<p>`ಸಿದ್ದರಾಮಯ್ಯ ಅನುಭವಿ, ಒಳ್ಳೆಯ ಬಜೆಟ್ ಮಂಡಿಸುತ್ತಾರೆಂದು ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂತಹ ಎಲ್ಲ ನಿರೀಕ್ಷೆಗಳನ್ನು ಅವರು ಹುಸಿಗೊಳಿಸಿದ್ದಾರೆ. ಈ ಬಜೆಟ್ಗೆ ದೂರದೃಷ್ಟಿ ಇಲ್ಲ. ಸಾಲ ಸಿಗುತ್ತೆ ಅಂಥ ಸಾಲ ಮಾಡಬಾರದೆಂದು ಬುದ್ಧಿ ಹೇಳಿ ಅಂತಿಮವಾಗಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಅಗ್ಗದ ಮದ್ಯ ನೀಡುವ ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ಇತರ ಮದ್ಯಗಳದರವನ್ನು ವಿಪರೀತ ಹೆಚ್ಚಿಸಿದ್ದಾರೆ. ಒಟ್ಟಾರೆ ಈ ಬಜೆಟ್ನಲ್ಲಿ ಸಮನ್ವಯ ಸಮಿತಿಯ `ಗುಮ್ಮ' ಅಡಗಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಇದು ಜನಪರವಾಗಿಲ್ಲ'.<br /> <strong>- ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ</strong><br /> <br /> <span style="color:#ff0000;"><strong></strong></span></p>.<p><span style="color:#ff0000;"><strong>`ಮುಂದುವರಿದ ಭಾಗ....'</strong></span><br /> `ಈ ಬಜೆಟ್ ನಾನು ಫೆಬ್ರುವರಿ 8ರಂದು ಮಂಡಿಸಿದ ಬಜೆಟ್ನ ಮುಂದುವರಿದ ಭಾಗ. ಆದರೆ, ನಾವು ಘೋಷಣೆ ಮಾಡಿದ್ದ ಹೊಸ ತಾಲ್ಲೂಕುಗಳ ರಚನೆಯನ್ನು ಕೈಬಿಟ್ಟಿರುವುದು ಬೇಸರದ ಸಂಗತಿ. ನೀರಾವರಿ ಮತ್ತು ಕೃಷಿಗೆ ಆದ್ಯತೆ ಕೊಟ್ಟಿಲ್ಲ. ಪ್ರತ್ಯೇಕವಾದ ಕೃಷಿ ಬಜೆಟ್ ಮಂಡಿಸದೆ ಕೃಷಿ ಕ್ಷೇತ್ರ ನಿರ್ಲಕ್ಷಿಸಲಾಗಿದೆ'.<br /> - ಜಗದೀಶ ಶೆಟ್ಟರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ<br /> <br /> <br /> <br /> <span style="color:#ff0000;"><strong></strong></span></p>.<p><span style="color:#ff0000;"><strong>`ಸೈಕಲ್, ಭಾಗ್ಯಲಕ್ಷ್ಮಿ ಇಲ್ಲ'</strong></span><br /> `ಈ ಬಜೆಟ್ನಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಿಲ್ಲ. ದೂರದೃಷ್ಟಿ ಇಲ್ಲ. ಸಕ್ಕರೆ ಮೇಲಿನ ಪ್ರವೇಶ ಶುಲ್ಕವನ್ನು ತೆಗೆದು, ವ್ಯಾಟ್ ವಿಧಿಸಿರುವುದರಲ್ಲಿ ಅಂತಹ ವ್ಯತ್ಯಾಸ ಏನೂ ಕಾಣುವುದಿಲ್ಲ. ಸೈಕಲ್, ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ ಯೋಜನೆಗಳ ಪ್ರಸ್ತಾಪ ಇಲ್ಲ'.<br /> - ಬಿ.ಎಸ್.ಯಡಿಯೂರಪ್ಪ, ಕೆಜೆಪಿ ಶಾಸಕಾಂಗ ಪಕ್ಷದ ನಾಯಕ<br /> <br /> <br /> </p>.<p><span style="color:#ff0000;"><strong>`ಸಮಗ್ರ ದೃಷ್ಟಿಕೋನದ ಕೊರತೆ'</strong></span><br /> ಯಾವುದೇ ಹೊಸತನ ಇಲ್ಲದ ಬಿಜೆಪಿ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್. ಅಂಕಿ-ಸಂಖ್ಯೆಗಳು ಇಲ್ಲದ ಮಾಹಿತಿಗಳ ಮೇಲೆ ಕಣ್ಣಾಡಿಸಿದಾಗ ರಾಜ್ಯಪಾಲರ ಭಾಷಣ ಓದಿದಂತೆ ಭಾಸವಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಸಮಗ್ರವಾದ ದೃಷ್ಟಿಕೋನ ಬಜೆಟ್ನಲ್ಲಿ ಕಾಣುವುದಿಲ್ಲ. ಹಣದುಬ್ಬರಕ್ಕೂ ಯಾವುದೇ ಪರಿಹಾರ ಇಲ್ಲ. ಬೆಂಗಳೂರಿನ ಸಮಸ್ಯೆಗಳಿಗೆ ಉತ್ತರ ಇಲ್ಲ.<br /> - ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಸಿದ್ದರಾಮಯ್ಯ ಅನುಭವಿ, ಒಳ್ಳೆಯ ಬಜೆಟ್ ಮಂಡಿಸುತ್ತಾರೆಂದು ಜನ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅಂತಹ ಎಲ್ಲ ನಿರೀಕ್ಷೆಗಳನ್ನು ಅವರು ಹುಸಿಗೊಳಿಸಿದ್ದಾರೆ. ಈ ಬಜೆಟ್ಗೆ ದೂರದೃಷ್ಟಿ ಇಲ್ಲ. ಸಾಲ ಸಿಗುತ್ತೆ ಅಂಥ ಸಾಲ ಮಾಡಬಾರದೆಂದು ಬುದ್ಧಿ ಹೇಳಿ ಅಂತಿಮವಾಗಿ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ್ದಾರೆ. ಅಗ್ಗದ ಮದ್ಯ ನೀಡುವ ಯೋಜನೆಗೆ ಚಾಲನೆ ನೀಡುವ ಉದ್ದೇಶದಿಂದ ಇತರ ಮದ್ಯಗಳದರವನ್ನು ವಿಪರೀತ ಹೆಚ್ಚಿಸಿದ್ದಾರೆ. ಒಟ್ಟಾರೆ ಈ ಬಜೆಟ್ನಲ್ಲಿ ಸಮನ್ವಯ ಸಮಿತಿಯ `ಗುಮ್ಮ' ಅಡಗಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಇದು ಜನಪರವಾಗಿಲ್ಲ'.<br /> <strong>- ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆ ಪ್ರತಿಪಕ್ಷ ನಾಯಕ</strong><br /> <br /> <span style="color:#ff0000;"><strong></strong></span></p>.<p><span style="color:#ff0000;"><strong>`ಮುಂದುವರಿದ ಭಾಗ....'</strong></span><br /> `ಈ ಬಜೆಟ್ ನಾನು ಫೆಬ್ರುವರಿ 8ರಂದು ಮಂಡಿಸಿದ ಬಜೆಟ್ನ ಮುಂದುವರಿದ ಭಾಗ. ಆದರೆ, ನಾವು ಘೋಷಣೆ ಮಾಡಿದ್ದ ಹೊಸ ತಾಲ್ಲೂಕುಗಳ ರಚನೆಯನ್ನು ಕೈಬಿಟ್ಟಿರುವುದು ಬೇಸರದ ಸಂಗತಿ. ನೀರಾವರಿ ಮತ್ತು ಕೃಷಿಗೆ ಆದ್ಯತೆ ಕೊಟ್ಟಿಲ್ಲ. ಪ್ರತ್ಯೇಕವಾದ ಕೃಷಿ ಬಜೆಟ್ ಮಂಡಿಸದೆ ಕೃಷಿ ಕ್ಷೇತ್ರ ನಿರ್ಲಕ್ಷಿಸಲಾಗಿದೆ'.<br /> - ಜಗದೀಶ ಶೆಟ್ಟರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ<br /> <br /> <br /> <br /> <span style="color:#ff0000;"><strong></strong></span></p>.<p><span style="color:#ff0000;"><strong>`ಸೈಕಲ್, ಭಾಗ್ಯಲಕ್ಷ್ಮಿ ಇಲ್ಲ'</strong></span><br /> `ಈ ಬಜೆಟ್ನಲ್ಲಿ ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಿಲ್ಲ. ದೂರದೃಷ್ಟಿ ಇಲ್ಲ. ಸಕ್ಕರೆ ಮೇಲಿನ ಪ್ರವೇಶ ಶುಲ್ಕವನ್ನು ತೆಗೆದು, ವ್ಯಾಟ್ ವಿಧಿಸಿರುವುದರಲ್ಲಿ ಅಂತಹ ವ್ಯತ್ಯಾಸ ಏನೂ ಕಾಣುವುದಿಲ್ಲ. ಸೈಕಲ್, ಭಾಗ್ಯಲಕ್ಷ್ಮಿ, ಸುವರ್ಣ ಗ್ರಾಮ ಯೋಜನೆಗಳ ಪ್ರಸ್ತಾಪ ಇಲ್ಲ'.<br /> - ಬಿ.ಎಸ್.ಯಡಿಯೂರಪ್ಪ, ಕೆಜೆಪಿ ಶಾಸಕಾಂಗ ಪಕ್ಷದ ನಾಯಕ<br /> <br /> <br /> </p>.<p><span style="color:#ff0000;"><strong>`ಸಮಗ್ರ ದೃಷ್ಟಿಕೋನದ ಕೊರತೆ'</strong></span><br /> ಯಾವುದೇ ಹೊಸತನ ಇಲ್ಲದ ಬಿಜೆಪಿ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್. ಅಂಕಿ-ಸಂಖ್ಯೆಗಳು ಇಲ್ಲದ ಮಾಹಿತಿಗಳ ಮೇಲೆ ಕಣ್ಣಾಡಿಸಿದಾಗ ರಾಜ್ಯಪಾಲರ ಭಾಷಣ ಓದಿದಂತೆ ಭಾಸವಾಗುತ್ತದೆ. ರಾಜ್ಯದ ಅಭಿವೃದ್ಧಿಗೆ ಸಮಗ್ರವಾದ ದೃಷ್ಟಿಕೋನ ಬಜೆಟ್ನಲ್ಲಿ ಕಾಣುವುದಿಲ್ಲ. ಹಣದುಬ್ಬರಕ್ಕೂ ಯಾವುದೇ ಪರಿಹಾರ ಇಲ್ಲ. ಬೆಂಗಳೂರಿನ ಸಮಸ್ಯೆಗಳಿಗೆ ಉತ್ತರ ಇಲ್ಲ.<br /> - ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>