ ಹಾಗೂ ಇನ್ನೂ ಅನೇಕ ಪರೀಕ್ಷೆಗಳಿಗೆ ಸಲಹೆ ಮಾಡಿದರು. <br /> <br /> ಈ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲಾಯಿತು. ಆದರೆ ಎಲ್ಲವೂ ಸಾಮಾನ್ಯ ಆಗಿದೆ ಎಂದು ರಿಪೋರ್ಟ್ ಬಂದಿದೆ. ನನಗೆ ಮೊದಲು ಪಾದಗಳು, ಭುಜಗಳು ಹಾಗೂ ಕತ್ತು ನೋವಿತ್ತು. ಈಗ ಒಂದು ವರ್ಷದಿಂದ ಮಣಿಕಟ್ಟು, ಹಸ್ತಗಳ ಉರಿಯಾತನೆಯಿಂದ ಬಳಲುತ್ತಿದ್ದೇನೆ. ರಾತ್ರಿ ಹೆಚ್ಚಾಗುವುದು; ಬೆಳಿಗ್ಗೆ ನೋವಿರುತ್ತದೆ. ನಿದ್ದೆಯ ಅಡಚಣೆ ಇದೆ. ಗಾಢವಾದ ನಿದ್ದೆ ಇಲ್ಲ. ಜಾಗೃತಾವಸ್ಥೆಯಿಂದ ಜಾರಿದರೆ ಸ್ವಪ್ನಾವಸ್ಥೆಗೆ ತಲುಪುತ್ತೇನೆ.<br /> <br /> ಆದುದರಿಂದ ಈ ಕಾಯಿಲೆ ಏನು? ಇದನ್ನು ಗುಣಪಡಿಸಬಹುದೆ? ಇದರಿಂದ ಭವಿಷ್ಯದಲ್ಲಿ ಏನೇನಾಗವುದೋ ಎಂಬ ಆತಂಕವೂ ಇದೆ. ಇದಕ್ಕೆ ಎಂತಹ ಚಿಕಿತ್ಸೆ ಅವಶ್ಯಕ ಎಂದು ತಿಳಿಬೇಕಾಗಿ ಮನವಿ.<br /> <br /> ದಯವಿಟ್ಟು ನಿಮ್ಮ ಎರಡನೇ ವೈದ್ಯರ ಸಲಹೆ ಮೇರೆಗೆ ಉಪಶಮನ ಪಡಕೊಳ್ಳಿ. Greek ಮತ್ತು latin ನ ದೊಡ್ಡ ಶಬ್ದಗಳಿಂದ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪತ್ರದ ಸಾರಾಂಶದಿಂದ ನನ್ನ ಅಭಿಪ್ರಾಯದಲ್ಲಿ ನಿಮಗಂತಹ ಏನೂ ಕಾಯಿಲೆ ಇಲ್ಲ. ಕಾಯಿಲೆ ಇದೆ ಎಂದು ಹೆದರುವುದು ಕಾಯಿಲೆ ಇರುವುದಕ್ಕಿಂತಲೂ ಕಷ್ಟ. ಎರಡನೆ ವೈದ್ಯರ ಸಲಹೆ ಪಡೆದುಕೊಂಡು ಗುಣಮುಖರಾಗಿ.</p>.<p><strong>ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? </strong>ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರಬಹುದಲ್ಲವೆ? ಈ ಪ್ರಶ್ನೆಗಳನ್ನು ಬರೆದು ನಮಗೆ ಕಳಿಸಿ. ನಿಮ್ಮ ಈ ಪ್ರಶ್ನೆಗಳಿಗೆ `ಸ್ವಾಸ್ಥ್ಯ- ಸೌಖ್ಯ~ದ ಅಂಕಣಕಾರರೂ ಆದ ಪ್ರೊ ಬಿ.ಎಂ.ಹೆಗ್ಡೆ ಉತ್ತರಿಸಲಿದ್ದಾರೆ. <br /> <br /> <strong>ಪ್ರಶ್ನೆಕಳಿಸುವ ವಿಳಾಸ: ಸಂಪಾದಕರು, ಭೂಮಿಕಾ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು - 560001 </strong>ಇ-ಮೇಲ್ ವಿಳಾಸ: <a href="mailto:bhoomikapv@gmail.com">bhoomikapv@gmail.com</a> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವನಾಥ ಎಚ್.ಸಿ. <br /> ನನಗೆ ಹೃದಯದಲ್ಲಿ ಕಡಿತ ಮತ್ತು ನೋವು ಬರುತ್ತದೆ, ಕಾರಣ ತಿಳಿಸಿ.</strong><br /> ಹೃದಯದಲ್ಲಿ ಕಡಿತ ಬರಲು ಸಾಧ್ಯವಿಲ್ಲ. ಹೃದಯಕ್ಕೆ ನೋವಿಲ್ಲ. ನಿಮ್ಮ ಕಡಿತ ಎದೆಯಲ್ಲಿ ಇರಬೇಕು. ಅದಕ್ಕೆ ಹಲವಾರು ಕಾರಣಗಳಿವೆ. ಉತ್ತಮ ವೈದ್ಯರಿಂದ ಪರೀಕ್ಷಿಸಿಕೊಳ್ಳಿ, ಹೆದರಬೇಡಿ.</p>.<p><strong>ವಿಜಯ ಕುಮಾರ್, 53 ವರ್ಷ, ಬೆಂಗಳೂರು.</strong><br /> ನಾನು ಸುಮಾರು 3-4 ವರ್ಷಗಳಿಂದ ಕೀಲು ನೋವುಗಳಿಂದ ಬಳಲುತ್ತಿದ್ದೇನೆ. ಒಬ್ಬ ವೈದ್ಯರ ಸಲಹೆಯಂತೆ ರೆಮಟಾಲಜಿ ತಜ್ಞ ವೈದ್ಯರನ್ನು ಭೇಟಿ ಮಾಡಿದ್ದೇನೆ. ಅವರು ಹಲವು ಪರೀಕ್ಷೆಗಳಿಗೆ ಸಲಹೆ ಮಾಡಿದರು. <br /> <br /> ಆದರೆ ANA profile ಪರೀಕ್ಷೆ ಬಹು ದುಬಾರಿಯಾದುದರಿಂದ ಅದನ್ನು ಮಾಡಿಸಲಿಲ್ಲ. ಮತ್ತೊಬ್ಬ ರೆಮಟಾಲಜಿ ತಜ್ಞರು ಪೂರ್ಣ ರಕ್ತ ಪರೀಕ್ಷೆ, ಮೂತ್ರ ಹಾಗೂ ಇನ್ನೂ ಅನೇಕ ಪರೀಕ್ಷೆಗಳಿಗೆ ಸಲಹೆ ಮಾಡಿದರು. <br /> <br /> ಈ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲಾಯಿತು. ಆದರೆ ಎಲ್ಲವೂ ಸಾಮಾನ್ಯ ಆಗಿದೆ ಎಂದು ರಿಪೋರ್ಟ್ ಬಂದಿದೆ. ನನಗೆ ಮೊದಲು ಪಾದಗಳು, ಭುಜಗಳು ಹಾಗೂ ಕತ್ತು ನೋವಿತ್ತು. ಈಗ ಒಂದು ವರ್ಷದಿಂದ ಮಣಿಕಟ್ಟು, ಹಸ್ತಗಳ ಉರಿಯಾತನೆಯಿಂದ ಬಳಲುತ್ತಿದ್ದೇನೆ. ರಾತ್ರಿ ಹೆಚ್ಚಾಗುವುದು; ಬೆಳಿಗ್ಗೆ ನೋವಿರುತ್ತದೆ. ನಿದ್ದೆಯ ಅಡಚಣೆ ಇದೆ. ಗಾಢವಾದ ನಿದ್ದೆ ಇಲ್ಲ. ಜಾಗೃತಾವಸ್ಥೆಯಿಂದ ಜಾರಿದರೆ ಸ್ವಪ್ನಾವಸ್ಥೆಗೆ ತಲುಪುತ್ತೇನೆ.<br /> <br /> ಆದುದರಿಂದ ಈ ಕಾಯಿಲೆ ಏನು? ಇದನ್ನು ಗುಣಪಡಿಸಬಹುದೆ? ಇದರಿಂದ ಭವಿಷ್ಯದಲ್ಲಿ ಏನೇನಾಗವುದೋ ಎಂಬ ಆತಂಕವೂ ಇದೆ. ಇದಕ್ಕೆ ಎಂತಹ ಚಿಕಿತ್ಸೆ ಅವಶ್ಯಕ ಎಂದು ತಿಳಿಬೇಕಾಗಿ ಮನವಿ.<br /> <br /> ದಯವಿಟ್ಟು ನಿಮ್ಮ ಎರಡನೇ ವೈದ್ಯರ ಸಲಹೆ ಮೇರೆಗೆ ಉಪಶಮನ ಪಡಕೊಳ್ಳಿ. Greek ಮತ್ತು latin ನ ದೊಡ್ಡ ಶಬ್ದಗಳಿಂದ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪತ್ರದ ಸಾರಾಂಶದಿಂದ ನನ್ನ ಅಭಿಪ್ರಾಯದಲ್ಲಿ ನಿಮಗಂತಹ ಏನೂ ಕಾಯಿಲೆ ಇಲ್ಲ. ಕಾಯಿಲೆ ಇದೆ ಎಂದು ಹೆದರುವುದು ಕಾಯಿಲೆ ಇರುವುದಕ್ಕಿಂತಲೂ ಕಷ್ಟ. ಎರಡನೆ ವೈದ್ಯರ ಸಲಹೆ ಪಡೆದುಕೊಂಡು ಗುಣಮುಖರಾಗಿ.</p>.<p><strong>ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? </strong>ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರಬಹುದಲ್ಲವೆ? ಈ ಪ್ರಶ್ನೆಗಳನ್ನು ಬರೆದು ನಮಗೆ ಕಳಿಸಿ. ನಿಮ್ಮ ಈ ಪ್ರಶ್ನೆಗಳಿಗೆ `ಸ್ವಾಸ್ಥ್ಯ- ಸೌಖ್ಯ~ದ ಅಂಕಣಕಾರರೂ ಆದ ಪ್ರೊ ಬಿ.ಎಂ.ಹೆಗ್ಡೆ ಉತ್ತರಿಸಲಿದ್ದಾರೆ. <br /> <br /> <strong>ಪ್ರಶ್ನೆಕಳಿಸುವ ವಿಳಾಸ: ಸಂಪಾದಕರು, ಭೂಮಿಕಾ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು - 560001 </strong>ಇ-ಮೇಲ್ ವಿಳಾಸ: <a href="mailto:bhoomikapv@gmail.com">bhoomikapv@gmail.com</a> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>